Friday 5 June 2015

ಬಾಹ್ರೌಚ್ ನ ಸುತ್ತಮುತ್ತ ಮತ್ತಷ್ಟು : ಭಾಗ ೩



            ಬಾಹ್ರೌಚ್ ನಲ್ಲಿ ಗೆದ್ದ ತರುವಾಯ ಸುಹಾಲ್ ದೇವ್ ವಿಜಯ ದ್ಯೋತಕ ವಾಗಿ ಅಲ್ಲಲ್ಲಿ ಸುತ್ತಮುತ್ತ ನೀರಿನ ಕೊಳಗಳನ್ನು ಕಟ್ಟಿಸಿದ . ಈ ಬಹ್ರೌಚ್ ಕದನದ ವಿಶೇಷತೆಯೆಂದರೆ ಒಂದು ದೊಡ್ಡ ಮುಸಲ್ಮಾನ ಸೇನೆಯನ್ನ ಒಂದು ಗುಂಪಿನ ಸಣ್ಣ ಸಣ್ಣ ರಾಜರುಗಳು ಹೊಡೆದು ಸೋಲಿಸಿದ್ದಲ್ಲದೆ ಶತ್ರು  ಪಡೆಗಳನ್ನು ನಿಶ್ಯೇಷವಾಗಿ ಒಬ್ಬ ಸೈನಿಕನನ್ನೊ ಉಳಿಸದೇ ಸರ್ವನಾಶ ಮಾಡಿದ್ದು . ಮತ್ತೊಂದು ಗಮನಾರ್ಹ ಅಂಶವೇನೆಂದರೆ ಆ ಸೇನೆಯನ್ನೇ ಮಹಮ್ಮದ್ ಘಜ್ನಿ ತನ್ನ ದಂಡಯಾತ್ರೆಗಳಲ್ಲಿ ಬಳಸಿದ್ದು ಮತ್ತು ಆ ಸಮಕಾಲೀನ ಭಾರತೀಯರಿಗೆ ಆ ಸೇನೆ ಒಂದು ಮಟ್ಟಕ್ಕೆ “ ಆಧುನಿಕ “ ಶೈಲಿಯದ್ದೆ ಅನ್ನಬಹುದು. ಇನ್ನೂ ಸೋಮನಾಥನನ್ನು ಒಡೆದ ಘಾಜಿ ಸೇನೆ ಸರ್ವನಾಶವಾಯಿತು ಎಂದು ನಾವು ಊಹೆ ಮಾಡಬಹುದೆನ್ನುವುದು ಕಷ್ಟವೇನಲ್ಲ . ಕನೋಜಿನ ಚಂದ್ರದೇವನು ಇದು ಮುಸಲ್ಮಾನರ ಒಂದು ಸೋಲಷ್ಟೇ ಎಂದು ಮೂಗು ಮುರಿದು ಪುನಃ ವೈರತ್ವನನ್ನು ಮುಂದುವರೆಸಿದ .

           ಆದರೆ ಹದಿಮೂರನೇ ಶತಮಾನದ ಆದಿಯಲ್ಲಿ ದೆಹಲಿ ಸುಲ್ತಾನರಿಂದ ಮತ್ತೊಂದು ಇಸ್ಲಾಮೀ ಧಾಳಿಯಿಂದ ಕೊಚ್ಚಿಹೋಯಿತು .  ಆಗ ಆಕ್ರಮಿತ ಈ ರಣ ಕ್ಷೇತ್ರ ಮುಸ್ಲಿಮರಿಗೆ ಅಸಂಖ್ಯಾತ ಶಹೀದ ರ ಬಲಿದಾನವಾದ ಪುಣ್ಯ ಕ್ಷೇತ್ರ ವಾಯಿತು . ಸುಲ್ತಾನ್ ಫಿರೋಜ್ ಷಾ ತುಘ್ಲಕ್ ಬಾಲಕ್ ಋಷಿಯ ಆಶ್ರಮದಲ್ಲಿ ಸೂರ್ಯದೇವಾಲಯ ಮತ್ತು ಸೂರ್ಯಕುಂಡಕ್ಕೆ ತಾಗಿಕೊಂಡು ಒಂದು ಗೊಮ್ಮಟ ನಿರ್ಮಿಸುತ್ತಾನೆ . ಸೂರ್ಯಕುಂಡದ ಜಲಕ್ಕೆ ಚರ್ಮರೋಗ ಗುಣಪಡಿಸುವ ವಿಶೇಷವಾಗಿ ಕುಷ್ಠರೋಗ ನಿವಾರಿಸುತ್ತದೆಂದು ಹೇಳುತ್ತಾರೆ . ಆ ನೀರನ್ನು ವಿಶೇಷ ಗಿಡಮೂಲಿಕೆಗಳಿಂದ ಸಂಸ್ಕರಿಸಿದ್ದರ ಕಾರಣ .

         ಸೂರ್ಯಕುಂಡದ ಔಷಧೀಯ ಗುಣದ ಮೇಲೆನ ಶ್ರದ್ಧೆ ಇನ್ನೊ ಮುಂದುವರೆದಿದ್ದು ಚರ್ಮ ರೋಗ , ಕುಷ್ಠರೋಗ ಮತ್ತು ಸಂತಾನೂತ್ಪತ್ತಿದೋಷದ ಗುಣಮುಖಕ್ಕಾಗಿ ಇಲ್ಲಿ ಜನರು ಬರುತ್ತಿರುತ್ತಾರೆ. ಸೂರ್ಯನ ಆರಾಧನೆ ಎಂದಿನಂತೆ ಇನ್ನೂ ಮುಂದುವರೆಯುತ್ತಿದೆ . ಸಲಾರ್ ಮಸೂದ್ ನನ್ನು ಮುಸ್ಲಿಮರು ಸೂರ್ಯನ ಹುತಾತ್ಮ ( ಅಫ್ತಾಬ್ ಈ ಶಹದಾದ್ )ಎಂದು ಗೌರವಿಸುತ್ತಾರೆ ! ಅವನ ಸಮಾಧಿ ಇನ್ನೂ ಇದ್ದು ಸೂರ್ಯ ದೇವಾಲಯವನ್ನು ಹೊಜ್ ಶಂಶಿ ಎಂದು ಹೆಸರು ಪೆರ್ಷಿಯನ್ ಹೆಸರಿಗೆ ಬದಲಾಯಿಸಿಯೂ ಆಗಿದೆ  . ಅದಲ್ಲದೆ ಈಗ ಸಾಲರ್ ಮಸೂದನ ಕಥೆಯನ್ನು ಒಬ್ಬ ಶಾಪಗ್ರಸ್ತ ಹುಡುಗ ಅವಿವಾಹಿತನಾಗಿ ದಾರುಣ ಸಾವು ಕಂಡನೆಂದು ಮತ್ತು ಒಬ್ಬ ಸ್ವಾತಂತ್ರ ಹೂರಾಟಗಾರ ! ನಾಗಿ ಸುಹಲ್ ದೇವ್ ನೆಂಬ ದುಷ್ಟ  ರಾಜನೆದುರು ಸೆಣೆಸಿ   ಹುತಾತ್ಮ ನಾದ  “ ಧೀರ “ ನೆಂದು ಬಣ್ಣಿಸಿ ಕಥೆ ಕಟ್ಟಿದರು . ಈಗಲೂ ಎಲ್ಲಾದರೂ ರಭಸವಾಗಿ ಗಾಳಿ ಬೀಸಿದರೆ ದರ್ಗಾವನ್ನು ಕಬ್ಭಿನದ ದ್ವಾರದಿಂದ ಮುಚ್ಕಿ ಸರಪಳಿಯಿಂದ ಬಿಗಿಯುತ್ತರಂತೆ .  ಸುಹಾಲ್ ದೇವನ “ದುಷ್ಟ“ ಆತ್ಮ ಒಳ ಪ್ರವೇಶಿಸದಂತೆ ! 

            ಆದರೂ ಸುಹಾಲ್ ದೇವನ ನೆನಪು ಇಲ್ಲಿ ಸ್ಥಳೀಯ ಜನಮಾನಸದಲ್ಲಿ ಮತ್ತು ಆ ಪಂಗಡದವರಲ್ಲಿ ಅಚ್ಚಳಿಯದೇ ಉಳಿದಿದೆ . ಕ್ರಿ ಶ ೧೯೫೦ ರ ಮುಂಚೆಯೇ ಆ ಸ್ಥಳವನ್ನು ಮರುಪಡೆಯಬೇಕೆಂಬ ಚಳುವಳಿ ನಡೆದಿತ್ತು . ಇದಕ್ಕಾಗಿ ಚಿತ್ತೋರಾದಲ್ಲಿ ಒಂದು ಜಾತ್ರೆಗಾಗಿ ಅನುಮತಿಯನ್ನು ನಿರಾಕರಿಸಿ ಅಲ್ಲಿನ ಜಿಲ್ಲಾಧಿಕಾರಿ ಸೆಕ್ಷನ್ ೧೪೪ ಜಾರಿ ಮಾಡಿದ್ದ . ನಂತರದ ಕಾಂಗ್ರೆಸ್ ಆಡಳಿತದಿಂದ ಆ ಸೆಕ್ಷನ್ ೧೪೪ ಪುನರಾವರ್ತನೆಯಾಯಿತು . ಒಬ್ಬ ಪ್ರಯಾಗ್ ಪುರದ ಸ್ಥಳೀಯ ರಾಜ ಸುಹಾಲ್ ದೇವ್ ಸ್ಮಾರಕ್ ಸಮಿತಿಗೆ ನೆಲ ಮತ್ತು ಹಣ ದಾನಗೈದು ಸುಹಲ್ ದೇವನ ಪ್ರತಿಮೆಯನ್ನು ಸ್ಥಾಪಿಸಿದ . ತದನಂತರ ವೀರನಿಗೆ ಒಂದು ದೇವಸ್ಥಾನ ವಿಜಯೋತ್ಸವ ಆಚರಣೆಗೆ ಹೋಮ ಹವನ ಮತ್ತು ಸಾರ್ವಜನಿಕ ಸಮಾರಾಭಾಗಳು ಜರುಗಿದವು . ದಶರಾದ ಸಾಂಪ್ರದಾಯಿಕ ಆಯುಧಪೂಜೆಗಳೂ ಪುನರಾರಂಭಗೊಂಡವು . ಬಸಂತ್ ಪಂಚಮಿಯದಿನ ಸುಹಾಲ್ ದೇವನ ರಾಜ್ಯಾಭಿಷೇಕವೂ ದೊಡ್ಡ ಜಾತ್ರೆ ಆಯೋಜಿಸಿ ವಿಜೃಂಭಣೆಯಿಂದ ಆಚರಿಸುತ್ತಾರೆ .  ೧೯೬೦ ರ ತರುವಾಯ ಸುಹಾಲ್ ದೇವನ ಹೆಸರನ್ನು ರಾಜಕೀಯದಲ್ಲಿ ಬಿಚ್ಚು ಮಾತಿನಲ್ಲಿ ಬಳಸಲಾರಂಭಿಸಿದರು . ಈಗ ಎಲ್ಲಾ ರಾಜಕೀಯ ಪಕ್ಷಗಳೂ ಪಾಸಿ ಪಂಗಡದವರ ಓಟನ್ನು ಗಿಟ್ಟಿಸಲು ಸುಹಲ್ ದೇವನ ಹೆಸರನ್ನೇ ಗಾಳವಾಗಿ ಬಳಸುತ್ತಾರೆ . ಬ ಎಸ್ ಪಿ ಅಧಿಕಾರಕ್ಕೆ ಬಂದ ನಂತರ ದಲಿತರ ಮಹಾನತೆಯನ್ನು ಎತ್ತಿಹಿಡಿಯಲೆಂದು ರಾಜ್ಯದೆಲ್ಲೆಲ್ಲಾ ಸುಹಲ್ ದೇವನ ಪ್ರತಿಮೆ ಸ್ಥಾಪಿಸಿದರು . ಅನೇಕ ನಾಟಕ ಕಂಪನಿಗಳು ಸುಹಾಲ್ ದೇವನ ವೀರ ನಾಟಕಗಳನ್ನು ಪ್ರದರ್ಶಿಸಿ ಅವನ ಕೀರ್ತಿ ಮೆರೆಯುತ್ತಿದ್ದಾರೆ .

ಆದರೂ . . . .  ಬಹುತೇಕ ಭಾರತೀಯರಲ್ಲಿ ಸುಹಲ್ ದೇವನು ಯಾರೆಂದು ಗೊತ್ತಿಲ್ಲದೆ ನಮ್ಮ ಪೂರ್ವಿಕರ ಹಿರಿಮೆಯನ್ನು ಕಡೆಗಣಿಸಿದ್ದೇವೆ . 


ಕೃಪೆ : www.indusresearch.org/raja-suheldev/

Tuesday 2 June 2015

ರಾಜಾ ಸುಹಲ್ ದೇವ್ : ಮರೆತುಹೋದ ಬಾಹ್ರೌಚ್ ಕದನ ವನ್ನು ನೆನೆಯುತ್ತಾ : ಭಾಗ ೨





                 ಸಲರ್ ಮಸೂದ್ ನ ದಂಡಯಾತ್ರೆ ಯ ಸಮಯದಲ್ಲಿ ಲಕ್ಷ್ಮೀಪುರ , ಸೀತಾಪುರ, ಲಖ್ನೋ , ಬಾರಾಬಂಕಿ, ಉನ್ನಾಓ , ಫೈಸಾಬಾದ್ , ಬಹ್ರೈಚ್ , ಶ್ರಾವಸ್ತಿ ಮತ್ತು ಗೋಂಡಾ ಪ್ರಾಂತಗಳನ್ನು ಸುಹಲ್ ದೇವ್ ನ ಇಪ್ಪತ್ತೊಂದು ಸಾಮಂತರು ಆಳುತ್ತಿದ್ದರು . ಮೀರತ್ , ಕನೌಜ್ , ಮಹೀಲಬಾದ್ ಗಳಲ್ಲಿ ವಿಜಯದುಂದುಬಿ ಬಾರಿಸಿ ಮಸೂದ್ ಬಾರಾಬಂಕಿ ಜಿಲ್ಲೆಯ ಸತ್ರಿಕ್ ಎಂಬಲ್ಲಿ ಬಂದ. ಆ ಪ್ರದೇಶ ವಸಿಸ್ಠರು ರಾಮ ಲಕ್ಷ್ಮಣರಿಕೆ ಪಾಠ ಹೇಳಿಕೊಟ್ಟ ಪುಣ್ಯಕ್ಷೇತ್ರವೆಂದು ನಂಬುತ್ತಾರೆ. ಈ ಜಾಗವನ್ನು ಮಸೂದ್ ಸೇನಾನೆಲೆಯಾಗಿಸಿ ಸುತ್ತಮುತ್ತಲ ಪ್ರದೇಶಗಳನ್ನು ಕಬಳಿಸಲು ಸೇನೆಯನ್ನು ಕಳಿಸುತ್ತಿದ್ದ . 

               ಮಸೂದ್ ತನ್ನ ಒಬ್ಬೊಬ್ಬ ಫೌಜುದಾರುಗಳನ್ನು ವಿವಿಧ ದಿಕ್ಕುಕಳಲ್ಲಿ ಹಬ್ಬಿಸಿದ . ಮಿಯ್ಯ ರಜಬ್ ಮತ್ತು ಸಲರ್ ಸೈಪುದ್ದೀನ್ ಬಹ್ರೈಚ್ ನನ್ನು ವಶಪಡಿಸಿಕೊಂಡರು . ಹಾಗೆಯೇ ಅಮೀರ್ ಹಸನ್ ಮಹೋನ , ಮಲಿಕ್ ಫಜಲ್ ವಾರಣಾಸಿ , ಸಯ್ಯದ್ ಸಾಹು ಕರ್ರಾ ಮತ್ತು ಮಣಿಕಾಪುರಗಳನ್ನು ವಶಪಡಿಸಿಕೊಂಡ . ಸಯ್ಯದ್ ಅಜೀಜ್ ಉದ್ದೀನ್ ಸಹಲ್ ದೇವನ ಸಾಮಂತ ಹರದೋಯಿ ವಿರುದ್ಧ ಹೊರಟಿದ್ದ . ಆದರೆ ಅಜೀಜ್ ಗೋಪಮಾವು ಕದನದಲ್ಲಿ ಸಾವಿಗೇದಾಗಿ ಸೇನೆ ಹಿಮ್ಮೆಟ್ಟಿತು . ಮಸೂದ್ ನ ದೂಸ್ತ್ ಮಹಮ್ಮದ್ ರೇವಾರಿಯ ದೂಂದಘಡದಲ್ಲಿ ಮುತ್ತಿಗೆ ಹಾಕಿದಾಗ ಸಮಸ್ಯೆ ಉಂಟಾಯಿತು . ಮಸೂದ್ ಮಹಮ್ಮದ್ ನ ಸಹಾಯಕ್ಕೆಂದು ತನ್ನ ಧರ್ಮಗುರು ಸಯ್ಯದ್ ಇಬ್ರಾಹಿಂ ಮಶ್ಶಾದಿ ಬಾರಹ್ ಹಜಾರಿ ಯನ್ನು ಕಳಿಸುತ್ತಾನೆ.  ಸಯ್ಯದ್ ಇಬ್ರಾಹಿಂ ಒಬ್ಬ ಉತ್ಕಟ ಮತಾಂಧ ಸೇನಾಪತಿಯಾಗಿದ್ದು ತಾನು ಹೋದಲ್ಲೆಲ್ಲಾ ಕಾಫಿರರು ಮುಸಲ್ಮಾನರಗಡೇ ಅಥವಾ ಸಾಯಿಸದೇ ಬಿಡಿತ್ತಿರಲಿಲ್ಲ . ಪುಣ್ಯವೆಂಬಂತೆ ಸಯ್ಯದ್ ಇಬ್ರಾಹಿಂ ಮತ್ತು ಇನ್ನೂ ಅನೇಕ ಮಸೂದ್ ನ ಸೇನಾ ನಾಯಕರನ್ನೂ ದುಂಧಾಗಢ್ ಕದನದಲ್ಲಿ ಸೋಲಿಸಿ ಕೊಲ್ಲಲಾಯಿತು . 

ಅದೇ ಸಮಯದಲ್ಲಿ ಸಲರ್ ಸೈಫುದ್ದೀನ್ ನನ್ನು ಬಹ್ರೈಚ್ ನಲ್ಲಿಯೇ ತಡೆಯಲಾಗಿ ಅಯೋಧ್ಯೆಗೆ ಮುನ್ನೆಡೆಯಲು ಮಸುದನಿಗೆ  ಪ್ರತಿರೋಧ ಒಡ್ಡಿದಂತಾಯ್ತು . ಸಲರಪುರ ಎಂಬ ಹೊರವಲಯದ ಒಂದು ಪಟ್ಟಣದಲ್ಲಿ ನಿಲ್ಲುತ್ತಾನೆ . ಮಸೂದ್ ತನ್ನ ಸೇನೆಯನ್ನು ಉತ್ತರಕ್ಕೆ ಪಯಣಿಸಿ ಸೈಫುದ್ದೀನನಿಗೆ ಬಲವರ್ಧನೆಗೆ ಬಹ್ರೌಚ್ ಗೆ ನಡೆಯಬೇಕಾಯಿತು . ಬಹ್ರೌಚ್ ನ ಪಾಳೆಗಾರರೆಲ್ಲಾ ಭಾಕ್ಲಾ ನದಿ ದಂಡೆಯಲ್ಲಿ ನೆರೆದಿದ್ದರು . ಮಸೂದ್ ರಾತ್ರಿ ವೇಳೆ ಒಂದು ಕಿರು ಧಾಳಿ ಮಾಡಿ ಸ್ವಲ್ಪ ಜಯಗಳಿಸಿದನಾದರೂ ನಂತರ ಉಭಯ ಪಕ್ಷದವರಿಗೂ ಬಿಕ್ಕಟ್ಟು ತಂದಿತು. 

ಬಹುಪಾಲು ಎಲ್ಲಾ ಸರಹದ್ದುಗಳಲ್ಲೂ ಪೂರ್ಣ ಯಶಸ್ಸಿಲ್ಲದೆ ಅಥವಾ ಸೋಲನ್ನುಂಡ ಮಸುದನಿಗೆ ಬಹ್ರೌಚ್ ನಲ್ಲಿ ಅಂತಿಮ ತೆರೆ ಬೀಳುವ ಕ್ಷಣ ಹತ್ತಿರ ಬಂದಿತ್ತು . 

ಅದು ಸುಹಾಲ್ ದೇವ್ ಮತ್ತು ಅವನ ತಮ್ಮ ಬಹಿರ್ ದೇವ್ ಬಹ್ರೌಚ್ ಗೆ ಬಂದ ವೇಳೆ . ಜೂನ್ ೧೩ ೧೦೩೩ ರರಂದು ನೈಜ ಸಮರ ಬಹ್ರೌಚ್ ನ ಚಿತ್ತೋರ ಕೊಳದ ಸಮೀಪ ತೆರೆ ಕಾಣಲಿತ್ತು .

          ಇಸ್ಲಾಮೀ ಸೇನೆಯ ಬಲಪಾರ್ಶ್ವದ ಫೌಜುದಾರ್ ಮೀರ್ ನಸ್ರುಲ್ಲಾ ಸಾವಿಗೀಡಾಗುತ್ತಿದ್ದಂತೆ ಆ ಭಾಗದ ಸಮಸ್ತ ಸೇನೆ ಕುಸಿದು ಬಿತ್ತು . ತಕ್ಷಣವೇ ಮಿಯ್ಯ ರಾಜಾಬ್ ನನ್ನು ಕೊಲ್ಲಲಾಯಿತು . ಮುಸಲ್ಮಾನರ ಸೇನೆಯಲ್ಲಿ ಗೊಂದಲವಾಗುತ್ತಿದ್ದಂತೆ ರಾಜಾ ಕರಣ್ ನೇತೃತ್ವದ ಒಂದು ದೊಡ್ಡ ಸೇನಾ ತುಕಡಿ ಮುಸಲ್ಮಾನ ಸೇನೆಯ ಕೇಂದ್ರ ಭಾಗಕ್ಕೇ ಮುನ್ನುಗ್ಗಿ ಬಲವಾದ ಹೊಡೆತ ನೀಡಿತು . ಸಲರ್ ಮಸೂದನನ್ನು ಸುಹಾಲ್ ದೇವನೇ ತಲೆ ಕಡಿದ ಅಥವಾ ಬಾಣವು ಅವನ ಕತ್ತನ್ನು ಚೇದಿಸಿತೆಂದೊ ಹೇಳುತ್ತಾರೆ. ಪವಿತ್ರ ಸೂರ್ಯಕುಂಡದ ಬಳಿ ಮಸೂದ್ ಸಾಯುತ್ತಾನೆ.
ತದನಂತರದ ದಿನ ಸಲರ್ ಇಬ್ರಾಹಿಂ ಸೇಡನ್ನು ತೀರಿಸಿಕೊಳ್ಳಲು ಸುಹಲ್ ದೇವನ ಮೇಲೆ ಪ್ರತಿಧಾಳಿ ಮಾಡಿದನಾದರೂ ಏನೂ ಪ್ರಯೋಜನವಾಗಲಿಲ್ಲ . ಬಹ್ರೌಚ್ ಕದನ ಸಮಾಪ್ತಗೊಂಡು ಎರಡು ಶತಮಾನಗಳ ಕಾಲ ಉತ್ತರ ಭಾರತ ಇಸ್ಲಾಮೀ ದಬ್ಬಾಳಿಕೆಯಿಂದ ಪಾರಾಯಿತು .

ರಾಜಾ ಸುಹಲ್ ದೇವ್ : ಮರೆತುಹೋದ ಬಾಹ್ರೌಚ್ ಕದನ ವನ್ನು ನೆನೆಯುತ್ತಾ : ಭಾಗ ೧






            ಮಾಲಿಕ್ ಖಾಫುರ್ ದಕ್ಷಿಣ ಭಾರತಕ್ಕೆ ದಂಡೆತ್ತಿ ಬಂದಾಗ ಹೊಯ್ಸಳರು ಅವಸಾನದ ಹಾದಿಯಲ್ಲಿದ್ದರು ಮತ್ತು ಪಾಂಡ್ಯನ್ನಾರು ಅವನನ್ನು ಎದುರಿಸಲು ಸಮರ್ಥರಿರಲಿಲ್ಲ . ಬಾಬರ್ ದಂಡೆತ್ತಿ ಬಂದಾಗ ರಾಜಪೂತರಲ್ಲಿ ಒಮ್ಮತವಿರಲಿಲ್ಲ . ಹೀಗೆ ನಮ್ಮ ಪ್ರತಿಯೊಂದು ಸೋಲನ್ನು ಕೂಲಂಕುಷವಾಗಿ ಗಮನಿಸಿದರೆ ನಿರ್ಣಾಯಕ ಸಮರಗಳಲ್ಲಿ ಪ್ರಭಲವಾದ ಸಾಮ್ರಾಜ್ಯವಿಲ್ಲದೇ ಸೂತದ್ದು ಅಥವಾ ಯಾವುದಾದರೂ ಸಣ್ಣಪುಟ್ಟ ತಪ್ಪುಗಳಿಂದ ಸೋತದ್ದೆಂದು ಕಾಣಬಹುದು . ಆದರೆ ಇದನ್ನು ಮೀರಿ ಒಬ್ಬ ಸಣ್ಣ ಪ್ರಾಂತದ ಸಾಮಾನ್ಯ ದೊರೆ ಒಬ್ಬ ಪ್ರಭಲ ಇಸ್ಲಾಮಿ ಧಾಳಿಕೋರನನ್ನು ಬಗ್ಗು ಬಡಿದದ್ದು ಒಂದು ಅಪರೂಪದ ಉದಾಹರಣೆಯೂ ನಮ್ಮ ಇತಿಹಾಸದಲ್ಲಿದೆ . ಅವನೇ ರಾಜ ಸುಹಲ್ ದೇವ್ .

ಸುಹಲ್ ದೇವ್ ಗೂ ಮುನ್ನ ಪೀಠಿಕೆ ಎಂಬಂತೆ ಮುನ್ನೂರು ವರ್ಷಗಳ ಹಿಂದಿನ ಇತಿಹಾಸವನ್ನು ಪುನಃ ತಿರುವಿಹಾಕುವುದು ಅನಿವಾರ್ಯವೇ .

             ಎಂಟನೇ ಶತಮಾನದ ಆದಿಯಾಗಿ ಭಾರತದ ಸಿಂಧ್ ಪ್ರದೇಶಗಳಲ್ಲಿ ಅರಬ್ಬರ ನಿರಂತರ ಬರ್ಬರ ಧಾಳಿಗಳು ಆರಂಭವಾಗಿದ್ದವು. ಆದರೆ ಈ ಧಾಳಿಗಳನ್ನು ರಾಜಸ್ತಾನಿನ ಸಮರವು ಒಂದೇ ಸಲಕ್ಕೆ ಹಠಾತ್ತನೆ ವಿರಾಮ ಕೊಟ್ಟಿತು . ಕಾಶ್ಮೀರದ ಸಾಮ್ರಾಟ್ ಲಲಿತಾಡಿತ್ಯ ಮುಕ್ತಪೀಡನು (724 ಕ್ರಿ ಶ - 760 ಕ್ರಿ ಶ ) ಅರಬ್ಬರನ್ನು ನಿರ್ಣಾಯಕವಾಗಿ ಮಣಿಸಿ ಮತ್ತೆ ಭಾರತವನ್ನು ಗೆಲ್ಲುವ ಕನಸನ್ನು ಭಂಗಗೊಳಿಸಿದ . ಇದರಲ್ಲಿ ಇಸ್ಲಾಮೀ ದಂಡಯಾತ್ರೆಯ ಮೊದಲ ಅಧ್ಯಾಯ ಕೊನೆಗೊಂಡಿತು . ಮತ್ತು 719 ಕ್ರಿ ಶ  ರಲ್ಲಿ ದಕ್ಷಿಣ ತಾಜಿಕಿಸ್ತಾನದ ನಾರಾಯಣ , ಸಮರ್ಖಂಡದ ಗೊರಖ್ ಮತ್ತು ಭೂಕಾರದ ತುಷಾರಪತಿ ಮಧ್ಯ ಏಷ್ಯಾದಲ್ಲಿ ಅರಬ್ಬರ ಮುನ್ನುಗ್ಗುವಿಕೆಯನ್ನು ತಡೆದು ಮಧ್ಯೆ ಏಷ್ಯಾದಲ್ಲಿನ ಇಸ್ಲಾಮೀ ದಂಡಯಾತ್ರೆಯ ಅಧ್ಯಾಯಕ್ಕೆ ತಾತ್ಕಾಲಿಕ ವಿರಾಮವಿತ್ತರು . 

            ಮತ್ತೆ ಇಸ್ಲಾಮೀ ದಂಡಯಾತ್ರೆ ಪುನಶ್ಚೇತರಿಸಿಕೊಳ್ಳಲು ಮೂರು ಶತಮಾನಗಳು ಬೇಕಾಯಿತು. ಅದಕ್ಕೆ ತುರ್ಕರ ಇಸ್ಲಾಮೀ ಮತಾಂತರಗೊಂಡ ನಂತರ. ನಂತರ ಇಸ್ಲಾಮಿನ ಎರಡನೇ ಅಧ್ಯಾಯದ ದಂಡಯಾತ್ರೆಯನ್ನು ಮಹಮ್ಮದ್ ಘಜ್ನಿ ಭಾರತೀಯ ಅಫಘಾನಿಸ್ತಾನ ಮತ್ತು ಪಶ್ಚಿಮೋತ್ತತರ ಪ್ರಾಂತ್ಯಗಳನ್ನು ಭೇದಿಸುತ್ತಾ ಮುನ್ನುಗ್ಗಿ ಪುನರಾರಂಭಿಸಿದ . 1026 ಕ್ರಿ ಶ ದಲ್ಲಿ ಸೋಮನಾಥನನ್ನು ಕೊಳ್ಳೆ ಹೊಡೆಯುತ್ತಿದ್ದಾಗ ಘಜ್ನಿ ಯೊಂದಿಗೆ ತನ್ನ ಹನ್ನೊಂದು ವರ್ಷದ ಅಳಿಯ ಸಯ್ಯದ್ ಸಲಾರ್ ಮಸೂದ  ಜೊತೆಗಿದ್ದ ( ಘಜ್ನಿಯ ತಂಗಿ ಸಿತಾರ್-ಇಮು-ಅಲ ನ ಮಗ ). ಘಜ್ನಿ ಯ ಸಾವಿನನಂತರ ಒಂದು ಲಕ್ಷ ( ಕ್ರಿ ಪೂ 1031 )ಪ್ರಭಲ ಸೇನೆಯೊಂದಿಗೆ ಭಾರತಕ್ಕೆ ದಂಡೆತ್ತಿ ಬಂದ . ಆ ವಯಸ್ಸಿನಲ್ಲಿಯೇ ಮಸೂದ್ ಮಾವನ ಮತಾಂಧತೆ ಮತ್ತು ರಣಕೌಶಲ್ಯವನ್ನು ಮೈಗೂಡಿಸಿಕೊಂಡಿದ್ದ . 

ಮಸೂದ್ ತನ್ನ ಮೊದಲ ಸೇನಾ ಕಲಹ ದೆಹಲಿಯ ರಾಜ ಮಹಿಪಾಲ್ ತೋಮರ್ ನೊಂದಿಗೆ ಕೇವಲ ಕೆಲವು ಘಜ್ನಿಯ ಸೇನಾ ನೆರವಿನಿಂದ ಮಣಿಸಿದ . ಇಲ್ಲಿಂದ ನೇರ ಮೀರತ್ ನಲ್ಲಿ ಧಾಳಿ ಮಾಡಿ ಹರಿದತ್ತ ನನ್ನು ಬಂಧಿಸಿ ಬಲವಂತವಾಗಿ ಇಸ್ಲಾಂ ಸ್ವೀಕರಿಸುವಂತೆ ಮಾಡಿದ . ಮತ್ತೆ ಅಲ್ಲಿಂದ ಕಾನೂಜ್ ನನ್ನು ವಶಪಡಿಸಿಕೊಂಡು ಅಲ್ಲಿನ ಸ್ಥಳೀಯ ಆಡಳಿತಗಾರರೆಲ್ಲಾ ಇಸ್ಲಾಂ ಸ್ವೀಕರಿಸಿ ಅಪಾರ ಮೊತ್ತದ ಧನವನ್ನು ಮಸೂದ್ ನ ಕೈಗೊಪ್ಪಿಸಿದರು . ಕಾನೂಜ್ನನ್ನು ತನ್ನ ಸೇನಾ ನೆಲೆ ಯನ್ನಾಗಿಸಿ ತನ್ನ ಮುಂದಿನ ವಿಸ್ತಾರಕ್ಕಾಗಿ ಯೋಜನೆ ರೂಪಿಸುತ್ತಿದ್ದ .

ಆ ಸಮಯದಲ್ಲಿ ಪಾಸಿ ಎಂಬ ಎಂಬತ್ತರಿಂದ ತೊಂಬತ್ತು ಲಕ್ಷ ಜನಸಂಖ್ಯೆಯ ಬುಡಕಟ್ಟು ಜನಾಂಗ ಅವಧ್ ಮತ್ತಿತರೆ ಸ್ಥಳೀಯ ಪ್ರದೇಶಗಳನ್ನು ಆಳುತ್ತಿದ್ದರು . ಇವನ ಜನಾಂಗ ಮಧ್ಯಪ್ರದೇಶ , ಮಹಾರಾಷ್ಟ್ರ , ಗುಜರಾತ್ , ಹರಿಯಾಣ , ಪಂಜಾಬ್ ಮತ್ತು ಓರಿಸ್ಸಾದಲ್ಲೂ ಇದ್ದು ಆದರೆ ಇವರ ಅಧಿಕವಾಗಿ ಉತ್ತರಪ್ರದೇಶದಲ್ಲಿ ನೆಲೆಸಿರುತ್ತಾರೆ . ತಾವು ಭೃಗುವಿನ ಮೂಲದವರೆಂದು ನಂಬಿದ್ದ ಇವರು ಪೌರಾಣಿಕ ಹಿನ್ನಲೆಯಿದ್ದು ಉತ್ತಮ ಯೋಧರ ವಂಶಸ್ಥರೆಂದು ಬ್ರಿಟಿಷರಕಾಲದಲ್ಲೂ  ಹೆಸರುವಾಸಿ . 

ಆ ಪಾಸಿ ರಾಜವಂಶಸ್ಥರಲ್ಲಿ ಕಾನೋಜ್ ಮೇಲೆ ವೈರತ್ವವಿದ್ದರೂ ಇಸ್ಲಾಮಿನ ಧಾಳಿಯ ತರುವಾಯ ತಮ್ಮ ನಿಲುವನ್ನು ಬದಲಾಯಿಸಿದರು . ಮಸೂದ್ ನ ಸಮಯದಲ್ಲಿ ಶ್ರಾವಸ್ತಿಯನ್ನು ರಾಜ ಸುಹಲ್ ದೇವ್ ಆಳುತ್ತಿದ್ದ .
ಮಸುದ್ ನ ಹುಟ್ಟದಗಿಸಲು ಸುಹಲ್ ದೇವ್ ಎದುರಾಗುವುದೊಂದೇ ಬಾಕಿಯಿತ್ತು . ಸಮಯ ಮತ್ತು ಸ್ಥಳದ ಅಂತರವೊಂದೇ ತಾತ್ಕಾಲಿಕ ಗೋಡೆಯಂತಿತ್ತು .