Sunday 13 December 2015

ಕೇವಲ ಒಂದು ದಿನದ ಭಾರೀ ಕದನ






ಸೆಪ್ಟೆಂಬರ್ 6 ರ ಆರಂಭದಲ್ಲಿ ಪಾಕಿಗಳ ಚಂಬ್ – ಜೌರಿಯಾ ಸೆಕ್ಟರ್ ನ ಧಾಳಿಯನ್ನು ನಿವಾರಿಸಲು ಭಾರತೀಯ ಸೇನೆ ಆಪರೇಷನ್ ರಿಡಲ್ ಎಂಬ ಕಾರ್ಯಾಚರಣೆಯನ್ನು ಲಾಹೋರ್ ಸೆಕ್ಟರ್ ನಲ್ಲಿ ಆರಂಭಿಸಿತು . ಅದಕ್ಕೆ ಪೂರಕವಾಗಿ ಅಧಮ್ ಪುರ್ ಮತ್ತು ಹಲ್ವಾರಾ ವಾಯುನೆಲೆಯಿಂದ ಮಿಸ್ಟೀರ್ಸ್ ಮತ್ತು ಹಂಟರ್ಸ್ ಫೈಟರ್ಸ್ ಪಾಕಿಗಳ ಟ್ಯಾಂಕ್ ಮತ್ತಿನ್ನಿತರ ವಾಹನಗಳ ಮೇಲೆ ಬಲವಾದ ಬಾಂಬ್ ಧಾಳಿಯ ಮಳೆ ಸುರಿಸುತ್ತಿದ್ದರು .
ವಿಂಗ್ ಕಮ್ಯಾಂಡರ್ ಓಮಿ ತನೇಜಾರ ನೇತೃತ್ವದ ಮಿಸ್ಟೀರ್ಸ್ ಪೆಟ್ರೋಲ್ ಟ್ಯಾಂಕುಗಳನ್ನು ಹೊತ್ತೊಯ್ಯುತ್ತಿದ್ದ ಒಂದು ರೈಲು ಗಾಗಿಯನ್ನೇ ಉಡಾಯಿಸಿ ಪಾಕಿ ಸೇನೆಯ ಬೆನ್ನು ಮುರಿದರು . 8 ನೇ ಸ್ಕ್ವಾಡ್ರನ್ನಿನ ಚೋಪ್ರಾ , ವಿನೋದ್ ಪಟ್ನಿ ಮತ್ತು ಜಿಮಿ ಭಾಟಿಯಾರ ಮಿಸ್ಟೀರ್ಸ್ ಪಾಕಿ ಸೇನೆಯ ನಾಲ್ಕು ಟ್ಯಾಂಕ್ , ಭಾರೀ ಆರ್ಟಿಲ್ಲರಿ ಮತ್ತು ತೋಪುಗಳ ಬಲಿ ತೆಗೆದುಕೊಂಡರು .
ಮಾರನೇ ದಿನ ಬೆಳಿಗ್ಗೆ 7 ಕ್ಕೆ ಅಯೂಬ್ ಖಾನ್ ಸಾಹೇಬರು ಭಾರತೀಯರ ರೆಕ್ಕೆ ಕತ್ತರಿಸಲೆಂದು ತಮ್ಮ ದಂಡ ನಾಯಕರನ್ನೊಳಗೊಂಡ ಒಂದು ಸೇನಾ ಬೈಠಕ್ ನಲ್ಲಿ ಸೇರಿದರು . ಒಂದೇ ಸಮಯದಲ್ಲಿ ಅರವತ್ತು ಫೈಟರ್ಸ್ ಮತ್ತು ಬಾಂಬರುಗಳ ಧಾಳಿಯಿಂದ ಭಾರತೀಯ ವಾಯುನೆಲೆಯಾದ ಪಠಾಣ್ ಕೋಟ್ , ಅಧಮ್ ಪುರ್ , ಹಲ್ವಾರಾ ಮತ್ತು ಜಾಮ್ ನಗರ್ ಮೇಲೆ ಧಾಳಿಮಾಡಿ ಅಮೃತಸರದ ರೆಡಾರನ್ನು ಪರಾಸ್ತಗೊಳಿಸಬೇಕೆಂದು .
ಅಟ್ಯಾಕ್ ಪ್ಲ್ಯಾನ್ ಸರಿಯಾಗಿ 2:30 ಯ ಮಧ್ಯಾನ್ಹದ ಹೊತ್ತಿಗೆ ನಿಗದಿಯಾಗಿತ್ತು . ಆದರೆ ತಾಂತ್ರಿಕ ದೋಷದ ಕಾರಣ ಒಟ್ಟು 60 ಪ್ಲೇನುಗಳನ್ನು ಒಟ್ಟು ಮಾಡಲೂ ಆಗಲಿಲ್ಲ ಮತ್ತು ಒಮ್ಮೆಲೇ ನಿಯೋಜಿಸಲೂ ಆಗಲಿಲ್ಲ . ಅವರು ಪಠಾಣ್ ಕೋಟ್ ಮೇಲೆ ಧಾಳಿ ಮಾಡುತ್ತಿದ್ದಂತೆಯೇ ಅವರ ಕುತಂತ್ರ ಬಯಲಾಗಿ ಮಿಕ್ಕ ಎಲ್ಲಾ ವಾಹುನೆಲೆಯಲ್ಲಿ ಕಾಂಬ್ಯಾಟ್ ಪ್ಯಾಟ್ರೋಲ್ (Combat Patrol - ಗಸ್ತು ಕಾವಲು) ಶುರುಮಾಡಿದರು .
ಸಂಜೆ 5:30 ಯ ಸಮಯದಲ್ಲಿ ಎರಡು ಸ್ಟಾರ್ ಜೆಟ್ ಗಳ ರಕ್ಷಣಾ ಮರೆಯಲ್ಲಿ ಎಂಟು ಸೇಬರ್ ಜೆಟ್ ಗಳು ಪಠಾಣ್ ಕೋಟ್ ವಾಯುನೆಲೆಯ ಮೇಲೆ ಮಿಂಚಿನ ಧಾಳಿಗೈದು ಬಹಳ ನಷ್ಟ ಮಾಡಿದವು . ಸುಮಾರು ಒಂಭತ್ತು ವಿಮಾನಗಳು ನೆಲದಲ್ಲೇ ನಾಶವಾದವು .
ಅದೇ ಸಮಯದಲ್ಲಿ ಮೂರು ಸೇಬರ್ಸ್ ಅಧಮ್ ಪುರ್ ಮೇಲೆ ಹಾರುತ್ತಿದ್ದವು . ಆಗ Air Patrol ಮಾಡುತ್ತಿದ್ದ ಭಾರತೀಯ ಹಂಟರ್ಸ್ ನೋಡಿದವು ಮತ್ತು ಅವರ ಮೇಲೆ ಮುಗಿಬಿದ್ದವು . ಹೆದರಿದ ಸೇಬರ್ಸ್ ತಮ್ಮ Drop Tank ಗಳನ್ನು ಕಳಚಿ ಓಡಿಹೋದವು .
ಸಂಜೆ ಆರರಷ್ಟರಲ್ಲಿ ಹಲ್ವಾರಾ ಮಾರ್ಗವಾಗಿ ನಾಲ್ಕು ಸೇಬರ್ಸ್ ಹಾರುತ್ತಿದ್ದವು . ಇದನ್ನು ನೇತೃತ್ವ ವಹಿಸಿದ್ದ ಪಾಕಿಸ್ತಾನೀ ಹೀರೋ ಸರ್ಫರಾಝ್ ರಫೀಕಿ ಮಾಡುತ್ತಿದ್ದ . ಮೊದಲ ದಿನಗಳನ್ನು ಭಾರತೀಯರ ಎರಡು ಹಂಟರ್ ಜೆಟ್ ಗಳನ್ನು ಹೊಡೆದುರುಳಿಸಿದ್ದ ರಫೀಕಿ ಮತ್ತೆ ತನ್ನ ರೆಕ್ಕೆಗಳನ್ನು ಇತ್ತ ತಿರುಗಿಸಿ ಸವಲೆಸೆಗಿಸಲು ಬಂದಿದ್ದ . ಆತ ಬರುತ್ತಿದ್ದಂತೆಯೇ ಪಿಂಗಾಲೆ ಮತ್ತು ಗಾಂಢಿಯವರಿ ತಮ್ಮ ಹಂಟರ್ ಗಳನ್ನು ಲ್ಯಾಂಡ್ ಮಾಡುತ್ತಿದ್ದರು . ಸಮಯದ ಸದಾವಕಾಶ ಪಡೆದ ರಫೀಕಿ ಪಿಂಗಾಲೆಯವರ ವಿಮಾನವನ್ನು ಮೇಲಿನಿಂದ ಹೊಡೆದ . ಪಿಂಗಾಲೆಯವರು ತಮ್ಮ ಪ್ಯಾರಾಚೂಟ್ ನಿಂದ ನೆಗೆದು ಬಚಾವಾದರು . ಗಾಂಧಿಯವರು ವೇಗವಾಗಿ ತಮ್ಮ ವಿಮಾನವನ್ನು ಮೇಲಕ್ಕೆತ್ತಿ ಒಂದು ಸೇಬರ್ ಮೇಲೆ ಗುಂಡುಗಳನ್ನು ಹಾರಿಸಿದರು . ಆ ಸೇಬರ್ ಹೊಗೆಯಾಡುತ್ತಾ ಒಡಿಹೋಯಿತು . ಅಷ್ಟರಲ್ಲಿ ಮತ್ತೆ ರಫೀಕಿ ಗಾಂಧಿಯವರ ಮೇಲೆ ಧಾಳಿ ಮಾಡಿದ. ಗಾಂಧಿಯವರೂ ತಮ್ಮ ವಿಮಾನವನ್ನು ಎಜೆಕ್ಟ್ ಮಾಡಿದರು .
ಹಲ್ವಾರಾದಲ್ಲಿ ಗಸ್ತು ತಿರುಗುತ್ತಿದ್ದ 17 ನೇ ಸ್ಕ್ವಾರ್ಡ್ರನ್ನಿನ ಫ್ಲೈಟ್ ಲೆಫ್ಟನೆಂಟ್ ಡಿ ಎನ್ ರಾಠೋಡ್ ಮತ್ತು ಫ್ಲೈಯಿಂಗ್ ಆಫೀಸರ್ ನೆಬ್ ದೂರದಲ್ಲಿ ಮಿಂಚಿನ ಬೆಳಕು ಮತ್ತು ಹೊಗೆಯನ್ನು ಕಂಡು ಅತ್ತ ಧಾವಿಸಿದರು . ರಾಠೋಡ್ ಬಲು ಚಾಣಾಕ್ಷತೆಯಿಂದ ರಫೀಕಿಯ ಹಿಂದೆ ಬಂದು ಗುಂಡುಗಳನ್ನು ಹಾರಿಸಿದರು . ರಫೀಕಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನಾದರೋ ರಾಠೋಡ್ ಮತ್ತೆ ಸಮೀಪಿಸಿ ಪ್ರಖರವಾಗಿ ಫೈರಿಂಗ್ ಮಾಡಿ ಅವನ ಪ್ಲೇನನ್ನು ಹೊಡೆದರು . ನೆಬ್ ಮತ್ತೊಂದು ಸೇಬರನ್ನು ಹೊಡೆದರು .
ಆ ದಿನ ಪಾಕಿಸ್ತಾನ ತಮ್ಮ ಇಬ್ಬರು ಹೀರೋಗಳನ್ನು ಕಳೆದುಕೊಂಡ ಕಾರಣ ನೈತಿಕ ಬಲ ಕುಸಿದು ಬಿತ್ತು . ನಮ್ಮ ವಾಯು ಸೇನೆಯ ರೆಕ್ಕೆಗಳ ಪರಾಕ್ರಮಕ್ಕೆ ಹೆದರಿ ಬೆಳಗಿನ ಹೊತ್ತಿನಲ್ಲಿ ಧಾಳಿ ಮಾಡುವುದನ್ನು ಕೈಬಿಟ್ಟವು .
ಮತ್ತೆ ಅದೇ ದಿನದ ರಾತ್ರಿ ಪಾಕಿಸ್ತಾನದ ಎರಡು B-17 ಬಾಂಬರ್ಸ್ ಅಮೃತಸರದ ಮೇಲೆ ಮತ್ತೆರಡು ಜಾಮ್ ನಗರದ ಮೇಲೆ ಹಾರಿದವು . ಎರಡೂ ಪ್ರದೇಶದಲ್ಲಿ ಒಂದೊಂದು ಪ್ಲೇನನ್ನು Anti-Aircraft ಗನ್ನಿನಿಂದ ಹೊಡೆದರು . ಮತ್ತೊಂದು ವಿಮಾನ ಅಲ್ಲಿ ಅಲ್ಲಿ ಬಾಂಬುಗಳನ್ನು ಬೇಕಾಬಿಟ್ಟು ಬಿಸಾಡಿ ಪರಾರಿಯಾದವು .
ಮತ್ತೆ ಆ ದಿನದ ರಾತ್ರಿಯಲ್ಲಿ ಪಾಕಿಗಳ ಕೊನೆಯ ಪ್ರಯಾಸವೆಂಬತೆ ಪಠಾಣ್ ಕೋಟ್ . ಅಧಮ್ ಪುರ್ ಮತ್ತು ಹಲ್ವಾರಾ ವಾಯುನೆಲೆಯಗಳ ಹೊರಗೆ ಎಲ್ಲ ಪ್ರದೇಶಗಳಲ್ಲೂ ಅರವತ್ತು ಕಮ್ಯಾಂಡೋಗಳನ್ನು ಪ್ಯಾರಾಚೂಟ್ ನಿಂದ ಇಳಿಸಿ ವಾಯುನೆಲೆಯನ್ನು ವಶಪ್ಡಿಸಿಕೊಳ್ಳುವ ಪ್ರಯತ್ನ ಮಾಡಿದರು . ಅವರ ಬಳಿ ಸ್ಫೋಟಕಗಳು , ಆಟೋಮಾಟಿಕ್ ವೆಪನ್ಸ್ , ಗ್ರೆನೇಡ್ಸ್ ಮತ್ತು ವೈರ್ಲೆಸ್ ಸಾಮಾಗ್ರಿಗಳಿದ್ದವು . 180 ಯೋಧರಲ್ಲಿ ಇಪ್ಪತ್ತೆರಡು ಇಳಿಯುತ್ತಿದ್ದಂತೆಯೇ ಹತರಾದರು . 136 ಯೋಧರನ್ನು ಬಂಧಿ ಮಾಡಲಾಯಿತು . ಇನ್ನುಳಿದ ಕೆಲವು ಹೇಗೋ ಮಾಡಿ ಗಡಿ ದಾಟಿ ಪರಾರಿಯಾದರು .
ಆ ದಿನದ ರಾತ್ರಿ ಏರ್ ಮಾರ್ಷಲ್ ಅರ್ಜನ್ ಸಿಂಗ್ ರಕ್ಷಣಾ ಮಂತ್ರಿ ಚೌಹಾಣರೊಂದಿಗೆ ನಷ್ಟ – ಲಾಭದ ಸಮಾಲೋಚನೆ ಮಾಡುತ್ತಿದ್ದರು . ಅರ್ಜನರಿಗೆ ಪಠಾಣ್ ಕೋಟಿನ ನಷ್ಟದಿಂದ ಸ್ವಲ್ಪ ಬೇಸರಗೊಂಡಿದ್ದರು . ಆಗ್ ಚೌಹಾಣರು – “ ಆಗಿದ್ದನ್ನು ಮರೆತುಬಿಡಿ , ಮುಂದಿನದನ್ನು ಮಾತ್ರ ಯೋಚಿಸಿ . ನಾಳೆ ಶತ್ರುವನ್ನು ಹೇಗೆ ಸದೆಬಡೆಯುವುದು ಅನ್ನುವುದನ್ನು ಮಾತ್ರ ಯೋಚಿಸಿ ” ಎಂದು ಸಮಜಾಯಿಸಿದರು.