ಅದು ೧೭೭೩ ರ ಸಮಯ .
ಕಪಟ ದೊರೆ ಆರ್ಕೋಟ ದ ನವಾಬ ಬ್ರಿಟಿಷರೊಂದಿಗೆ ಕೈ ಜೋಡಿಸಿ ಶಿವಗಂಗೆಯ ರಾಜ ಬಡಗನಾಥ ಪೆರಿಯ
ಒಡೆಯದೇವರ್ ದೇವಸ್ಥಾನದ ಪ್ರವಾಸದಲ್ಲಿ ನಿಶ್ಯಸ್ತ್ರನಾಗಿದ್ದಾಗ ಧಾಳಿ ಮಾಡಿ ಹತ್ಯೆಗೈದು
ಶಿವಗಂಗೆಯನ್ನು ವಶಪಡಿಸಿಕೊಂದಿದ್ದ . ಇದಾಗಿ ೮ ವರ್ಷಗಳು ಕಳೆದಾಗಿತ್ತು . ಆಗ ಒಡೆಯ ದೇವರ್ ರ ಪತ್ನಿ
ವೇಳಿ ನಾಚಿಯರ್ ಮಂತ್ರಿ ತಾಂಡವ ಪಿಳೈಯ ಸಹಾಯದ ಮೇರೆಗೆ ದಿಂಡಿಗಲ್ ಸಮೀಪದ ವಿರೂಪಾಚಿಪಾಳಯಮ್ ಗೆ
ತಪ್ಪಿಸಿಕೊಂಡು ಹೋಗಿರುತ್ತಾರೆ . ಅಲ್ಲಿನ ಪಾಳೇಗಾರ ಗೋಪಾಲನಾಯಕನ ರಕ್ಷಣೆಯಲ್ಲಿ
ಕಾಲಕಳೆದಿರುತ್ತಾರೆ .
ಕಳೆದಹೋದ
ಶಿವಗಂಗೆಯನ್ನು ಮರಳಿ ಪಡೆಯಲು ಸಕಲ ಸಿದ್ಧತೆಯನ್ನು ನಾಚಿಯರ್ ನಡೆಸುತ್ತಿದ್ದರು . ಇದಕ್ಕಾಗಿ ನೆರೆಹೊರೆಯ
ಎಲ್ಲ ಸಹಾಯವನ್ನು ಜೊತೆಗೂಡಿಸುತ್ತಿದ್ದರು .
ರಾಜಮನೆತನದ ಸೆಲ್ಲಮುತು
ಸೇತಪತಿ ಮತ್ತು ರಾಣಿ ಸಕಂದಿಮುತೈ ಯ ಏಕೈಕ ಮಗಳಾಗಿದ್ದ ವೇಳಿ ನಾಚಿಯರ್ ಬಾಲ್ಯದಿಂದಲೇ ಕತ್ತಿವರಸೆ
, ಲಾಠಿಪ್ರಹಾರ ಮತ್ತು ರಣ
ತಂತ್ರ ರಚಿಸುವ ಎಲ್ಲ ವಿದ್ಯೆಯನ್ನು ತಂದೆಯ ಕಡೆಯಿಂದ ಕಲಿಸಿದ್ದರು . ಇದಲ್ಲದೇ ಇಂಗ್ಲೀಷ್ , ಉರ್ದು ಮತ್ತು ಫ್ರೆಂಚ್ ಭಾಷೆಗಳಲ್ಲೂ ಪಾಂಡಿತ್ಯ ವಿತ್ತು . ಆದ್ದರಿಂದ ಈ ಅಪರೂಪದ
ಪ್ರತಿಭೆ ಚಾಣಾಕ್ಷತೆ , ಧೈರ್ಯ , ಬಲ , ಪರಾಕ್ರಮ ಮತ್ತು ರಣಚಾತುರ್ಯದ ಅಮೋಘ ಸಂಗಮವೇ ಆಗಿತ್ತು . ಆದರೆ ಈಗ ದೂರ್ತ ಬ್ರಿಟಿಷ್
ಮತ್ತು ನವಾಬನ ಕಪಟತನಕ್ಕೆ ಕ್ಷಣಕಾಲ ಸೋತು ತನ್ನ ತಾಯ್ನಾಡನ್ನು ದಾಸ್ಯದಿಂದ ಮುಕ್ತಗೊಳಿಸಲು ವೇಳಿ
ನಾಚಿಯರ್ ಶ್ರಮಪಡಿತ್ತಿದ್ದರು .
ಸ್ವಾಮಿ ನಿಷ್ಠ ಸೇವಕ
ತಾಂಡವರ್ ಪಿಳೈ ಸಿವಗಂಗೈ ಸಂಸ್ಥಾನದ ಅಡಿಪಾಯ ಹಾಕಿದವರಲ್ಲಿ ಒಬ್ಬರು . ಈಗಿನ ಸಂದಿಗ್ನ
ಪರಿಸ್ಥಿತಿಯಲ್ಲಿ ರಾಜತಾಂತ್ರಿಕವಾಗಿ ಯಾರ ಸಹಾಯ ಪಡೆಯಬೇಕೆಂಬುದನ್ನು ಉಪಾಯ ಮಾಡಿದವರು ಇವರೇ .
ವೇಳಿ ನಾಚಿಯರ್ ಪರವಾಗಿ ಆಗಿನ ಮೈಸೂರಿನ ದೊರೆ ಹೈದರಾಲಿಗೆ ಪತ್ರ ಬರೆದು ತಮಗೆ ೫೦೦೦ ಪದಾತಿದಳ
ಮತ್ತು ೫೦೦೦ ಅಶ್ವದಳದ ಅವಶ್ಯಕತೆಯಿದೆಯೆಂದು ಬೇಡಿಕೊಳ್ಳುತ್ತಾರೆ . ಆದರೆ ಅದರ ತರುವಾಯ ತಮ್ಮ
ಇಳಿವಯಸ್ಸಿನಲ್ಲಿ ತೀರಿಕೊಳ್ಳುತ್ತಾರೆ . ನಂತರ ಸ್ವತಃ ನಾಚಿಯರ್ ಹೈದರಾಳಿಗೆ ತನ್ನ ಸಮಾನ ಶತ್ರು
ಈಸ್ಟ್ ಇಂಡಿಯಾ ಕಂಪನಿಯನ್ನು ಮಣಿಸಲು ಸೇನೆಯ ಅವಶ್ಯಕತೆಯಿದೆಯೆಂದು ಕೇಳಿದ್ದರಿಂದ ಹೈದರ್
ಒಪ್ಪಿಗೆ ನೀಡಿ ಸೇನಾನೆರವಿಗೆ ಅನುಮತಿ ಕೊಡುತ್ತಾನೆ . ತಕ್ಷಣವೇ ಹೈದರನ ಆದೇಶದ ಮೇರೆಗೆ
ದಿಂಡಿಗಲ್ ಕೋಟೆಯಿಂದ ನಾಚಿಯರ್ ಕೇಳಿದಷ್ಟು ಸೇನೆಯನ್ನು ಸಯ್ಯದ್ ಕರ್ಕಿ ಕಳಿಸುತ್ತಾನೆ .
ನಂತರ ಮುಂದುವರೆಯಿತು
ನಾಚಿಯರ್ ನ ಮಿಂಚಿನ ಧಾಳಿಗಳು . ಆ ಸಮಯದಲ್ಲಿ ಯಾರ್ಯಾರು ನವಾಬನಿಂದ ಪರಾಸ್ತಗೊಂಡಿದ್ದರೋ ಆಯಾ
ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಯೋಜನೆ ಮಾಡಿದರು . ಕೊಚಡೈ ಮಲ್ಲಾರಿರಾಯನ್ , ತಿರುಪ್ಪುರನ್ ರಂಗರಾಯನ್ , ಮಾಣಮಧುರೈ ಯ ಬ್ರೈಟನ್ ಮತ್ತು ಪೋರಿಯನ್ ಮಾರ್ಟಿಸನ್ ರನ್ನು ಒಂದಾದಾರರೊಂದಂತೆ
ದಂಡಯಾತ್ರೆ ನಡೆಸಿ ಮಂಡಿಯೂರುವಂತೆ ಮಾಡಿದರು . ಇದರ ಜೊತೆಗೆಯೇ ಸಮರ್ಪಕವಾಗಿ ಜನಬೆಂಬಲವೂ
ದೊರೆಯಿತು . ಸಾಮಾನ್ಯ ನಾಗರಿಕರು ಸಹಿತ ನೇಗಿಲನ್ನು ಬಿಟ್ಟು ಬಂದೂಕನ್ನು ಹಿಡಿದರು .
ನಾಚಿಯರ್ ತನ್ನ
ಸೇನೆಯನ್ನು ಮೂರು ಭಾಗಗಳಲ್ಲಿ ವಿಂಗಡಿಸಿ ಮೊದಲನೆಯ ಭಾಗವನ್ನು ಚಿನ್ನಮರುದುವಿನ ಸಾರಥ್ಯದಲ್ಲಿ
೩೦೦೦ ಯೋಧರೊಂದಿಗೆ ೮ ತುಫಾಕಿಯ ಜೊತೆ ತೀರುಪತ್ತೂ ರಿನ ಮೇಲೆ , ದೊಡ್ಡಮರುದು ನಾಲ್ಕು ತೋಪಿನ ಜೊತೆ ಮತ್ತೊಂದು ತುಕಡಿಯಿಂದ ಶಿವಗಂಗೆಯ ಮೇಲೆ ಮತ್ತುಳಿದ
ಸೇನೆ ನಾಚಿಯರ್ ನೊಡನೆ ಕೋಟೆ ಪ್ರವೇಶಿಸುವುದೆಂದು ಯೋಜನೆ . ಆದರೆ ಕೋಟೆಯ ಸನಿಹದಲ್ಲಿ ಉಮಾರದುಲ್
ಉಬಾರ್ ಖಾನನ ಸೇನೆ ಮತ್ತು ಕೋಟೆಯ ಒಳಗೊಂದು ಬ್ರಿಟಿಷರ ಸೇನಾ ತುಕಡಿ ಬೇರೆ . ಇದನ್ನು
ಭೇಧಿಸಲೆಂದು ಸಿಕ್ಕ ಒಂದು ಅವಕಾಶವೆಂದರೆ ವಿಜಯದಶಮಿಯ ದಿನದಂದು ಮಹಿಳೆಯರಿಗೆ ಕೋಟೆಯೊಳಗೆ
ಪೂಜೆಗಾಗಿ ವಿಶೇಷ ಪ್ರವೇಶದ ಅನುಮತಿಯಿತ್ತು . ಈ ಅವಕಾಶವನ್ನು ಬಳಸಿಕೊಂಡ ವೇಳಿ ನಾಚಿಯರ್ ತಮ್ಮ
ಮಹಿಳೆಯರ ಪಡೆಯನ್ನು ಕೋಟೆಯ ಒಳಗೆ ನಡೆಸಿದರು . ಜೊತೆಗೆ ಗೌಪ್ಯವಾಗಿ ಹೂಗಳ ಬುಟ್ಟಿಗಳ ಒಳಗೆ
ಶಸ್ತ್ರಗಳನ್ನು ಇರಿಸಿದ್ದರು .
ಕೋಟೆಯ ಒಳಗೆ ಸ್ಥಳನ್ವೇಷಣೆ
ಮಾಡುತ್ತಾ ಆಯುಧ ಪೂಜೆಗೆ ಒಂದು ಕಡೆ ಶಸ್ತ್ರಗಳನ್ನು ಇಟ್ಟಿದ್ದ ಸ್ಥಳಕ್ಕೆ ಬಂದಕೂಡಲೇ ನಾಚಿಯರ್ “
ವೀರಾವೇಲ್ ವೇಟ್ರಿವೇಲ್ ” ಎಂದು ಘೋಷಣೆ ಕೂಗಿ
ಯುದ್ಧ ಘೋಷಣೆ ಮಾಡಿದರು .
ರಾಣಿಯ ಕೂಗು
ಕೇಳಿದಾಕ್ಷಣ ಮಹಿಳೆಯರ ಪಡೆ ಮಿಂಚಿನಂತೆ ಶಸ್ತ್ರಗಳನ್ನು ಹಿಡಿದು ಬ್ರಿಟಿಷರ ಮೇಲೆ ಎರಗಿದರು .
ಹಠಾತ್ತನೆ ಧಾಳಿಗೆ ಬ್ರಿಟಿಷ್ ಸೇನೆ ತತ್ತರಿಸಿತು . ಬ್ರಿಟಿಷ್ ಕಮ್ಯಾಂಡರ್ ಪಾಂಸೋರ್ ಎಂಬಾತ
ಹತ್ತಿರದಲ್ಲೇ ಇದ್ದ ತಮ್ಮ ಶಸ್ತ್ರಾಗಾರವನ್ನು ರಕ್ಷಿಸಲು ಹವಣಿಸುತ್ತಿದ್ದ . ಆಗ ಕುವಲಿ ಎಂಬ
ಒಬ್ಬಳು ನಾಚಿಯರ್ ನ ನಿಷ್ಠಾವಂತೆ ಸಖಿ ತನ್ನ ಮೈಗೆ ಬೆಂಕಿ ಹಚ್ಚಿಕೊಂಡು ಮದ್ದುಗುಂಡುಗಳು
ತುಂಬಿದ್ದ ಶಸ್ತ್ರಾಗಾರಕ್ಕೆ ಧುಮುಕಿ ಅವನ್ನು ನಾಶಮಾಡಿ ತಾನೂ ಸಹಿತ ಆತ್ಮಾಹುತಿಯಾದಳು .
ಕುವಿಲಿಯನ್ನು ವಿಶ್ವದ ಮೊದಲ ಆತ್ಮಾಹುತಿ ಬಾಂಬರ್ ಎಂದು ಹೇಳಲಾಗುತ್ತದೆ .
ಪಾಂಸೋರ್ ನನ್ನು
ಬಂಧಿಮಾಡಲಾಗಿ ಶಿವಗಂಗೈ ಕೋಟೆ ವಶವಾಯಿತು . ಚಿನ್ನಮರುದು ಸಹಿತ ತಿರುಪತ್ತೂರ್ ಕೋಟೆಯನ್ನು ಗೆದ್ದ
.
ಎಲ್ಲ ಮುಗಿದ ನಂತರ
ನಾಚಿಯರ್ ಗೆ ಕುವಿಲಿಯ ವಿಷಯ ಗೊತ್ತಾಯಿತಂತೆ . ಇಡೀ ಶಿವಗಂಗೈ ಕುವಿಲಿಗಾಗಿ ಶೋಕಿಸಿತಂತೆ .
ಮಹಾರಾಣಿ ವೇಳಿ
ನಾಚಿಯರ್ ಭಾರತದ ಇತಿಹಾಸ ಕಂಡ ಮೊದಲ ಬ್ರಿಟಿಷ್ ವಿರುದ್ಧ ಹೋರಾಡಿ ಗೆದ್ದ ವೀರ ವನಿತೆ . ಆಗ ತನ್ನ
ಶಿವಗಂಗೈಯನ್ನು ಗೆದ್ದು ಹತ್ತು ವರ್ಷಗಳ ಕಾಲ ಆಳ್ವಿಕೆ ಮಾಡಿದರು . ಇವರ ವೀರಗಾಥೆಗಳನ್ನು ನಾವು
ಬಹುತೇಕವಾಗಿ ಮರೆತಿದ್ದೇವೆ ಕೂಡ . ೨೦೦೮ ರಲ್ಲಿ ತಮಿಳುನಾಡು ಸರ್ಕಾರ ಇವರ ಮೇಲಿನ ಒಂದು ಅಂಚೆ
ಚೀಟಿ ಮುದ್ರಿಸಿ ಅವರ ಹೆಸರು ಮತ್ತು ನೆನಪನ್ನುಳಿಸುವ ಪ್ರಯತ್ನವನ್ನೇನೋ ಮಾಡಿದ್ದಾರೆ .
ವೇಳಿ ನಾಚಿಯರ್ ಎಂಬ
ವೀರ ವನಿತೆ ಆ ಕಾಲದ ರಣಾಂಗಣದಲ್ಲಿ ಕತ್ತಿ ಹಿಡಿದರೆಂದರೆ ಮೂವತ್ತು ಯೋಧರನ್ನು ಮೂರು ನಿಮಿಷದಲ್ಲಿ
ಕತ್ತರಿಸುತ್ತಿದ್ದರೆಂದು ಕೇಳಿದರೆ ಈಗಿನ ನಮ್ಮ ಕಲ್ಪನೆಗೂ ಸಿಗದೇ ಇರಬಹುದು .