Sunday 31 July 2016

ಶತ್ರುವನ್ನೂ ಮೆಚ್ಚಿದ ಪರಾಕ್ರಮ – ಮುರಾರಬಾಜಿ ದೇಶಪಾಂಡೆ





ಬೇಸಿಗೆಯ ಸ್ನಿಗ್ಧ ನೀಲ ಗಗನದಡಿಯಲ್ಲಿ ಮೊಘಲ್ ತುಫಾಕಿಗಳು ಆರ್ಭಟಿಸುತ್ತಿದ್ದವು . ಅವುಗಳ ಅಬ್ಬರಕ್ಕೆ ವಾಯುಮಂಡಲ ಅತಿ ದೂರದವರೆಗೂ ಕಂಪಿಸುತಿದ್ದವು . ಅವುಗಳ ಗುರಿ ಪುರಂದರಗಢದತ್ತ ಸಿಡಿಯುತ್ತಿತ್ತು . ಸುಡುಬಿಸಿಲಿನಲ್ಲಿ ತುಫಾಕಿಗಳನ್ನು ಸಿಡಿಸುತ್ತಾ ಮೊಘಲ್ ಸೈನಿಕರು ಬೆವರಿಳಿಸ್ಸುತ್ತಿದ್ದರು . 

ಇದನ್ನೆಲ್ಲಾ ದೂರದ ಸುರಕ್ಷತೆಯಲ್ಲಿ ಅರಾಮಾಗಿ ಕುದುರೆಯೇರಿ ದಿಲೇರ್ ಖಾನ್ ಗಮನಿಸುತ್ತಿದ್ದ . ಮೈಮೇಲೆ ಸರಪಳಿ ಕವಚತೊಟ್ಟು ತಲೆಮೇಲೆ ವಿಶಿಷ್ಟ ಕಪ್ಪು ಪೇಟ ಧರಿಸಿದ್ದ . ಅವನು ನೋಡುತ್ತಿದ್ದಂತೆ ಯಾವ ಸಿಡಿತಲೆಗಳೂ ಕೋಟೆಯ ಗೋಡೆಗೆ ಬೀಳಬೇಕಾದ ಜಾಗಕ್ಕೆ ಬೀಳದೇ ಕೇವಲ ಬೆಟ್ಟಗಳ ಪದತಲಕ್ಕೆ ಬೀಳುತ್ತಿದ್ದವಷ್ಟೇ . ಬೆವರಿನ ಮುಖವನ್ನು ಉಜ್ಜಿಕೊಳ್ಳುತ್ತಾ ದಿಲೇರ್ ಖಾನನಿಗೆ ಈ ಸುಡುಬಿಸಿಲಿನ ತಾಪದಲ್ಲಿ ಎಲ್ಲೋ ದೂರದ ಮೈಲಿಗಲ್ಲನ್ನು ಗೆಲ್ಲುವ ಉತ್ಸಾಹವೇನೂ ಕದಲಿಲ್ಲ . “ ಈ ಶಿವಾಜಿಯ ದುಸ್ಸಾಹಸ ಮೊಘಲ್ ಬಾದಷಾಹನನ್ನೂ ಎಳೆತರುವಂತೆ ಮಾಡಿದೆ . . . ”. ಮೊದಲಿ ಶಾಯಿಸ್ತೇ ಖಾನನ ಡೇರೆಗೆ ನುಗ್ಗಿ ಅವನ ಬೆರಳು ಕತ್ತರಿಸಿದ್ದಲ್ಲದೇ ನಂತರ ಗಾಯಕ್ಕೆ ಉಪ್ಪು ಸುರಿಯುವಂತೆ ಸೂರತ್ತನ್ನು ಸೂರೆಹೊಡೆದ . ಇದೀಗ ಸಮಸ್ತ ಮೊಘಲ್ ಸಾಮ್ರಾಜ್ಯಕ್ಕೆ ಸವಾಲಾಗಿ ನಿಂತಿದ್ದಾನೆ . ಈ ಖಾಫಿರನಿಗೆ ನರಕಕ್ಕೆ ದಾರಿ ತೋರಿಸಲೇಬೆಕೆಂದು ಶಾಪ ಹಾಕುತ್ತಿದ್ದ . 

ಶಿವಾಜಿ ಮಹಾರಾಜರ ಧೈರ್ಯ ಮೊಘಲ್ ಸಾಮ್ರಾಜ್ಯವನ್ನೇ ನಡುಗಿಸಿತ್ತು . ಇವನನ್ನು ಹತ್ತಿಕ್ಕಲೆಂದೇ ಮಿರ್ಜಾ ರಾಜ ಜಯಸಿಂಹ ಮತ್ತು ದಿಲೇರ್ ಖಾನನನ್ನು ದಕ್ಷಿಣಕ್ಕೆ ಐವತ್ತು ಸಾವಿರಕ್ಕಿಂತ ಅಧಿಕ ಸೇನೆಯೊಂದಿಗೆ ಔರಂಗಾಜೇಬನು ಅಟ್ಟಿದ್ದ . ದಿಲೇರ ಖಾನನೋ ಅಸ್ಸಾಮಿನ ದಂಡಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ ರಣೋತ್ಸಾಹದಿಂದ ಸಹ್ಯಾದ್ರಿಗೆ ಬಂದಿದ್ದ . ವಜ್ರಗಢವನ್ನು ಕಬಳಿಸಿ ತುಫಾಕಿಯೊಂದಿಗೆ ಆರ್ಭಟಿಸುತ್ತಾ ಪುರಂದರಗಢಕ್ಕೆ ಬಂದ . ತನ್ನ ಅಸಂಖ್ಯ ಸೇನೆಯಿದ್ದರೂ ಆ ಭದ್ರಕೋಟೆಯನ್ನು ಗೆಲ್ಲಲು ಕಠಿಣವಾಗಿತ್ತು . 

ಭದ್ರಕೋಟೆಯ ಮೇಲೆ ಧಾಳಿ ಮಾಡಲೆಂದು ಎರಡು ದೊಡ್ಡ ಗೋಪುರಾಕೃತಿಗಳನ್ನು ನಿರ್ಮಿಸಿದ್ದರು . ಅವುಗಳು ಆಗಲೇ ಕೋಟೆಯ ಅರ್ಧದಾರಿಯಲ್ಲಿದ್ದವು . ಒಮ್ಮೆ ಎರಡು ಬೆಟ್ಟಗಳ ನಡುವನ್ನು ತಕ್ಕೆಗೆ ತೆಗೆದುಕೊಂಡರೆ ಸಲೀಸಾಗಿ ಕೋಟೆಯ ಹೃದಯ ಭಾಗಕ್ಕೆ ಧಾಳಿಮಾಡಬಹುದು . 

ಮುರಾರಬಾಜಿ ದೇಶಪಾಂಡೆ ಕೋಟೆಯ ದಂತಾಕೃತಿಯ ಮೂಲಕ ಆಗಮಿಸುತ್ತಿದ್ದ ಮೊಘಲ್ ಸೇನೆಯತ್ತ ಸಂಯಮದ ದೃಷ್ಟಿಯಿತ್ತು ನೋಡುತ್ತಿದ್ದ . ಸೂರ್ಯನ ತಾಪಕ್ಕೆ ಬಾಡಿಹೋದ ಮೊಗದಲ್ಲೂ ಅವನ ಕಂಗಳಲ್ಲಿ ಉತ್ಸಾಹ ಚಿಮ್ಮುತ್ತಿತ್ತು . ಕೋಟೆಯ ಸುತ್ತಾ ಗಸ್ತು ತಿರುಗುತ್ತಾ ಸೈನಿಕರಿಗೆ ಪ್ರೋತ್ಸಾಹ ನೀಡುತ್ತಿದ್ದ . ಸೇನಾ ತುಕಡಿಗಳನ್ನು ಒಂದೊಂದಾಗೆ ಕೋಟೆಯ ಹೊರಬಿಡುತ್ತಾ ಆ ಗೋಪುರಗಳನ್ನು ದ್ವಂಸಗೊಳಿಸಲು ಕಳಿಸುತ್ತಿದ್ದ . ಮರಾಠಾ ಯೋಧರು ಅಪರಿಮಿತ ಧೈರ್ಯ ತೋರಿದ್ದರೂ ಸಂಖ್ಯಾಬಲದ ಕೊರತೆಯಿಂದಾಗಿ ಅನೇಕರು ಹತರಾಗುತ್ತಿದ್ದರು . 

ಶಿವಾಜಿ ಮಹಾರಾಜರಿಗೆ ಸೇನಾಬಲವರ್ಧನೆಯನ್ನೂ ಕಳಿಸಲು ಸಾಧ್ಯವಾಗುತ್ತಿಲ್ಲ . ದಿಲೇರ ಖಾನನ ಸೇನೆ ಅತಿಹೆಚ್ಚಿದ್ದನ್ನು ಮುರಾರಿಬಾಜಿ ನೋಡಿದ . ಆದರೂ ಕಡೆಯ ಸೈನಿಕನತನಕ ಕಾದಾಡುವೆ ಎಂದು ನಿಶ್ಚಯಿಸಿದ .
ಈಗ ದಿಲೇರ ಖಾನನ ಸಮರ ಗೋಪುರಗಳು ಸನಿಹ ಬಂದವು . ಮತ್ತವನ ಮೊದಲ ತುಫಾಕಿಯ ಹೊಡೆತ ಭದ್ರಕೋಟೆಯನ್ನು ಅಪ್ಪಳಿಸಿತು . ಸಿಡಿದ ರಭಸಕ್ಕೆ ಗೋಡೆ ಛಿದ್ರಗೊಂಡು ಧೂಳಿನಿಂದ ಆವರಿಸಿದವು . ಹೀಗೆ ನಿಖರವಾದ ಧಾಳಿಗಳು ಮುಂದುವರೆದವು . 

ಮುರಾರಬಾಜಿಗೆ ತಾನೊಂದು ಸೋಲುವ ಯುಧ್ಧಕ್ಕಾಗಿ ಹೋರಾಡುತ್ತಿದ್ದೇನೆಂದು ಗೊತ್ತಿದ್ದರೂ ಒಬ್ಬ ವೀರ ಮರಾಠಾನಾದ್ದರಿಂದ ಶರಣಾಗುವ ಪ್ರಶ್ಣೆಯೇ ಇಲ್ಲ . ಈಗ ಮೊಘಲ್  ಸೇನೆ ಕೋಟೆಗೆ ತಾಗಿಕೊಂಡೇ ಡೇರೆ ಹೂಡಿದವು . ಮುರಾರಬಾಜಿ ಅವನ ಸೇನೆಯನ್ನು ಗಮನಿಸಿ ಸುಮಾರು ಒಬ್ಬ ಮರಾಠಾ ಯೋಧನಿಗೆ ಇಪ್ಪತ್ತು ಮೊಘಲ್ ಸೈನಿಕರಿದ್ದಾರೆಂದು ಅಂದಾಜು ಮಾಡಿದ . 

ಮುರಾರಬಾಜಿ ಕೋಟೆಯಿಂದಿಳಿದು ಒಂದು ತ್ವರಿತವಾಗಿ ಸೇನಾ ಬೈಠಕ್ ಕರೆದ . “ ಹೀಗೆಯೇ ಮುಂದುವರೆದರೆ ನಾವೆಲ್ಲಾ ಕೊಲ್ಲಲ್ಪಡುತ್ತೇವೆ ಮತ್ತು ದಿಲೇರ ಖಾನನಿಗೆ ಕೋಟೆಯೊಳಗೆ ಸುಲಭ ಪ್ರವೇಶ . . . ! ”. “ ಮತ್ತು ಮೊಘಲರೊಂದಿಗೆ ಸಂಧಾನ ? . . . ಅದು ನನ್ನಿಂದಾಗದು . . . ತಲೆಯಾದರು ಕೊಟ್ಟೇನೋ ಆದರೆ ಶರಣಾಗತಿಯಿಲ್ಲ . . . ” . ಅವನ ಆರ್ಭಟಿಸುತ್ತಿದ್ದ ಧ್ವನಿಯನ್ನು ಸೈನಿಕರು ಗಮನವಿಟ್ಟು ಆಲಿಸುತ್ತಿದ್ದರು . “ ಅಧಿಕ ಸೇನಾ ನೆರವು ಬರುತ್ತದೋ ಇಲ್ಲವೋ ನಾಕಾಣೆ , ನಮ್ಮ ಇಡೀ ಸ್ವರಾಜ್ಯಕ್ಕೆ ಬೆಂಕಿ ಹತ್ತಿದೆ ಆದ್ದರಿಂದ ನಮ್ಮ ಸೇನೆ ಎಲ್ಲೆಡೆ ಇರಲು ಸಾಧ್ಯವಿಲ್ಲ  ” . ಅವನ ಕಂಗಳನಲ್ಲಿ ಅಗ್ನಿ ಜ್ವಲಿಸುತ್ತಿತ್ತು . ಎಲ್ಲರೆಡೆ ನೋಡುತ್ತಾ “ ಸದ್ಯದ ನಮ್ಮ ಕರ್ತವ್ಯ ನಮ್ಮ ಕೋಟೆಯನ್ನು ರಕ್ಷಿಸಿ ಕೇಸರೀ ಧ್ವಜವನ್ನು ಎತ್ತಿಹಿಡಿಯುವುದು . . . ”. “ ಕಡೆ ಉಸಿರಿನ ತನಕ ಹೋರಾಡುತ್ತೇವೆ  ” ಎಂಬ ಘರ್ಜನೆ ಸೇನೆಯಲ್ಲಿ ಮೂಡಿತು .
ಮುರಾರಬಾಜಿ ಮುಗುಳ್ನಗುತ್ತಾ ತನ್ನ ಯೋಧರಮೇಲೆ ಹೆಮ್ಮೆಪಟ್ಟ .

ತನ್ನ ಎಡಗೈಯಲ್ಲಿನ ಗುರಾಣಿಯನ್ನು ಕೆಡವಿ ತನ್ನ ಮತ್ತೊಂದು ಬೆನ್ನಿಗೆ ಸಿಗಿಸಿಕೊಂಡಿದ್ದ ಖಡ್ಗವನ್ನು ಹಿಡಿದ . ಎರಡು ಖಡ್ಗವನ್ನು ಹಿಡಿದಿದ್ದ ಈಗ ಎರಡು ಬಲಶಾಲಿ ದಂತಗಳನ್ನು ಹೊಂದಿದ್ದ ಶಕ್ತಿಶಾಲಿ ಆನೆಯಂತೆ ಕಂಡ . “ ಒಂದೇ ನಾನು ಮಡಿಯಿತ್ತೇನೆ ಅಲ್ಲದೇ ದಿಲೇರ್ ಖಾನನ ರುಂಡವನ್ನು ರಾಜಗಢಕ್ಕೆ ಕಳಿಸುತ್ತೇನೆ  ” ಎಂದು ಘರ್ಜಿಸಿದ .
ಸೇನೆಯಲ್ಲಿ “ ಹರ ಹರ ಮಹಾದೇವ್  ” ಎಂಬ ಘೋಷಣೆ ಕೇಳಿಬಂದಿತು .

ಮುರಾರಬಾಜಿ ಮತ್ತವನ ಯೋಧರು ಕೋಟೆಯಿಂದಿಳಿದು ಹೊರಬಂದು ನೇರ ದಿಲೇರ ಖಾನನ ಡೇರೆಯೆಡೆ ನುಗ್ಗಿದರು . ದಾರಿಯುದ್ದಕ್ಕೆ ಬಂದ ಪಠಾಣ ಮತ್ತು ರಾಜಪೂತ ಯೋಧರನ್ನು ಕಚಕಚನೆ ಕತ್ತರಿಸುತ್ತಾ ಸಿಡಿಲ ಪ್ರವಾಹದಂತೆ ಮುನ್ನುಗ್ಗಿದರು . ಮುರಾರಬಾಜಿ ತನ್ನೆರಡು ಕತ್ತಿಯನ್ನು ಅದೆಂಥಾ ಚಾಕು ಚಕ್ಯತೆಯಿಂದ ಚಲಾಯಿಸುತ್ತಿದ್ದನೆಂದರೆ ಯಾವನಾದರೂ ಮೂರ್ಖ ಸನಿಹ ಬರಲು ದುಸ್ಸಾಹಸ ಮಾಡಿದರೆ ಒಂದೇ ಏಟಿನಲ್ಲಿ ಕತ್ತರಿಸಿಹೋಗುತ್ತಿದ್ದವು . ಮೊಘಲರ ಬೃಹತ್ ಸೇನೆಯೊಂದಿಗೆ ತನ್ನ ಯೋಧರು ಹತರಾಗುತ್ತಿದ್ದರೂ ಮುರಾರಬಾಜಿ ಎದೆಗುಂದದೇ ಹೆಬ್ಬುಲಿಯಂತೆ ಕಾದಾಡುತ್ತಲೇ ಇದ್ದ . ಅವನ ಕತ್ತಿಗಳ ಒಂದು ವೃತಾಕಾರದ ಅಂತರದಲ್ಲಿ ಯಾರೊಬ್ಬರಿಗೂ ಹತಿರ ಬರಲು ಆಗುತ್ತಿರಲಿಲ್ಲ .
ದಿಲೇರ್ ಖಾನನು ದೂರದಲ್ಲಿ ಅನೆಯ ಮೇಲೆ ಕುಳಿತು ಮುರಾರಬಾಜಿಯ ರಣತಾಂಡವವನ್ನು ಗಮನಿಸುತ್ತಿದ್ದ . “ ಅದೆಷ್ಟು ಚನ್ನಾಗಿ ಹೋರಾಡುತ್ತಿದ್ದಾನಲ್ಲಾ ಈ ಖಾಫಿರ ! ಇವನನ್ನೆಲಾದ್ದರೂ ನಮ್ಮೆಡೆ ಎಳೆದುಕೊಂಡರೆ ಬಾದಷಾಹನಿಗೆ ಒಬ್ಬ ಒಳ್ಳೆ ಆಸ್ತಿಯಾದಹಾಗೆ . ಒಂದು ಒಳ್ಳೆ ಮನಸಬದಾರಿ ಪಟ್ಟ ಕೊಟ್ಟು ಸಿವಾಜಿಯಿಂದ ಸೆಳೆಯೋಣ ” ಎಂದು ಯೋಚಿಸಿದ . ತನ್ನ ಸೇವಕನಿಗೆ ಕಹಳೆಯೂದಿಸಿ ಸಂದಾನಕ್ಕಾಗೆ ಯುದ್ಧವಿರಾಮಕ್ಕೆ ಹೇಳಿದ . 

ಸೇನೆಯನ್ನು ಹಿಂಪಡೆದು ದಿಲೇರ್ ಖಾನ್ ನಿಧಾನವಾಗಿ ಅವನತ್ತ ಆನೆಯೊಂದಿಗೆ ನಡೆದ . ಅವನತ್ತ ಕೂಗಿದ – “ ನೀನು ಚನ್ನಾಗಿಯೇ ಹೋರಾಡಿದೆ . ನಿನ್ನಂಥಹ ಕತ್ತಿವರಸೆ ನಾನೆಂದೂ ಕಂಡಿಲ್ಲ  ” ಎಂದು ಪ್ರಶಂಸಿಸಿದ . ಮುರಾರಬಾಜಿ ಈ ಮಾತು ತನ್ನ ಪರಮಶತ್ರುವಿನ ಬಾಯಿಯಿಂದಲೇ ಬಂದಿದ್ದಾಗಿ ಕತ್ತೆತ್ತಿ ನೋಡಿದ . ಪ್ರತಿಯುತ್ತರ ನೀಡಲು ಮನಸಿಲ್ಲ . ಮತ್ತೆ ದಿಲೇರ್ ಖಾನ್ ಮುಂದುವರೆದ – “ ನಿನ್ನ ಈ ಬಹಾದ್ದೂರತನ ಸೋಲು ಮತ್ತು ಸಾವಿನಲ್ಲಿ ಕೊನೆಗೊಳ್ಳುತ್ತದೆ . ಮೂರ್ಖನಾಗದೆ ನಮ್ಮೆಡೆ ಬಾ . ನಿನಗೆ ಬಾದಷಾಹನಿಂದ ಒಳ್ಳೆಯ ಮನಸಬ್ದಾರಿ ಕೊಡಿಸಿ ನಿನ್ನ ಶೂರತನಕ್ಕೆ ಒಳ್ಳೆಯ ಮನ್ನಣೆ  ಕೊಡಿಸುತ್ತೇನೆ . . . ”.

ಮುರಾರಬಾಜಿ ತನ್ನ ಕೆಂಗಣ್ಣಿನಿಂದ ಮತ್ತವನ ಕುಂಕುಮಲೇಪಿತ ಲಲಾಟದಿಂದ  ಭಯಂಕರನಂತೆ ಕಂಡ . ವಿಶ್ವಾಸಭರಿತ ಧ್ವನಿಯಲ್ಲಿ ಉತ್ತರವಿತ್ತ  - “ ನಾನೊಂದು ತತ್ವಕ್ಕಾಗಿ ಹೋರಾಡುತ್ತಿದ್ದೇನೆ ಅದುವೇ ಸ್ವರಾಜ್ಯ ಅದರಿಂದ ನಾನು ಮರ್ಯಾದೆ ಮತ್ತು ಗೌರವದಿಂದ ಬದುಕಬೇಕೆಂದಿದ್ದೇನೆ . ಇವೆರಡನ್ನೂ ಕಳೆದುಕೊಂಡು ನಾನು ಶಿವಾಜಿಯ ವಿರುದ್ಧ ನಿಂತು ಔರಂಗಾಜೇಬನಿಗೆ ಬೆನ್ನಾಗಲಾರೆ ”. ಎಂದು ಭಾರವಾಗಿ ಉಸಿರಾಡುತ್ತಾ ದಿಲೇರ್ ಖಾನನೆದುರು ದುರುಗುಟ್ಟಿದ .

ನಂತರ ಹಿಂತಿರುಗಲು ಸರಿದ . ಅವನು ಹಿಂದೆ ತಿರುಗುತ್ತಿದ್ದಂತೆ ದಿಲೇರ ಖಾನ್ ತನ್ನ ಬಿಲ್ಲನ್ನು ಹಿಡಿದು ಬಾಣ ಹೂಡಿ ಎಳೆದು ಬಿಟ್ಟ . ಇದರ ನಡುವೆ ಮರಾಠಾ ಯೋಧರು ಸೂಚಿಸುತ್ತಿದ್ದಂತೆಯೇ ಅನಾಹುತ ನಡೆದು ಹೋಯಿತು . ಬಿಟ್ಟ ಬಾಣ ಮುರಾರಬಾಜಿಯ ಕಂಠ ಸೀಳಿತು .

ದಿಲೇರ್ ಖಾನ್ ನಿಧಾನವಾಗಿ ಅವನತ್ತ ಸಮೀಪಿಸಿದ . ಅವನೊಂದಿಗೆ ಇನ್ನಷ್ಟು ಸೈನಿಕರು ಮುಂದೆ ಬಂದರು . ಆದರೆ ಮೊಘಲ್ ಸೈನಿಕರು ಸ್ವಲ್ಪ ಹಿಂಜರಿದರು . ದಿಲೇರ್ ಖಾನ್ ಅವನ ಮೃತ ಶರೀರವನ್ನು ಅಭಿಮಾನದ ದೃಷ್ಟಿ ಬೀರಿದ. ಮತ್ತವನ ಪುರಂದರಗಢದ ವಿಜಯವನ್ನೂ ಸಾಧಿಸಿದ .

Source : "Brahmaputa" by Aneesh Gokhale

Sunday 24 July 2016

ಶಿವಾಜಿ ಮಹಾರಾಜರ ಕಮ್ಯಾಂಡೋ ಆಪರೇಷನ್





ಶತಮಾನಗಳಿಂದ ಯಾರೂ ಕನಸಿನಲ್ಲೂ ಯೋಚಿಸದ್ದ ಸ್ವರಾಜ್ಯ ಶಿವಾಜಿ ಮಹಾರಾಜರು ಸ್ಥಾಪಿಸಿ ಕೆಲವೇ ವರ್ಷಗಳಾಗಿದ್ದವಷ್ಟೇ . ಎದುರಿಸಿದ್ದ ಗಂಡಾಂತರಗಳು ಒಂದೋ ಎರಡೋ . ಅದೆಷ್ಟೋ ವೀರಾಧಿವೀರರು ರಕ್ತ ಹರಿಸಿದ್ದರು . ಬೇಕಿದ್ದರೆ ಆದಿಲ್ ಷಾಹನ ಕೈಯಡಿ ಸೇನಾಧಿಕಾರಿಯಾಗಿದ್ದು ವೈಭವೀಕೃತ ಜೀವನ ಶಿವಾಜಿಯವರಾಗಿರುತ್ತಿತ್ತು . ಆದರೆ ಸ್ವಾಭಿಮಾನೀ ದೇಶಭಕ್ತ ಶಿವಾಜಿ ಬಾಲ್ಯದಿಂದಲೇ ಸ್ವರಾಜ್ಯ ಸ್ಥಾಪನೆಗೆ ಕಂಕಣಬದ್ಧರಾಗಿದ್ದು ಸದಾ ಕಂಟಕದ ಹಾದಿಯನ್ನೇ ಸವೆಯುತ್ತಿದ್ದರು . ಪನ್ನಾಳಹಢದಿಂದ ವಿಶಾಲಗಢಕ್ಕೆ ಪರಾರಿಯಾಗಿದ್ದ ಆ ಕರಾಳ ರಾತ್ರಿಯಲ್ಲಿ ಬಾಜಿಪ್ರಭುವಿನ ಬಲಿದಾನ . ಕೇವಲ ಮುನ್ನೂರು ಯೋಧರಿಂದ ಮೂರು ಸಾವಿರ ಮೊಘಲ್ ಯೋಧರನ್ನು ತಡೆದ ನೆನಪು . ಸಿದ್ಧಿ ಜೌಹರ್ ಮತ್ತು ಅಫ್ಜಲ್ ಖಾನರನ್ನು ಎದುರಿಸಿದ್ದ ಎಲ್ಲಾ ಅಗಾಧ ಸನ್ನಿವೇಶಗಳು ಈಗ ರಾಜಗಢದ ಕೋಟೆಯಲ್ಲಿ ಶತಪಥ ಹಾಕುತ್ತಾ ಹೆಜ್ಜೆಯೊಂದಿಗೆ ಹಾಗೇ ಸ್ಮೃತಿ ಪಟಲದಲ್ಲಿ ಸುಳಿದಾಡುತ್ತಿದ್ದವು . ಮುಗಿದುಹೋದ ಘಟನಾವಳಿಗಳಾದವೋ ನೆನಪುಗಳಾದವು ಆದರೆ ಈಗ ವಾಸ್ತವದಲ್ಲಿ ಮತ್ತೊಂದು ದೊಡ್ಡ ಗಂಡಾಂತರ ಎದುರು ಬಂದು ನಿಂತಿತ್ತು .
ಔರಂಗಾಜೇಬ ತನ್ನ ಸೋದರ ಮಾವನೇ ಆಗಿದ್ದ ನಿಪುಣ ಸೇನಾನಿ ಶಾಯಿಸ್ತೇ ಖಾನನನ್ನು ಒಂದು ಲಕ್ಷ ಸೇನೆಯೊಂದಿಗೆ ಶಿವಾಜಿಯ ಸ್ವರಾಜ್ಯವನ್ನು ಸದೆಬಡಿಯಲು ಕಳಿಸಿದ್ದ. ಅವನೊಂದಿಗೆ ಜಸ್ವಂತ್ ಸಿಂಗ್ ಮತ್ತು ದಾವುದ್ ಖಾನ್ ರೆಂಬ ಸರದಾರರೂ ಇದ್ದರು . ಶಾಯಿಸ್ತೇ ಖಾನ್ ಬಂಗಾಲದ ಸುಬೇದಾರನಾಗಿದ್ದ ಮತ್ತು ಬರುವಾಗ ದಾರಿಯುದ್ದಕ್ಕೂ ಹಾಹಾಕಾರ ಎಬ್ಬಿಸಿಕೊಂಡೇ ಬಂದಿದ್ದ . ಈಗ ಶಿವಾಜಿಯ ಬಾಲ್ಯ ಕಾಲದ ವಾಸಸ್ತಾನವಾಗಿದ್ದ ಲಾಲ ಮಹಲಿನಲ್ಲಿ ತನ್ನ ಬೃಹತ್ ಸೇನೆಯೊಂದಿಗೆ ಬೀಡು ಬಿಟ್ಟಿದ್ದ . ಈ ಕಂಟಕವನ್ನು ನಿವಾರಿಸುವುದು ಹೇಗೆ ಅನ್ನುವುದು ಶಿವಾಜಿ ಮಹಾರಾಜರಿಗೆ ದೊಡ್ಡ ತಲೆನೋವಾಗಿತ್ತು .  ದೊಡ್ಡ ಸೇನೆಯನ್ನು ಎದುರಿಸುವುದು ಸಾಧ್ಯವಿಲ್ಲ , ಬದಲಾಗಿ ನೇರವಾಗಿ ಶಾಯಿಸ್ತೇ ಖಾನನ ಡೇರೆಯೊಳಗೇ ನುಗ್ಗಿ ಅವನ ರುಂಡ ಹಾರಿಸುವುದೆಂದು ಯೋಜಿಸಿದರು .
ಗೂಢಚಾರರನ್ನು ಅಪಾಯಕ್ಕೆ ಒಡ್ಡಿ ಎಷ್ಟೋ ತಿಂಗಳುಗಳ ಮಾಹಿತಿಗಳನ್ನು ಪಡೆದು ಲಾಲ್ ಮಹಲಿನ ಮೇಲೆ ಹಲ್ಲೆ ಮಾಡಲು ಅದೇ ದಿನ ಯೋಜಿಸಿದ್ದರು . ಕತ್ತಿಹಿಡಿದು ತನ್ನ ದುರ್ಗದಿಂದ ಕೆಳಗಿಳಿದು ಬಂದರು . ಆಗ ಸಂಧ್ಯಾ ಸೂರ್ಯ ಪ್ರಕಾಶಿಸುತ್ತಿದ್ದ . ಕತ್ತಿಯನ್ನು ಸೇವಕನಿಗೆ ಒಪ್ಪಿಸಿ ಮಂಡಿಯೂರಿ ದೇವೀ ಪದ್ಮಾವತಿಗೆ ನಮಸ್ಕರಿಸಿದರು .
ಅಲ್ಲೇ ತಾಯಿ ಜೀಜಾಮಾತೆಯೂ ಇದ್ದರು . ಅವರ ಕಂಗಳಲ್ಲಿ ಮಗನ ಮೇಲೆ ಇದ್ದ ಕಾಳಜಿ ಗೋಚರಿಸುತ್ತಿತ್ತು . ಈ ಕಾರ್ಯ ಎಲ್ಲಾದರೂ ವಿಫಲವಾದರೆ ಸರ್ವನಾಶ ನಿಃಶ್ಚಿತ . ಮಗ ತಾಯಿಯ ಪಾದಪದ್ಮವನ್ನು ಸ್ಪರ್ಷಿಸಿ ಆಶೀರ್ವಾದ ಪಡೆದ . ಜೆಧೆ , ಚೀಮಾಜಿ ದೇಶಪಾಂಡೆ ಮತ್ತು ನೇತಾಜಿ ಪಾಲಕರ್ ಎಲ್ಲಾ ಬಂದು ಸೇರಿದರು .
ಪದ್ಮಾವತಿ ಭದ್ರಕೋಟೆ ಎಂಬ ಹೆಸರಿನ ಈ ಸೇನಾ ತುಕಡಿ ಮಂದಿರದಿಂದ ಹೊರಬಂದಿತು . ಮತ್ತು ಶ್ರೀಘ್ರದಲ್ಲೇ ಕತ್ತಲ ಮರೆಯಲ್ಲಿ ಕೋಟೆಯಿಂದಿಳಿದರು .


ನೆತಾಜಿ ಪಾಲಕರ್ – “ ಶಾಯಿಸ್ತೇ ಖಾನನ ಸೇನಾ ಬಿಡಾರ ಲಾಲ್ ಮಹಲಿನ ಸುತ್ತ ಬೀಡು ಬಿಟ್ಟಿದೆ . ಅವನನ್ನು ಕೊಂದ ನಂತರ ಸಿಂಹಗಢಕ್ಕೆ ಪಲಾಯನ ಮಾಡಬೇಕು ” ಎಂದು ತನ್ನ ಸಿಪಾಯಿಗಳಿಗೆ ನಿರ್ದೇಶಿಸಿದ . “ ಶಹಭಾಷ್ ನೇತಾಜಿ ” ಎಂದು ಶಿವಾಜಿ ಅಭಿನಂದಿಸಿದ . ಅಂದಹಾಗೆ ನೇತಾಜಿ ಶಿವಾಜಿಯ ಬಲಗೈಯಲ್ಲವೇ . ಅವನ ಅಶ್ವದಳದ ಸಾಮರ್ಥ್ಯ ಅದ್ವಿತೀಯ . ಶಿವಾಜಿ ಕತ್ತಲೆಯ ಹಸಿರು  ಹಬ್ಬಿದ ಪುಣೆಯ ಹಾದಿಯನ್ನು ಗಮನಿಸಿದರು . ಒಂದು ಲಕ್ಷ ಮೊಘಲ್ ಸೇನೆಯೊಂದಿಗೆ ನೇರಾನೇರಾ ಸೆಣಸಾಡುವುದೆಂದರೆ ಆತ್ಮಹತ್ಯೆಯೇ ಸರಿ . ಅದಕ್ಕಾಗಿ ಅತ್ಯಂತ ವಿಶ್ವಾಸನೀಯ ಸರದಾರರನ್ನು ಸೇರಿಸಿದ್ದ ಒಂದು ಸಣ್ಣ ಪಡೆಯೊಂದಿಗೆ ಅದರ ಹೃದಯಕ್ಕೇ ಆಘಾತ ನೀಡಿದರೆ ಆ ಸಾಮ್ರಾಜ್ಯವನ್ನೇ ನಡುಗಿಸಿಬಿಡಬಹುದು ಎಂಬ ಯೋಚನೆ .

ದೂರದ ಲಾಲ ಮಹಲಿನಲ್ಲಿ ಆಗ ರಮಜಾನಿನ ರಾತ್ರಿ. ಗಢತ್ತಾಗಿ ಇಫ್ತಾರ ಭೋಜನ ಉಂಡು ಶಾಯಿಸ್ತೇ ಖಾನ್ ಮತ್ತವನ ಎಲ್ಲ ಸಂಗಡಿಗರು ವಿಲಾಸಿಗರಂತೆ ಬಿದ್ದಿದ್ದರು . ದೊಡ್ಡ ದೊಡ್ಡ ಕೋಣೆಗಳ ಮಧ್ಯೆ ಬೃಹತ್ ಪರದೆಗಳ ನೆಟ್ಟಿದ್ದ ಕಾರಣ ಆ ಕೋಣೆಗಳು ಸುಲಭವಾಗಿ ಗೋಚರಿಸುತ್ತಿರಲಿಲ್ಲ .

ಹೊರಗಡೆಯಿಂದ  ಶಿವಾಜಿ , ಚೀಮಾಜಿ ಮತ್ತು ಬಾಬಾಜಿ ಜೆಧೆ ಭೂತಗಳಂತೆ ಅರಮನೆಯನ್ನು ಸಮೀಪಿಸಿದರು . ಕತ್ತಲೆಯ ಮರೆಯ ರಾತ್ರಿ ನಿಃಶ್ಯಬ್ಧತೆಯಲ್ಲಿ ಸದ್ದು ಮಾಡದೇ ಮುನ್ನಡೆಯುತ್ತಿದ್ದರು. ಕ್ರಿಮಿ ಕೀಟಗಳು ರವ ರವನೆ ಸದ್ದು ಮಾಡುತ್ತಿದ್ದವು . ಮರಾಠಾ ಸರದಾರರು ಮತ್ತಿನ್ನು ಇಪ್ಪತ್ತು ಮಾವಳಿ ಯೋಧರು ಶಿವಾಜಿಯ ಮುಂದಾಳತ್ವದಲ್ಲಿ ಅರಮನೆಯ ಹಿಂಬಾಗದಿಂದ ಪ್ರವೇಶಿಸಲು ತಗ್ಗಿ ಬಗ್ಗಿ ಮುಂದೆ ಸಾಗಿದರು . ಏಕೆಂದರೆ ಆ ಹಿಂಭಾಗದಲ್ಲಿ ಹೆಚ್ಚು ಪಹರೆಯಿರುವುದಿಲ್ಲವೆಂದು ಮೊದಲೇ ಗೊತ್ತಿತ್ತು . ಅಲ್ಲಿ ಕೇವಲ ಒಬ್ಬ ಪಹರೆ ಕಾಯಿತ್ತಿದ್ದ  ಮತ್ತು ಅವನ ಗಸ್ತು ತಿರುಗುವಿಕೆಯನ್ನು ಚೀಮಾಜಿ ಸೂಕ್ಷ್ಮವಾಗಿ ಗಮನಿಸುತ್ತಾ ಮುನ್ನೆಡೆಯಲು ಸೂಚನೆ ನೀಡಿತ್ತಿದ್ದ . ಆ ಕಾವಲುಗಾರ ಕಿಟಕಿಯನ್ನು ಹಾದು ಹೋಗುತ್ತಿದ್ದಂತೆಯೇ ಚೀಮಾಜಿ ಸಿಪಾಯಿಗಳಿಗೆ ಸನ್ನೆ ಮಾಡಿದ . ಎಲ್ಲರೂ ಚಕ್ಕನೆ ಮಹಡಿಯನ್ನು ಏರಿದರು . ಆಗ ಚೀಮಾಜಿ ಒಬ್ಬ ಸೈನಿಕನಿಗೆ ಥಟ್ಟನೆ ನಿಲ್ಲಲು ಸೂಚಿಸಿದ . ಮತ್ತೊಂದು ಸುತ್ತಿನ ಗಸ್ತಿಗಾಗಿ ಬರುತ್ತಿದ್ದ ಪಹರೆದಾರನ ಮೇಲೆ ಚಂಗನೆ ಎರಗಿ ಅವನ ಬಾಯಿಯನ್ನು ವಸ್ತ್ರದಿಂದ ಬಿಗಿದು ಚೂರಿಯಿಂದ ಅವನ್ ಕಂಠ ಸೀಳಿದ .

ಆಗ ಶಿವಾಜಿ – “ ಶಹಭಾಷ್ ಚೀಮಾಜಿ , ಈಗ ಗುಪ್ತಚರರು ಹೇಳಿದಂತೆ ಅಡುಗೆ ಕೋಣೆಯಿಂದ ಒಳ ನುಗ್ಗೋಣ  ”. ಶಿವಾಜಿ ಕಿಟಕಿಯಿಂದ ಒಳಪ್ರವೇಶಿಸಲು ದಾರಿ ತೋರಿಸಿದರು . ಅಡುಗೆ ಕೋಣೆಯಲ್ಲೊಂದಿಷ್ಟು ಅಡುಗೆ ಭಟರು ಇಫ್ತಾರ್ ಭೋಜನದ ನಂತರ ನಿದ್ದೆ ಹೊಡೆಯುತ್ತಿದ್ದರು . ಶಿವಾಜಿ ತನ್ನ ಹನ್ನೆರೆಡು ಯೋಧರಿಗೆ ತಣ್ಣನೆ ಆದೇಶಿಸಿದರು . ಸದ್ದು ಮಾಡದೆ ಎಲ್ಲರನ್ನು  ಚಿರನಿದ್ದೆ ತಳ್ಳಲೆಂದು . ಎಲ್ಲರ ಗಂಟಲು ಸೀಳಿ ಅವರೆಲ್ಲರನ್ನು ರಕ್ತದ ಮಡುವಿನಲ್ಲಿ  ಮಲಗಿಸಿದರು . ಒಂದು ಹಂತ ಮುಗಿಯಿತೆಂದು ನಿಟ್ಟುಸಿರಿಟ್ಟರು . ಸನಿಹದಲ್ಲೇ ಶಾಯಿಸ್ತೇ ಖಾನನ ಜನಾನಾ ಪ್ರವೇಶಿಸುವ ಬಾಗಿಲು ತೋರುತ್ತಿತ್ತು . ಸಿಪಾಯಿಗಳೊಡನೆ ಮುನ್ನಡೆದರು . ಆ ಬಾಗಿಲೇನೋ ಮುಚ್ಚಿತ್ತು . ಕೇವಲ ಒಂದು ಪಂಜಿನ ಮಂದ ಬೆಳಕು ಆವರಿಸಿತ್ತು .
ಆದರೆ ಆ ಬಾಗಿಲನ್ನು ಇಟ್ಟಿಗೆ ಮತ್ತು ಮಣ್ಣಿನಿಂದ ಮುಚ್ಚಿದ್ದರು . ಒಡೆದು ಮುಂದುವರೆಯುವುದೇನೂ ಕಷ್ಟವಲ್ಲ ಆದರೆ ಸದ್ದಾಗಿ ಯೋಜನೆ ವಿಫಲವಾಗುವುದೋ ಎನ್ನುವುದೊಂದೇ ಎಚ್ಚರದಿಂದಿದ್ದರು . ಈಗ ಅತ್ಯಂತ ಜಾಗರೂಕತೆಯಿಂದ ಇಟ್ಟಿಗೆಗಳನ್ನು ತೆಗೆಯಲಾರಂಭಿಸಿದರು .
ಆ ಬದಿಯ ಪಹರೆಗಾರನಿಗೆ ಗೋಡೆಯಾಚೆ ಏನೋ ಶಬ್ದ ಕೇಳಿತು . ಆದರೆ ಏನೋ ಭ್ರಮೆ ಅಥವಾ ಅಡುಗೆ ಮನೆ ಹೆಗ್ಗಣವಿರಬಹುದೆಂದು ಕಡೆಗಣಿಸಿದ . ಪಾಪ ! ಅವನಿಗೇನು ಗೊತ್ತಿತ್ತು ಅದು ಸಹ್ಯಾದ್ರಿ ಬೆಟ್ಟದ ಹುಲಿಯೆಂದು .

ಆ ಮಂದ ಬೆಳಕಿನಲ್ಲಿ ಇಟ್ಟಿಗೆಯನ್ನು ಸರಿಸುತ್ತಾ ಸುಮಾರು ಮೂರಡಿಯ ಕಂಡಿ ತೋಡಾಗಿತ್ತು . ಒಳಗಡೆಯ ಜನಾನಾಸ ಪರದೆಗಳು ತೋರುತ್ತಿದ್ದವು . ಅದತಕ್ಷಣ ಅದರೊಳಗೆ ಮುನ್ನಡೆದು ಶಿವಾಜಿ ಒಂದು ಕಂಬದ ಹಿಂದೆ ಅವಿತು ನಿಂತರು . ಎಲ್ಲಿರಬಹುದು ಆ ಶಾಯಿಸ್ತೇ ಖಾನ್ ಎಂದು ಎಣಿಸುತ್ತಿದ್ದರು .
ಆಗ ಕೊಂಚ ಹೆಜ್ಜೆ ಸಪ್ಪಳ ಕೇಳಿಬಂದು ಪಹರೆದಾರ “ ಹುಜೂರ್ ! ಹುಜೂರ್ .... ಯಾರೋ ಒಳ ನುಗ್ಗಿದ್ದಾರೆ  ” ಎಂದು ಬೊಬ್ಬೆ ಹಾಕಿದ . ಖಾನನ ಸೈನಿಕರು ಕತ್ತಿಯನ್ನು ಒರೆಯಿಂದ ಬಿಚ್ಚಿ ಬರುತ್ತಿದ್ದಂತೆಯೇ ಮರಾಠಾ ಯೋಧರು ಒಬ್ಬೊಬ್ಬರಂತೆ ಕಾವಲುಗಾರರನ್ನು ಕತ್ತರಿಸುತ್ತಿದ್ದರು . ಅವರ ಖಡ್ಗ ಪ್ರಹಾರಗಳು ನಿಖರವಾಗಿ ಖಾನನ ಸೈನಿಕರ ತಲೆ ಬೀಳಿಸುತ್ತಿತ್ತು .
ಶಿವಾಜಿ ಮತ್ತವರ ಸರದಾರರು ಪರದೆಗಳನ್ನು ಹರಿಯುತ್ತಾ ಶಾಯಿಸ್ತೆ ಖಾನನಿಗೆ ಅರಸುತ್ತಿದ್ದರು . ಅಷ್ಟರಲ್ಲಿ ಖಾನನ ಮಗನಾಗಿದ್ದ ಅಬ್ದುಲ್ ಫತೇಹ್ ಖಾನ್ ಒಂದಿಷ್ಟು ಯೋಧರೋಡನೆ ಒಳಬಂದ . ಆ ದೈತ್ಯಾಕಾರದ ರಾಕ್ಷಸ ಎರಡೂ ಕೈಗಳಲ್ಲಿ ಕತ್ತಿಹಿಡಿದಿದ್ದ . ಅವನನ್ನು ಹೊಡೆಯಲು ಮರಾಠಾ ಯೋಧರು ಮುನ್ನುಗ್ಗಿದರಾದರೂ ಅವನ ಮಾರಣಾಂತಿಕ ಹಲ್ಲೆಗೆ ಮೂವರು ಸತ್ತರು . ಆಗ ಆದ ಕೋಲಾಹಲದ ಅವಕಾಶ ಪಡೆದು ಶಿವಾಜಿ ಅಬ್ದುಲನಿಂದ ತಪ್ಪಿಸಿಕೊಂಡು ಅವನ ಬಲಬದಿಯ ದ್ವಾರ ಪ್ರವೇಶಿಸಿದ . ಹಿಂದಿನಿಂದ “ ಹರ ಹರ ಮಹಾದೇವ್ ” ಎಂದು ಘೋಷಣೆ ಕೂಗುತ್ತಾ ಜೆಧೆ ನಿರ್ದಯವಾಗಿ ಶತ್ರು ಸೇನೆಯನ್ನು ಕತ್ತರಿಸುತ್ತಿದ್ದ . ಮತ್ತೊಬ್ಬ ಮರಾಠಾ ಯೋಧ ಅಬ್ದುಲನ ಎದೆಗೆ ಕತ್ತಿಯನ್ನು ಇರಿದ . ಅಬ್ದುಲ್ ಫತೇಹ್ ಖಾನ್ ಕುಸಿದು ಬಿದ್ದ .
ಈಗ ಶಿವಾಜಿ ಶಾಯಿಸ್ತೇ ಖಾನನ ಮೇಲೆ ದೃಷ್ಟಿಯಿತ್ತರು . ಅವನ ಬೊಕ್ಕ ತಲೆ ಮತ್ತು ಕುರೂಪಿ ಕಂಗಳು ಮಂದಬೆಳಕಿನ ರೇಖಾಚಿತ್ರದಲ್ಲಿ ಇನ್ನೂ ವಿಕಾರವಾಗಿ ತೋರಿತು . ಗಡಿಬಿಡಿಯಲ್ಲಿ ನಿದ್ದೆಯಿಂದೆದ್ದ ಖಾನನಿಗೆ ಕತ್ತಲೆಯ ಮರೆಯಲ್ಲಿ ಅಷ್ಟೇನೂ ತೋರುತ್ತಿರಲಿಲ್ಲ . ಶಿವಾಜಿಯ ಕತ್ತಿಯ ಹೊಳಪು ಮತ್ತಿನ್ನೊಂದಿಷ್ಟು ಜನ ಅವನ ಹಿಂದಿದ್ದಾರೆಂದು ಸ್ವಲ್ಪ ಕಂಡ . ಆಗ ಖಾನನ ಬೇಗಮ್ ಒಬ್ಬಳು ಗಾಬರಿಯಿಂದ ದೀಪವನ್ನು ಬೀಳಿಸಿದಳು . ಮತ್ತೆ ಕಗ್ಗತ್ತಲು .
ಕತ್ತಲಿನ ಅವಕಾಶ ಪಡೆದ ಖಾನ ತಕ್ಷಣ ಸಮೀಪದ ಕಿಟಕಿಗೆ ಹಾರಿದ . ಅದರಲ್ಲೂ ಖಾನನ ಚಲನೆಯನ್ನು ಕಂಡ ಶಿವಾಜಿ ಅವನ ಮೇಲೆ ಚಿರತೆಯಂತೆ ಎರಗಿ ಕತ್ತಿ ಬೀಸಿದರು . ಖಾನನ ಕೈಯಿಯ ಮೂರು ಬೆರಳುಗಳು ಕತ್ತರಿಸಿತ್ತು . ಅವನು ನೆಲಕ್ಕೆ ಬಿದ್ದ . 

ಶಿವಾಜಿ ಕೆಳಗೆ ಬಿದ್ದ ಖಾನನನ್ನು ನೋಡಿ . ಬಂದ ಕೆಲಸ ಫಲಿಸಿತು ಎಂದು ಭಾವಿಸಿದರು .