ಬಾಹ್ರೌಚ್ ನಲ್ಲಿ ಗೆದ್ದ ತರುವಾಯ ಸುಹಾಲ್ ದೇವ್ ವಿಜಯ ದ್ಯೋತಕ ವಾಗಿ ಅಲ್ಲಲ್ಲಿ
ಸುತ್ತಮುತ್ತ ನೀರಿನ ಕೊಳಗಳನ್ನು ಕಟ್ಟಿಸಿದ . ಈ ಬಹ್ರೌಚ್ ಕದನದ ವಿಶೇಷತೆಯೆಂದರೆ ಒಂದು ದೊಡ್ಡ ಮುಸಲ್ಮಾನ
ಸೇನೆಯನ್ನ ಒಂದು ಗುಂಪಿನ ಸಣ್ಣ ಸಣ್ಣ ರಾಜರುಗಳು ಹೊಡೆದು ಸೋಲಿಸಿದ್ದಲ್ಲದೆ ಶತ್ರು ಪಡೆಗಳನ್ನು ನಿಶ್ಯೇಷವಾಗಿ ಒಬ್ಬ ಸೈನಿಕನನ್ನೊ ಉಳಿಸದೇ ಸರ್ವನಾಶ
ಮಾಡಿದ್ದು . ಮತ್ತೊಂದು ಗಮನಾರ್ಹ ಅಂಶವೇನೆಂದರೆ ಆ ಸೇನೆಯನ್ನೇ ಮಹಮ್ಮದ್ ಘಜ್ನಿ ತನ್ನ ದಂಡಯಾತ್ರೆಗಳಲ್ಲಿ
ಬಳಸಿದ್ದು ಮತ್ತು ಆ ಸಮಕಾಲೀನ ಭಾರತೀಯರಿಗೆ ಆ ಸೇನೆ ಒಂದು ಮಟ್ಟಕ್ಕೆ “ ಆಧುನಿಕ “ ಶೈಲಿಯದ್ದೆ ಅನ್ನಬಹುದು.
ಇನ್ನೂ ಸೋಮನಾಥನನ್ನು ಒಡೆದ ಘಾಜಿ ಸೇನೆ ಸರ್ವನಾಶವಾಯಿತು ಎಂದು ನಾವು ಊಹೆ ಮಾಡಬಹುದೆನ್ನುವುದು ಕಷ್ಟವೇನಲ್ಲ
. ಕನೋಜಿನ ಚಂದ್ರದೇವನು ಇದು ಮುಸಲ್ಮಾನರ ಒಂದು ಸೋಲಷ್ಟೇ ಎಂದು ಮೂಗು ಮುರಿದು ಪುನಃ ವೈರತ್ವನನ್ನು
ಮುಂದುವರೆಸಿದ .
ಆದರೆ ಹದಿಮೂರನೇ ಶತಮಾನದ ಆದಿಯಲ್ಲಿ ದೆಹಲಿ ಸುಲ್ತಾನರಿಂದ ಮತ್ತೊಂದು ಇಸ್ಲಾಮೀ
ಧಾಳಿಯಿಂದ ಕೊಚ್ಚಿಹೋಯಿತು . ಆಗ ಆಕ್ರಮಿತ ಈ ರಣ ಕ್ಷೇತ್ರ
ಮುಸ್ಲಿಮರಿಗೆ ಅಸಂಖ್ಯಾತ ‘ಶಹೀದ ’ ರ ಬಲಿದಾನವಾದ ‘ಪುಣ್ಯ’ ಕ್ಷೇತ್ರ ವಾಯಿತು . ಸುಲ್ತಾನ್ ಫಿರೋಜ್ ಷಾ ತುಘ್ಲಕ್
ಬಾಲಕ್ ಋಷಿಯ ಆಶ್ರಮದಲ್ಲಿ ಸೂರ್ಯದೇವಾಲಯ ಮತ್ತು ಸೂರ್ಯಕುಂಡಕ್ಕೆ ತಾಗಿಕೊಂಡು ಒಂದು ಗೊಮ್ಮಟ ನಿರ್ಮಿಸುತ್ತಾನೆ
. ಸೂರ್ಯಕುಂಡದ ಜಲಕ್ಕೆ ಚರ್ಮರೋಗ ಗುಣಪಡಿಸುವ ವಿಶೇಷವಾಗಿ ಕುಷ್ಠರೋಗ ನಿವಾರಿಸುತ್ತದೆಂದು ಹೇಳುತ್ತಾರೆ
. ಆ ನೀರನ್ನು ವಿಶೇಷ ಗಿಡಮೂಲಿಕೆಗಳಿಂದ ಸಂಸ್ಕರಿಸಿದ್ದರ ಕಾರಣ .
ಸೂರ್ಯಕುಂಡದ ಔಷಧೀಯ ಗುಣದ ಮೇಲೆನ ಶ್ರದ್ಧೆ ಇನ್ನೊ ಮುಂದುವರೆದಿದ್ದು ಚರ್ಮ
ರೋಗ , ಕುಷ್ಠರೋಗ ಮತ್ತು ಸಂತಾನೂತ್ಪತ್ತಿದೋಷದ ಗುಣಮುಖಕ್ಕಾಗಿ ಇಲ್ಲಿ ಜನರು ಬರುತ್ತಿರುತ್ತಾರೆ.
ಸೂರ್ಯನ ಆರಾಧನೆ ಎಂದಿನಂತೆ ಇನ್ನೂ ಮುಂದುವರೆಯುತ್ತಿದೆ . ಸಲಾರ್ ಮಸೂದ್ ನನ್ನು ಮುಸ್ಲಿಮರು ‘ಸೂರ್ಯನ ಹುತಾತ್ಮ’ ( ಅಫ್ತಾಬ್ ಈ ಶಹದಾದ್ )ಎಂದು ಗೌರವಿಸುತ್ತಾರೆ
! ಅವನ ಸಮಾಧಿ ಇನ್ನೂ ಇದ್ದು ಸೂರ್ಯ ದೇವಾಲಯವನ್ನು ‘ ಹೊಜ್ ಶಂಶಿ ’ ಎಂದು ಹೆಸರು ಪೆರ್ಷಿಯನ್ ಹೆಸರಿಗೆ ಬದಲಾಯಿಸಿಯೂ ಆಗಿದೆ . ಅದಲ್ಲದೆ ಈಗ ಸಾಲರ್ ಮಸೂದನ ಕಥೆಯನ್ನು ಒಬ್ಬ ಶಾಪಗ್ರಸ್ತ
ಹುಡುಗ ಅವಿವಾಹಿತನಾಗಿ ದಾರುಣ ಸಾವು ಕಂಡನೆಂದು ಮತ್ತು ಒಬ್ಬ ‘ ಸ್ವಾತಂತ್ರ
ಹೂರಾಟಗಾರ ! ’ ನಾಗಿ ಸುಹಲ್ ದೇವ್ ನೆಂಬ ‘ ದುಷ್ಟ
’ ರಾಜನೆದುರು ಸೆಣೆಸಿ ‘ ಹುತಾತ್ಮ ’ ನಾದ “ ಧೀರ “ ನೆಂದು ಬಣ್ಣಿಸಿ ಕಥೆ ಕಟ್ಟಿದರು
. ಈಗಲೂ ಎಲ್ಲಾದರೂ ರಭಸವಾಗಿ ಗಾಳಿ ಬೀಸಿದರೆ ದರ್ಗಾವನ್ನು ಕಬ್ಭಿನದ ದ್ವಾರದಿಂದ ಮುಚ್ಕಿ ಸರಪಳಿಯಿಂದ
ಬಿಗಿಯುತ್ತರಂತೆ . ಸುಹಾಲ್ ದೇವನ “ದುಷ್ಟ“ ಆತ್ಮ
ಒಳ ಪ್ರವೇಶಿಸದಂತೆ !
ಆದರೂ ಸುಹಾಲ್ ದೇವನ ನೆನಪು ಇಲ್ಲಿ ಸ್ಥಳೀಯ ಜನಮಾನಸದಲ್ಲಿ ಮತ್ತು ಆ ಪಂಗಡದವರಲ್ಲಿ
ಅಚ್ಚಳಿಯದೇ ಉಳಿದಿದೆ . ಕ್ರಿ ಶ ೧೯೫೦ ರ ಮುಂಚೆಯೇ ಆ ಸ್ಥಳವನ್ನು ಮರುಪಡೆಯಬೇಕೆಂಬ ಚಳುವಳಿ ನಡೆದಿತ್ತು
. ಇದಕ್ಕಾಗಿ ಚಿತ್ತೋರಾದಲ್ಲಿ ಒಂದು ಜಾತ್ರೆಗಾಗಿ ಅನುಮತಿಯನ್ನು ನಿರಾಕರಿಸಿ ಅಲ್ಲಿನ ಜಿಲ್ಲಾಧಿಕಾರಿ
ಸೆಕ್ಷನ್ ೧೪೪ ಜಾರಿ ಮಾಡಿದ್ದ . ನಂತರದ ಕಾಂಗ್ರೆಸ್ ಆಡಳಿತದಿಂದ ಆ ಸೆಕ್ಷನ್ ೧೪೪ ಪುನರಾವರ್ತನೆಯಾಯಿತು
. ಒಬ್ಬ ಪ್ರಯಾಗ್ ಪುರದ ಸ್ಥಳೀಯ ರಾಜ ಸುಹಾಲ್ ದೇವ್ ಸ್ಮಾರಕ್ ಸಮಿತಿಗೆ ನೆಲ ಮತ್ತು ಹಣ ದಾನಗೈದು
ಸುಹಲ್ ದೇವನ ಪ್ರತಿಮೆಯನ್ನು ಸ್ಥಾಪಿಸಿದ . ತದನಂತರ ವೀರನಿಗೆ ಒಂದು ದೇವಸ್ಥಾನ ವಿಜಯೋತ್ಸವ ಆಚರಣೆಗೆ
ಹೋಮ ಹವನ ಮತ್ತು ಸಾರ್ವಜನಿಕ ಸಮಾರಾಭಾಗಳು ಜರುಗಿದವು . ದಶರಾದ ಸಾಂಪ್ರದಾಯಿಕ ಆಯುಧಪೂಜೆಗಳೂ ಪುನರಾರಂಭಗೊಂಡವು
. ಬಸಂತ್ ಪಂಚಮಿಯದಿನ ಸುಹಾಲ್ ದೇವನ ರಾಜ್ಯಾಭಿಷೇಕವೂ ದೊಡ್ಡ ಜಾತ್ರೆ ಆಯೋಜಿಸಿ ವಿಜೃಂಭಣೆಯಿಂದ ಆಚರಿಸುತ್ತಾರೆ
. ೧೯೬೦ ರ ತರುವಾಯ ಸುಹಾಲ್ ದೇವನ ಹೆಸರನ್ನು ರಾಜಕೀಯದಲ್ಲಿ
ಬಿಚ್ಚು ಮಾತಿನಲ್ಲಿ ಬಳಸಲಾರಂಭಿಸಿದರು . ಈಗ ಎಲ್ಲಾ ರಾಜಕೀಯ ಪಕ್ಷಗಳೂ ಪಾಸಿ ಪಂಗಡದವರ ಓಟನ್ನು ಗಿಟ್ಟಿಸಲು
ಸುಹಲ್ ದೇವನ ಹೆಸರನ್ನೇ ಗಾಳವಾಗಿ ಬಳಸುತ್ತಾರೆ . ಬ ಎಸ್ ಪಿ ಅಧಿಕಾರಕ್ಕೆ ಬಂದ ನಂತರ ದಲಿತರ ಮಹಾನತೆಯನ್ನು
ಎತ್ತಿಹಿಡಿಯಲೆಂದು ರಾಜ್ಯದೆಲ್ಲೆಲ್ಲಾ ಸುಹಲ್ ದೇವನ ಪ್ರತಿಮೆ ಸ್ಥಾಪಿಸಿದರು . ಅನೇಕ ನಾಟಕ ಕಂಪನಿಗಳು
ಸುಹಾಲ್ ದೇವನ ವೀರ ನಾಟಕಗಳನ್ನು ಪ್ರದರ್ಶಿಸಿ ಅವನ ಕೀರ್ತಿ ಮೆರೆಯುತ್ತಿದ್ದಾರೆ .
ಆದರೂ . . . . ಬಹುತೇಕ
ಭಾರತೀಯರಲ್ಲಿ ಸುಹಲ್ ದೇವನು ಯಾರೆಂದು ಗೊತ್ತಿಲ್ಲದೆ ನಮ್ಮ ಪೂರ್ವಿಕರ ಹಿರಿಮೆಯನ್ನು ಕಡೆಗಣಿಸಿದ್ದೇವೆ
.
ಕೃಪೆ : www.indusresearch.org/raja-suheldev/