ಸೆಪ್ಟೆಂಬರ್
6 ರ ಆರಂಭದಲ್ಲಿ
ಪಾಕಿಗಳ ಚಂಬ್ – ಜೌರಿಯಾ ಸೆಕ್ಟರ್
ನ ಧಾಳಿಯನ್ನು ನಿವಾರಿಸಲು ಭಾರತೀಯ
ಸೇನೆ ಆಪರೇಷನ್ ರಿಡಲ್ ಎಂಬ
ಕಾರ್ಯಾಚರಣೆಯನ್ನು ಲಾಹೋರ್
ಸೆಕ್ಟರ್ ನಲ್ಲಿ ಆರಂಭಿಸಿತು .
ಅದಕ್ಕೆ ಪೂರಕವಾಗಿ
ಅಧಮ್ ಪುರ್ ಮತ್ತು ಹಲ್ವಾರಾ
ವಾಯುನೆಲೆಯಿಂದ ಮಿಸ್ಟೀರ್ಸ್
ಮತ್ತು ಹಂಟರ್ಸ್ ಫೈಟರ್ಸ್ ಪಾಕಿಗಳ
ಟ್ಯಾಂಕ್ ಮತ್ತಿನ್ನಿತರ ವಾಹನಗಳ
ಮೇಲೆ ಬಲವಾದ ಬಾಂಬ್ ಧಾಳಿಯ ಮಳೆ
ಸುರಿಸುತ್ತಿದ್ದರು .
ವಿಂಗ್
ಕಮ್ಯಾಂಡರ್ ಓಮಿ ತನೇಜಾರ ನೇತೃತ್ವದ
ಮಿಸ್ಟೀರ್ಸ್ ಪೆಟ್ರೋಲ್ ಟ್ಯಾಂಕುಗಳನ್ನು
ಹೊತ್ತೊಯ್ಯುತ್ತಿದ್ದ ಒಂದು ರೈಲು
ಗಾಗಿಯನ್ನೇ ಉಡಾಯಿಸಿ ಪಾಕಿ ಸೇನೆಯ
ಬೆನ್ನು ಮುರಿದರು . 8 ನೇ
ಸ್ಕ್ವಾಡ್ರನ್ನಿನ ಚೋಪ್ರಾ ,
ವಿನೋದ್ ಪಟ್ನಿ
ಮತ್ತು ಜಿಮಿ ಭಾಟಿಯಾರ ಮಿಸ್ಟೀರ್ಸ್
ಪಾಕಿ ಸೇನೆಯ ನಾಲ್ಕು ಟ್ಯಾಂಕ್
, ಭಾರೀ
ಆರ್ಟಿಲ್ಲರಿ ಮತ್ತು ತೋಪುಗಳ ಬಲಿ
ತೆಗೆದುಕೊಂಡರು .
ಮಾರನೇ
ದಿನ ಬೆಳಿಗ್ಗೆ 7 ಕ್ಕೆ
ಅಯೂಬ್ ಖಾನ್ ಸಾಹೇಬರು ಭಾರತೀಯರ
ರೆಕ್ಕೆ ಕತ್ತರಿಸಲೆಂದು ತಮ್ಮ
ದಂಡ ನಾಯಕರನ್ನೊಳಗೊಂಡ ಒಂದು
ಸೇನಾ ಬೈಠಕ್ ನಲ್ಲಿ ಸೇರಿದರು .
ಒಂದೇ ಸಮಯದಲ್ಲಿ
ಅರವತ್ತು ಫೈಟರ್ಸ್ ಮತ್ತು ಬಾಂಬರುಗಳ
ಧಾಳಿಯಿಂದ ಭಾರತೀಯ ವಾಯುನೆಲೆಯಾದ
ಪಠಾಣ್ ಕೋಟ್ , ಅಧಮ್
ಪುರ್ , ಹಲ್ವಾರಾ
ಮತ್ತು ಜಾಮ್ ನಗರ್ ಮೇಲೆ ಧಾಳಿಮಾಡಿ
ಅಮೃತಸರದ ರೆಡಾರನ್ನು ಪರಾಸ್ತಗೊಳಿಸಬೇಕೆಂದು
.
ಅಟ್ಯಾಕ್
ಪ್ಲ್ಯಾನ್ ಸರಿಯಾಗಿ 2:30 ಯ
ಮಧ್ಯಾನ್ಹದ ಹೊತ್ತಿಗೆ ನಿಗದಿಯಾಗಿತ್ತು
. ಆದರೆ
ತಾಂತ್ರಿಕ ದೋಷದ ಕಾರಣ ಒಟ್ಟು 60
ಪ್ಲೇನುಗಳನ್ನು
ಒಟ್ಟು ಮಾಡಲೂ ಆಗಲಿಲ್ಲ ಮತ್ತು
ಒಮ್ಮೆಲೇ ನಿಯೋಜಿಸಲೂ ಆಗಲಿಲ್ಲ
. ಅವರು ಪಠಾಣ್
ಕೋಟ್ ಮೇಲೆ ಧಾಳಿ ಮಾಡುತ್ತಿದ್ದಂತೆಯೇ
ಅವರ ಕುತಂತ್ರ ಬಯಲಾಗಿ ಮಿಕ್ಕ
ಎಲ್ಲಾ ವಾಹುನೆಲೆಯಲ್ಲಿ ಕಾಂಬ್ಯಾಟ್
ಪ್ಯಾಟ್ರೋಲ್ (Combat
Patrol - ಗಸ್ತು
ಕಾವಲು) ಶುರುಮಾಡಿದರು
.
ಸಂಜೆ
5:30 ಯ ಸಮಯದಲ್ಲಿ
ಎರಡು ಸ್ಟಾರ್ ಜೆಟ್ ಗಳ ರಕ್ಷಣಾ
ಮರೆಯಲ್ಲಿ ಎಂಟು ಸೇಬರ್ ಜೆಟ್
ಗಳು ಪಠಾಣ್ ಕೋಟ್ ವಾಯುನೆಲೆಯ
ಮೇಲೆ ಮಿಂಚಿನ ಧಾಳಿಗೈದು ಬಹಳ
ನಷ್ಟ ಮಾಡಿದವು . ಸುಮಾರು
ಒಂಭತ್ತು ವಿಮಾನಗಳು ನೆಲದಲ್ಲೇ
ನಾಶವಾದವು .
ಅದೇ
ಸಮಯದಲ್ಲಿ ಮೂರು ಸೇಬರ್ಸ್ ಅಧಮ್
ಪುರ್ ಮೇಲೆ ಹಾರುತ್ತಿದ್ದವು .
ಆಗ Air
Patrol ಮಾಡುತ್ತಿದ್ದ
ಭಾರತೀಯ ಹಂಟರ್ಸ್ ನೋಡಿದವು ಮತ್ತು
ಅವರ ಮೇಲೆ ಮುಗಿಬಿದ್ದವು .
ಹೆದರಿದ ಸೇಬರ್ಸ್
ತಮ್ಮ Drop Tank ಗಳನ್ನು
ಕಳಚಿ ಓಡಿಹೋದವು .
ಸಂಜೆ
ಆರರಷ್ಟರಲ್ಲಿ ಹಲ್ವಾರಾ ಮಾರ್ಗವಾಗಿ
ನಾಲ್ಕು ಸೇಬರ್ಸ್ ಹಾರುತ್ತಿದ್ದವು
. ಇದನ್ನು
ನೇತೃತ್ವ ವಹಿಸಿದ್ದ ಪಾಕಿಸ್ತಾನೀ
ಹೀರೋ ಸರ್ಫರಾಝ್ ರಫೀಕಿ ಮಾಡುತ್ತಿದ್ದ
. ಮೊದಲ
ದಿನಗಳನ್ನು ಭಾರತೀಯರ ಎರಡು ಹಂಟರ್
ಜೆಟ್ ಗಳನ್ನು ಹೊಡೆದುರುಳಿಸಿದ್ದ
ರಫೀಕಿ ಮತ್ತೆ ತನ್ನ ರೆಕ್ಕೆಗಳನ್ನು
ಇತ್ತ ತಿರುಗಿಸಿ ಸವಲೆಸೆಗಿಸಲು
ಬಂದಿದ್ದ . ಆತ
ಬರುತ್ತಿದ್ದಂತೆಯೇ ಪಿಂಗಾಲೆ
ಮತ್ತು ಗಾಂಢಿಯವರಿ ತಮ್ಮ ಹಂಟರ್
ಗಳನ್ನು ಲ್ಯಾಂಡ್ ಮಾಡುತ್ತಿದ್ದರು
. ಸಮಯದ
ಸದಾವಕಾಶ ಪಡೆದ ರಫೀಕಿ ಪಿಂಗಾಲೆಯವರ
ವಿಮಾನವನ್ನು ಮೇಲಿನಿಂದ ಹೊಡೆದ
. ಪಿಂಗಾಲೆಯವರು
ತಮ್ಮ ಪ್ಯಾರಾಚೂಟ್ ನಿಂದ ನೆಗೆದು
ಬಚಾವಾದರು . ಗಾಂಧಿಯವರು
ವೇಗವಾಗಿ ತಮ್ಮ ವಿಮಾನವನ್ನು
ಮೇಲಕ್ಕೆತ್ತಿ ಒಂದು ಸೇಬರ್ ಮೇಲೆ
ಗುಂಡುಗಳನ್ನು ಹಾರಿಸಿದರು .
ಆ ಸೇಬರ್
ಹೊಗೆಯಾಡುತ್ತಾ ಒಡಿಹೋಯಿತು .
ಅಷ್ಟರಲ್ಲಿ
ಮತ್ತೆ ರಫೀಕಿ ಗಾಂಧಿಯವರ ಮೇಲೆ
ಧಾಳಿ ಮಾಡಿದ.
ಗಾಂಧಿಯವರೂ
ತಮ್ಮ ವಿಮಾನವನ್ನು ಎಜೆಕ್ಟ್
ಮಾಡಿದರು .
ಹಲ್ವಾರಾದಲ್ಲಿ
ಗಸ್ತು ತಿರುಗುತ್ತಿದ್ದ 17
ನೇ ಸ್ಕ್ವಾರ್ಡ್ರನ್ನಿನ
ಫ್ಲೈಟ್ ಲೆಫ್ಟನೆಂಟ್ ಡಿ ಎನ್
ರಾಠೋಡ್ ಮತ್ತು ಫ್ಲೈಯಿಂಗ್ ಆಫೀಸರ್
ನೆಬ್ ದೂರದಲ್ಲಿ ಮಿಂಚಿನ ಬೆಳಕು
ಮತ್ತು ಹೊಗೆಯನ್ನು ಕಂಡು ಅತ್ತ
ಧಾವಿಸಿದರು . ರಾಠೋಡ್
ಬಲು ಚಾಣಾಕ್ಷತೆಯಿಂದ ರಫೀಕಿಯ
ಹಿಂದೆ ಬಂದು ಗುಂಡುಗಳನ್ನು
ಹಾರಿಸಿದರು . ರಫೀಕಿ
ತಪ್ಪಿಸಿಕೊಳ್ಳಲು ಪ್ರಯತ್ನಿಸಿದನಾದರೋ
ರಾಠೋಡ್ ಮತ್ತೆ ಸಮೀಪಿಸಿ ಪ್ರಖರವಾಗಿ
ಫೈರಿಂಗ್ ಮಾಡಿ ಅವನ ಪ್ಲೇನನ್ನು
ಹೊಡೆದರು . ನೆಬ್
ಮತ್ತೊಂದು ಸೇಬರನ್ನು ಹೊಡೆದರು
.
ಆ
ದಿನ ಪಾಕಿಸ್ತಾನ ತಮ್ಮ ಇಬ್ಬರು
ಹೀರೋಗಳನ್ನು ಕಳೆದುಕೊಂಡ ಕಾರಣ
ನೈತಿಕ ಬಲ ಕುಸಿದು ಬಿತ್ತು .
ನಮ್ಮ ವಾಯು
ಸೇನೆಯ ರೆಕ್ಕೆಗಳ ಪರಾಕ್ರಮಕ್ಕೆ
ಹೆದರಿ ಬೆಳಗಿನ ಹೊತ್ತಿನಲ್ಲಿ
ಧಾಳಿ ಮಾಡುವುದನ್ನು ಕೈಬಿಟ್ಟವು
.
ಮತ್ತೆ
ಅದೇ ದಿನದ ರಾತ್ರಿ ಪಾಕಿಸ್ತಾನದ
ಎರಡು B-17 ಬಾಂಬರ್ಸ್
ಅಮೃತಸರದ ಮೇಲೆ ಮತ್ತೆರಡು ಜಾಮ್
ನಗರದ ಮೇಲೆ ಹಾರಿದವು .
ಎರಡೂ ಪ್ರದೇಶದಲ್ಲಿ
ಒಂದೊಂದು ಪ್ಲೇನನ್ನು Anti-Aircraft
ಗನ್ನಿನಿಂದ
ಹೊಡೆದರು . ಮತ್ತೊಂದು
ವಿಮಾನ ಅಲ್ಲಿ ಅಲ್ಲಿ ಬಾಂಬುಗಳನ್ನು
ಬೇಕಾಬಿಟ್ಟು ಬಿಸಾಡಿ ಪರಾರಿಯಾದವು
.
ಮತ್ತೆ
ಆ ದಿನದ ರಾತ್ರಿಯಲ್ಲಿ ಪಾಕಿಗಳ
ಕೊನೆಯ ಪ್ರಯಾಸವೆಂಬತೆ ಪಠಾಣ್
ಕೋಟ್ . ಅಧಮ್
ಪುರ್ ಮತ್ತು ಹಲ್ವಾರಾ ವಾಯುನೆಲೆಯಗಳ
ಹೊರಗೆ ಎಲ್ಲ ಪ್ರದೇಶಗಳಲ್ಲೂ
ಅರವತ್ತು ಕಮ್ಯಾಂಡೋಗಳನ್ನು
ಪ್ಯಾರಾಚೂಟ್ ನಿಂದ ಇಳಿಸಿ
ವಾಯುನೆಲೆಯನ್ನು ವಶಪ್ಡಿಸಿಕೊಳ್ಳುವ
ಪ್ರಯತ್ನ ಮಾಡಿದರು .
ಅವರ ಬಳಿ ಸ್ಫೋಟಕಗಳು
, ಆಟೋಮಾಟಿಕ್
ವೆಪನ್ಸ್ , ಗ್ರೆನೇಡ್ಸ್
ಮತ್ತು ವೈರ್ಲೆಸ್ ಸಾಮಾಗ್ರಿಗಳಿದ್ದವು
. ಆ
180 ಯೋಧರಲ್ಲಿ
ಇಪ್ಪತ್ತೆರಡು ಇಳಿಯುತ್ತಿದ್ದಂತೆಯೇ
ಹತರಾದರು . 136 ಯೋಧರನ್ನು
ಬಂಧಿ ಮಾಡಲಾಯಿತು .
ಇನ್ನುಳಿದ
ಕೆಲವು ಹೇಗೋ ಮಾಡಿ ಗಡಿ ದಾಟಿ
ಪರಾರಿಯಾದರು .
ಆ
ದಿನದ ರಾತ್ರಿ ಏರ್ ಮಾರ್ಷಲ್
ಅರ್ಜನ್ ಸಿಂಗ್ ರಕ್ಷಣಾ ಮಂತ್ರಿ
ಚೌಹಾಣರೊಂದಿಗೆ ನಷ್ಟ – ಲಾಭದ
ಸಮಾಲೋಚನೆ ಮಾಡುತ್ತಿದ್ದರು .
ಅರ್ಜನರಿಗೆ
ಪಠಾಣ್ ಕೋಟಿನ ನಷ್ಟದಿಂದ ಸ್ವಲ್ಪ
ಬೇಸರಗೊಂಡಿದ್ದರು .
ಆಗ್ ಚೌಹಾಣರು
– “ ಆಗಿದ್ದನ್ನು ಮರೆತುಬಿಡಿ ,
ಮುಂದಿನದನ್ನು
ಮಾತ್ರ ಯೋಚಿಸಿ .
ನಾಳೆ ಶತ್ರುವನ್ನು
ಹೇಗೆ ಸದೆಬಡೆಯುವುದು ಅನ್ನುವುದನ್ನು
ಮಾತ್ರ ಯೋಚಿಸಿ ” ಎಂದು ಸಮಜಾಯಿಸಿದರು.