Monday 20 November 2017

ಖೈಬರ್ ಪಾಸ್




ಸುಮಾರು ೮ ನೆಯ ಅಥವಾ ೯ ನೆಯ ಶತಮಾನದಲ್ಲಿ ಉತ್ತರ ಭಾರತದ ಒಂದು ಪ್ರಾಂತ್ಯದಲ್ಲಿ , ಪ್ರಾಯಶಃ ಪೃಥ್ವಿ ರಾಜ ಚೌಹಾನನ ಪೂರ್ವಜರ ರಾಜ್ಯವಿರಬಹುದು . ಅಲ್ಲಿನ ಮಂತ್ರಿಮಂಡಲ ರಾಜನೆದುರು ಒಂದು ಪ್ರಸ್ತಾಪವನ್ನು ಇಟ್ಟಿತು . ಅದೇನೆಂದರೆ ಅಫ್ಘನ್ ಪ್ರದೇಶವನ್ನು ತಾಗುವ ಪರ್ವತಗಳ ಸಾಲುಗಳ ನಡುವಿನ ಹಾದಿಯಾದ ಖೈಬರ್ ಪಾಸಿಗೆ ವಿರುದ್ಧವಾಗಿ ಒಂದು ಮಹಾಗೋಡೆಯನ್ನು ನಿರ್ಮಿಸಿ ಮಧ್ಯ ಏಷಿಯಾದ ಇಸ್ಲಾಮೀ ಧಾಳಿಕೋರರನ್ನು ತಡೆಯಬಹುದೆಂದು ಮತ್ತು ಈ ಗೋಡೆಯನ್ನು ನಿರ್ಮಿಸಲು ಪ್ರಜೆಗಳ ಮೇಲೆ 'ದ್ವಾರ ತೆರಿಗೆ' ಯನ್ನು ವಿಧಿಸಬೇಕಾಗುತ್ತದೆಂದು. ಚೀನಾದ ಗೋಡೆಯೇನೋ ಸಾವಿರಾರು ಕಿ ಮೀ ನಷ್ಟರದ್ದು ಆದರೆ ಈ ಗೋಡೆ ಕೇವಲ ಕೆಲವು ಕಿ ಮೀಗಳ ಉದ್ದನೆಯದು.

ಆದರೆ . . . ಜನರು ಈ ಯೋಜನೆಗಾಗಿ ಹೆಚ್ಚುವರಿ ತೆರಿಗೆ ಕಟ್ಟಲು ಒಪ್ಪದೆ ಪ್ರತಿಭಟಿಸಿದರು. ಆದ್ದರಿಂದ ಈ ಯೋಜನೆ ಕೈಬಿಟ್ಟಿತು.

ಕೆಲವು ವರ್ಷಗಳ ನಂತರ ಮೊಹಮ್ಮದ್ ಶಬುಕ್ತಜಿನ್ ಘಜನಿ ಇದೇ ಖೈಬರ್ ಹಾದಿಯಿಂದ ಭಾರತದೆತ್ತ ದಂಡೆತ್ತಿ ಬಂದ. ಮತ್ತಿದೇ ಮಾರ್ಗವಾಗಿ ಟನ್ನುಗಟ್ಟಲೆ ಚಿನ್ನವನ್ನು ಹೊತ್ತುಕೊಂಡು ಹೋದ. ಅಷ್ಟಲ್ಲದೇ ಇಪ್ಪತ್ತು ವರ್ಷಗಳಲ್ಲಿ ಹದಿನೇಳು ಬಾರಿ ಇದೇ ದಾರಿಯಲ್ಲಿ ನಿರಾಯಾಸವಾಗಿ ಹೋಗಿಬರುತ್ತಾ ತನ್ನ ದಂಡಯಾತ್ರೆಗಳನ್ನು ಮುಗಿಸಿದ .

ಅವನ ನಂತರ ಮೊಹಮ್ಮದ್ ಘೋರಿ, ತೈಮೂರ್ , ಬಾಬರ್, ನಾದಿರ್ ಷಾಹ್, ಅಹ್ಮದ್ ಷಾಹ್ ಪ್ರತಿಯೊಬ್ಬರೂ ಬಳಸಿದ್ದು ಇದೇ ಖೈಬರ್ ಪಾಸನ್ನು

Sunday 12 November 2017

ವಜೀರ್ ಖಾನನ ಅಂತ್ಯ





ಬಂದಾ ಬಹಾದ್ದೂರ್ ಸಾಮನಾದ ನಂತರ ಬಂದ ಸಧೂರ , ಕಪೂರಿ ನಗರಗಳನ್ನು ಅದೇ ರೀತಿ ವಶಪಡಿಸಿಕೊಂಡು ಈಗ ಸರಹಿಂದವನ್ನು ದ್ವಂಸಗೊಳಿಸಲು ಸಿದ್ಧತೆ ನಡೆಸುತ್ತಿದ್ದ . ಅದುವೇ ವಜೀರ್ ಖಾನನನ್ನು ಮಣಿಸುವುದು ಸುಲಭದ ಮಾತೇನಲ್ಲ . ಇಬ್ಬರ ಸೇನೆಯ ಬಲವೂ ಸಮಾನವಾಗಿಯೇ ಇತ್ತು . ಬಂದಾನ ಅಡಿಯಲ್ಲಿ ಇದ್ದದ್ದು 35 ಸಾವಿರ ಬಲದ ಸೇನೆ ಮತ್ತದರಲ್ಲಿ ಹನ್ನೊಂದು ಸಾವಿರ ಕಳ್ಳರ ಮತ್ತು ಡಕಾಯಿತರ ಗುಂಪೇ ಇತ್ತು . ಅವರನ್ನು ಬಿಟ್ಟರೆ ಇಪ್ಪತ್ನಾಲ್ಕು ಸಾವಿರ ಸೇನೆ ಎನ್ನಬಹುದು . ಮತ್ತು ಅಮೃತಮಥನಕ್ಕೆ ರಾಕ್ಷಸರ ಸಹಾಯವೂ ಬೇಕೆಂಬಂತೆ ಈ ಡಕಾಯಿತರ ಗುಂಪನ್ನೂ ಸೇರಿಸಿಕೊಂಡಿದ್ದ . ವಜೀರ್ ಖಾನನದ್ದು 15 ಸಾವಿರ ಬಲದ ತರಬೇತಿಯುಳ್ಳ ನಿಪುಣ ಸೇನೆಯಿತ್ತು ಮತ್ತವರ ಜೊತೆ ಐದು ಸಾವಿರ ಬಲದ ಘಾಜಿ ಪಡೆ , ಅಂದರೆ ಮುಲ್ಲಾಗಳ ಜಿಹಾದ್ ಕರೆಗೆ ಕಾಫಿರರ ಸಂಹಾರಕ್ಕೆಂದು ಬಂದ ಕಟ್ಟರ್ ಇಸ್ಲಾಮೀ ಕಟುಕರ ಸೇನೆ ! . ಖಾನನ ಸೇನಾಬಲ ಕಡಿಮೆಯಿದ್ದರೂ ಸಿಕ್ಖರಿಗಿಂದ ಸುಸಜ್ಜಿತವಾಗಿತ್ತು . ಕಡಿಮೆಯೆಂದರೆ ಎರಡು ಡಜನ್ ಫಿರಂಗಿಗಳು , ಅರ್ಧದಷ್ಟು ಸೇನೆ ಒಳ್ಳೆಯ ಕವಚಧಾರಿಗಳಾಗಿದ್ದರು ಮತ್ತು ಆನೆಗಳ ಒಂದು ಪಡೆಯೂ ಇತ್ತು . ಸಿಕ್ಖರ ಹತ್ತಿರ ಯಾವ ಫಿರಂಗಿಗಳೂ ಆನೆಗಳೊ ಇರಲಿಲ್ಲ . ಎಲ್ಲೋ ಕೆಲವಷ್ಟು ಕುದುರೆಗಳಿದ್ದವು . ಖಾನಾನೇನೋ ಅನುಕೂಲತೆಗಳು ತನ್ನೆಡೆ ಇರುವುದನ್ನು ಮನಗಂಡು ಗೆಲುವು ಖಚಿತವೇ ಎಂದು ಬೀಗುತ್ತಿದ್ದ.
ಖಾನಾನೂ ಒಬ್ಬ ನಿಪುಣ ಸೇನಾನಾಯಕನೇ . ಕೋಟೆಯ ಮೇಲಿನಿಂದಲೇ ಸೇನೆಗೆ ನಿರ್ದೇಶಿಸುತ್ತಾನೆ . ತನ್ನ ಪ್ರತೀ ಸೈನಿಕನೂ ಕರಾರುವಾಕ್ಕಾಗಿ ಸೇನಾ ಕವಾಯತ್ತನ್ನು ಮಾಡುವುದನ್ನು ನೋಡುತ್ತಾ ಹೆಮ್ಮೆ ಪಡುತ್ತಿದ್ದ . ತನ್ನ ತುಫಾಕಿಗಳನ್ನು ಒಂದು ನಿಯೋಜಿತ ಸ್ಥಳಗಳಲ್ಲಿ ಇಟ್ಟು ಒಮ್ಮೆ ಗುರಿ ಪರೀಕ್ಷೆಗಳನ್ನೂ ಮಾಡಿಸಿದ . ಬಿಲ್ಲುಗಾರರ ನಿಖರ ಗುರಿಗಳನ್ನೂ ಒಮ್ಮೆ ಪರೀಕ್ಷಿಸಿದ , ಎಲ್ಲರೂ ಒಮ್ಮೆಲೇ ಬಾಣಗಳನ್ನು ಬಿಟ್ಟರೆ ಶತ್ರುಗಳ ಮೇಲೆ ಮಳೆಸುರಿದಂತೆ ಅಲ್ಲಾಹಣ ಹತಥಿಯಾರನಂತೆ ಎರಗುತ್ತಿದ್ದವು . ಸಿಕ್ಖರಿಗೆಂತೂ ಈ ಸೇನೆಯನ್ನು ಎದುರಿಸುವುದು ಸಾಧ್ಯವೇ ಇಲ್ಲ .
ಆದರೆ ಬಂದಾ ಕೋಟೆಯನ್ನು ಮುತ್ತಿಗೆ ಹಾಕಿ ಉಸಿರುಗಟ್ಟಿಸಿ ಸೋಲಿಸುವನೆಂಬ ಸಧೂರಾದ ಪೂರ್ವಾನುಭವವನ್ನು ಮನಗಂಡು ದಾರಿ ಮಧ್ಯೆಯೇ ಸೆಣೆಸಲು ತಯಾರಿ ನಡೆಸಿದ್ದ . ಅದು ಚಪ್ಪರ್ ಚಿರಿ ಎಂಬ ಜಾಗ , ಸರಹಿಂದದಿಂದ ಹತ್ತು ಕಿ ಮೀ ದೂರ .
ಖಾನನು ತನ್ನ ತೋಪುಗಳನ್ನು ಅರ್ಧ ಚಂದ್ರಾಕಾರ ವ್ಯೋಹದಲ್ಲಿ ಇರಿಸಿ ಅದರ ಹಿಂದೆ ಬಿಲ್ಲುಗಾರರ ಮತ್ತೆ ಮ್ಯಾಚ್ ಲಾಕ್ ರೈಫಲ್ ಗಳ ಪಡೆಯನ್ನು ಬೆಂಗಾವಲಾಗಿ ಇರಿಸಿದ . ಮತ್ತವರ ಹಿಂದೆ ಒಂದು ಅಶ್ವಪಡೆ ಮೂರನೇ ರಕ್ಷಣಾ ಪಡೆಯಂತೆ ತಯಾರಾಗಿ ನಿಂತಿದ್ದವು . ಬಂದಾನಿಗೆ ಖಾನನ ಈ ಯೋಜನೆಗಳು ತಿಳಿದಿತ್ತು ಮತ್ತು ಆದಷ್ಟು ಬೇಗ ಚಪ್ಪರ್ ಚಿರಿಗೆ ಸಂಜೆ ಬಂದು ತಲುಪಿದ . ಯುದ್ಧದ ತಯಾರಿಗಾಗಿ ಸ್ವಲ್ಪ ಬೆಳಕಿನ್ನು ಬಾನಾಂಗಳದಲ್ಲಿತ್ತು . ಖಾನನ ಸೇನಾರಚನೆ ತೋಪುಗಳನ್ನೊಳಗೊಂಡಿದ್ದ ಪಡೆ ಖಾಲಿ ಮೈದಾನದ ಸಮರಕ್ಕೆ ಸೂಕ್ತವಾಗಿತ್ತು . ಬಂದಾನ ಊಹೆಯ ಪ್ರಕಾರ ಸೇನಾವ್ಯೂಹದಲ್ಲಿ ದುರ್ಬಲ ಪಡೆಯು ಮಧ್ಯದಲ್ಲಿರುತ್ತದೆ ಆದ್ದರಿಂದ ತನ್ನ ಸಮಸ್ತ ಸೇನೆ ನಡುವಿನಿಂದ ಮುನ್ನುಗ್ಗುತ್ತಾ ನಾಲ್ಕು ತೋಪುಗಳನ್ನು ಧ್ವಂಸಗೊಳಿಸುವುದು . ಈ ಕಠಿಣ ಕಾರ್ಯಕ್ಕೆ ತನ್ನ ಭಾಯಿ ಫತೇಹ್ ಸಿಂಗ್ , ಕರಮ್ ಸಿಂಗ್ , ಧರಂ ಸಿಂಗ್ ಮತ್ತು ಅಲಿ ಸಿಂಗ್ ನೇತೃತ್ವದ ಮಾಳವ ಸಿಕ್ಖರನ್ನು ನೇಮಿಸಿದ . ರಾಜ್ ಸಿಂಗನ ಮಾಜ ಸಿಕ್ಖರನ್ನು ಎಡ ಪಾರ್ಶ್ವ ಮತ್ತು ಶ್ಯಾಮ್ ಸಿಂಗರ ದೋಬ ಸಿಕ್ಖರನ್ನು ಬಲ ಪಾರ್ಶ್ವದಲ್ಲಿ ನಿಯೋಜಿಸಿದ . ಬಂದಾನು ಸೇನೆಯನ್ನು ನಿರ್ದೇಶಿಸಲು ಅನುಕೂಲವಂತೆ ಸೇನೆಯ ಎಡ ಭಾಗದಲ್ಲಿ ಇದ್ದ .
ಮೇ 22 , 1710 ರ ಮುಂಜಾನೆಯ ಸೂರ್ಯನೇ ಸುಡುತ್ತಿದ್ದ . ಆ ದಿನದ ಸಮರಕ್ಕೆ ಮುನ್ಸೂಚನೆ ಎಂಬಂತೆ . ಅದಕ್ಕೆ ಮುಂಚೆಯೇ ಬಂದಾನು ತಯಾರಾಗಿ ನಿಂತಿದ್ದ . ಸೂರ್ಯ ಸ್ವಲ್ಪ ದಿಗಂತವನ್ನೇರುತ್ತಿದ್ದಂತೆ ಉಭಯ ಸೇನೆಗಳಿಗೆ ಪರಸ್ಪರ ಸಂಪೂರ್ಣ ದರ್ಶನವಾಯಿತು . ಒಂದು ಕ್ಷಣಕಾಲ ನಿಶಬ್ದ ಮೌನ . ತೋಪುಗಳ ಅರ್ಧಚಂದ್ರಾಕೃತಿಯ ವ್ಯೋಹ ಅದರ ಹಿಂದೆ ಬಾಣಗಳನ್ನು ಹೂಡಿ ತಯಾರಾಗಿ ನಿಂತಿದ್ದ ಬಿಲ್ಲುಗಾರರು ಮತ್ತು ಟ್ರಿಗ್ಗರ್ ಒತ್ತಲು ತಯಾರಾಗಿದ್ದ ಮ್ಯಾಚ್ ಲಾಕ್ ರೈಫಲ್ ಧಾರಿಗಳನ್ನು ಬಂದಾನು ಗಮನಿಸಿದ . ಆ ಬದಿ ಒಂದು ಸುಸಜ್ಜಿತ ಪಡೆಯಿದ್ದರೆ ತನ್ನೆಡೆ ಎಲ್ಲಾ ಬಣ್ಣದ ಪೋಷಾಕು ಧರಿಸಿದ್ದ ಒಂದು ಪಡ್ಡೆಗಳ ದಂಡಿನಂತಿತ್ತು . ಆದರೂ ದೈವಿಚ್ಛೆ ಯನ್ನು ನಂಬಿದ್ದ .
ಸ್ವಲ್ಪ ಬೆಳಗೇರುತ್ತಿದ್ದಂತೆ ಸೇನೆಯಲ್ಲಿ ಮುನ್ನಡೆ ಆರಂಭಿಸಿತು . ಕುರಿಮಂದೆಯಂತೆ ಕೆಲಭಾಗದಲ್ಲಿ ಕ್ಷಿಪ್ರಗತಿಯಲ್ಲಿ ಮತ್ತೆ ಕೆಲಭಾಗದಲ್ಲಿ ಮಂದಗತಿಯಲ್ಲಿ ಸರಿಯಾದ ರಚನೆ ಶಿಸ್ತು ಮತ್ತು ತಾಲೀಮಿಲ್ಲದೆ ಮುನ್ನಡೆಯಿತು. ಹಾಗೆಯೇ ಸಾಗುತ್ತಾ ಹಠಾತ್ತನೆ ತೋಪಿನ ಘರ್ಜನೆ ಕೇಳಿಬಂತು , ಸಿಡಿತಲೆಗಳು ಒಂದರ ಮೇಲೊಂದಂತೆ ಸಿಕ್ಖರ ಮೊದಲ ಸಾಲಿನ ಸೇನೆಯನ್ನು ನಿಖರವಾಗಿ ಅಪ್ಪಳಿಸಿ ಕತ್ತರಿಸಿತು . ಅನೇಕ ತಲೆಗಳು ಕೈ ಕಾಲುಗಳು ಎರಗಿದವು . ಈ ಆಘಾತವನ್ನು ತಡೆದುಕೊಳ್ಳುವಷ್ಟರಲ್ಲಿ ಮತ್ತೊಂದು ಸುತ್ತಿನ ತುಫಾಕಿ ಧಾಳಿಯಿಂದ ಹೆದರಿ ಕೆಲವರು ಹಿನ್ನೆಡೆದರು . ಅದರಲ್ಲಿ ಹಲವಾರು ಕೇವಲ ದರೋಡೆ ಮಾಡಲೆಂದೇ ಬಂದವರು ಈಗ ರಣೋತ್ಸಾಹವಿಲ್ಲದೇ ಉಡುಗಿಹೋಗುತ್ತಿದ್ದಾರೆ . ಎಡ ಪಾರ್ಶ್ವದ ಸೇನೆಯೂ ರಣಭೂಮಿಯಿಂದ ಕಾಲ್ಕೀಳುತ್ತಿದ್ದಾರೆ . ಬಂದಾನಿಗೂ ಸೇನೆಯ ಸ್ಥಿತಿ ಕಂಡು ತಳಮಳಗೊಂಡ .
ರಾಜ್ ಸಿಂಗ್ ಮತ್ತಿನ್ನಿತರ ಸಂಗಡಿಗರು ಒಗ್ಗಟ್ಟಿನಿಂದ ಸೇನೆಯನ್ನು ಹುರಿದುಂಬಿಸಿ ಮುನ್ನೆಡೆಯಲು ಓಡಿದರು . ಇಲ್ಲದಿದ್ದರೆ ಸೇನೆಯು ಮುರಿದು ಬೀಳುವುದು ಖಚಿತ . ರಣಘೋಷವನ್ನು ಕೂಗುತ್ತಾ ಎಲ್ಲರನ್ನು ಮುನ್ನೆಡೆಸುತ್ತಾ ನಡೆದರು . ಸೇನೆಯಲ್ಲಿ ರಣೋತ್ಸಾಹ ಉಕ್ಕಿ ಯಾವ ಗುಂಡಿಗೂ ಬಾಣಗಳ ಮಳೆಗಳಿಗೂ ಲೆಕ್ಕಿಸದೆ ಶತ್ರುಗಳ ಮೇಲೆ ಕೈ ಕೈ ಹಿಡಿದು ಹೋರಾಡುವಷ್ಟು ಸನಿಹ ಬಂದರು . ಎಲ್ಲೆಡೆ ಕತ್ತಿಗಳ ಸದ್ದು ಸಪ್ಪಳ ರಕ್ತದೋಕುಳಿ .
ವಜೀರ್ ಖಾನಾನೂ ಸ್ವತಃ ಬಂದು ಹೋರಾಡುತ್ತಾ ಫತ್ತೇ ಸಿಂಗನಿಗೆ ಎದುರಾದ . ಫತ್ತೇ ಸಿಂಗನು ಸ್ವಲ್ಪವೂ ತಡಮಾಡದೇ ಅವನ ರುಂಡ ಹಾರಿಸಿದ !
ಖಾನನ ತಲೆ ಬಿದ್ದಂತೆಯೇ ಅವನ ಸೇನೆಯಲ್ಲಿ ಆತ್ಮಸ್ಥೈರ್ಯ ಕುಸಿಯಿತು .
ಆದರೆ ಸಿಕ್ಖರ ಸೇನೆಯ ರೋಷ ಯಾವ ಇಸ್ಲಾಮೀ ಸೈನಿಕನನ್ನು ಜೀವಸಹಿತ ಬಿಡಲಿಲ್ಲ . ಪ್ರತಿಯೊಬ್ಬ ಮುಸಲ್ಮಾನ ಸೈನಿಕನನ್ನು ಈ ಕಾಫಿರರ ಸೇನೆ ಕಟ್ಟಿಗೆ ಬಲಿಕೊಟ್ಟಿತು . ಮೊಘಲರ ಸಂಪೂರ್ಣ ಸೇನೆಯನ್ನು ಸಿಕ್ಖರ ಸೇನೆ ನಾಶಮಾಡಿತು .
ಸಿಕ್ಖರ ಸೇನೆಯೂ ಸಹಿತ ಅನೇಕ ಸಾವು ನೋವನ್ನು ಅನುಭವಿಸಿತು . ಇನ್ನು 10 ಕಿ ಮೀ ದೂರದ ಕೋಟೆಯನ್ನು ವಶಪಡಿಸಿಕೊಳ್ಳಲು ಮತ್ತೆರಡು ದಿನಗಳು ತಯಾರಿ ನಡೆಸಿದರು . ಸರಹಿಂದದ ಕೋಟೆಯನ್ನು ಕಬಳಿಸುವುದೂ ಸಹಿತ ಏನು ಸುಲಭದ ತುತ್ತಾಗಿರಲಿಲ್ಲ . ಕೋಟೆಯ ದ್ವಾರಗಳ ಸನಿಹದಲ್ಲೇ ಆಯಕಟ್ಟಿನ ಜಾಗಗಳಲ್ಲಿ ಬಂದೂಕು ತುಫಾಕಿಗಳನ್ನಿಟ್ಟಿದ್ದರು . ಮುತ್ತಿಗೆ ಹಾಕಿದ ಕೆಲವೇ ತಾಸಿನಲ್ಲಿ 500 ಸಿಕ್ಖರು ಹತರಾದರು. ಶ್ಯಾಮ್ ಸಿಂಗನು ಅತ್ಯುತ್ತಮ ಗುರಿಕಾರ , ಅಲಿ ಸಿಂಗನ ಮುಂದಾಳತ್ವದಲ್ಲಿ ಕೆಲವು ಬಂದೂಕಿನ ಸೈನಿಕರನ್ನು ಶ್ಯಾಮ್ ಸಿಂಗ್ ಕೊಂದು ದ್ವಾರವನ್ನು ಮುತ್ತಿಗೆ ಹಾಕುವುದರಲ್ಲಿ ಅನುವು ಮಾಡಿಕೊಟ್ಟ . ಇದರಿಂದ ತುಫಾಕಿಗಳು ನಿಶಬ್ದಃ ಗೊಂಡವು . ಕೋಟೆಯ ಬಾಗಿಲು ತೆರೆಯುತ್ತಿದ್ದಂತೆ ಪ್ರವಾಹದಂತೆ ಮುನ್ನುಗ್ಗಿದ ಜನ ಸೇನೆ ಅರಮನೆ ಒಳಗಿನ ಸರ್ವಸ್ವಾವನ್ನೂ ಲೂಟಿಮಾಡಿದರು .
ಸುಚಾನಂದನೆಂಬ ದ್ರೋಹಿಯಿದ್ದ . ಅವನೇ ವಜೀರನಿಗೆ ಸಿಕ್ಖರನ್ನು ಕೊಳ್ಳುವ ಕುಟಿಲ ಉಪಾಯಗಳನ್ನು ಕೊಡುತ್ತಿದ್ದ . ಈಗ ಉಗ್ರಾಣದ ಒಂದು ಹೂಜಿಯಡಿಗೆ ಬಚ್ಚಿಟ್ಟುಕೊಂಡಿದ್ದ . ಆದರೆ ಜನ ಪತ್ತೆ ಮಾಡಿದರು . ಅವನನ್ನು ಬೀದಿಗೆ ಎಳೆತಂದು ಎಲ್ಲರ ಸಮ್ಮುಖದಲ್ಲಿ ಚಿತ್ರಹಿಂಸೆಕೊಟ್ಟು ಕೊಂದರು . ಏಕೆಂದರೆ ಅವನು ಎಳ್ಳಷ್ಟೂ ಕರುಣೆಗೆ ಯೋಗ್ಯನಿರಲಿಲ್ಲ . ಜನರ ರೋಷ ಇಷ್ಟಕ್ಕೇ ನಿಲ್ಲಲಿಲ್ಲ . ಶತಮಾನಗಳ ದಬ್ಬಾಳಿಕೆ ನೋವಿನಿಂದ ಕುಡಿಯುತ್ತಿದ್ದ ಸಾಮಾನ್ಯ ಜನರ ಸೇಡು ಇನ್ನೂ ಅನೇಕ ಮುಸಲ್ಮಾನರನ್ನೂ ಬಲಿ ತೆಗೆದುಕೊಂಡಿತು .