Monday 20 November 2017

ಖೈಬರ್ ಪಾಸ್




ಸುಮಾರು ೮ ನೆಯ ಅಥವಾ ೯ ನೆಯ ಶತಮಾನದಲ್ಲಿ ಉತ್ತರ ಭಾರತದ ಒಂದು ಪ್ರಾಂತ್ಯದಲ್ಲಿ , ಪ್ರಾಯಶಃ ಪೃಥ್ವಿ ರಾಜ ಚೌಹಾನನ ಪೂರ್ವಜರ ರಾಜ್ಯವಿರಬಹುದು . ಅಲ್ಲಿನ ಮಂತ್ರಿಮಂಡಲ ರಾಜನೆದುರು ಒಂದು ಪ್ರಸ್ತಾಪವನ್ನು ಇಟ್ಟಿತು . ಅದೇನೆಂದರೆ ಅಫ್ಘನ್ ಪ್ರದೇಶವನ್ನು ತಾಗುವ ಪರ್ವತಗಳ ಸಾಲುಗಳ ನಡುವಿನ ಹಾದಿಯಾದ ಖೈಬರ್ ಪಾಸಿಗೆ ವಿರುದ್ಧವಾಗಿ ಒಂದು ಮಹಾಗೋಡೆಯನ್ನು ನಿರ್ಮಿಸಿ ಮಧ್ಯ ಏಷಿಯಾದ ಇಸ್ಲಾಮೀ ಧಾಳಿಕೋರರನ್ನು ತಡೆಯಬಹುದೆಂದು ಮತ್ತು ಈ ಗೋಡೆಯನ್ನು ನಿರ್ಮಿಸಲು ಪ್ರಜೆಗಳ ಮೇಲೆ 'ದ್ವಾರ ತೆರಿಗೆ' ಯನ್ನು ವಿಧಿಸಬೇಕಾಗುತ್ತದೆಂದು. ಚೀನಾದ ಗೋಡೆಯೇನೋ ಸಾವಿರಾರು ಕಿ ಮೀ ನಷ್ಟರದ್ದು ಆದರೆ ಈ ಗೋಡೆ ಕೇವಲ ಕೆಲವು ಕಿ ಮೀಗಳ ಉದ್ದನೆಯದು.

ಆದರೆ . . . ಜನರು ಈ ಯೋಜನೆಗಾಗಿ ಹೆಚ್ಚುವರಿ ತೆರಿಗೆ ಕಟ್ಟಲು ಒಪ್ಪದೆ ಪ್ರತಿಭಟಿಸಿದರು. ಆದ್ದರಿಂದ ಈ ಯೋಜನೆ ಕೈಬಿಟ್ಟಿತು.

ಕೆಲವು ವರ್ಷಗಳ ನಂತರ ಮೊಹಮ್ಮದ್ ಶಬುಕ್ತಜಿನ್ ಘಜನಿ ಇದೇ ಖೈಬರ್ ಹಾದಿಯಿಂದ ಭಾರತದೆತ್ತ ದಂಡೆತ್ತಿ ಬಂದ. ಮತ್ತಿದೇ ಮಾರ್ಗವಾಗಿ ಟನ್ನುಗಟ್ಟಲೆ ಚಿನ್ನವನ್ನು ಹೊತ್ತುಕೊಂಡು ಹೋದ. ಅಷ್ಟಲ್ಲದೇ ಇಪ್ಪತ್ತು ವರ್ಷಗಳಲ್ಲಿ ಹದಿನೇಳು ಬಾರಿ ಇದೇ ದಾರಿಯಲ್ಲಿ ನಿರಾಯಾಸವಾಗಿ ಹೋಗಿಬರುತ್ತಾ ತನ್ನ ದಂಡಯಾತ್ರೆಗಳನ್ನು ಮುಗಿಸಿದ .

ಅವನ ನಂತರ ಮೊಹಮ್ಮದ್ ಘೋರಿ, ತೈಮೂರ್ , ಬಾಬರ್, ನಾದಿರ್ ಷಾಹ್, ಅಹ್ಮದ್ ಷಾಹ್ ಪ್ರತಿಯೊಬ್ಬರೂ ಬಳಸಿದ್ದು ಇದೇ ಖೈಬರ್ ಪಾಸನ್ನು

Sunday 12 November 2017

ವಜೀರ್ ಖಾನನ ಅಂತ್ಯ





ಬಂದಾ ಬಹಾದ್ದೂರ್ ಸಾಮನಾದ ನಂತರ ಬಂದ ಸಧೂರ , ಕಪೂರಿ ನಗರಗಳನ್ನು ಅದೇ ರೀತಿ ವಶಪಡಿಸಿಕೊಂಡು ಈಗ ಸರಹಿಂದವನ್ನು ದ್ವಂಸಗೊಳಿಸಲು ಸಿದ್ಧತೆ ನಡೆಸುತ್ತಿದ್ದ . ಅದುವೇ ವಜೀರ್ ಖಾನನನ್ನು ಮಣಿಸುವುದು ಸುಲಭದ ಮಾತೇನಲ್ಲ . ಇಬ್ಬರ ಸೇನೆಯ ಬಲವೂ ಸಮಾನವಾಗಿಯೇ ಇತ್ತು . ಬಂದಾನ ಅಡಿಯಲ್ಲಿ ಇದ್ದದ್ದು 35 ಸಾವಿರ ಬಲದ ಸೇನೆ ಮತ್ತದರಲ್ಲಿ ಹನ್ನೊಂದು ಸಾವಿರ ಕಳ್ಳರ ಮತ್ತು ಡಕಾಯಿತರ ಗುಂಪೇ ಇತ್ತು . ಅವರನ್ನು ಬಿಟ್ಟರೆ ಇಪ್ಪತ್ನಾಲ್ಕು ಸಾವಿರ ಸೇನೆ ಎನ್ನಬಹುದು . ಮತ್ತು ಅಮೃತಮಥನಕ್ಕೆ ರಾಕ್ಷಸರ ಸಹಾಯವೂ ಬೇಕೆಂಬಂತೆ ಈ ಡಕಾಯಿತರ ಗುಂಪನ್ನೂ ಸೇರಿಸಿಕೊಂಡಿದ್ದ . ವಜೀರ್ ಖಾನನದ್ದು 15 ಸಾವಿರ ಬಲದ ತರಬೇತಿಯುಳ್ಳ ನಿಪುಣ ಸೇನೆಯಿತ್ತು ಮತ್ತವರ ಜೊತೆ ಐದು ಸಾವಿರ ಬಲದ ಘಾಜಿ ಪಡೆ , ಅಂದರೆ ಮುಲ್ಲಾಗಳ ಜಿಹಾದ್ ಕರೆಗೆ ಕಾಫಿರರ ಸಂಹಾರಕ್ಕೆಂದು ಬಂದ ಕಟ್ಟರ್ ಇಸ್ಲಾಮೀ ಕಟುಕರ ಸೇನೆ ! . ಖಾನನ ಸೇನಾಬಲ ಕಡಿಮೆಯಿದ್ದರೂ ಸಿಕ್ಖರಿಗಿಂದ ಸುಸಜ್ಜಿತವಾಗಿತ್ತು . ಕಡಿಮೆಯೆಂದರೆ ಎರಡು ಡಜನ್ ಫಿರಂಗಿಗಳು , ಅರ್ಧದಷ್ಟು ಸೇನೆ ಒಳ್ಳೆಯ ಕವಚಧಾರಿಗಳಾಗಿದ್ದರು ಮತ್ತು ಆನೆಗಳ ಒಂದು ಪಡೆಯೂ ಇತ್ತು . ಸಿಕ್ಖರ ಹತ್ತಿರ ಯಾವ ಫಿರಂಗಿಗಳೂ ಆನೆಗಳೊ ಇರಲಿಲ್ಲ . ಎಲ್ಲೋ ಕೆಲವಷ್ಟು ಕುದುರೆಗಳಿದ್ದವು . ಖಾನಾನೇನೋ ಅನುಕೂಲತೆಗಳು ತನ್ನೆಡೆ ಇರುವುದನ್ನು ಮನಗಂಡು ಗೆಲುವು ಖಚಿತವೇ ಎಂದು ಬೀಗುತ್ತಿದ್ದ.
ಖಾನಾನೂ ಒಬ್ಬ ನಿಪುಣ ಸೇನಾನಾಯಕನೇ . ಕೋಟೆಯ ಮೇಲಿನಿಂದಲೇ ಸೇನೆಗೆ ನಿರ್ದೇಶಿಸುತ್ತಾನೆ . ತನ್ನ ಪ್ರತೀ ಸೈನಿಕನೂ ಕರಾರುವಾಕ್ಕಾಗಿ ಸೇನಾ ಕವಾಯತ್ತನ್ನು ಮಾಡುವುದನ್ನು ನೋಡುತ್ತಾ ಹೆಮ್ಮೆ ಪಡುತ್ತಿದ್ದ . ತನ್ನ ತುಫಾಕಿಗಳನ್ನು ಒಂದು ನಿಯೋಜಿತ ಸ್ಥಳಗಳಲ್ಲಿ ಇಟ್ಟು ಒಮ್ಮೆ ಗುರಿ ಪರೀಕ್ಷೆಗಳನ್ನೂ ಮಾಡಿಸಿದ . ಬಿಲ್ಲುಗಾರರ ನಿಖರ ಗುರಿಗಳನ್ನೂ ಒಮ್ಮೆ ಪರೀಕ್ಷಿಸಿದ , ಎಲ್ಲರೂ ಒಮ್ಮೆಲೇ ಬಾಣಗಳನ್ನು ಬಿಟ್ಟರೆ ಶತ್ರುಗಳ ಮೇಲೆ ಮಳೆಸುರಿದಂತೆ ಅಲ್ಲಾಹಣ ಹತಥಿಯಾರನಂತೆ ಎರಗುತ್ತಿದ್ದವು . ಸಿಕ್ಖರಿಗೆಂತೂ ಈ ಸೇನೆಯನ್ನು ಎದುರಿಸುವುದು ಸಾಧ್ಯವೇ ಇಲ್ಲ .
ಆದರೆ ಬಂದಾ ಕೋಟೆಯನ್ನು ಮುತ್ತಿಗೆ ಹಾಕಿ ಉಸಿರುಗಟ್ಟಿಸಿ ಸೋಲಿಸುವನೆಂಬ ಸಧೂರಾದ ಪೂರ್ವಾನುಭವವನ್ನು ಮನಗಂಡು ದಾರಿ ಮಧ್ಯೆಯೇ ಸೆಣೆಸಲು ತಯಾರಿ ನಡೆಸಿದ್ದ . ಅದು ಚಪ್ಪರ್ ಚಿರಿ ಎಂಬ ಜಾಗ , ಸರಹಿಂದದಿಂದ ಹತ್ತು ಕಿ ಮೀ ದೂರ .
ಖಾನನು ತನ್ನ ತೋಪುಗಳನ್ನು ಅರ್ಧ ಚಂದ್ರಾಕಾರ ವ್ಯೋಹದಲ್ಲಿ ಇರಿಸಿ ಅದರ ಹಿಂದೆ ಬಿಲ್ಲುಗಾರರ ಮತ್ತೆ ಮ್ಯಾಚ್ ಲಾಕ್ ರೈಫಲ್ ಗಳ ಪಡೆಯನ್ನು ಬೆಂಗಾವಲಾಗಿ ಇರಿಸಿದ . ಮತ್ತವರ ಹಿಂದೆ ಒಂದು ಅಶ್ವಪಡೆ ಮೂರನೇ ರಕ್ಷಣಾ ಪಡೆಯಂತೆ ತಯಾರಾಗಿ ನಿಂತಿದ್ದವು . ಬಂದಾನಿಗೆ ಖಾನನ ಈ ಯೋಜನೆಗಳು ತಿಳಿದಿತ್ತು ಮತ್ತು ಆದಷ್ಟು ಬೇಗ ಚಪ್ಪರ್ ಚಿರಿಗೆ ಸಂಜೆ ಬಂದು ತಲುಪಿದ . ಯುದ್ಧದ ತಯಾರಿಗಾಗಿ ಸ್ವಲ್ಪ ಬೆಳಕಿನ್ನು ಬಾನಾಂಗಳದಲ್ಲಿತ್ತು . ಖಾನನ ಸೇನಾರಚನೆ ತೋಪುಗಳನ್ನೊಳಗೊಂಡಿದ್ದ ಪಡೆ ಖಾಲಿ ಮೈದಾನದ ಸಮರಕ್ಕೆ ಸೂಕ್ತವಾಗಿತ್ತು . ಬಂದಾನ ಊಹೆಯ ಪ್ರಕಾರ ಸೇನಾವ್ಯೂಹದಲ್ಲಿ ದುರ್ಬಲ ಪಡೆಯು ಮಧ್ಯದಲ್ಲಿರುತ್ತದೆ ಆದ್ದರಿಂದ ತನ್ನ ಸಮಸ್ತ ಸೇನೆ ನಡುವಿನಿಂದ ಮುನ್ನುಗ್ಗುತ್ತಾ ನಾಲ್ಕು ತೋಪುಗಳನ್ನು ಧ್ವಂಸಗೊಳಿಸುವುದು . ಈ ಕಠಿಣ ಕಾರ್ಯಕ್ಕೆ ತನ್ನ ಭಾಯಿ ಫತೇಹ್ ಸಿಂಗ್ , ಕರಮ್ ಸಿಂಗ್ , ಧರಂ ಸಿಂಗ್ ಮತ್ತು ಅಲಿ ಸಿಂಗ್ ನೇತೃತ್ವದ ಮಾಳವ ಸಿಕ್ಖರನ್ನು ನೇಮಿಸಿದ . ರಾಜ್ ಸಿಂಗನ ಮಾಜ ಸಿಕ್ಖರನ್ನು ಎಡ ಪಾರ್ಶ್ವ ಮತ್ತು ಶ್ಯಾಮ್ ಸಿಂಗರ ದೋಬ ಸಿಕ್ಖರನ್ನು ಬಲ ಪಾರ್ಶ್ವದಲ್ಲಿ ನಿಯೋಜಿಸಿದ . ಬಂದಾನು ಸೇನೆಯನ್ನು ನಿರ್ದೇಶಿಸಲು ಅನುಕೂಲವಂತೆ ಸೇನೆಯ ಎಡ ಭಾಗದಲ್ಲಿ ಇದ್ದ .
ಮೇ 22 , 1710 ರ ಮುಂಜಾನೆಯ ಸೂರ್ಯನೇ ಸುಡುತ್ತಿದ್ದ . ಆ ದಿನದ ಸಮರಕ್ಕೆ ಮುನ್ಸೂಚನೆ ಎಂಬಂತೆ . ಅದಕ್ಕೆ ಮುಂಚೆಯೇ ಬಂದಾನು ತಯಾರಾಗಿ ನಿಂತಿದ್ದ . ಸೂರ್ಯ ಸ್ವಲ್ಪ ದಿಗಂತವನ್ನೇರುತ್ತಿದ್ದಂತೆ ಉಭಯ ಸೇನೆಗಳಿಗೆ ಪರಸ್ಪರ ಸಂಪೂರ್ಣ ದರ್ಶನವಾಯಿತು . ಒಂದು ಕ್ಷಣಕಾಲ ನಿಶಬ್ದ ಮೌನ . ತೋಪುಗಳ ಅರ್ಧಚಂದ್ರಾಕೃತಿಯ ವ್ಯೋಹ ಅದರ ಹಿಂದೆ ಬಾಣಗಳನ್ನು ಹೂಡಿ ತಯಾರಾಗಿ ನಿಂತಿದ್ದ ಬಿಲ್ಲುಗಾರರು ಮತ್ತು ಟ್ರಿಗ್ಗರ್ ಒತ್ತಲು ತಯಾರಾಗಿದ್ದ ಮ್ಯಾಚ್ ಲಾಕ್ ರೈಫಲ್ ಧಾರಿಗಳನ್ನು ಬಂದಾನು ಗಮನಿಸಿದ . ಆ ಬದಿ ಒಂದು ಸುಸಜ್ಜಿತ ಪಡೆಯಿದ್ದರೆ ತನ್ನೆಡೆ ಎಲ್ಲಾ ಬಣ್ಣದ ಪೋಷಾಕು ಧರಿಸಿದ್ದ ಒಂದು ಪಡ್ಡೆಗಳ ದಂಡಿನಂತಿತ್ತು . ಆದರೂ ದೈವಿಚ್ಛೆ ಯನ್ನು ನಂಬಿದ್ದ .
ಸ್ವಲ್ಪ ಬೆಳಗೇರುತ್ತಿದ್ದಂತೆ ಸೇನೆಯಲ್ಲಿ ಮುನ್ನಡೆ ಆರಂಭಿಸಿತು . ಕುರಿಮಂದೆಯಂತೆ ಕೆಲಭಾಗದಲ್ಲಿ ಕ್ಷಿಪ್ರಗತಿಯಲ್ಲಿ ಮತ್ತೆ ಕೆಲಭಾಗದಲ್ಲಿ ಮಂದಗತಿಯಲ್ಲಿ ಸರಿಯಾದ ರಚನೆ ಶಿಸ್ತು ಮತ್ತು ತಾಲೀಮಿಲ್ಲದೆ ಮುನ್ನಡೆಯಿತು. ಹಾಗೆಯೇ ಸಾಗುತ್ತಾ ಹಠಾತ್ತನೆ ತೋಪಿನ ಘರ್ಜನೆ ಕೇಳಿಬಂತು , ಸಿಡಿತಲೆಗಳು ಒಂದರ ಮೇಲೊಂದಂತೆ ಸಿಕ್ಖರ ಮೊದಲ ಸಾಲಿನ ಸೇನೆಯನ್ನು ನಿಖರವಾಗಿ ಅಪ್ಪಳಿಸಿ ಕತ್ತರಿಸಿತು . ಅನೇಕ ತಲೆಗಳು ಕೈ ಕಾಲುಗಳು ಎರಗಿದವು . ಈ ಆಘಾತವನ್ನು ತಡೆದುಕೊಳ್ಳುವಷ್ಟರಲ್ಲಿ ಮತ್ತೊಂದು ಸುತ್ತಿನ ತುಫಾಕಿ ಧಾಳಿಯಿಂದ ಹೆದರಿ ಕೆಲವರು ಹಿನ್ನೆಡೆದರು . ಅದರಲ್ಲಿ ಹಲವಾರು ಕೇವಲ ದರೋಡೆ ಮಾಡಲೆಂದೇ ಬಂದವರು ಈಗ ರಣೋತ್ಸಾಹವಿಲ್ಲದೇ ಉಡುಗಿಹೋಗುತ್ತಿದ್ದಾರೆ . ಎಡ ಪಾರ್ಶ್ವದ ಸೇನೆಯೂ ರಣಭೂಮಿಯಿಂದ ಕಾಲ್ಕೀಳುತ್ತಿದ್ದಾರೆ . ಬಂದಾನಿಗೂ ಸೇನೆಯ ಸ್ಥಿತಿ ಕಂಡು ತಳಮಳಗೊಂಡ .
ರಾಜ್ ಸಿಂಗ್ ಮತ್ತಿನ್ನಿತರ ಸಂಗಡಿಗರು ಒಗ್ಗಟ್ಟಿನಿಂದ ಸೇನೆಯನ್ನು ಹುರಿದುಂಬಿಸಿ ಮುನ್ನೆಡೆಯಲು ಓಡಿದರು . ಇಲ್ಲದಿದ್ದರೆ ಸೇನೆಯು ಮುರಿದು ಬೀಳುವುದು ಖಚಿತ . ರಣಘೋಷವನ್ನು ಕೂಗುತ್ತಾ ಎಲ್ಲರನ್ನು ಮುನ್ನೆಡೆಸುತ್ತಾ ನಡೆದರು . ಸೇನೆಯಲ್ಲಿ ರಣೋತ್ಸಾಹ ಉಕ್ಕಿ ಯಾವ ಗುಂಡಿಗೂ ಬಾಣಗಳ ಮಳೆಗಳಿಗೂ ಲೆಕ್ಕಿಸದೆ ಶತ್ರುಗಳ ಮೇಲೆ ಕೈ ಕೈ ಹಿಡಿದು ಹೋರಾಡುವಷ್ಟು ಸನಿಹ ಬಂದರು . ಎಲ್ಲೆಡೆ ಕತ್ತಿಗಳ ಸದ್ದು ಸಪ್ಪಳ ರಕ್ತದೋಕುಳಿ .
ವಜೀರ್ ಖಾನಾನೂ ಸ್ವತಃ ಬಂದು ಹೋರಾಡುತ್ತಾ ಫತ್ತೇ ಸಿಂಗನಿಗೆ ಎದುರಾದ . ಫತ್ತೇ ಸಿಂಗನು ಸ್ವಲ್ಪವೂ ತಡಮಾಡದೇ ಅವನ ರುಂಡ ಹಾರಿಸಿದ !
ಖಾನನ ತಲೆ ಬಿದ್ದಂತೆಯೇ ಅವನ ಸೇನೆಯಲ್ಲಿ ಆತ್ಮಸ್ಥೈರ್ಯ ಕುಸಿಯಿತು .
ಆದರೆ ಸಿಕ್ಖರ ಸೇನೆಯ ರೋಷ ಯಾವ ಇಸ್ಲಾಮೀ ಸೈನಿಕನನ್ನು ಜೀವಸಹಿತ ಬಿಡಲಿಲ್ಲ . ಪ್ರತಿಯೊಬ್ಬ ಮುಸಲ್ಮಾನ ಸೈನಿಕನನ್ನು ಈ ಕಾಫಿರರ ಸೇನೆ ಕಟ್ಟಿಗೆ ಬಲಿಕೊಟ್ಟಿತು . ಮೊಘಲರ ಸಂಪೂರ್ಣ ಸೇನೆಯನ್ನು ಸಿಕ್ಖರ ಸೇನೆ ನಾಶಮಾಡಿತು .
ಸಿಕ್ಖರ ಸೇನೆಯೂ ಸಹಿತ ಅನೇಕ ಸಾವು ನೋವನ್ನು ಅನುಭವಿಸಿತು . ಇನ್ನು 10 ಕಿ ಮೀ ದೂರದ ಕೋಟೆಯನ್ನು ವಶಪಡಿಸಿಕೊಳ್ಳಲು ಮತ್ತೆರಡು ದಿನಗಳು ತಯಾರಿ ನಡೆಸಿದರು . ಸರಹಿಂದದ ಕೋಟೆಯನ್ನು ಕಬಳಿಸುವುದೂ ಸಹಿತ ಏನು ಸುಲಭದ ತುತ್ತಾಗಿರಲಿಲ್ಲ . ಕೋಟೆಯ ದ್ವಾರಗಳ ಸನಿಹದಲ್ಲೇ ಆಯಕಟ್ಟಿನ ಜಾಗಗಳಲ್ಲಿ ಬಂದೂಕು ತುಫಾಕಿಗಳನ್ನಿಟ್ಟಿದ್ದರು . ಮುತ್ತಿಗೆ ಹಾಕಿದ ಕೆಲವೇ ತಾಸಿನಲ್ಲಿ 500 ಸಿಕ್ಖರು ಹತರಾದರು. ಶ್ಯಾಮ್ ಸಿಂಗನು ಅತ್ಯುತ್ತಮ ಗುರಿಕಾರ , ಅಲಿ ಸಿಂಗನ ಮುಂದಾಳತ್ವದಲ್ಲಿ ಕೆಲವು ಬಂದೂಕಿನ ಸೈನಿಕರನ್ನು ಶ್ಯಾಮ್ ಸಿಂಗ್ ಕೊಂದು ದ್ವಾರವನ್ನು ಮುತ್ತಿಗೆ ಹಾಕುವುದರಲ್ಲಿ ಅನುವು ಮಾಡಿಕೊಟ್ಟ . ಇದರಿಂದ ತುಫಾಕಿಗಳು ನಿಶಬ್ದಃ ಗೊಂಡವು . ಕೋಟೆಯ ಬಾಗಿಲು ತೆರೆಯುತ್ತಿದ್ದಂತೆ ಪ್ರವಾಹದಂತೆ ಮುನ್ನುಗ್ಗಿದ ಜನ ಸೇನೆ ಅರಮನೆ ಒಳಗಿನ ಸರ್ವಸ್ವಾವನ್ನೂ ಲೂಟಿಮಾಡಿದರು .
ಸುಚಾನಂದನೆಂಬ ದ್ರೋಹಿಯಿದ್ದ . ಅವನೇ ವಜೀರನಿಗೆ ಸಿಕ್ಖರನ್ನು ಕೊಳ್ಳುವ ಕುಟಿಲ ಉಪಾಯಗಳನ್ನು ಕೊಡುತ್ತಿದ್ದ . ಈಗ ಉಗ್ರಾಣದ ಒಂದು ಹೂಜಿಯಡಿಗೆ ಬಚ್ಚಿಟ್ಟುಕೊಂಡಿದ್ದ . ಆದರೆ ಜನ ಪತ್ತೆ ಮಾಡಿದರು . ಅವನನ್ನು ಬೀದಿಗೆ ಎಳೆತಂದು ಎಲ್ಲರ ಸಮ್ಮುಖದಲ್ಲಿ ಚಿತ್ರಹಿಂಸೆಕೊಟ್ಟು ಕೊಂದರು . ಏಕೆಂದರೆ ಅವನು ಎಳ್ಳಷ್ಟೂ ಕರುಣೆಗೆ ಯೋಗ್ಯನಿರಲಿಲ್ಲ . ಜನರ ರೋಷ ಇಷ್ಟಕ್ಕೇ ನಿಲ್ಲಲಿಲ್ಲ . ಶತಮಾನಗಳ ದಬ್ಬಾಳಿಕೆ ನೋವಿನಿಂದ ಕುಡಿಯುತ್ತಿದ್ದ ಸಾಮಾನ್ಯ ಜನರ ಸೇಡು ಇನ್ನೂ ಅನೇಕ ಮುಸಲ್ಮಾನರನ್ನೂ ಬಲಿ ತೆಗೆದುಕೊಂಡಿತು .

Friday 20 January 2017

ಸಾಮನಾದ ಸಂಹಾರ : ಭಾಗ ೨


೧೭೦೯ ನವೆಂಬರ್ ೨೬ ರ ರಾತ್ರಿ

ಒಂದು ಬೃಹತ್ ಸೇನೆಯೊಂದಿಗೆ ಬಂದಾ ಬಹಾದ್ದೂರ್ ಅತಿ ವೇಗದಲ್ಲಿ ನಗರದ ದ್ವಾರ ಪ್ರವೇಶಿಸಿದ . ನಗರದ ದ್ವಾರ ಪಾಲಕರನ್ನು ತಲುಪುತ್ತಿದ್ದಂತೆಯೇ ಅವರನ್ನು ಬರ್ಬರವಾಗಿ ಹತ್ಯೆಗೈದು ನಗರ ಪ್ರವೇಶಿಸಿದರು . ಈ ಹಠಾತ್ತನೆ ನಡೆದ ಆಕ್ರಮಣಕ್ಕೆ ಕೇವಲ ತಮ್ಮ ರಕ್ಷಣೆಯನ್ನು ಮಾತ್ರ ಮಾಡಿಕೊಳ್ಳುತ್ತ ಮೈಮರೆತಿದ್ದ ಅಮೀರರು ಮತ್ತು ಫೌಜುದಾರರು ಒಮ್ಮೆಲೇ ಭಯಭೇತರಾದರು . ಅವರ ಬಹುತೇಕ ಪಡೆಯನ್ನು ತಮ್ಮ ಖಾಸಗಿ ರಕ್ಷಣೆಗಾಗಿ ಮಾತ್ರ ಬಳಸುತ್ತಿದ್ದರು . ಹಾಗಾಗಿ ಅವರ ಸೇನೆ ಇಪ್ಪತ್ತೆರಡು ವಿಭಾಗಗಳಲ್ಲಿ ಎಲ್ಲೆಡೆ ಚದುರಿ ಪರಿಣಾಮಕಾರಿ ರಕ್ಷಣೆಗೆ ನಾಲಾಯಕ್ ಆಗಿದ್ದವು . ಒಟ್ಟಿನಲ್ಲಿ ಎಲ್ಲಾ ಬಂದಾನ ಅನುಕೂಲಕ್ಕೇ ನಡೆಯುತ್ತಿತ್ತು . ಅಮೀರರ ಅಭೇದ್ಯ ಕೋಟೆಗಳನ್ನು ಪ್ರವೇಶದ್ವಾರಗಳಲ್ಲಿ ಮುತ್ತಿಗೆ ಹಾಕಿ ಬಂದಿಖಾನೆಗಳಾದವು . ಸಮರಕ್ಕೆ ತಕ್ಕಂತೆ ಅವರ ಸೇನೆಯನ್ನು ಚಲಿಸಲೂ ಅಸಾಧ್ಯವಾಯಿತು . ಫತ್ತೇ ಸಿಂಗನ ಯೋಜನೆ ಸಮರ್ಥವಾಗಿ ನೆರವೇರಿತು .ಶತ್ರುಗಳ ಕೈಕಟ್ಟಿತು .  ಒಮ್ಮೆ ಕೊನೇ ಬಾರಿ  ಫತ್ತೇ ಸಿಂಗ್ ಎಲ್ಲ ಹವೇಲಿಗಳು ಬಂದಿಯಾಗಿದೆಯೋ ಇಲ್ಲವೋ ಎಂದು ಗಸ್ತು ತಿರುಗಿ ಪಕ್ಕ ಮಾಡಿಕೊಂಡ . ಇನ್ನು ಅಂತಿಮ ಪ್ರಹಾರ ಕೊಡುವುದೊಂದೇ ಬಾಕಿ .

ನಂತರ ಮಿಕ್ಕ ಎಲ್ಲ ಪಡೆಗಳು ಬಂದಾ ನೇತೃತ್ವದಲ್ಲಿ ಜಲಾಲುದ್ದೀನನ ಹವೇಲಿಯ ಮೇಲೆ ಲಗ್ಗೆ ಇಟ್ಟವು . ಆ ಹವೇಲಿಯ ಮೇಲ್ಛಾವಣೆಯಿಂದ ಗುಂಡಿನ ಧಾಳಿ ಮಾಡಿದರು . ಇದರಿಂದ ಸ್ವಲ್ಪ ಘಾಸಿಯುಂಟಾಯಿತು . ಈ ಗದ್ದಲದ ಮಧ್ಯ ಒಬ್ಬ ಬಂದಾನ ಸೈನಿಕ ಗುಂಡು ತಲುಪದ ಮರೆಯಲ್ಲಿ ಒಂದು ಗೋಡೆ ಸಮೀಪದ ಬಳಸುಹಾದಿಯನ್ನು ಗಮನಿಸಿದ . ಅಲ್ಲಿ ತನ್ನ ಸಂಗಡಿಗರೊಂದಿಗೆ ಬ್ಯಾಟರಿಂಗ್ ರಾಮ್ ನನ್ನು ನುಗ್ಗಿಸಿ ಗೋಡೆ ಒಡೆದರು . ನಿರೀಕ್ಷಿತ ಸಮಯಕ್ಕಿಂತ ತುಸು ಬೇಗನೇ ಈ ಕೆಲಸ ಮುಗಿಯಿತು . ಹವೇಲಿಯ ಒಳಗೆ ಪ್ರವೇಶ ಸಿಕ್ಕಿತು .
ಅದರ ನಂತರ ಸಿಖ್ ಸೈನಿಕರಲ್ಲದೇ ಇತರ ರೈತರು ಉಳಿದೆಲ್ಲ ನಾಗರಿಕರೂ ಪ್ರವಾಹದಂತೆ ಒಳನುಗ್ಗಿದರು . ಹವೇಲಿಯ ಒಳಗಿದ್ದವರನ್ನು ಯಾವ ವಯಸ್ಸು ಲಿಂಗ ಭೇದವಿಲ್ಲದೇ ಕತ್ತಿಗೆ ಬಲಿಕೊಡಲಾಯಿತು . ಅದೆಷ್ಟೋ ವರ್ಷಗಳ ದಬ್ಬಾಳಿಕೆ ಸಾವು ನೋವಿನ ಸೇಡನ್ನು ಈಗ ತೀರಿಸಿಕೊಂಡರು . ಯಾವ ಮಟ್ಟಕ್ಕೆ ಇದು ವಿಪರೀತವಾಯ್ತೆಂದರೆ ಈ ವಿಷ ಪರಂಪರೆಯ ಮನೆಯ ಕೊನೆ ಸದಸ್ಯನೂ ಹತ್ಯೆಯಾಗುವತನಕ ಅಲ್ಲಿನ ಜನ ನೆತ್ತರು ಹರಿಸಿದರು . 
ಬಂದಾನು ಜನರ ಕ್ರೋಧಕ್ಕೆ ಹವೇಲಿಯನ್ನು ಬಿಟ್ಟು ಹೊರಬಂದ . ಒಂದಾದರೊಂದಂತೆ ಎಲ್ಲ ಹವೇಲಿಗಳು ಕುಸಿದವು ಮತ್ತು ಒಳಗಿದ್ದ ಎಲ್ಲರೂ ಬಲಿಯಾಗತೊಡಗಿದರು .

ಸೂರ್ಯಾಸ್ತವಾಗುವವೊಳಗೆ ಸಾಮನಾದ ಸಮರ ಮುಗಿಯಿತು . ಒಮ್ಮೆ ಸಂಪತ್ಭರಿತವಾಗಿದ್ದ ನಗರ ಈಗ ಪಾಳು ಬಿದ್ದಿದೆ . ಬೀದಿ ಬೀದಿಯಲ್ಲೂ ರಕ್ತದ ಹೊಳೆ ಹರಿಯುತ್ತಿದೆ.  ಸುಮಾರು ೧೦ ಸಾವಿರಕ್ಕಿಂತ ಅಧಿಕ ಜನ ಒಂದೇ ದಿನದಲ್ಲಿ ಸತ್ತರು .
ಜಲಾಲುದ್ದೀನ್ ತನ್ನ ಹವೇಲಿಯಿಂದ ತಪ್ಪಿಸಿಕೊಳ್ಳಲು ಮೆಲ್ಲನೆ ಹೊರ ನಡೆಯುತ್ತಿದ್ದ . ಫತ್ತೇ ಸಿಂಗ್ ಅವನನ್ನು ಹಿಡಿದು ಒಂದೇ ಏಟಿನಿಂದ ಅವನ ರುಂಡ ಹಾರಿಸಿದ . ತೇಗ ಬಹಾದ್ದೂರರನ್ನು ಕೊಂದ ಈ ಪಾತಕಿಯ ತಲೆಯನ್ನು ಈಟಿಯ ಮೇಲೆ ಚುಚ್ಚಿ ನಗರ ಒಂದು ಪ್ರವೇಶ ದ್ವಾರದಲ್ಲಿ ನೆಟ್ಟರು .  ಷಾಶಾಲ್ ಬೇಗ್ ಮತ್ತು ಭಾಷಲ್ ಬೇಗರಿಗೂ ಇದೇ ರೀತಿ ಗತಿ ಕಾಣಿಸಿದರು .

ಸಂಜೆಯ ಹೊತ್ತಿನಲ್ಲಿ ಧಗಧಗನೆ ಉರಿಯುತ್ತಿದ್ದ ನಗರ ಚಳಿಗೆ ಒಳ್ಳೆ ಬಿಸಿ ಮುಟ್ಟಿಸುತ್ತಿತ್ತು . ಮಟ್ಟುಳಿದ ಕಲ್ಮಶಗಳನ್ನು ಅಗ್ನಿ ಸುಡುತ್ತಾ ವಾಯುಮಂಡಲದಲ್ಲಿ ಒಂದು ತೀಕ್ಷ್ಣ ದುರ್ಗಂಧ ಸೂಸುತ್ತಿತ್ತು .

ಜಲಾಲುದ್ದೀನನ ಆಸ್ಥಾನವಾಗಿದ್ದ ಕೋಣೆಯಲ್ಲಿ ಬಂದಾನು ಬಿಡಾರ ಹೂಡಿದ್ದ . ಬಂದಾನು ಶಾಂತನಾಗಿ ಚಿಂತಾಮಗ್ನನಾಗಿ ಕುಳಿತಿದ್ದ . ಅವನನ್ನು ಸಮಾಧಾನಿಸಲೆಂದು ಭುಜದ ಮೇಲೆ ಭಾಯಿ ಬಿನೋದ್ ಕೈ ಇಟ್ಟ ಮತ್ತು ಬಳಿ ಕುಳಿತ . ಬಂದಾನಲ್ಲಿ ಒಂದು ಸಣ್ಣ ದುಃಖದ ನಗೆ ಬಂತು . “ ಬಾ ಭಾಯಿ , ಇವತ್ತಿನ ದಿನ ತುಂಬಾ ಶ್ರಮದಾಯಕವಾಗಿತ್ತು . ಸ್ವಲ್ಪ ವಿಶ್ರಾಂತಿ ತೆಗೆದುಕೋ  ”. ಬಂದಾನು ಆಲೋಚನೆ ಮಾಡುತ್ತಾ – “ ಗುರುಗಳ ಆಜ್ಞೆ ಯಾಗಿದ್ದು ಉದಾತ್ತ ಗುಣದಿಂದ ವಿಜಯ ಸಾಧಿಸಬೇಕೆಂದು ಅದಕ್ಕಾಗಿ ಈ ರಕ್ತಪಾತವಿಲ್ಲದೇ ಬೇರೆ ಯಾವ ಮಾರ್ಗವಿರುತ್ತಿತ್ತೋ . . .  ”. ಬಂದಾನ ಮಾತಿನ ಸ್ವರದಲ್ಲಿ ಸಾಮನಾದ ವಿಜಯ ನಗಣ್ಯದಂತೆ ತೋರಿತು . ಬಿನೋದನು ನುಡಿದ – “ ನಮಗೂ ಕೂಡ ರಕ್ತಪಾತವಿಲ್ಲದೆಯೇ ಸಾಧಿಸಬೇಕೆಂದಿತ್ತು , ಆದರೆ ಬೇರೆ ದಾರಿಯಿಲ್ಲ . ಇಲ್ಲಿನ ಜನ ಶತಮಾನಗಳ ಸಾವು ನೋವನ್ನು ಅನುಭವಿಸಿದ್ದಾರೆ ಅದರ ಕ್ರೋಧವು ಇವರನ್ನು ಕಾನೂನನ್ನು ಕೈಗೆ ತೆಗೆದುಕೊಳ್ಳುವಂತೆ ಮಾಡಿದೆ . ಈ ಮೋಘಲರು ತಾವು ಮಾಡಿದ್ದನ್ನೇ ಅನುಭವಿಸಿದರಷ್ಟೇ . ಅದಕ್ಕಾಗಿ ನಾವು ಜನರನ್ನು ದೂಷಿಸಲಾಗುವುದಿಲ್ಲ . ” . ಬಂದಾನಿಗೆ ಸಮಾಧಾನಕರವೆನಿಸಲಿಲ್ಲ – “ ಆದರೂ ಈ ರೀತಿ ಸಂಪೂರ್ಣ ಸೇಡು ತೀರಿಸಿಕೊಳ್ಳುವ ಅವಶ್ಯಕತೆಯಿರಲಿಲ್ಲ . ನಾವು ನಮ್ಮ ಜನಕ್ಕೆ ಶತ್ರುಗಳನ್ನು ಕ್ಷಮಿಸುವಂತಹ ಗುರುಗಳ ಸಂದೇಶ ತಿಳಿಸಬಹುದಿತ್ತು  ”. ಆಗ ಬಿನೋದ – “ ಯಾವ ನೈತಿಕ ಭೋದನೆಯು ಶೋಷಿತ ಮನಸ್ಸಿಗೆ ಸಾಂತ್ವನ ನೀಡಲು ಸಾಧ್ಯ ? ಗುರುಗಳ ಉಪದೇಶ ಏನೂ ವ್ಯತ್ಯಾಸ ತರದು . ಹಾಗೇನಾದರೂ ಇವರಿಗೆ ಆ ಹೊತ್ತಿನಲ್ಲಿ ನಾವು ಬೋಧನೆ ಮಾಡಿದರೆ ಅವರ ಆಕ್ರೋಶ ನಮ್ಮ ವಿರುದ್ಧವೇ ತಿರುಗಿ ಬಿದ್ದೀತು . ಭಾಯಿ ಬಂದಾ ಸುಮ್ಮನೆ ಭಾವನೆಗಳಿಗೆ ಮರುಳಾಗಿ ದಣಿಯಬೇಡ . ನಿನಗೆ ತಿಳಿದಂತೆ ಪ್ರಪಂಚವು ದೈವೇಚ್ಛೆಯಂತೆ ನಡೆಯುತ್ತದೆ . ಆ ಅಮೀರರಿಗೆ ತಮ್ಮ ಪಾಪದ ಫಲವೇ ಲಭಿಸಿದೆ . ಅವರ ಪಾಪಕ್ಕಿಂತ ಜನರ ತಪ್ಪೇನೂ ದೊಡ್ಡದಲ್ಲ . ಇದಕ್ಕೆ ನೀನು ಕಾರಣವೆಂದು ಭಾವಿಸಬೇಡ  ”.

ಸಾಮನಾದ ಸಮರದಲ್ಲಿ ಬಂದಾನ ಸೈನಿಕರು ಅಪಾರ ಸಂಪತ್ತನ್ನು ಕೊಳ್ಳೆಹೊಡೆದರು . ಅದರಲ್ಲಿ ಒಂದು ದೊಡ್ಡ ಮೊತ್ತ ಮುಂದಿನ ಸಂಗ್ರಾಮಕ್ಕೆ ತೆಗೆದಿಟ್ಟು ಉಳಿದನ್ನು ಅವರವರ ಮಧ್ಯೆ ಸಮಾನವಾಗಿ ಹಂಚಿಕೊಂಡರು .
ಸಾಮನಾದ ಸಮರ ಬಂದಾ ಬಹಾದ್ದೂರನ ಚೊಚ್ಚಲ ಜಯ . ಹದಿನೆಂಟನೇ ಶತಮಾನದ ಆದಿಯಲ್ಲಿ ಅವಸಾನದ ಹಾದಿಯಲ್ಲಿದ್ದ ಮೊಘಲ್ ಸಾಮ್ರಾಜ್ಯಕ್ಕೆ ಉತ್ತರದಲ್ಲಿ ಬಂದಾ ಮೊದಲ ಕೊಡಲಿ ಪೆಟ್ಟು ಕೊಟ್ಟ . ಇನ್ನೂ ಮುಂದಿನ ವಿಜಯಯಾತ್ರೆಯಿಂದ ಪಂಜಾಬನ್ನು ಮುಕ್ತಗೊಳಿಸಿ ಸಿಖ್ ಸಾಮ್ರಾಜ್ಯವನ್ನೂ ಕಟ್ಟಿದ .


ಸಂಭವಾಮಿ ಯುಗೇ ಯುಗೇ ಎಂಬ ಗೀತೆಯ ವಾಣಿಯನ್ನು ಪುನಃ ನಿರೂಪಿಸಿದ ಬಂದಾ .

Tuesday 17 January 2017

ಸಾಮನಾದ ಸಂಹಾರ



ಸಾಮಾನಾ, ಪಂಜಾಬಿನ ಪಟಿಯಾಲದಿಂದ ಎಂಟು ಕಿ ಮೀ ನೈರುತ್ಯಕ್ಕೆ ಬರುವ ಪ್ರದೇಶ . ಈ ಸ್ಥಳ ಉತ್ಕಷ್ಟ ಮಟ್ಟದ ಹತ್ತಿ ಬೆಳೆಗೆ ಪ್ರಸಿದ್ಧ . ದೂರದ ಯುರೋಪಿನಲ್ಲಿಯೂ ಜಗತ್ಪ್ರಸಿದ್ಧಿ . ಹಾಗಾಗಿ ಈ ಪ್ರದೇಶ ಸಂಪತ್ಭರಿತ ಮತ್ತು ಶಕ್ತಿಶಾಲಿ ನಗರಿ . ಆದರೆ ಮೊಘಲ್ ಸಾಮ್ರಾಜ್ಯದ  ವರ್ಷಗಟ್ಟಲೆ ದುರಾಡಳಿತದಿಂದ ರೈತರು ಇಲ್ಲಿನ ಫೌಜದಾರರಿಂದ ಮತ್ತು ಸಾಮಂತರಿಂದ ಬೇಸತ್ತಿದ್ದರು . ಸಾಮಾನ್ಯರು ಈ ದುರಾಡಳಿತವನ್ನು ದ್ವೇಶಿಸುತ್ತಿದ್ದರೂ ಅವರ ವೇದನೆ ಕೇಳುವವರು ಯಾರೂ ಇರಲಿಲ್ಲ . ಎಲ್ಲಾದರೂ ಸೊಲ್ಲೆತ್ತುವ ಧೈರ್ಯ ಮಾಡಿದರೆ ಅದಕ್ಕೆ ತಕ್ಕ ಕ್ರೌರ್ಯದ ಉತ್ತರ ಕಾದಿರುತ್ತಿತ್ತು . ಅಲ್ಲಿನ ಉಸ್ತುವಾರಿಯನ್ನು ಒಬ್ಬ ಫೌಜುದಾರನ ಅಡಿಯಲ್ಲಿ ಹೆಚ್ಚೆಂದರೆ ೨೨ ಅಮೀರರು ನೋಡಿಕೊಳ್ಳುತ್ತಿದ್ದರು . ಆ ಅಮೀರರು ಮೋಘಲರು  ಅಥವಾ ಸಯ್ಯದರಾಗಿರುತ್ತಿದ್ದರು . ಪ್ರತಿಯೊಬ್ಬರು ಒಂದೊಂದು ಭದ್ರಕೋಟೆಯೊಳಗಿನ ಐಷಾರಾಮಿ ಅರಮನೆಯೊಳಗಿರುತ್ತಿದ್ದರು . ಅಲ್ಲಿಂದಿಲ್ಲಿಗೆ ಓಡಾಡಲು ಪಲ್ಲಕ್ಕಿಯನ್ನು ಬಳಸುತ್ತಿದ್ದು ನಿಶ್ಚಿಂತೆಯಿಂದ ಮೈಮರೆತಿದ್ದರು . ಇದರಿಂದಾಗಿ ಆಡಳಿತ ಅಷ್ಟೇ ಹದಗೆಟ್ಟು ಜನರ ಪಾಡು ಕೇಳುವವರಿಲ್ಲ .
ಮತ್ತೆ ಈ ಅಮೀರರಿಗೆ ಎಷ್ಟೋ ವರ್ಷಗಳಿಂದ ಬಾಹ್ಯ ಧಾಳಿಗಳ ಅನುಭವವೂ ಇರಲಿಲ್ಲ .

ಆದರೆ ಈಗ ಬಂದಾ ಬಂದಿದ್ದಾನೆ .

ಬಂದಾನು ಅಲ್ಲಿಂದ ಇಪ್ಪತ್ತು ಕಿ ಮೀ ದೂರದಲ್ಲಿ ಬಿಡಾರ ಹೂಡಿ ತನ್ನ ಸಂಗಡಿಗರೊಂದಿಗೆ ಈ ಪಟ್ಟಣದ ಮೇಲೆ ಧಾಳಿ ಮಾಡಲು ಸಂಚು ರೂಪಿಸುತ್ತಿದ್ದಾನೆ . ಅವನಿಗೆ ಇತ್ತೀಚಿಗಷ್ಟೇ ಸಿಕ್ಕ ಮಾಹಿತಿ ಪ್ರಕಾರ ಅಲ್ಲಿನ ಫೌಜುದಾರ ಸಿಖ್ಖರ ಧಾಳಿಯ ಸಂಭಾವನೆಯನ್ನು ಸಂಪೂರ್ಣ ಅಳ್ಳಗೆಳೆದಿದ್ದಾನಂತೆ . ಫೌಜುದಾರನ ಪ್ರಕಾರ ಎಲ್ಲಾದರೂ ಸಿಖ್ಖರು ಹೊರ ಗೋಡೆಯನ್ನು ಒಡೆದು ಒಳ ಬರಲು ಸಫಲರಾದರೂ ಒಳಗಿನ ಅಭೇದ್ಯ ಕೋಟೆಯಲ್ಲಿ ಸಿಕ್ಕಿ ಕೊಲ್ಲಲ್ಪಡುತ್ತಾರೆಂದು .
ಬಂದಾನು ಫತೇ ಸಿಂಗನನ್ನು ಸೇನಾಧಿಪತಿಯನ್ನಾಗಿ ನೇಮಿಸಿದ . ಫತೇನ ಯೋಜನೆ ಪ್ರಕಾರ ಒಂದಿಷ್ಟು ಸಣ್ಣ ಸಣ್ಣ ತುಕಡಿಗಳಲ್ಲಿ ಸೇನೆಯನ್ನು ವಿಭಜಿಸಿ ಪ್ರತಿಯೊಂದು ತುಕಡಿಗೆ ಒಬ್ಬೊಬ್ಬ ನಾಯಕನನ್ನು ನೇಮಿಸಿದ . ಪ್ರತಿಯೊಂದು ತುಕಡಿ ಆ ಅಮೀರರ ಪ್ರತಿಯೊಂದು ಹವೇಲಿಯನ್ನು ಹೊರಗಿನಿಂದ ಬಂಧಿಸಬೇಕೆಂದು .  ಅದರಲ್ಲಿ ಸಯ್ಯದ್ ಜಲಾಳುದ್ದೀನನ ಭದ್ರಕೋಟೆ ದೊಡ್ಡದಾಗಿತ್ತು . ಅದರ ಮೇಲ್ಛಾವಣೆಯನ್ನು ವಶಪಡಿಸಿಕೊಂಡರೆ ಸುತ್ತಮುತ್ತಲಿನ ಹವೇಲಿಗಳನ್ನು ನಿಯಂತ್ರಿಸಬಹುದು . ಹೀಗೆಂದು ಒಂದು ರಣನೀತಿ ಮಾಡಿದ .

ಫೌಜುದಾರನ ಅರಮನೆಯಲ್ಲೂ ಅಮೀರರು ಒಂದು ಯುದ್ಧದ ಬೈಠಕ್ ನಡೆಯುತ್ತಿತ್ತು . ಸಿಖ್ಖರು ಧಾಳಿಗೆ ಸಜ್ಜಾಗಿದ್ದಾರೆಂದು ವದಂತಿ ಹಬ್ಬಿದೆಯಲ್ಲಾ   ಎಂದು ಫೌಜುದಾರನೇ ಚರ್ಚೆಯನ್ನು ಮುಂದಿಟ್ಟ .
“ ನಾವೇನಿಲ್ಲಿ ವದಂತಿಗಳನ್ನು ಚರ್ಚೆ ಮಾಡಲು ಕೂತಿದ್ದೇವೆಯೇ ? ” ಮಧ್ಯದಲ್ಲಿ ಸಯ್ಯದ್ ಶಮ್ಷುದ್ದೀನ್ ಬಾಯ್ತೆಗೆದ . “ ಯಾವಾಗಳಿಂದಲೋ ಈ ಮಾತು ಚಾಲ್ತಿಯಲ್ಲಿದೆ ಆದರೆ ಇದಕ್ಕೆ ಯಾವ ಆಧಾರವೂ ಇಲ್ಲ  ”. ಎಲ್ಲ ಹುಬ್ಬೇರಿಸಿ ಬಾಯ್ಬಿಟ್ಟು ನೋಡುತ್ತಿದ್ದರು . “ ಮಾಡಲಿಕ್ಕೆ ಬೇರೇನೂ ಕೆಲಸವಿಲ್ಲದಿದ್ದರೆ ನಾನು ಹೊರನಡೆಯುತ್ತೇನೆ ” ಎಂದು ಆರ್ಭಟಿಸಿದ . ಆದರೆ ಮೋಘಲರ ಪ್ರತಿನಿಧಿಯಾದ ಫೌಜುದಾರನ ಎದುರು ಕಾಲ್ಕೇಳಲು ಅಷ್ಟು ಧೈರ್ಯ ಬರದೇ ತೆಪ್ಪಗೆ ಕುಳಿತ .
ಶಮ್ಷುದ್ದೀನನ ಉದ್ದಟತನವನ್ನು ಅಳ್ಳಗೆಳೆಯುತ್ತಾ ಫೌಜುದಾರ ಮುಂದುವರೆದ “ ಸಿಖ್ಖರೇನೋ ನಮಗೆ ಮುಳ್ಳಾಗಿದ್ದಾರೆಂದು ನಮಗೆಲ್ಲಾ ಗೊತ್ತಿದೆ. ಆದರೆ ಹೆಚ್ಚೆಂದರೆ ಅವರೇನು ಮಾಡಿಯಾರು ? ಅವರದ್ದು ಪೋಲಿ ಪುಂಡರ ಆಶಿಸ್ತಿನ ಸೇನೆಯಷ್ಟೇ ಅವರು ನಮ್ಮ ಶಿಸ್ತಿನ ಸಶಸ್ತ್ರ ಸೇನೆಯನ್ನು ಹೇಗೆ ಎದುರಿಸಿಯಾರು ? ಆದರೆ ನನ್ನ ಚಿಂತೆಯೆಂದರೆ ರೈತರು ಮತ್ತು ಕೂಲಿ ಕಾರ್ಮಿಕರೂ ನಮ್ಮ ಮೇಲಿನ ಸೇಡಿಗಾಗಿ ಅವರ ಜೊತೆ ಸೇರಿದ್ದಾರೆಂದು ಅಧಿಕ ಸಂಖ್ಯೆಯಲ್ಲಿ ಸೇರಿದ್ದಾರಂತೆ  ” . ಫೌಜುದಾರನ ಆ ಕೊನೆಯ ಮಾತನ್ನು ಕೇಳಿ ಎಲ್ಲ ಗೊಳ್ಳೆಂದು ನಕ್ಕಿದರು . “ ಆದೆಲ್ಲಿಂದ ಕೇಳಿದ್ಯೋ ಈ ಬಡಬಗ್ಗರೆಲ್ಲ ನಮಗೆ ಸಡ್ಡು ಹೊಡೆಯುತ್ತಾರೆಂದು ... ?  “ ಎಂದ ಶಮ್ಷುದ್ದೀನ್ . “ ಎಲ್ಲಾದರೂ ಒಬ್ಬ ಎದುರು ನಿಲ್ಲುವ ದುಸ್ಸಾಹಸ ಮಾಡಿದರೂ ನಮ್ಮ ಒಂದು ಹೊಡೆತಕ್ಕೆ ಕಂಗೆಟ್ಟು ತತ್ಕ್ಷಣವೇ ಕಾಲಿಗೆ ಬೀಳುತ್ತಾರೆ  ”. ಇದಕ್ಕೆ ಎಲ್ಲ ಅಮೀರರು ತಲೆಯಾಡಿಸಿದರು . ಅವರಿಗೆ ಎಳ್ಳಷ್ಟೂ ಸಿಖ್ಖರ ಭಯವಿರಲಿಲ್ಲ . ಆದರೆ ಒಬ್ಬ ಅಮೀರ ಜಲಾಲುದ್ದೀನ್ “ ಶತ್ರುವನ್ನು ಕಡೆಗಾಣಿಸುವುದು ಅಷ್ಟು ಸಮಂಜಸವಲ್ಲ , ಫೌಜುದಾರ ಏನು ಹೇಳುತ್ತಾರೋ ಒಮ್ಮೆ ಕೇಳೋಣ  ” ಎಂದ . ( ಈ ಜಲಾಲುದ್ದೀನ್ ಗುರು ತೇಗ್ ಬಹಾದ್ದೂರರ ಹತ್ಯೆಗೆ ಮುಖ್ಯ ರುವಾರಿಯಾಗಿದ್ದ  ). ಅದಕ್ಕೆ ಶಮ್ಷುದ್ದೀನ್ “ ನಿನಗೆ (ಜಲಾಲುದ್ದೀನ್) ತೇಗ್ ಬಹಾದ್ದೂರರ ಸಾವು ನಿನ್ನ ತಲೆ ಕೆಡಿಸಿದೆ , ನೆರಳಿಲ್ಲದ ಜಾಗ ಕಂಡರೂ ಭೂತ ಭೂತ ಎಂದು ಭಯ ಬೀಳುತ್ತೀ ” ಎಂದು ಲೇವಡಿ ಮಾಡಿದ . ವಾಸ್ತವದಲ್ಲಿ ಜಲಾಲುದ್ದೀನ್ ಪಂಜಾಬಿಗೆ ಬಂದಿದ್ದ ಸಿದ್ದು ಕೇಳಿದಾಗಲಿಂದ  ಜಲಾಲುದ್ದೀನನ ಬುದ್ದಿ ಕೆಟ್ಟಿತ್ತು . ಶಮ್ಷುದ್ದೀನನು ಮತ್ತೆ ಅವನ ಕಾಲೆಳೆಯುತ್ತಾ – “ ನಿನಗೆ ಬೇಕಿದ್ದರೆ ನನ್ನ ಕೆಲವು ಪ್ರಯೋಜನಕ್ಕೆ ಬಾರದ ಅಬಸ್ಸೇನಿಯಾದ ಯೋಧರನ್ನು ಕಳಿಸುತ್ತೇನೆ , ಹೇಳಿಕೇಳಿ ನಿನ್ನ ಹವೇಲಿ ಇರುವ ನಮ್ಮೆಲ್ಲರ ಹವೇಲಿಗಳಿಗಿಂತ ಸಧೃಢ ವಾಗಿದೆ ... ಆದರೂ ...  ”.  ಫೌಜುದಾರನಿಗೆ ಶಮ್ಷುದ್ದೀನನ ಮಾತು ಕಿರಿಕಿರಿಯುಂಟಾಯಿತು . ಹಾಗೆ ಸ್ವಲ್ಪ ಹೊತ್ತು ಇವರೆಲ್ಲರ ಹರಟೆ ಮುಂದುವರೆಯುತ್ತಿತ್ತು .


ಹರಟೆ ಹೊಡೆಯುತ್ತಿದ್ದ ಈ ಬೆಪ್ಪುಗಳಿಗೆ ಬಂದಾ ಮತ್ತು ಅವನ ಸಂಗಡಿಗರು ಮರಣ ಶಾಸನ ಬರೆದಿಟ್ಟಾಗಿತ್ತು . ಅವರ ಪ್ರಮುಖ ಗುರಿ ತೇಗ ಬಹಾದ್ದೂರರನ್ನು ಕೊಂದ ಸಯ್ಯದ್ ಜಲಾಲುದ್ದೀನ ಮತ್ತು ಗುರು ಗೋವಿಂದ ಸಿಂಗರ ಕಿರಿ ಮಕ್ಕಳಾದ ಜೋರಾವರ್ ಸಿಂಗ್ ಮತ್ತು ಫತ್ತೇ ಸಿಂಗ್ ರನ್ನು ಕೊಂದ ಷಾಶಲ್ ಬೇಗ್ ಮತ್ತು ಭಾಷಲ್ ಬೇಗ್ ಮತ್ತು ಒಳಿದ ಎಲ್ಲ ಪ್ರೇತಾತ್ಮಗಳನ್ನು ಯಮಾಸದನಕ್ಕೆ ಅಟ್ಟುವುದು .