ಏಪ್ರಿಲ್
9, 1737
ಬಾಜಿರಾಯನ
ಅಶ್ವದಳ ತಲ್ಕತೋರಾ ಎಂಬಲ್ಲಿ
ಕೆಂಪುಕೋಟೆಗೆ ತೋರುವಲ್ಲೇ ಡೇರೆ
ಹಾಕಿತ್ತು .
ಮರಾಠರ
ಈ ಅಶ್ವಬಲ ದಿನಕ್ಕೆ ನಲವತ್ತು
ಕಿಲೋಮೀಟರ್ ವೇಗದಲ್ಲಿ ಒಂದೇ
ಸಮನೆ ಯಾವ ಮುಂಸೂಚನೆಯಿಲ್ಲದೇ
ಒಂದೇ ರಭಸಕ್ಕೆ ಈ ಮರಾಠಾ ಖಡ್ಗ
ದೆಹಲಿಯ ಸರಹದ್ದನ್ನು ತಲುಪಿತ್ತು
. ಇದರ ಸುದ್ದಿ
ಹಬ್ಬಿದಂತೆ ಮೊಘಲ್ ಸಿಂಹಾಸನ ಗಡ
ಗಡ ನಡುಗಿ ಅಲ್ಲಿಂದ ಕಾಲ್ಕೀಳಲು
ದೋಣಿಗಳನ್ನು ಸಿದ್ಧಪಡಿಸಿದರು
. ಅದರಲ್ಲೂ
ಬಾಜಿರಾಯನ ಸೋಲಿಲ್ಲದ ಜಯಭೇರಿ
ಭಾರತದುದ್ದಗಲಕ್ಕೂ ಹಬ್ಬಿತ್ತು
. ಅವನ
ಪರಾಕ್ರಮವನ್ನೆದುರಿಸುವ ಧೈರ್ಯ
ಇವರಿಗೆಲ್ಲಿಂದ ಬರಬೇಕು ಪಾಪ.
ಸಾವಿರ
ವರ್ಷದ ಹಿಂದೆ ಇಮ್ಮಡಿ ಪುಲಕೇಶಿ
ದಕ್ಷಿಣದಿಂದ ಉತ್ತರಕ್ಕೆ ಜಯಭೇರಿ
ಬಾರಿಸಿದ್ದ . ಅದರ
ನಂತರ ಈಗ ಬಾಜಿರಾಯ ಎರಡನೆಯ ಬಾರಿ
ಉತ್ತರ ಭಾರತವನ್ನು ರಕ್ಷಿಸಲು
ಕುದುರೆಯೇರಿ ಬಂದಿದ್ದ .
ಹಾಗಂತ
ದೆಹಲಿಯಲ್ಲಿ ಸೇನಾಬಲವಿಲ್ಲವೆಂದಲ್ಲ
. ಹನ್ನೆರಡು
ಸಾವಿರ ಮೊಘಲ್ ಮತ್ತು ರಾಜಪೂತ
ಅಶ್ವದಳ ಮತ್ತು ಬಂದೂಕುಧಾರಿಗಳ
ಒಟ್ಟು ಇಪ್ಪತ್ತು ಸಾವಿರ ಸೇನೆಯಿತ್ತು
. ಅದರಲ್ಲಿ
ಸುಮಾರು ನಾಲ್ಕು ಸಾವಿರ ಸೇನೆ
ಮೊಘಲ್ ಬಾದಷಾಹನಿಗೇ ಕಾವಲುಕಾಯಲಿದ್ದರು
.
ಅಮೀರ್
ಖಾನ್ ಮೊಘಲ್ ಸೇನಾಪತಿಯಾಗಿ
ಸೇನೆಯನ್ನು ಮುನ್ನೆಡುತ್ತಿದ್ದ
. ಅವನ ಆ
ಸೇನೆಯಲ್ಲಿ ಮುಖ್ಯವಾಗಿ ಅಫ್ಘಾನೀ
ಪಠಾಣರು , ತುರ್ಕರು
ಮತ್ತು ಮಧ್ಯ ಏಷ್ಯಾದವರಿದ್ದರು
. ಏಪ್ರಿಲ್
10 ರ ಮಧ್ಯರಾತ್ರಿಯಲ್ಲಿ
ತಮ್ಮ ಡೇರೆಯನ್ನು ಮುನ್ನಡೆಸುತ್ತಾ
ತಲ್ಕತೋರಾದ ಮಾರ್ಗವಾಗಿ ಮುನ್ನಡೆದರು
. ತಮ್ಮ
ಬಂದೂಕುಗಳನ್ನು ಮಧ್ಯ ಮಧ್ಯಗಳಲ್ಲಿ
ರಕ್ಷಣೆಗೆ ಸ್ಥಾಪಿಸುತ್ತಾ
ನಿಧಾನವಾಗಿ ಚಲಿಸಿದರು .
ಹಾಗೆಯೇ ಮುಂಜಾನೆಯಷ್ಟರಲ್ಲಿ
ಮರಾಠರನ್ನು ಎದುರಿಸಲು ಸಿದ್ಧರಾದರು
.
ಆದರೆ
. . . ಬಾಜಿರಾಯ
ಕೈಗೆ ಸಿಗಲೇ ಇಲ್ಲ .
ಅಮಿರ್
ಖಾನ್ ಪುನಃ ಪರಿಸ್ಥಿತಿಯ ಅರಿವು
ಬಾರದಿದ್ದರಿಂದ ರಕ್ಷಣಾತ್ಮಕವಾಗಿ
ಮುಂದೆ ನಡೆಯುತ್ತಿದ್ದ .
ಆದರೆ ಅವನ ಒಬ್ಬ
ಮೀರ್ ಹಸನ್ ಖಾನ್ ಎಂಬ 2000
ಅಶ್ವದಳದ ಕಿರಿಯ
ಅಧಿಕಾರಿ ಅದೇನೋ ದುಸ್ಸಾಹಸ ಮಾಡುವೆ
ಎಂದು ಮುನ್ನುಗ್ಗಿ ರಣಾಂಗಣಕ್ಕೆ
ಧುಮುಕಿದ . ಅಮಿರ್
ಖಾನ್ ಒಬ್ಬ ಹೇಡಿ ಮುದುಕ ಎಂದು
ಜರಿದು ಹಸನ್ ನ ಜೊತೆಗೆ ಇನ್ನಷ್ಟು
ಸರದಾರರು ಜೊತೆಗೂಡಿದರು .
ಬಾಜಿರಾಯ
ಅವರು ಬರುತ್ತಿದ್ದನ್ನು ದೂರದಿಂದ
ಗಮನಿಸಿತ್ತಿದ್ದ . ತಮ್ಮ
ಬಾಣಗಳ ಮಳೆಗೈಯುವ ಯಂತ್ರಾಯುಧದ
(Swivel Guns) ಅಂತರಕ್ಕೆ
ಇನ್ನಷ್ಟು ಹತ್ತಿರ ಬರಲೆಂದು
ತನ್ನ ಸೇನೆಯನ್ನು ಇನ್ನಷ್ಟು
ಹಿಂದೆ ತೆಗೆದುಕೊಂಡ . ಅದರಿಂದ
ಹಸನ ಸೇನೆ ತಲ್ಕತೋರಾದಿಂದ ಸುಮಾರು
ಮುಕ್ಕಾಲು ಮೈಲು ಖಾಲಿ ಮೈದಾನಕ್ಕೆ
ಎಳೆದುಕೊಂಡ . ಪಾಪ
, ಹಸನನಿಗೆ
ಗೊತ್ತಿರಲಿಲ್ಲ , ತಾನು
ನೇರ ಗುಂಡಿಗೆ ಬಿದ್ದಿದ್ದಾನೆಂದು
!.
ತಕ್ಷಣ
ಮರಾಠಾ ಭರ್ಜಿದಾರೀ ಅಶ್ವಸೇನೆ
ವೇಗವಾಗಿ ಅವರ ಮೇಲೆ ಮುಗಿಬಿದ್ದರು
. ಮರಾಠರ
ಕೆಲವು ಸಾವು ನೋವನ್ನು ಹೊರತುಪಡಿಸಿ
ಮೊಘಲರನ್ನು ಸಂಪೂರ್ಣ ಪರಾಸ್ತಗೊಳಿಸಿದರು
.
ಹನ್ನೆರಡಕ್ಕಿಂತ
ಹೆಚ್ಚು ಮೊಘಲ್ ಸಾಮಂತರನ್ನು
ಕೊಂದು ಆರು ನೂರಕ್ಕಿಂತ ಹೆಚ್ಚು
ಮೊಘಲ್ ಸೈನಿಕರನ್ನು ಕತ್ತರಿಸಿದರು
. ಅದರ ಮೇಲೆ
ಎರಡು ಸಾವಿರ ಕುದುರೆಗಳು ,
ಒಂದು ಆನೆ ಮತ್ತು
ಅಪಾರ ಬಂದೂಕು ಶಸ್ತ್ರಾಸ್ತ್ರಗಳನ್ನು
ಬಾಜಿರಾಯ ವಿಜಯದುಂದುಭಿ ಬಾರಿಸಿ
ವಶಪಡಿಸಿಕೊಂಡ . ನಂತರ
ಮೊಘಲ್ ಬಾದಷಾಹ ಮಾಳ್ವಾ ಪ್ರಾಂತವನ್ನು
ಬಿಟ್ಟುಕೊಟ್ಟು ತನ್ನ ಅನೇಕ
ಸಂಸ್ಥಾನಗಳಿಂದ ಕಾಲುಭಾಗದಷ್ಟು
ಆದಾಯವನ್ನು ಬಾಜಿರಾಯನಿಗೆ
ಬರೆದುಕೊಟ್ಟ . ಅಲ್ಲಿಗೆ
ಮೊಘಲ್ ಸಾಮ್ರಾಜ್ಯ ಆರ್ಥಿಕ
ದೀವಾಳಿಯಾಯ್ತು .
ಅದಾಗಿ
ಮತ್ತೆ ಎರಡು ವರ್ಷಗಳ ನಂತರ ಪರ್ಷಿಯಾದ
ನಾದಿರ್ ಷಾಹ್ ದೆಹಲಿಯ ಮೇಲೆ
ಧಾಳಿಯಿಟ್ಟ . ಅವನಿಗೆ
ಕೆಲವು ಪಂಜಾಬಿನ ನಿಜಾಮರು
ಮತ್ತಿನ್ನುಳಿದ ಕೆಲವು ಮೊಘಲ್
ಸರದಾರರ ಬೆಂಬಲವಿತ್ತು .
ಮರಾಠರನ್ನು
ದೆಹಲಿಯಿಂದ ದೂರ ಸರಿಸುವ ಸಲುವಾಗಿ
. ನಾದಿರ್
ಷಾಹ ಸುಮಾರು ನೂರು ಕೋಟಿಯಷ್ಟು
ಲೂಟಿಗೈದು ಮೊಘಲರ ಮಯೂರ ಸಿಂಹಾಸನ
ಮತ್ತು ಕೊಹಿನೂರ್ ವಜ್ರವನ್ನು
ತೆಗೆದುಕೊಂಡ.
ನಾದಿರ್
ಷಾಹನ ವಾರ್ತೆ ಬಾಜಿರಾಯನಿಗೆ
ತಲುಪಿ ತನ್ನ ಕುದುರೆಯನ್ನು ಪುನಃ
ದೆಹಲಿಯತ್ತ ಚಲಿಸುವಷ್ಟರಲ್ಲಿ
ನಾದಿರ್ ಷಾಹ ಭಾರತದಿಂದ ಪರಾರಿಯಾಗಿದ್ದ
. ದುರ್ದೈವವೆಂಬಂತೆ
ಬಾಜಿರಾಯನು ಯಾವುದೋ ಒಂದು ವಿಲಕ್ಷಣ
ಖಾಯಿಲೆಯಿಂದ ಏಪ್ರಿಲ್ 28,
1740 ಯಲ್ಲಿ ಮರಣವನ್ನೊಪ್ಪಿದ
. ಎಲ್ಲಾದರೂ
ಅವನು ಇನ್ನು ಹತ್ತು ವರ್ಷಗಳಷ್ಟು
ಹೆಚ್ಚು ಕಾಲ ಬದುಕಿದ್ದರೆ ಇತಿಹಾಸವೇ
ಬೇರೆಯಾಗಿರುತ್ತಿತ್ತು .