Wednesday 30 January 2019

ಗೋಹಂತಕನಿಗೆ ಸಜೆ



ಬಾಲ ಶಿವಾಜಿ ವಿಶ್ವಾಂಬರ ಭಟ್ಟ ಮತ್ತು ಕಾನ್ಹೋಜಿಯ ಜೊತೆ ಪಟ್ಟಣ ಸುತ್ತುತ್ತಿದ್ದ. ಬಿಜಾಪುರಕ್ಕೆ ಬಂದಾಗಲಿಂದ ಇದೇ ಕೆಲಸ. ಊರಿನ ರಕ್ಷಣಾ ವ್ಯವಸ್ಥೆ ಕೋಟೆ ಕೊತ್ತಲಗಳನ್ನು ಕೂಲಂಕುಶವಾಗಿ ಗಮನಿಸುವುದು. ಮೆಹತರ್ ಮಹಲ್ ಗೆ ಬಂದರು. ಆ ಮಹಲು ಒಳಗಿನ ಜಾಮಾ ಮಸೀದಿಗೆ ಹೆಬ್ಬಾಗಿಲು. ಭಟ್ಟರು ಅದರ ಕತೆಯನ್ನು ಜೊತೆಗೆ ವಿವರಿಸುತ್ತಿದ್ದರು. ಆ ಮಸೀದಿಯನ್ನು ಸುಲ್ತಾನನು ವಿಜಯನಗರವನ್ನು ಧೂಳೀಪಟ ಮಾಡಿದ ಖುಷಿಗೆ ಕಟ್ಟಿದ್ದಂತೆ! . ನಂತರ ಆನೆಕುಂದಿ ಬಾಜಾರ್. ಅಲ್ಲಿ ಸುಲ್ತಾನನ ಒಂದು ಗೊಮ್ಮಟ ನಿರ್ಮಾಣದಲ್ಲಿದೆ. ಇನ್ನೂ ಮುಂದುವರೆಯಲು ಹೋಗುತ್ತಿದ್ದಾಗ ಕಾನ್ಹೋಜಿ ಅತ್ತ ಹೋಗಬೇಡೆಂದು ಸೂಚಿಸಿದ. ಆದರೆ ಬಾಲಕನಿಗೆ ಇನ್ನೂ ಕುತೂಹಲ ಕೆರಳಿ ಅಲ್ಲಿ ಮುನ್ನಡೆದರೆ ಕಂಡಿದ್ದೊಂದು ಅಸಹ್ಯ ದೃಷ್ಯ. ಸತ್ತ ಪ್ರಾಣಿಗಳನ್ನ ನೇತುಹಾಕಿದ್ದರು. ಅದರಲ್ಲಿ ತಾನು ಪವಿತ್ರವೆಂದು ಪೂಜಿಸುವ ಹಸುಗಳನ್ನೂ!. ಮತ್ತೊಂದು ಬಿಳಿ ಹಸುವನ್ನು ನೆಲಕ್ಕೆ ಉರುಳಿಸಿ ಮೂವರು ಗಡ್ಡಧಾರಿಗಳು ಹಿಡಿದಿಟ್ಟಿದ್ದರು. ಮತ್ತೋಬ್ಬ ಮಚ್ಚಿನಿಂದ ಅದನ್ನು ವಧಿಸಲು ಬರುತ್ತಿದ್ದ. ಬಾಲಕನಿಗೆ ತಡೆಯಲಾಗಲಿಲ್ಲ. ಕಾನ್ಹೋಜಿಯು 'ಬೇಡ ರಾಜೆ ಬೇಡ' ಎನ್ನುವಷ್ಟರಲ್ಲೇ ಶಿವಾಜಿ ತನ್ನ ಖಡ್ಗವನ್ನು ಬೀಸಿ ಅವನ ಕೈ ಕತ್ತರಿಸಿದ. ಕಟುಕನು ಕಿರುಚುತ್ತಾ ಬಿದ್ದ. ಸುತ್ತಲೂ ಕೋಲಾಹಲ. ಜನರು ಜಮಾಯಿಸಿದರು.
ಅವಾಕ್ಕಾದ ಕನ್ಹೋಜಿ ಮತ್ತು ಭಟ್ಟರು ಬಾಲಕನನ್ನು ಅಂಗರಕ್ಷಕರೊಡನೆ ಸುತ್ತುವರೆದು ರಕ್ಷಿಸಿ ಕುದುರೆಯನ್ನೇರಿ ಹೋದರು.
ನಡುಗುತ್ತಾ ಭಟ್ಟರು ಮತ್ತು ಕಾನ್ಹೋಜಿ ನಡೆದದ್ದನ್ನು ಷಹಾಜಿಗೆ ಹೇಳಿದರು. ಹೆದರಿದ ಷಹಾಜಿ ಚಿಂತಿತರಾದರು. ಏಕೆಂದರೆ ಆ ಕಟುಕರದ್ದೇನೂ ತಪ್ಪಿಲ್ಲ(!) , ಸುಲ್ಲಾನನಿಗೆ ದೂರನ್ನೆಂತೂ ಕೊಡುತ್ತಾರೆ. ಮತ್ತು ಸುಲ್ತಾನನನ್ನು ಎದುರಿಸುವುದು ಹೇಗೆ?. ಅದಕ್ಕೂ ಮುನ್ನ ಮೊದಲು ರಣದುಲ್ಲಾಖಾನನನ್ನು ಭೇಟಿಮಾಡಲು ಅದೇ ರಾತ್ರಿ ಹೊರಟರು. ಖಾನನು ಷಹಾಜಿಯನ್ನು ಮಗನಂತೆ ನೋಡಿಕೊಳ್ಳುತ್ತಿದ್ದ. ಅವನಿಂದಾಗಿಯೇ ಷಹಾಜಿ ಇಷ್ಟಾದರೂ ಒಂದು ಘನತೆಯಿಂದ ಬದುಕುತ್ತಿದ್ದ. ಖಾನನು ರಾಜ ಸಭೆಯಲ್ಲಿ ಸಹಾಯ ಮಾಡುವನೆಂದು ಮಾತಿಟ್ಟ.
ಮರುದಿನ ಎಂದಿನಂತೆ ಸಭೆಯಲ್ಲಿ ಈ ವಿಷಯವೇ ಗಂಭೀರವಾಗಿತ್ತು. ದೂರು ಕೊಟ್ಟ ಕಟುಕರ ಜೊತೆ ಇನ್ನೊಂದಿಷ್ಟು ಷಹಾಜಿಯನ್ನು ಕಂಡರಾಗದವರೂ ಕೂಡಿಕೊಂಡಿದ್ದರು. ಅಫ್ಜಲ್ ಖಾನನು ಮುದಲು ಬಾಯ್ತೆಗೆದ-" ಈ ಕೃತ್ಯಕ್ಕೆ ಬಾಲಕನ ತಲೆ ತೆಗೆಯದಿದ್ದರೆ ಉಳಿದ ಖಾಫಿರರಿಲ್ಲಾ ಪ್ರೋತ್ಸಹಿಸಿದಂತಾಗುತ್ತದೆ"
ಷಹಾಜಿ ಆಗ -" ಬಾಲಕ ಇನ್ನೂ ಸಣ್ಣವ, ಅವನೆಂದೂ ಹಸುವನ್ನು ಕಡಿಯುವುದನ್ನು ಕಂಡಿಲ್ಲ, ಆತುರದಲ್ಲಿ ಹೀಗೆಮಾಡಿದನಷ್ಟೇ. ಆ ಕಟುಕನಿಗೆ ಜೀವನ ನಡೆಸಲು ಬೇಕಾದ ಸಂಭಾವನೆಯನ್ನು ಪ್ರತಿ ತಿಂಗಳು ನಾನೇ ಕೊಡುವೆ"
ಆಗ ರಣದುಲ್ಲಾಖಾನನು ಎದ್ದು- " ಪ್ರಭುಗಳೇ, ಬಾಲಕನು ಮಾಡಿದ್ದು ಅಕ್ಷಮ್ಯ ಅಪರಾಧವಾಗಿದ್ದರೂ ಅವನ ಪ್ರಕಾರ ಅದೊಂದು ತನ್ನ ನಂಬಿಕೆಗೆ ಆದ ಹಲ್ಲೆ ಎಂದು ಆತನ ಕೈ ಕಡಿದ. ನಿಮ್ಮ ಪ್ರಜೆಗಳಲ್ಲು ಅನೇಕರು ಹಿಂದೂಗಳೂ ಇದ್ದು ಅವರು ಪ್ರತಿದಿನ ಇದನ್ನು ಸಹಿಸಿಕೊಂಡೇ ಬದುಕಿದ್ದಾರೆ. ಆದರೂ ಅವರೆಲ್ಲಿ ಯಾರೂ ನಿಮಗೆ ಇಲ್ಲಿಯತನಕ ದೂರಿಲ್ಲ"
ಕ್ಷಣಕಾಲ ಸಭೆಯಲ್ಲಿ ಸ್ತಬ್ಧ ಮೌನ. ಆದಿಲ್ ಷಾಹನು ಯೋಚಿಸುತ್ತಿದ್ದ. "ಮತ್ತಿನ್ನೇನನ್ನು ಹೇಳಬಯಸುತ್ತೀರಿ ರಣದುಲ್ಲಾ ಖಾನ್?"
"ನಾನೇನು ಹೇಳುವುದೆಂದರೆ ಶಿವಾಜಿಯ ತಪ್ಪನ್ನು ಮನ್ನಿಸಿ ಹೇಗಿದ್ದರೂ ಷಹಾಜಿಯು ಆ ಕಟುಕನಿಗೆ ಮಾಸಿಕ ವೇತನವನ್ನು ಕೊಡಲು ಒಪ್ಪಿದ್ದಾನೆ .... ಮತ್ತೆ ... ಮತ್ತೆ ... " , " ಆ ಕಸಾಯಿಕಾನೆಯನ್ನು ಎಲ್ಲಾದರೂ ಊರ ಹೊರಗೆ ರವಾನಿದರೆ ಹಿಂದೂಗಳಿಗೂ ವೇದನೆ ತಪ್ಪುತ್ತದೆ"
ಆದಿಲ್ ಷಾಹನು ಇದಕ್ಕೆ ಒಪ್ಪಿ ಈ ವಿಷಯವನ್ನು ಕೈಬಿಟ್ಟ. ಅಫ್ಜಲ್ ಖಾನನು ಕೈ ಕೈ ಹಿಸುಕಿಕೊಂಡ.
ಆ ದಿನದ ರಾತ್ರಿಯಲ್ಲಿ ಶಿವಾಜಿ ಅಮ್ಮನ ಬಳಿ ಅಲವತ್ತುಕೊಳ್ಳುತ್ತಿದ್ದ- " ನಾನು ಮಾಡಿದ್ದು ತಪ್ಪಾ ಅಮ್ಮಾ?"
" ವಿಷಯ ತಪ್ಪು ಸರಿಯೆನ್ನುವುದಲ್ಲ ಮಗನೇ. ಮೊದಲದನ್ನು ನಿರ್ಧರಿಸಲು ಬದುಕಿರುವುದು ಮುಖ್ಯ. ಎಲ್ಲ ಗೆದ್ದರೂ ಕೊನೆಗೆ ಬದುಕಿಲ್ಲದಿದ್ದರೆ ಆ ಗೆಲುವು ಯಾವ ಸುಖಕ್ಕಾಗಿ? ಸದಾ ಸುರಕ್ಷಿತವಾಗಿರುವುದೂ ಆದ್ಯ ಕರ್ತವ್ಯ. ಒಬ್ಬ ಕಟುಕನನ್ನು ಕೊಂದು ಆಗುವುದಾದರೂ ಏನು? ಮೊದಲು ನೀನು ಅತಿ ಎತ್ತರದ ಸ್ಥಾನವನ್ನು ಏರು ನಂತರ ನಿನ್ನ ಆ ಪ್ರಭಾವದಿಂದ ಪ್ರತಿಯೊಬ್ಬರೂ ನೀನು ಹೇಳಿದಂತೆ ಕೇಳುವ ಹಾಗೆ ಮಾಡಿಕೋ"
"ಸರಿ ಅಮ್ಮಾ, ಮುಂದೆ ಹೀಗಾಗದಂತೆ ನೋಡಿಕೊಳ್ಳುವೆ"
ಆದಿನ ಮತ್ತೋಮ್ಮೆ ತಾಯಿ ಭವಾನಿಯು ಶಿವಾಜಿಯನ್ನು ರಕ್ಷಿಸಿದ್ದಳು. ಹಾಗೆಯೇ ಶಿವಾಜಿಯು ಒಂದು ದೊಡ್ಡ ಪಾಠವನ್ನೂ ಕಲಿತ.
ಮುಂದೊಂದು ದಿನ ಅಫ್ಜಲ್ ಖಾನನು ಶಿವಾಜಿಯನ್ನು ಸುರಕ್ಷತಾ ಕೋಟೆಯಿಂದ ಹೊರಬರಲೆಂದೇ ಮಂದಿರದಲ್ಲೇ ಗೋಹತ್ಯೆ ಮಾಡಿದಾಗಲೂ ಆತುರದಿಂದ ಶಿವಾಜಿ ಬರಲಿಲ್ಲ. ಬದಲಾಗಿ ಸರಿಯಾದ ಸಮಯ ಕಾದು ಅವನಿಗೆ ತಕ್ಕ ಶಾಸ್ತಿ ಮಾಡಿದ.

Thursday 24 January 2019

ಧೈರ್ಯ ಅಥವಾ ಭಂಡತನ?



"ನಿಮ್ಮ ವೈಭವವನ್ನು ಕಂಡು ಬೆರಗಾಗಿ ಮೈಮರೆತು ತಲೆ ಬಾಗಬೇಕೆಂದು ಹೊಳೆಯಲೇ ಇಲ್ಲ" ಎಂದು ನೆಟ್ಟಗೆ ತಲೆ ಎತ್ತಿ ನಿಂತಿದ್ದ ಬಾಲ ಶಿವಾಜಿ!
ಎದುರು ಇದ್ದ ತಂದೆ ಷಹಾಜಿ ಮತ್ತು ಕಾನ್ಹೋಜಿ ಅವಾಕ್ಕಾಗಿ ಹೋದರು. ಎಲಾ ಇವನಾ ! ಇದೆಂತಹ ಪರಿಸ್ಥಿತಿ ತಂದಿಟ್ಟ!. ಹೋಗ್ಲಿ ಬಿಡಿ ಸುಲ್ಲಾನ್ ಸಾಹೆಬ್ರೇ , ಇನ್ನೂ ಸಣ್ಣ ಹುಡುಗ. ಸಭೆಯ ರೀತಿರಿವಾಜುಗಳು ಇನ್ನೂ ತಿಳಿದಿಲ್ಲ ಎಂದು ಸಮಝಾಯಿಸಿ ಅಲ್ಲಿಂದ ಕಾಲ್ಕಿತ್ತರು.
ಆದಿಲ್ ಷಾಹನೋ ಅಷ್ಟೊಂದು ಗಂಭೀರವಾಗಿ ತಗೊಳ್ಳದೇ ಮಗನು ಅಪ್ಪನಂತೆಯೇ ಬುದ್ಧಿವಂತವಂತನೆಂದು ನಕ್ಕಿ ಕಳುಹಿಸಿಕೊಟ್ಟ.
ಅರಮನೆಯ ಹೊರಕ್ಕೆ ಬಂದು ನಿಟ್ಟುಸಿರಿಡುತ್ತಾ ಷಹಾಜಿಯು ಒಂದು ಬಿರುಗಾಳಿಯಿಂದ ತಪ್ಪಿಸಿಕೊಂಡವರಂತೆ ತಣ್ಣನೆ ಕುಳಿತರು. ಬಾಲ ಶಿವಾಜಿಯ ಅಪ್ರಜ್ಞಾತ್ಮಕ ವರ್ತನೆ ದೊಡ್ಡ ಸಂಕಟಕ್ಕೆ ಈಡು ಮಾಡುತ್ತಿತ್ತು. ಮೊದಲೇ ಹಿಂದೂಗಳನ್ನು ಕಾಫಿರ್ ಎಂದು ತುಚ್ಛವಾಗಿ ಕಾಣುವ ಈ ನಾಡಿನಲ್ಲಿ ಹೀಗೆ ಮಾಡುವುದೇ!. ಮೊದಲೇ ಷಹಾಜಿ ಸುಲ್ತಾನನಿಗೆ ಎಷ್ಟೇ ಬೆವರು ಸುರುಸಿದರೂ ಒಂಬ ಬಂಡಾಯಿ ಎಂದು ಅನುಮಾನದಿಂದ ನೋಡುತ್ತಾನೆ. ಕೆಲವು ವರ್ಷಗಳ ಹಿಂದೆ ಒಬ್ಬ ನಿಯತ್ತಿನ ಸರದಾರ ಮುರಾರ್ ಜಗದೇವನ ಮೇಲೆ ಏನೋ ಗಾಳಿ ಸುದ್ಧಿಯನ್ನಷ್ಟೇ ಕೇಳಿ ಅದೇ ಸಭೆಯಲ್ಲಿ ತುಂಡು ತುಂಡು ಮಾಡಿದ್ದ ಆದಿಲ್ ಷಾಹಿ. ಇನ್ನು ಈ ಪ್ರತ್ಯಕ್ಷ ತಪ್ಪಿಗೆ ಸುಮ್ಮನಿರುತ್ತಾನೆಯೇ? ಮಗನಿಗೆ ಪುಣೆಯ ಜಹಗೀರನ್ನು ಕೊಡಿಸಲು ಇನ್ನೆಲ್ಲಿ ಒಪ್ಪುತ್ತಾನೋ? ಎಂದೆಲ್ಲಾ ಕಳಮಳ ಶುರುವಾಯಿತು.
ಮನೆಗೆ ಬಂದು ವಿಷಯ ತಿಳಿದ ಜೀಜಾಮಾತೆಗೂ ಚಿಂತೆಯಾಯಿತು. ಮಗನು ಹೇಳಿದ " ನಾನೇನು ಮಾಡಲಮ್ಮಾ? ತಂದೆ ತಾಯಿ ಮತ್ತು ಭವಾನಿಗೆ ಬಿಟ್ಟು ಮತ್ಯಾರಿಗೂ ತಲೆ ಹೇಗೆ ಬಾಗಿಸಲಿ?"ಎಂದು ಅಲವತ್ತುಕೊಂಡ. "ನೋಡು ಮಗನೇ, ನದಿಯಲ್ಲಿದ್ದಾಗ ಮೊಸಳೆಯೊಂದಿಗೆ ಗುದ್ದಾಡಲು ಹೋಗಬಾರದು, ಮಹತ್ಕಾರ್ಯ ಸಾಧಿಸಲು ಹೊರಟವರು ಆಗಾಗ ಸಣ್ಣಪುಟ್ಟ ಸನ್ನಿವೆಷಗಳಿಗೆ ಹೊಂದುಕೊಳ್ಳಲು ಕಲಿಯಬೇಕು" ಎಂದು ತಿಳಿಹೇಳಿದರು.
ಷಹಾಜಿಯು ಮಗನಿಗೆ ತನ್ನ ಉದ್ಧಟತನಕ್ಕೆ ನಾಚಿಕೆಯಾಗಿ ಅರಮನೆಗೆ ಬರಲಾಗಲಿಲ್ಲ ಎಂದು ಕುಂಟುನೆಪವಿಟ್ಟು ಆದಿಲ್ ಷಾಹಿಯಿಂದ ಪುಣೆ, ಸೂಪೆ, ಇಂದಾಪುರ ಮತ್ತು ಚಕನ್ ನ ಜಹಗೀರನ್ನು ಕೊಡಿಸಿದ.
ಒಂದು ಸಂಧಿಘ್ನ ಪರಿಸ್ಥಿತಿಯಿಂದ ಭವಾನಿ ಕಾಪಾಡಿದಳು.

ಶಿವಾಜಿಯ ಬಿಜಾಪುರದತ್ತ ಅಗಮನ




ಸುಮಾರು ಒಂದು ವರ್ಷ ಬೆಂಗಳೂರಿನಲ್ಲಿ ತಂದೆ ಷಹಾಜಿಯೊಡನೆ ಕಾಲಕಳೆದ ಬಾಲ ಶಿಬಾಜಿ ಜೀಜಾಮಾತೆಯ ಒತ್ತಾಯದ ಮೇಲೆ ಪುಣೆಗೆ ವಾಪಾಸ್ಸಾಗಲು ಪರಿವಾರ ತೆರಳಿತು. ಬೆಂಗಳೂರಿನಲ್ಲಿನ ವಿಲಾಸಿ ಜೀವನ ಶೈಲಿ ಮಾತೆಗೆ ಹಿಡಿಸಲಿಲ್ಲ.

ಮಾರ್ಗ ಮಧ್ಯದಲ್ಲಿ ಬಿಜಾಪುರವನ್ನು ಹಾದು ಹೋಗುವುದಿತ್ತು. ಷಹಾಜಿ ರಾಜರು ಮಗನಿಗಾಗಿ ತನ್ನ ಪುಣೆಯ ಜಹಗೀರನ್ನು ಆದಿಲ್ ಷಾಹಿಯ ಮೂಲಕವೇ ಹಸ್ತಾಂತರಿಸುವುದಕ್ಕಾಗಿ ಸ್ವತಃ ಜೊತೆಗೆ ಹೊರಟಿದ್ದರು.
ಬಿಜಾಪುರಕ್ಕೆ ಸನಿಹ ಬರುತ್ತಿದ್ದಂತೆ ಅಲ್ಲಿನ ದೊಡ್ಡ ಕಮಾನುಗಳು ಮಸೀದಿಗಳನ್ನು ನಗರದ ದೊಡ್ಡ ದ್ವಾರದ ಮಧ್ಯದಲ್ಲಿ ಕಂಡುಬಂದವು. ಅದರ ಹೊರವಲಯದಲ್ಲಿ ಬಟಾ ಬಹಲ ಬಂಜರ ಭೂಮಿ. ಅಲ್ಲಿ ಇಲ್ಲಿ ಸಣ್ಣ ಸಣ್ಣ ಹಳ್ಳಿಗಳು.

ಬಾಲ ಶಿವಾಜಿ ತನ್ನ ತಂದೆಯ ಜೊತೆಗೂಡಿ ಶ್ವೇತಾಶ್ವರೋಹಿಯಾಗಿ ಮಂದಗತಿಯಲ್ಲಿ ಸಾಗುತ್ತಿದ್ದಾಗ ಹಾಗೆಯೇ ಕೆಲವು ಪ್ರಶ್ಣೆಗಳು ಸುಳುದವು.
"ಅಪ್ಪಾ, ಈ ಆದಿಲ್ ಷಾಹಿಗಳು ಎಲ್ಲಿಂದ ಬಂದರು? ಅವರು ಇಲ್ಲಿನವರಂತೂ ಅಲ್ಲವಲ್ಲವೇ ?"

ಷಹಾಜಿ- "ಹೌದು ಶಿವಬಾ, ಅವರು ಪರದೇಶಿಯರು. ಟರ್ಕಿ ಎಂಬ ಒಂದು ದೂರದ ದೇಶದಿಂದ ಬಂದವರು". ಹಾಗೆಯೇ ಕತೆ ಮುಂದುವರೆಸಿದರು. 
" ಸುಮಾರು ಇನ್ನೂರು ವರ್ಷಗಳ ಹಿಂದೆ ಯೂಸಫ್ ಎಂಬ ಒಬ್ಬ ಟರ್ಕಿಯ ರಾಜಕುಮಾರ ಭಾರತಕ್ಕೆ ಬಂದಿದ್ದ. ಏಕೆಂದರೆ ಅಲ್ಲಿಯ ರಾಜನಾಗಿದ್ದ ಅವನ ಹಿರಿಯಣ್ಣ ಮೊಹಮ್ಮದ್ ತನ್ನೆಲ್ಲ ಕಿರಿಯ ಸಹೋದರರನ್ನು ಕೊಲ್ಲುತ್ತಿದ್ದ ತನ್ನ ಕುರ್ಚಿಯನ್ನುಳಿಸಲಕ್ಕಾಗಿ. ಯೂಸುಫ್ ಕಿರಿಯನಾದ್ದರಿಂದ ಅವನನ್ನು ರಕ್ಷಿಸಲೆಂದು ಅವನ ತಾಯಿ ಅವನನ್ನು ಜಾರ್ಜಿಯಾ ಎಂಬ ದೇಶಕ್ಕೆ ಗುಲಾಮಗಿರಿಗೆ ಮಾರಿ ಕಳುಹಿಸಿದಳು.ಅಲ್ಲಿನ ಗುಲಾಮದಂಧೆಯ ವ್ಯಾಪಾರಿಯೊಡನೆ ಬೆಳೆಯುತ್ತಾ ಯೂಸುಫ್ ತನ್ನ ಕೌಶಲ್ಯವನ್ನು ಪ್ರಕಟಿಸುತ್ತಿದ್ದ. ತಕ್ಷಣ ರಾಜದೂತರಿಗೆ ತಿಳಿದು ಅವನ ಬೆನ್ನು ಹತ್ತಿದರು. ಇದನ್ನು ತಿಳಿದ ಆತನ ತಾಯಿ ಅವನನ್ನು ಪೂರ್ವದ ಪರ್ಶಿಯಾದ ಮಾರ್ಗದಿಂದ ಭಾರತಕ್ಕೆ ಹೇಗೋ ಕಳುಹಿಸಿದಳು. ಆಗವನ ಕೈಯಲ್ಲೊಂದು ಬಿಡಿಗಾಸೂ ಇರಲಿಲ್ಲ. ಕಾಲಾಂತರದಲ್ಲೇ ಮೊದಲ ಆದಿಲ್ ಷಾಹಿ ಸುಲ್ತಾನನಾಗಿ ಸಾಮ್ರಾಜ್ಯ ಸ್ಥಾಪಿಸಿದ! "

ಬಾಲಕ ಶಿವಾಜಿ ಉದ್ಘರಿದ- "ವಾಹ್! ಅದ್ಭುತ, ಇದೆಲ್ಲಾ ಹೇಗೆ ಸಾಧ್ಯವಾಯಿತು?"

"ವಿಧಿ ಮಗನೇ ವಿಧಿ! ಅವನು ರಾಜಾನಾಗಬೇಕೆಂದು ಮಹತ್ವಾಕಾಂಕ್ಷೆಯನ್ನು ಹೊಂದಿದ್ದ. ಇಲ್ಲಿಗೆ ಬಂದಾಗ ಮತ್ತೊಬ್ಬ ಗುಲಾಮ ವ್ಯಾಪಾರಿಯ ಪಾಲಾಗಿದ್ದ. ಅವನು ಇವನ್ನು ಒಬ್ಬ ಬಹಮನಿಯ ಸೇನಾಧ್ಯಕ್ಷನಿಗೆ ಮಾರಿದ್ದ. ಅವನ ಹೆಸರು ಮಹ್ಮದ್ ಗವಾನ್ ಎಂದು. ಆದರವನು ರಾಜನಿಗೆ ದ್ರೋಹ ಬಗೆದನೆಂದು ಬಧಿಸಲಾಯ್ತು. ಗವಾನನ ಸ್ಥಾನವನ್ನು ಯೂಸುಫ್ ಪಡೆದು ನಾಯಕನಾದ. ನಂತರ ರಾಜನ ವಿರುದ್ಧವೇ ಬಂಡೆದ್ದು ಬಿಜಾಪುರದ ಮೇಲುಸ್ತುವಾರಿ ಪಡೆದ. ಕೆಲ ವರ್ಷಗಳ ನಂತರ ಬಹ್ಮನಿ ಸಾಮ್ರಾಜ್ಯವೇ ಪತನಗೊಂಡು ತಾನೊಬ್ಬ ಸ್ವತಂತ್ರ ರಾಜನೆಂದು ಘೋಷಿಸಿಕೊಂಡ."

ಏಕಾಂಗಿಯಾಗಿ ಸಾಧಿಸಿದ ಯೂಸುಫ್ ನ ಕಥೆ ಕೇಳಿ ಬಾಲ ಶಿವಾಜಿಗೆ ಆಶ್ಚರ್ಯಬಾಗುವ ಜೊತೆಗೆ ಕೆಲ ಪ್ರಶ್ಣೆಗಳೂ ಕಾಡಿದವು. ಈ ಬಿಡಿಗಾಸಿಲ್ಲದೇ ಬಂದ ಒಬ್ಬ ಪರದೇಶಿಗೆ ಇಷ್ಟೆಲ್ಲಾ ಸಾಧಿಸಬೆಕಾದರೆ ಅವನಿಗೆ ಸ್ಥಳ ಕೊಟ್ಟು ಮಾರ್ಗ ಸುಗಮ ಮಾಡಿಕೊಟ್ಟವರ್ಯಾರು? ಅವನಿಗೆ ಮೆಟ್ಟಿಲು ಹತ್ತಲು ಸಹಕರಿಸಿದವರು ನಮ್ಮವರೇ ಅಲ್ಲವೇ ? ಕಡೇ ಪಕ್ಷ ನಮ್ಮವರಿಗೆ ಪರರು ಯಾರು ಎಂಬುದನ್ನು ತಿಳಿಯುವ ಕಿಂಚಿತ್ ಜ್ಞಾನವಾದರೂ ಬೇಡವೇ?
ಈ ಯೂಸುಫ್ ನಿಗೆ ಪರದೇಶದಿಂದ ಬಂದು ಇಲ್ಲಿನ ಸ್ಥಳೀಯರನ್ನು ಆಳುವುದು ಸಾಧ್ಯವಾದರೆ ಇಲ್ಲಿನ ಮಣ್ಣಿನಲ್ಲೇ ಹುಟ್ಟಿದ ಮಗನಾದ ನಾನು ಈ ಯೂಸುಫ್ ನ ಸಂತಾನಗಳ ದೌರ್ಜನ್ಯವನ್ನು ಮಟ್ಟಹಾಕಲು ನನ್ನನ್ನು ತಡೆಯುತ್ತಿರುವುದಾದರೂ ಏನು? ನಾನ್ಯಾಕೆ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಬಾರದು?

ಹೀಗೆ ಯೋಚಿಸುತ್ತಾ ಬಿಜಾಪುರದ ಹೆಬ್ಬಾಗಿಲಿಗೆ ಬಂದಾಯಿತು. ಆಗ ಬಾಲ ಶಿವಾಜಿಗೆ ಒಂದು ಸಾಮ್ರಾಜ್ಯ ಕಟ್ಟುವ ಯೋಚನೆ ಮನದೊಳಗೆ ಅರಳುತ್ತಿತ್ತು.

Sunday 4 February 2018

ಎಚ್ಚರಿಕೆ ನಿದ್ರಿಸಿದಾಗ



To be prepared for war is one of the most effective means of preserving peace.
-George Washington

1914 ರ ಮೊದಲ ಮಹಾಯುದ್ಧ ಆರಂಭಗೊಂಡಿತ್ತು. ರಣೋತ್ಸಾಹದಿಂದ ಅಸಂಖ್ಯ ಫ್ರೆಂಚ್ ಯುವಕರು ರಣಭೂಮಿಗೆ ತೆರಳಲು ಸಜ್ಜಾಗುತ್ತಿದ್ದಾರೆ.

ಆದರೆ ಅದುಯಾವ ಹುಮ್ಮಸ್ಸಿನಿನಲ್ಲಿದ್ದಾರೆ ? ಅರ್ಧ ಶತಮಾನಗಳ ಶಾಂತಿಯಿದ್ದಿದ್ದವರು ಆ ಸಮಯದಲ್ಲಿ ಯುದ್ಧವೆಂದರೆ ಏನೆಂದು ತಿಳಿದಿದ್ದರು ? . ಶಾಲಾ ಪಠ್ಯಪುಸ್ತಕಗಳಲ್ಲಿನ ವರ್ಣರಂಜಿತ ಯುದ್ಧ ಚಿತ್ರಗಳ ಕಲ್ಪನೆ ಗಳಿಸಬಹುದು ಅಥವಾ ಸಂಗ್ರಹಾಲಯಗಳ ಚಿತ್ರಗಳದ್ದೋ. ಸುಸಜ್ಜಿತ ಸಮವಸ್ತ್ರ ಧರಿಸಿದ್ದ ಅಶ್ವಾರೋಹಿ ಪಡೆಗಳ ಠಾಕುಠೀಕಿನ ಧಾಳಿಯ ವೈಭವದ ಕಲ್ಪನೆಯು! ರಣಘರ್ಜನೆ ತುಂಬಿದ್ದ ವಿಜಯಯಾತ್ರೆಯ ದೃಶ್ಯ. ಯುದ್ಧವೆಂದರೆ ಒಂದು ರೋಮಾಂಚಕ ಸಾಹಸವೆಂದು ಭ್ರಮಿಸಿದ್ದಾರೆ. ಆದರೆ ಅವರೊಂದು ಮಾರಣಹೋಮಕ್ಕೆ ಆಹುತಿಯಾಗಲು ಹೊರಟಿದ್ದಾರೆಂದು ಅವರಿಗೆ ಗೊತ್ತಿರಲಿಲ್ಲ. ಮುಂಚೆ ಅರಿವಿದ್ದ ಆ ಯುದ್ಧದ ಚಿತ್ರಣಕ್ಕೆ ಈಗ ಸಂಪೂರ್ಣ ಬದಲಾಗಿದೆಯೆಂದು ಗೊತ್ತಿರಲಿಲ್ಲ. 
ಹೀಗೆಂದು ಜೊತೆಯಲ್ಲಿ ಹೋದವನೊಬ್ಬ ಫ್ರೆಂಚ್ ಕವಿ ಹೇಳುತ್ತಾನೆ.

ಇನ್ನು ಸೇನೆ ಹೇಗಿತ್ತು? ನೆಪೋಲಿಯನ್ ಕಾಲದಲ್ಲಿದ್ದ ಹಾಗೆಯೇ ದೊಡ್ಡ ದೊಡ್ಡ ಬಟಾಲಿಯನ್ ಸಂಖ್ಯೆಯಲ್ಲಿ ವಿಂಗಡನೆಯಾಗಿತ್ತು . ಅವರ ಸಮವಸ್ತ್ರವೂ ಕೂಡ ಆಧುನಿಕ ಸಮರಕ್ಕೆ ಸರಿಹೊಂದದು .ತಲೆಗೆ ಶಿರಸ್ತ್ರಾಣವಿಲ್ಲ ಮತ್ತು ಎದ್ದುಕಾಣುವ ಕೆಂಪು ಬಣ್ಣದ ಪೈಜಾಮ. ಸುಡು ಬಿಸಿಲಿನಲ್ಲೂ ದಪ್ಪನೆಯ ಉಣ್ಣೆಯ ಕೋಟು . ಪ್ರತಿಯೊಬ್ಬರ ಹೆಗಲ ಮೇಲೆ ಉದ್ದನೆಯ ದೊಡ್ಡ ಹ್ಯಾವರ್ ಸ್ಯಾಕ್ ಚೀಲ . ಮತ್ತು ಕೊನೆಯದಾಗಿ ಹನ್ನೊಂದು ಪೌಂಡ್ ಮಣಭಾರದ ಹಳೆಯ ಲೆಬೆಲ್ ರೈಫಲ್ ಗಳು . ಆಗಿನ ಜರ್ಮನಿಯ ಮೊಸರ್ ರೈಫಲ್ ಗಳ ಅಥವಾ ಬ್ರಿಟಿಷ್ ಎಂಫೀಲ್ಡ್ ರೈಫಲ್ ಗಳ ಹತ್ತಿರವೂ ಬಾರದು. ಹೆಚ್ಚೆಂದರೆ 1200 ಅಡಿಗಳ ಅಂತರಕ್ಕೆ ಗುರಿಯಿಡಬಹುದಷ್ಟೇ . ಅಷ್ಟಲ್ಲದೇ ಈ ಹಳತಾದ ಸೇನಾತಂತ್ರಗಳನ್ನು ಇನ್ನೂ ಅಕಾಡೆಮಿಗಳಲ್ಲಿ ಕಲಿಸುತ್ತಿದ್ದರು.

ಇದರ ಪರಿಣಾಮವಾಗಿ ಲಕ್ಷಗಟ್ಟಲೆ ಫ್ರೆಂಚ್ ಯೋಧರು ಮೊದಲ ಮಹಾಯುದ್ಧದಲ್ಲಿ ಹತರಾದರು.

Monday 20 November 2017

ಖೈಬರ್ ಪಾಸ್




ಸುಮಾರು ೮ ನೆಯ ಅಥವಾ ೯ ನೆಯ ಶತಮಾನದಲ್ಲಿ ಉತ್ತರ ಭಾರತದ ಒಂದು ಪ್ರಾಂತ್ಯದಲ್ಲಿ , ಪ್ರಾಯಶಃ ಪೃಥ್ವಿ ರಾಜ ಚೌಹಾನನ ಪೂರ್ವಜರ ರಾಜ್ಯವಿರಬಹುದು . ಅಲ್ಲಿನ ಮಂತ್ರಿಮಂಡಲ ರಾಜನೆದುರು ಒಂದು ಪ್ರಸ್ತಾಪವನ್ನು ಇಟ್ಟಿತು . ಅದೇನೆಂದರೆ ಅಫ್ಘನ್ ಪ್ರದೇಶವನ್ನು ತಾಗುವ ಪರ್ವತಗಳ ಸಾಲುಗಳ ನಡುವಿನ ಹಾದಿಯಾದ ಖೈಬರ್ ಪಾಸಿಗೆ ವಿರುದ್ಧವಾಗಿ ಒಂದು ಮಹಾಗೋಡೆಯನ್ನು ನಿರ್ಮಿಸಿ ಮಧ್ಯ ಏಷಿಯಾದ ಇಸ್ಲಾಮೀ ಧಾಳಿಕೋರರನ್ನು ತಡೆಯಬಹುದೆಂದು ಮತ್ತು ಈ ಗೋಡೆಯನ್ನು ನಿರ್ಮಿಸಲು ಪ್ರಜೆಗಳ ಮೇಲೆ 'ದ್ವಾರ ತೆರಿಗೆ' ಯನ್ನು ವಿಧಿಸಬೇಕಾಗುತ್ತದೆಂದು. ಚೀನಾದ ಗೋಡೆಯೇನೋ ಸಾವಿರಾರು ಕಿ ಮೀ ನಷ್ಟರದ್ದು ಆದರೆ ಈ ಗೋಡೆ ಕೇವಲ ಕೆಲವು ಕಿ ಮೀಗಳ ಉದ್ದನೆಯದು.

ಆದರೆ . . . ಜನರು ಈ ಯೋಜನೆಗಾಗಿ ಹೆಚ್ಚುವರಿ ತೆರಿಗೆ ಕಟ್ಟಲು ಒಪ್ಪದೆ ಪ್ರತಿಭಟಿಸಿದರು. ಆದ್ದರಿಂದ ಈ ಯೋಜನೆ ಕೈಬಿಟ್ಟಿತು.

ಕೆಲವು ವರ್ಷಗಳ ನಂತರ ಮೊಹಮ್ಮದ್ ಶಬುಕ್ತಜಿನ್ ಘಜನಿ ಇದೇ ಖೈಬರ್ ಹಾದಿಯಿಂದ ಭಾರತದೆತ್ತ ದಂಡೆತ್ತಿ ಬಂದ. ಮತ್ತಿದೇ ಮಾರ್ಗವಾಗಿ ಟನ್ನುಗಟ್ಟಲೆ ಚಿನ್ನವನ್ನು ಹೊತ್ತುಕೊಂಡು ಹೋದ. ಅಷ್ಟಲ್ಲದೇ ಇಪ್ಪತ್ತು ವರ್ಷಗಳಲ್ಲಿ ಹದಿನೇಳು ಬಾರಿ ಇದೇ ದಾರಿಯಲ್ಲಿ ನಿರಾಯಾಸವಾಗಿ ಹೋಗಿಬರುತ್ತಾ ತನ್ನ ದಂಡಯಾತ್ರೆಗಳನ್ನು ಮುಗಿಸಿದ .

ಅವನ ನಂತರ ಮೊಹಮ್ಮದ್ ಘೋರಿ, ತೈಮೂರ್ , ಬಾಬರ್, ನಾದಿರ್ ಷಾಹ್, ಅಹ್ಮದ್ ಷಾಹ್ ಪ್ರತಿಯೊಬ್ಬರೂ ಬಳಸಿದ್ದು ಇದೇ ಖೈಬರ್ ಪಾಸನ್ನು

Sunday 12 November 2017

ವಜೀರ್ ಖಾನನ ಅಂತ್ಯ





ಬಂದಾ ಬಹಾದ್ದೂರ್ ಸಾಮನಾದ ನಂತರ ಬಂದ ಸಧೂರ , ಕಪೂರಿ ನಗರಗಳನ್ನು ಅದೇ ರೀತಿ ವಶಪಡಿಸಿಕೊಂಡು ಈಗ ಸರಹಿಂದವನ್ನು ದ್ವಂಸಗೊಳಿಸಲು ಸಿದ್ಧತೆ ನಡೆಸುತ್ತಿದ್ದ . ಅದುವೇ ವಜೀರ್ ಖಾನನನ್ನು ಮಣಿಸುವುದು ಸುಲಭದ ಮಾತೇನಲ್ಲ . ಇಬ್ಬರ ಸೇನೆಯ ಬಲವೂ ಸಮಾನವಾಗಿಯೇ ಇತ್ತು . ಬಂದಾನ ಅಡಿಯಲ್ಲಿ ಇದ್ದದ್ದು 35 ಸಾವಿರ ಬಲದ ಸೇನೆ ಮತ್ತದರಲ್ಲಿ ಹನ್ನೊಂದು ಸಾವಿರ ಕಳ್ಳರ ಮತ್ತು ಡಕಾಯಿತರ ಗುಂಪೇ ಇತ್ತು . ಅವರನ್ನು ಬಿಟ್ಟರೆ ಇಪ್ಪತ್ನಾಲ್ಕು ಸಾವಿರ ಸೇನೆ ಎನ್ನಬಹುದು . ಮತ್ತು ಅಮೃತಮಥನಕ್ಕೆ ರಾಕ್ಷಸರ ಸಹಾಯವೂ ಬೇಕೆಂಬಂತೆ ಈ ಡಕಾಯಿತರ ಗುಂಪನ್ನೂ ಸೇರಿಸಿಕೊಂಡಿದ್ದ . ವಜೀರ್ ಖಾನನದ್ದು 15 ಸಾವಿರ ಬಲದ ತರಬೇತಿಯುಳ್ಳ ನಿಪುಣ ಸೇನೆಯಿತ್ತು ಮತ್ತವರ ಜೊತೆ ಐದು ಸಾವಿರ ಬಲದ ಘಾಜಿ ಪಡೆ , ಅಂದರೆ ಮುಲ್ಲಾಗಳ ಜಿಹಾದ್ ಕರೆಗೆ ಕಾಫಿರರ ಸಂಹಾರಕ್ಕೆಂದು ಬಂದ ಕಟ್ಟರ್ ಇಸ್ಲಾಮೀ ಕಟುಕರ ಸೇನೆ ! . ಖಾನನ ಸೇನಾಬಲ ಕಡಿಮೆಯಿದ್ದರೂ ಸಿಕ್ಖರಿಗಿಂದ ಸುಸಜ್ಜಿತವಾಗಿತ್ತು . ಕಡಿಮೆಯೆಂದರೆ ಎರಡು ಡಜನ್ ಫಿರಂಗಿಗಳು , ಅರ್ಧದಷ್ಟು ಸೇನೆ ಒಳ್ಳೆಯ ಕವಚಧಾರಿಗಳಾಗಿದ್ದರು ಮತ್ತು ಆನೆಗಳ ಒಂದು ಪಡೆಯೂ ಇತ್ತು . ಸಿಕ್ಖರ ಹತ್ತಿರ ಯಾವ ಫಿರಂಗಿಗಳೂ ಆನೆಗಳೊ ಇರಲಿಲ್ಲ . ಎಲ್ಲೋ ಕೆಲವಷ್ಟು ಕುದುರೆಗಳಿದ್ದವು . ಖಾನಾನೇನೋ ಅನುಕೂಲತೆಗಳು ತನ್ನೆಡೆ ಇರುವುದನ್ನು ಮನಗಂಡು ಗೆಲುವು ಖಚಿತವೇ ಎಂದು ಬೀಗುತ್ತಿದ್ದ.
ಖಾನಾನೂ ಒಬ್ಬ ನಿಪುಣ ಸೇನಾನಾಯಕನೇ . ಕೋಟೆಯ ಮೇಲಿನಿಂದಲೇ ಸೇನೆಗೆ ನಿರ್ದೇಶಿಸುತ್ತಾನೆ . ತನ್ನ ಪ್ರತೀ ಸೈನಿಕನೂ ಕರಾರುವಾಕ್ಕಾಗಿ ಸೇನಾ ಕವಾಯತ್ತನ್ನು ಮಾಡುವುದನ್ನು ನೋಡುತ್ತಾ ಹೆಮ್ಮೆ ಪಡುತ್ತಿದ್ದ . ತನ್ನ ತುಫಾಕಿಗಳನ್ನು ಒಂದು ನಿಯೋಜಿತ ಸ್ಥಳಗಳಲ್ಲಿ ಇಟ್ಟು ಒಮ್ಮೆ ಗುರಿ ಪರೀಕ್ಷೆಗಳನ್ನೂ ಮಾಡಿಸಿದ . ಬಿಲ್ಲುಗಾರರ ನಿಖರ ಗುರಿಗಳನ್ನೂ ಒಮ್ಮೆ ಪರೀಕ್ಷಿಸಿದ , ಎಲ್ಲರೂ ಒಮ್ಮೆಲೇ ಬಾಣಗಳನ್ನು ಬಿಟ್ಟರೆ ಶತ್ರುಗಳ ಮೇಲೆ ಮಳೆಸುರಿದಂತೆ ಅಲ್ಲಾಹಣ ಹತಥಿಯಾರನಂತೆ ಎರಗುತ್ತಿದ್ದವು . ಸಿಕ್ಖರಿಗೆಂತೂ ಈ ಸೇನೆಯನ್ನು ಎದುರಿಸುವುದು ಸಾಧ್ಯವೇ ಇಲ್ಲ .
ಆದರೆ ಬಂದಾ ಕೋಟೆಯನ್ನು ಮುತ್ತಿಗೆ ಹಾಕಿ ಉಸಿರುಗಟ್ಟಿಸಿ ಸೋಲಿಸುವನೆಂಬ ಸಧೂರಾದ ಪೂರ್ವಾನುಭವವನ್ನು ಮನಗಂಡು ದಾರಿ ಮಧ್ಯೆಯೇ ಸೆಣೆಸಲು ತಯಾರಿ ನಡೆಸಿದ್ದ . ಅದು ಚಪ್ಪರ್ ಚಿರಿ ಎಂಬ ಜಾಗ , ಸರಹಿಂದದಿಂದ ಹತ್ತು ಕಿ ಮೀ ದೂರ .
ಖಾನನು ತನ್ನ ತೋಪುಗಳನ್ನು ಅರ್ಧ ಚಂದ್ರಾಕಾರ ವ್ಯೋಹದಲ್ಲಿ ಇರಿಸಿ ಅದರ ಹಿಂದೆ ಬಿಲ್ಲುಗಾರರ ಮತ್ತೆ ಮ್ಯಾಚ್ ಲಾಕ್ ರೈಫಲ್ ಗಳ ಪಡೆಯನ್ನು ಬೆಂಗಾವಲಾಗಿ ಇರಿಸಿದ . ಮತ್ತವರ ಹಿಂದೆ ಒಂದು ಅಶ್ವಪಡೆ ಮೂರನೇ ರಕ್ಷಣಾ ಪಡೆಯಂತೆ ತಯಾರಾಗಿ ನಿಂತಿದ್ದವು . ಬಂದಾನಿಗೆ ಖಾನನ ಈ ಯೋಜನೆಗಳು ತಿಳಿದಿತ್ತು ಮತ್ತು ಆದಷ್ಟು ಬೇಗ ಚಪ್ಪರ್ ಚಿರಿಗೆ ಸಂಜೆ ಬಂದು ತಲುಪಿದ . ಯುದ್ಧದ ತಯಾರಿಗಾಗಿ ಸ್ವಲ್ಪ ಬೆಳಕಿನ್ನು ಬಾನಾಂಗಳದಲ್ಲಿತ್ತು . ಖಾನನ ಸೇನಾರಚನೆ ತೋಪುಗಳನ್ನೊಳಗೊಂಡಿದ್ದ ಪಡೆ ಖಾಲಿ ಮೈದಾನದ ಸಮರಕ್ಕೆ ಸೂಕ್ತವಾಗಿತ್ತು . ಬಂದಾನ ಊಹೆಯ ಪ್ರಕಾರ ಸೇನಾವ್ಯೂಹದಲ್ಲಿ ದುರ್ಬಲ ಪಡೆಯು ಮಧ್ಯದಲ್ಲಿರುತ್ತದೆ ಆದ್ದರಿಂದ ತನ್ನ ಸಮಸ್ತ ಸೇನೆ ನಡುವಿನಿಂದ ಮುನ್ನುಗ್ಗುತ್ತಾ ನಾಲ್ಕು ತೋಪುಗಳನ್ನು ಧ್ವಂಸಗೊಳಿಸುವುದು . ಈ ಕಠಿಣ ಕಾರ್ಯಕ್ಕೆ ತನ್ನ ಭಾಯಿ ಫತೇಹ್ ಸಿಂಗ್ , ಕರಮ್ ಸಿಂಗ್ , ಧರಂ ಸಿಂಗ್ ಮತ್ತು ಅಲಿ ಸಿಂಗ್ ನೇತೃತ್ವದ ಮಾಳವ ಸಿಕ್ಖರನ್ನು ನೇಮಿಸಿದ . ರಾಜ್ ಸಿಂಗನ ಮಾಜ ಸಿಕ್ಖರನ್ನು ಎಡ ಪಾರ್ಶ್ವ ಮತ್ತು ಶ್ಯಾಮ್ ಸಿಂಗರ ದೋಬ ಸಿಕ್ಖರನ್ನು ಬಲ ಪಾರ್ಶ್ವದಲ್ಲಿ ನಿಯೋಜಿಸಿದ . ಬಂದಾನು ಸೇನೆಯನ್ನು ನಿರ್ದೇಶಿಸಲು ಅನುಕೂಲವಂತೆ ಸೇನೆಯ ಎಡ ಭಾಗದಲ್ಲಿ ಇದ್ದ .
ಮೇ 22 , 1710 ರ ಮುಂಜಾನೆಯ ಸೂರ್ಯನೇ ಸುಡುತ್ತಿದ್ದ . ಆ ದಿನದ ಸಮರಕ್ಕೆ ಮುನ್ಸೂಚನೆ ಎಂಬಂತೆ . ಅದಕ್ಕೆ ಮುಂಚೆಯೇ ಬಂದಾನು ತಯಾರಾಗಿ ನಿಂತಿದ್ದ . ಸೂರ್ಯ ಸ್ವಲ್ಪ ದಿಗಂತವನ್ನೇರುತ್ತಿದ್ದಂತೆ ಉಭಯ ಸೇನೆಗಳಿಗೆ ಪರಸ್ಪರ ಸಂಪೂರ್ಣ ದರ್ಶನವಾಯಿತು . ಒಂದು ಕ್ಷಣಕಾಲ ನಿಶಬ್ದ ಮೌನ . ತೋಪುಗಳ ಅರ್ಧಚಂದ್ರಾಕೃತಿಯ ವ್ಯೋಹ ಅದರ ಹಿಂದೆ ಬಾಣಗಳನ್ನು ಹೂಡಿ ತಯಾರಾಗಿ ನಿಂತಿದ್ದ ಬಿಲ್ಲುಗಾರರು ಮತ್ತು ಟ್ರಿಗ್ಗರ್ ಒತ್ತಲು ತಯಾರಾಗಿದ್ದ ಮ್ಯಾಚ್ ಲಾಕ್ ರೈಫಲ್ ಧಾರಿಗಳನ್ನು ಬಂದಾನು ಗಮನಿಸಿದ . ಆ ಬದಿ ಒಂದು ಸುಸಜ್ಜಿತ ಪಡೆಯಿದ್ದರೆ ತನ್ನೆಡೆ ಎಲ್ಲಾ ಬಣ್ಣದ ಪೋಷಾಕು ಧರಿಸಿದ್ದ ಒಂದು ಪಡ್ಡೆಗಳ ದಂಡಿನಂತಿತ್ತು . ಆದರೂ ದೈವಿಚ್ಛೆ ಯನ್ನು ನಂಬಿದ್ದ .
ಸ್ವಲ್ಪ ಬೆಳಗೇರುತ್ತಿದ್ದಂತೆ ಸೇನೆಯಲ್ಲಿ ಮುನ್ನಡೆ ಆರಂಭಿಸಿತು . ಕುರಿಮಂದೆಯಂತೆ ಕೆಲಭಾಗದಲ್ಲಿ ಕ್ಷಿಪ್ರಗತಿಯಲ್ಲಿ ಮತ್ತೆ ಕೆಲಭಾಗದಲ್ಲಿ ಮಂದಗತಿಯಲ್ಲಿ ಸರಿಯಾದ ರಚನೆ ಶಿಸ್ತು ಮತ್ತು ತಾಲೀಮಿಲ್ಲದೆ ಮುನ್ನಡೆಯಿತು. ಹಾಗೆಯೇ ಸಾಗುತ್ತಾ ಹಠಾತ್ತನೆ ತೋಪಿನ ಘರ್ಜನೆ ಕೇಳಿಬಂತು , ಸಿಡಿತಲೆಗಳು ಒಂದರ ಮೇಲೊಂದಂತೆ ಸಿಕ್ಖರ ಮೊದಲ ಸಾಲಿನ ಸೇನೆಯನ್ನು ನಿಖರವಾಗಿ ಅಪ್ಪಳಿಸಿ ಕತ್ತರಿಸಿತು . ಅನೇಕ ತಲೆಗಳು ಕೈ ಕಾಲುಗಳು ಎರಗಿದವು . ಈ ಆಘಾತವನ್ನು ತಡೆದುಕೊಳ್ಳುವಷ್ಟರಲ್ಲಿ ಮತ್ತೊಂದು ಸುತ್ತಿನ ತುಫಾಕಿ ಧಾಳಿಯಿಂದ ಹೆದರಿ ಕೆಲವರು ಹಿನ್ನೆಡೆದರು . ಅದರಲ್ಲಿ ಹಲವಾರು ಕೇವಲ ದರೋಡೆ ಮಾಡಲೆಂದೇ ಬಂದವರು ಈಗ ರಣೋತ್ಸಾಹವಿಲ್ಲದೇ ಉಡುಗಿಹೋಗುತ್ತಿದ್ದಾರೆ . ಎಡ ಪಾರ್ಶ್ವದ ಸೇನೆಯೂ ರಣಭೂಮಿಯಿಂದ ಕಾಲ್ಕೀಳುತ್ತಿದ್ದಾರೆ . ಬಂದಾನಿಗೂ ಸೇನೆಯ ಸ್ಥಿತಿ ಕಂಡು ತಳಮಳಗೊಂಡ .
ರಾಜ್ ಸಿಂಗ್ ಮತ್ತಿನ್ನಿತರ ಸಂಗಡಿಗರು ಒಗ್ಗಟ್ಟಿನಿಂದ ಸೇನೆಯನ್ನು ಹುರಿದುಂಬಿಸಿ ಮುನ್ನೆಡೆಯಲು ಓಡಿದರು . ಇಲ್ಲದಿದ್ದರೆ ಸೇನೆಯು ಮುರಿದು ಬೀಳುವುದು ಖಚಿತ . ರಣಘೋಷವನ್ನು ಕೂಗುತ್ತಾ ಎಲ್ಲರನ್ನು ಮುನ್ನೆಡೆಸುತ್ತಾ ನಡೆದರು . ಸೇನೆಯಲ್ಲಿ ರಣೋತ್ಸಾಹ ಉಕ್ಕಿ ಯಾವ ಗುಂಡಿಗೂ ಬಾಣಗಳ ಮಳೆಗಳಿಗೂ ಲೆಕ್ಕಿಸದೆ ಶತ್ರುಗಳ ಮೇಲೆ ಕೈ ಕೈ ಹಿಡಿದು ಹೋರಾಡುವಷ್ಟು ಸನಿಹ ಬಂದರು . ಎಲ್ಲೆಡೆ ಕತ್ತಿಗಳ ಸದ್ದು ಸಪ್ಪಳ ರಕ್ತದೋಕುಳಿ .
ವಜೀರ್ ಖಾನಾನೂ ಸ್ವತಃ ಬಂದು ಹೋರಾಡುತ್ತಾ ಫತ್ತೇ ಸಿಂಗನಿಗೆ ಎದುರಾದ . ಫತ್ತೇ ಸಿಂಗನು ಸ್ವಲ್ಪವೂ ತಡಮಾಡದೇ ಅವನ ರುಂಡ ಹಾರಿಸಿದ !
ಖಾನನ ತಲೆ ಬಿದ್ದಂತೆಯೇ ಅವನ ಸೇನೆಯಲ್ಲಿ ಆತ್ಮಸ್ಥೈರ್ಯ ಕುಸಿಯಿತು .
ಆದರೆ ಸಿಕ್ಖರ ಸೇನೆಯ ರೋಷ ಯಾವ ಇಸ್ಲಾಮೀ ಸೈನಿಕನನ್ನು ಜೀವಸಹಿತ ಬಿಡಲಿಲ್ಲ . ಪ್ರತಿಯೊಬ್ಬ ಮುಸಲ್ಮಾನ ಸೈನಿಕನನ್ನು ಈ ಕಾಫಿರರ ಸೇನೆ ಕಟ್ಟಿಗೆ ಬಲಿಕೊಟ್ಟಿತು . ಮೊಘಲರ ಸಂಪೂರ್ಣ ಸೇನೆಯನ್ನು ಸಿಕ್ಖರ ಸೇನೆ ನಾಶಮಾಡಿತು .
ಸಿಕ್ಖರ ಸೇನೆಯೂ ಸಹಿತ ಅನೇಕ ಸಾವು ನೋವನ್ನು ಅನುಭವಿಸಿತು . ಇನ್ನು 10 ಕಿ ಮೀ ದೂರದ ಕೋಟೆಯನ್ನು ವಶಪಡಿಸಿಕೊಳ್ಳಲು ಮತ್ತೆರಡು ದಿನಗಳು ತಯಾರಿ ನಡೆಸಿದರು . ಸರಹಿಂದದ ಕೋಟೆಯನ್ನು ಕಬಳಿಸುವುದೂ ಸಹಿತ ಏನು ಸುಲಭದ ತುತ್ತಾಗಿರಲಿಲ್ಲ . ಕೋಟೆಯ ದ್ವಾರಗಳ ಸನಿಹದಲ್ಲೇ ಆಯಕಟ್ಟಿನ ಜಾಗಗಳಲ್ಲಿ ಬಂದೂಕು ತುಫಾಕಿಗಳನ್ನಿಟ್ಟಿದ್ದರು . ಮುತ್ತಿಗೆ ಹಾಕಿದ ಕೆಲವೇ ತಾಸಿನಲ್ಲಿ 500 ಸಿಕ್ಖರು ಹತರಾದರು. ಶ್ಯಾಮ್ ಸಿಂಗನು ಅತ್ಯುತ್ತಮ ಗುರಿಕಾರ , ಅಲಿ ಸಿಂಗನ ಮುಂದಾಳತ್ವದಲ್ಲಿ ಕೆಲವು ಬಂದೂಕಿನ ಸೈನಿಕರನ್ನು ಶ್ಯಾಮ್ ಸಿಂಗ್ ಕೊಂದು ದ್ವಾರವನ್ನು ಮುತ್ತಿಗೆ ಹಾಕುವುದರಲ್ಲಿ ಅನುವು ಮಾಡಿಕೊಟ್ಟ . ಇದರಿಂದ ತುಫಾಕಿಗಳು ನಿಶಬ್ದಃ ಗೊಂಡವು . ಕೋಟೆಯ ಬಾಗಿಲು ತೆರೆಯುತ್ತಿದ್ದಂತೆ ಪ್ರವಾಹದಂತೆ ಮುನ್ನುಗ್ಗಿದ ಜನ ಸೇನೆ ಅರಮನೆ ಒಳಗಿನ ಸರ್ವಸ್ವಾವನ್ನೂ ಲೂಟಿಮಾಡಿದರು .
ಸುಚಾನಂದನೆಂಬ ದ್ರೋಹಿಯಿದ್ದ . ಅವನೇ ವಜೀರನಿಗೆ ಸಿಕ್ಖರನ್ನು ಕೊಳ್ಳುವ ಕುಟಿಲ ಉಪಾಯಗಳನ್ನು ಕೊಡುತ್ತಿದ್ದ . ಈಗ ಉಗ್ರಾಣದ ಒಂದು ಹೂಜಿಯಡಿಗೆ ಬಚ್ಚಿಟ್ಟುಕೊಂಡಿದ್ದ . ಆದರೆ ಜನ ಪತ್ತೆ ಮಾಡಿದರು . ಅವನನ್ನು ಬೀದಿಗೆ ಎಳೆತಂದು ಎಲ್ಲರ ಸಮ್ಮುಖದಲ್ಲಿ ಚಿತ್ರಹಿಂಸೆಕೊಟ್ಟು ಕೊಂದರು . ಏಕೆಂದರೆ ಅವನು ಎಳ್ಳಷ್ಟೂ ಕರುಣೆಗೆ ಯೋಗ್ಯನಿರಲಿಲ್ಲ . ಜನರ ರೋಷ ಇಷ್ಟಕ್ಕೇ ನಿಲ್ಲಲಿಲ್ಲ . ಶತಮಾನಗಳ ದಬ್ಬಾಳಿಕೆ ನೋವಿನಿಂದ ಕುಡಿಯುತ್ತಿದ್ದ ಸಾಮಾನ್ಯ ಜನರ ಸೇಡು ಇನ್ನೂ ಅನೇಕ ಮುಸಲ್ಮಾನರನ್ನೂ ಬಲಿ ತೆಗೆದುಕೊಂಡಿತು .

Friday 20 January 2017

ಸಾಮನಾದ ಸಂಹಾರ : ಭಾಗ ೨


೧೭೦೯ ನವೆಂಬರ್ ೨೬ ರ ರಾತ್ರಿ

ಒಂದು ಬೃಹತ್ ಸೇನೆಯೊಂದಿಗೆ ಬಂದಾ ಬಹಾದ್ದೂರ್ ಅತಿ ವೇಗದಲ್ಲಿ ನಗರದ ದ್ವಾರ ಪ್ರವೇಶಿಸಿದ . ನಗರದ ದ್ವಾರ ಪಾಲಕರನ್ನು ತಲುಪುತ್ತಿದ್ದಂತೆಯೇ ಅವರನ್ನು ಬರ್ಬರವಾಗಿ ಹತ್ಯೆಗೈದು ನಗರ ಪ್ರವೇಶಿಸಿದರು . ಈ ಹಠಾತ್ತನೆ ನಡೆದ ಆಕ್ರಮಣಕ್ಕೆ ಕೇವಲ ತಮ್ಮ ರಕ್ಷಣೆಯನ್ನು ಮಾತ್ರ ಮಾಡಿಕೊಳ್ಳುತ್ತ ಮೈಮರೆತಿದ್ದ ಅಮೀರರು ಮತ್ತು ಫೌಜುದಾರರು ಒಮ್ಮೆಲೇ ಭಯಭೇತರಾದರು . ಅವರ ಬಹುತೇಕ ಪಡೆಯನ್ನು ತಮ್ಮ ಖಾಸಗಿ ರಕ್ಷಣೆಗಾಗಿ ಮಾತ್ರ ಬಳಸುತ್ತಿದ್ದರು . ಹಾಗಾಗಿ ಅವರ ಸೇನೆ ಇಪ್ಪತ್ತೆರಡು ವಿಭಾಗಗಳಲ್ಲಿ ಎಲ್ಲೆಡೆ ಚದುರಿ ಪರಿಣಾಮಕಾರಿ ರಕ್ಷಣೆಗೆ ನಾಲಾಯಕ್ ಆಗಿದ್ದವು . ಒಟ್ಟಿನಲ್ಲಿ ಎಲ್ಲಾ ಬಂದಾನ ಅನುಕೂಲಕ್ಕೇ ನಡೆಯುತ್ತಿತ್ತು . ಅಮೀರರ ಅಭೇದ್ಯ ಕೋಟೆಗಳನ್ನು ಪ್ರವೇಶದ್ವಾರಗಳಲ್ಲಿ ಮುತ್ತಿಗೆ ಹಾಕಿ ಬಂದಿಖಾನೆಗಳಾದವು . ಸಮರಕ್ಕೆ ತಕ್ಕಂತೆ ಅವರ ಸೇನೆಯನ್ನು ಚಲಿಸಲೂ ಅಸಾಧ್ಯವಾಯಿತು . ಫತ್ತೇ ಸಿಂಗನ ಯೋಜನೆ ಸಮರ್ಥವಾಗಿ ನೆರವೇರಿತು .ಶತ್ರುಗಳ ಕೈಕಟ್ಟಿತು .  ಒಮ್ಮೆ ಕೊನೇ ಬಾರಿ  ಫತ್ತೇ ಸಿಂಗ್ ಎಲ್ಲ ಹವೇಲಿಗಳು ಬಂದಿಯಾಗಿದೆಯೋ ಇಲ್ಲವೋ ಎಂದು ಗಸ್ತು ತಿರುಗಿ ಪಕ್ಕ ಮಾಡಿಕೊಂಡ . ಇನ್ನು ಅಂತಿಮ ಪ್ರಹಾರ ಕೊಡುವುದೊಂದೇ ಬಾಕಿ .

ನಂತರ ಮಿಕ್ಕ ಎಲ್ಲ ಪಡೆಗಳು ಬಂದಾ ನೇತೃತ್ವದಲ್ಲಿ ಜಲಾಲುದ್ದೀನನ ಹವೇಲಿಯ ಮೇಲೆ ಲಗ್ಗೆ ಇಟ್ಟವು . ಆ ಹವೇಲಿಯ ಮೇಲ್ಛಾವಣೆಯಿಂದ ಗುಂಡಿನ ಧಾಳಿ ಮಾಡಿದರು . ಇದರಿಂದ ಸ್ವಲ್ಪ ಘಾಸಿಯುಂಟಾಯಿತು . ಈ ಗದ್ದಲದ ಮಧ್ಯ ಒಬ್ಬ ಬಂದಾನ ಸೈನಿಕ ಗುಂಡು ತಲುಪದ ಮರೆಯಲ್ಲಿ ಒಂದು ಗೋಡೆ ಸಮೀಪದ ಬಳಸುಹಾದಿಯನ್ನು ಗಮನಿಸಿದ . ಅಲ್ಲಿ ತನ್ನ ಸಂಗಡಿಗರೊಂದಿಗೆ ಬ್ಯಾಟರಿಂಗ್ ರಾಮ್ ನನ್ನು ನುಗ್ಗಿಸಿ ಗೋಡೆ ಒಡೆದರು . ನಿರೀಕ್ಷಿತ ಸಮಯಕ್ಕಿಂತ ತುಸು ಬೇಗನೇ ಈ ಕೆಲಸ ಮುಗಿಯಿತು . ಹವೇಲಿಯ ಒಳಗೆ ಪ್ರವೇಶ ಸಿಕ್ಕಿತು .
ಅದರ ನಂತರ ಸಿಖ್ ಸೈನಿಕರಲ್ಲದೇ ಇತರ ರೈತರು ಉಳಿದೆಲ್ಲ ನಾಗರಿಕರೂ ಪ್ರವಾಹದಂತೆ ಒಳನುಗ್ಗಿದರು . ಹವೇಲಿಯ ಒಳಗಿದ್ದವರನ್ನು ಯಾವ ವಯಸ್ಸು ಲಿಂಗ ಭೇದವಿಲ್ಲದೇ ಕತ್ತಿಗೆ ಬಲಿಕೊಡಲಾಯಿತು . ಅದೆಷ್ಟೋ ವರ್ಷಗಳ ದಬ್ಬಾಳಿಕೆ ಸಾವು ನೋವಿನ ಸೇಡನ್ನು ಈಗ ತೀರಿಸಿಕೊಂಡರು . ಯಾವ ಮಟ್ಟಕ್ಕೆ ಇದು ವಿಪರೀತವಾಯ್ತೆಂದರೆ ಈ ವಿಷ ಪರಂಪರೆಯ ಮನೆಯ ಕೊನೆ ಸದಸ್ಯನೂ ಹತ್ಯೆಯಾಗುವತನಕ ಅಲ್ಲಿನ ಜನ ನೆತ್ತರು ಹರಿಸಿದರು . 
ಬಂದಾನು ಜನರ ಕ್ರೋಧಕ್ಕೆ ಹವೇಲಿಯನ್ನು ಬಿಟ್ಟು ಹೊರಬಂದ . ಒಂದಾದರೊಂದಂತೆ ಎಲ್ಲ ಹವೇಲಿಗಳು ಕುಸಿದವು ಮತ್ತು ಒಳಗಿದ್ದ ಎಲ್ಲರೂ ಬಲಿಯಾಗತೊಡಗಿದರು .

ಸೂರ್ಯಾಸ್ತವಾಗುವವೊಳಗೆ ಸಾಮನಾದ ಸಮರ ಮುಗಿಯಿತು . ಒಮ್ಮೆ ಸಂಪತ್ಭರಿತವಾಗಿದ್ದ ನಗರ ಈಗ ಪಾಳು ಬಿದ್ದಿದೆ . ಬೀದಿ ಬೀದಿಯಲ್ಲೂ ರಕ್ತದ ಹೊಳೆ ಹರಿಯುತ್ತಿದೆ.  ಸುಮಾರು ೧೦ ಸಾವಿರಕ್ಕಿಂತ ಅಧಿಕ ಜನ ಒಂದೇ ದಿನದಲ್ಲಿ ಸತ್ತರು .
ಜಲಾಲುದ್ದೀನ್ ತನ್ನ ಹವೇಲಿಯಿಂದ ತಪ್ಪಿಸಿಕೊಳ್ಳಲು ಮೆಲ್ಲನೆ ಹೊರ ನಡೆಯುತ್ತಿದ್ದ . ಫತ್ತೇ ಸಿಂಗ್ ಅವನನ್ನು ಹಿಡಿದು ಒಂದೇ ಏಟಿನಿಂದ ಅವನ ರುಂಡ ಹಾರಿಸಿದ . ತೇಗ ಬಹಾದ್ದೂರರನ್ನು ಕೊಂದ ಈ ಪಾತಕಿಯ ತಲೆಯನ್ನು ಈಟಿಯ ಮೇಲೆ ಚುಚ್ಚಿ ನಗರ ಒಂದು ಪ್ರವೇಶ ದ್ವಾರದಲ್ಲಿ ನೆಟ್ಟರು .  ಷಾಶಾಲ್ ಬೇಗ್ ಮತ್ತು ಭಾಷಲ್ ಬೇಗರಿಗೂ ಇದೇ ರೀತಿ ಗತಿ ಕಾಣಿಸಿದರು .

ಸಂಜೆಯ ಹೊತ್ತಿನಲ್ಲಿ ಧಗಧಗನೆ ಉರಿಯುತ್ತಿದ್ದ ನಗರ ಚಳಿಗೆ ಒಳ್ಳೆ ಬಿಸಿ ಮುಟ್ಟಿಸುತ್ತಿತ್ತು . ಮಟ್ಟುಳಿದ ಕಲ್ಮಶಗಳನ್ನು ಅಗ್ನಿ ಸುಡುತ್ತಾ ವಾಯುಮಂಡಲದಲ್ಲಿ ಒಂದು ತೀಕ್ಷ್ಣ ದುರ್ಗಂಧ ಸೂಸುತ್ತಿತ್ತು .

ಜಲಾಲುದ್ದೀನನ ಆಸ್ಥಾನವಾಗಿದ್ದ ಕೋಣೆಯಲ್ಲಿ ಬಂದಾನು ಬಿಡಾರ ಹೂಡಿದ್ದ . ಬಂದಾನು ಶಾಂತನಾಗಿ ಚಿಂತಾಮಗ್ನನಾಗಿ ಕುಳಿತಿದ್ದ . ಅವನನ್ನು ಸಮಾಧಾನಿಸಲೆಂದು ಭುಜದ ಮೇಲೆ ಭಾಯಿ ಬಿನೋದ್ ಕೈ ಇಟ್ಟ ಮತ್ತು ಬಳಿ ಕುಳಿತ . ಬಂದಾನಲ್ಲಿ ಒಂದು ಸಣ್ಣ ದುಃಖದ ನಗೆ ಬಂತು . “ ಬಾ ಭಾಯಿ , ಇವತ್ತಿನ ದಿನ ತುಂಬಾ ಶ್ರಮದಾಯಕವಾಗಿತ್ತು . ಸ್ವಲ್ಪ ವಿಶ್ರಾಂತಿ ತೆಗೆದುಕೋ  ”. ಬಂದಾನು ಆಲೋಚನೆ ಮಾಡುತ್ತಾ – “ ಗುರುಗಳ ಆಜ್ಞೆ ಯಾಗಿದ್ದು ಉದಾತ್ತ ಗುಣದಿಂದ ವಿಜಯ ಸಾಧಿಸಬೇಕೆಂದು ಅದಕ್ಕಾಗಿ ಈ ರಕ್ತಪಾತವಿಲ್ಲದೇ ಬೇರೆ ಯಾವ ಮಾರ್ಗವಿರುತ್ತಿತ್ತೋ . . .  ”. ಬಂದಾನ ಮಾತಿನ ಸ್ವರದಲ್ಲಿ ಸಾಮನಾದ ವಿಜಯ ನಗಣ್ಯದಂತೆ ತೋರಿತು . ಬಿನೋದನು ನುಡಿದ – “ ನಮಗೂ ಕೂಡ ರಕ್ತಪಾತವಿಲ್ಲದೆಯೇ ಸಾಧಿಸಬೇಕೆಂದಿತ್ತು , ಆದರೆ ಬೇರೆ ದಾರಿಯಿಲ್ಲ . ಇಲ್ಲಿನ ಜನ ಶತಮಾನಗಳ ಸಾವು ನೋವನ್ನು ಅನುಭವಿಸಿದ್ದಾರೆ ಅದರ ಕ್ರೋಧವು ಇವರನ್ನು ಕಾನೂನನ್ನು ಕೈಗೆ ತೆಗೆದುಕೊಳ್ಳುವಂತೆ ಮಾಡಿದೆ . ಈ ಮೋಘಲರು ತಾವು ಮಾಡಿದ್ದನ್ನೇ ಅನುಭವಿಸಿದರಷ್ಟೇ . ಅದಕ್ಕಾಗಿ ನಾವು ಜನರನ್ನು ದೂಷಿಸಲಾಗುವುದಿಲ್ಲ . ” . ಬಂದಾನಿಗೆ ಸಮಾಧಾನಕರವೆನಿಸಲಿಲ್ಲ – “ ಆದರೂ ಈ ರೀತಿ ಸಂಪೂರ್ಣ ಸೇಡು ತೀರಿಸಿಕೊಳ್ಳುವ ಅವಶ್ಯಕತೆಯಿರಲಿಲ್ಲ . ನಾವು ನಮ್ಮ ಜನಕ್ಕೆ ಶತ್ರುಗಳನ್ನು ಕ್ಷಮಿಸುವಂತಹ ಗುರುಗಳ ಸಂದೇಶ ತಿಳಿಸಬಹುದಿತ್ತು  ”. ಆಗ ಬಿನೋದ – “ ಯಾವ ನೈತಿಕ ಭೋದನೆಯು ಶೋಷಿತ ಮನಸ್ಸಿಗೆ ಸಾಂತ್ವನ ನೀಡಲು ಸಾಧ್ಯ ? ಗುರುಗಳ ಉಪದೇಶ ಏನೂ ವ್ಯತ್ಯಾಸ ತರದು . ಹಾಗೇನಾದರೂ ಇವರಿಗೆ ಆ ಹೊತ್ತಿನಲ್ಲಿ ನಾವು ಬೋಧನೆ ಮಾಡಿದರೆ ಅವರ ಆಕ್ರೋಶ ನಮ್ಮ ವಿರುದ್ಧವೇ ತಿರುಗಿ ಬಿದ್ದೀತು . ಭಾಯಿ ಬಂದಾ ಸುಮ್ಮನೆ ಭಾವನೆಗಳಿಗೆ ಮರುಳಾಗಿ ದಣಿಯಬೇಡ . ನಿನಗೆ ತಿಳಿದಂತೆ ಪ್ರಪಂಚವು ದೈವೇಚ್ಛೆಯಂತೆ ನಡೆಯುತ್ತದೆ . ಆ ಅಮೀರರಿಗೆ ತಮ್ಮ ಪಾಪದ ಫಲವೇ ಲಭಿಸಿದೆ . ಅವರ ಪಾಪಕ್ಕಿಂತ ಜನರ ತಪ್ಪೇನೂ ದೊಡ್ಡದಲ್ಲ . ಇದಕ್ಕೆ ನೀನು ಕಾರಣವೆಂದು ಭಾವಿಸಬೇಡ  ”.

ಸಾಮನಾದ ಸಮರದಲ್ಲಿ ಬಂದಾನ ಸೈನಿಕರು ಅಪಾರ ಸಂಪತ್ತನ್ನು ಕೊಳ್ಳೆಹೊಡೆದರು . ಅದರಲ್ಲಿ ಒಂದು ದೊಡ್ಡ ಮೊತ್ತ ಮುಂದಿನ ಸಂಗ್ರಾಮಕ್ಕೆ ತೆಗೆದಿಟ್ಟು ಉಳಿದನ್ನು ಅವರವರ ಮಧ್ಯೆ ಸಮಾನವಾಗಿ ಹಂಚಿಕೊಂಡರು .
ಸಾಮನಾದ ಸಮರ ಬಂದಾ ಬಹಾದ್ದೂರನ ಚೊಚ್ಚಲ ಜಯ . ಹದಿನೆಂಟನೇ ಶತಮಾನದ ಆದಿಯಲ್ಲಿ ಅವಸಾನದ ಹಾದಿಯಲ್ಲಿದ್ದ ಮೊಘಲ್ ಸಾಮ್ರಾಜ್ಯಕ್ಕೆ ಉತ್ತರದಲ್ಲಿ ಬಂದಾ ಮೊದಲ ಕೊಡಲಿ ಪೆಟ್ಟು ಕೊಟ್ಟ . ಇನ್ನೂ ಮುಂದಿನ ವಿಜಯಯಾತ್ರೆಯಿಂದ ಪಂಜಾಬನ್ನು ಮುಕ್ತಗೊಳಿಸಿ ಸಿಖ್ ಸಾಮ್ರಾಜ್ಯವನ್ನೂ ಕಟ್ಟಿದ .


ಸಂಭವಾಮಿ ಯುಗೇ ಯುಗೇ ಎಂಬ ಗೀತೆಯ ವಾಣಿಯನ್ನು ಪುನಃ ನಿರೂಪಿಸಿದ ಬಂದಾ .