ಬೇಸಿಗೆಯ ಸ್ನಿಗ್ಧ ನೀಲ ಗಗನದಡಿಯಲ್ಲಿ ಮೊಘಲ್ ತುಫಾಕಿಗಳು ಆರ್ಭಟಿಸುತ್ತಿದ್ದವು .
ಅವುಗಳ ಅಬ್ಬರಕ್ಕೆ ವಾಯುಮಂಡಲ ಅತಿ ದೂರದವರೆಗೂ ಕಂಪಿಸುತಿದ್ದವು . ಅವುಗಳ ಗುರಿ ಪುರಂದರಗಢದತ್ತ ಸಿಡಿಯುತ್ತಿತ್ತು
. ಸುಡುಬಿಸಿಲಿನಲ್ಲಿ ತುಫಾಕಿಗಳನ್ನು ಸಿಡಿಸುತ್ತಾ ಮೊಘಲ್ ಸೈನಿಕರು ಬೆವರಿಳಿಸ್ಸುತ್ತಿದ್ದರು .
ಇದನ್ನೆಲ್ಲಾ ದೂರದ ಸುರಕ್ಷತೆಯಲ್ಲಿ ಅರಾಮಾಗಿ ಕುದುರೆಯೇರಿ ದಿಲೇರ್ ಖಾನ್
ಗಮನಿಸುತ್ತಿದ್ದ . ಮೈಮೇಲೆ ಸರಪಳಿ ಕವಚತೊಟ್ಟು ತಲೆಮೇಲೆ ವಿಶಿಷ್ಟ ಕಪ್ಪು ಪೇಟ ಧರಿಸಿದ್ದ .
ಅವನು ನೋಡುತ್ತಿದ್ದಂತೆ ಯಾವ ಸಿಡಿತಲೆಗಳೂ ಕೋಟೆಯ ಗೋಡೆಗೆ ಬೀಳಬೇಕಾದ ಜಾಗಕ್ಕೆ ಬೀಳದೇ ಕೇವಲ
ಬೆಟ್ಟಗಳ ಪದತಲಕ್ಕೆ ಬೀಳುತ್ತಿದ್ದವಷ್ಟೇ . ಬೆವರಿನ ಮುಖವನ್ನು ಉಜ್ಜಿಕೊಳ್ಳುತ್ತಾ ದಿಲೇರ್
ಖಾನನಿಗೆ ಈ ಸುಡುಬಿಸಿಲಿನ ತಾಪದಲ್ಲಿ ಎಲ್ಲೋ ದೂರದ ಮೈಲಿಗಲ್ಲನ್ನು ಗೆಲ್ಲುವ ಉತ್ಸಾಹವೇನೂ
ಕದಲಿಲ್ಲ . “ ಈ ಶಿವಾಜಿಯ ದುಸ್ಸಾಹಸ ಮೊಘಲ್ ಬಾದಷಾಹನನ್ನೂ ಎಳೆತರುವಂತೆ ಮಾಡಿದೆ . . . ”.
ಮೊದಲಿ ಶಾಯಿಸ್ತೇ ಖಾನನ ಡೇರೆಗೆ ನುಗ್ಗಿ ಅವನ ಬೆರಳು ಕತ್ತರಿಸಿದ್ದಲ್ಲದೇ ನಂತರ ಗಾಯಕ್ಕೆ ಉಪ್ಪು
ಸುರಿಯುವಂತೆ ಸೂರತ್ತನ್ನು ಸೂರೆಹೊಡೆದ . ಇದೀಗ ಸಮಸ್ತ ಮೊಘಲ್ ಸಾಮ್ರಾಜ್ಯಕ್ಕೆ ಸವಾಲಾಗಿ
ನಿಂತಿದ್ದಾನೆ . ಈ ಖಾಫಿರನಿಗೆ ನರಕಕ್ಕೆ ದಾರಿ ತೋರಿಸಲೇಬೆಕೆಂದು ಶಾಪ ಹಾಕುತ್ತಿದ್ದ .
ಶಿವಾಜಿ ಮಹಾರಾಜರ ಧೈರ್ಯ ಮೊಘಲ್ ಸಾಮ್ರಾಜ್ಯವನ್ನೇ ನಡುಗಿಸಿತ್ತು . ಇವನನ್ನು
ಹತ್ತಿಕ್ಕಲೆಂದೇ ಮಿರ್ಜಾ ರಾಜ ಜಯಸಿಂಹ ಮತ್ತು ದಿಲೇರ್ ಖಾನನನ್ನು ದಕ್ಷಿಣಕ್ಕೆ ಐವತ್ತು
ಸಾವಿರಕ್ಕಿಂತ ಅಧಿಕ ಸೇನೆಯೊಂದಿಗೆ ಔರಂಗಾಜೇಬನು ಅಟ್ಟಿದ್ದ . ದಿಲೇರ ಖಾನನೋ ಅಸ್ಸಾಮಿನ
ದಂಡಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ ರಣೋತ್ಸಾಹದಿಂದ ಸಹ್ಯಾದ್ರಿಗೆ ಬಂದಿದ್ದ . ವಜ್ರಗಢವನ್ನು
ಕಬಳಿಸಿ ತುಫಾಕಿಯೊಂದಿಗೆ ಆರ್ಭಟಿಸುತ್ತಾ ಪುರಂದರಗಢಕ್ಕೆ ಬಂದ . ತನ್ನ ಅಸಂಖ್ಯ ಸೇನೆಯಿದ್ದರೂ ಆ
ಭದ್ರಕೋಟೆಯನ್ನು ಗೆಲ್ಲಲು ಕಠಿಣವಾಗಿತ್ತು .
ಭದ್ರಕೋಟೆಯ ಮೇಲೆ ಧಾಳಿ ಮಾಡಲೆಂದು ಎರಡು ದೊಡ್ಡ ಗೋಪುರಾಕೃತಿಗಳನ್ನು
ನಿರ್ಮಿಸಿದ್ದರು . ಅವುಗಳು ಆಗಲೇ ಕೋಟೆಯ ಅರ್ಧದಾರಿಯಲ್ಲಿದ್ದವು . ಒಮ್ಮೆ ಎರಡು ಬೆಟ್ಟಗಳ
ನಡುವನ್ನು ತಕ್ಕೆಗೆ ತೆಗೆದುಕೊಂಡರೆ ಸಲೀಸಾಗಿ ಕೋಟೆಯ ಹೃದಯ ಭಾಗಕ್ಕೆ ಧಾಳಿಮಾಡಬಹುದು .
ಮುರಾರಬಾಜಿ ದೇಶಪಾಂಡೆ ಕೋಟೆಯ ದಂತಾಕೃತಿಯ ಮೂಲಕ ಆಗಮಿಸುತ್ತಿದ್ದ ಮೊಘಲ್
ಸೇನೆಯತ್ತ ಸಂಯಮದ ದೃಷ್ಟಿಯಿತ್ತು ನೋಡುತ್ತಿದ್ದ . ಸೂರ್ಯನ ತಾಪಕ್ಕೆ ಬಾಡಿಹೋದ ಮೊಗದಲ್ಲೂ ಅವನ
ಕಂಗಳಲ್ಲಿ ಉತ್ಸಾಹ ಚಿಮ್ಮುತ್ತಿತ್ತು . ಕೋಟೆಯ ಸುತ್ತಾ ಗಸ್ತು ತಿರುಗುತ್ತಾ ಸೈನಿಕರಿಗೆ
ಪ್ರೋತ್ಸಾಹ ನೀಡುತ್ತಿದ್ದ . ಸೇನಾ ತುಕಡಿಗಳನ್ನು ಒಂದೊಂದಾಗೆ ಕೋಟೆಯ ಹೊರಬಿಡುತ್ತಾ ಆ
ಗೋಪುರಗಳನ್ನು ದ್ವಂಸಗೊಳಿಸಲು ಕಳಿಸುತ್ತಿದ್ದ . ಮರಾಠಾ ಯೋಧರು ಅಪರಿಮಿತ ಧೈರ್ಯ ತೋರಿದ್ದರೂ
ಸಂಖ್ಯಾಬಲದ ಕೊರತೆಯಿಂದಾಗಿ ಅನೇಕರು ಹತರಾಗುತ್ತಿದ್ದರು .
ಶಿವಾಜಿ ಮಹಾರಾಜರಿಗೆ ಸೇನಾಬಲವರ್ಧನೆಯನ್ನೂ ಕಳಿಸಲು ಸಾಧ್ಯವಾಗುತ್ತಿಲ್ಲ . ದಿಲೇರ
ಖಾನನ ಸೇನೆ ಅತಿಹೆಚ್ಚಿದ್ದನ್ನು ಮುರಾರಿಬಾಜಿ ನೋಡಿದ . ಆದರೂ ಕಡೆಯ ಸೈನಿಕನತನಕ ಕಾದಾಡುವೆ ಎಂದು
ನಿಶ್ಚಯಿಸಿದ .
ಈಗ ದಿಲೇರ ಖಾನನ ಸಮರ ಗೋಪುರಗಳು ಸನಿಹ ಬಂದವು . ಮತ್ತವನ ಮೊದಲ ತುಫಾಕಿಯ ಹೊಡೆತ
ಭದ್ರಕೋಟೆಯನ್ನು ಅಪ್ಪಳಿಸಿತು . ಸಿಡಿದ ರಭಸಕ್ಕೆ ಗೋಡೆ ಛಿದ್ರಗೊಂಡು ಧೂಳಿನಿಂದ ಆವರಿಸಿದವು .
ಹೀಗೆ ನಿಖರವಾದ ಧಾಳಿಗಳು ಮುಂದುವರೆದವು .
ಮುರಾರಬಾಜಿಗೆ ತಾನೊಂದು ಸೋಲುವ ಯುಧ್ಧಕ್ಕಾಗಿ ಹೋರಾಡುತ್ತಿದ್ದೇನೆಂದು
ಗೊತ್ತಿದ್ದರೂ ಒಬ್ಬ ವೀರ ಮರಾಠಾನಾದ್ದರಿಂದ ಶರಣಾಗುವ ಪ್ರಶ್ಣೆಯೇ ಇಲ್ಲ . ಈಗ ಮೊಘಲ್ ಸೇನೆ ಕೋಟೆಗೆ ತಾಗಿಕೊಂಡೇ ಡೇರೆ ಹೂಡಿದವು . ಮುರಾರಬಾಜಿ
ಅವನ ಸೇನೆಯನ್ನು ಗಮನಿಸಿ ಸುಮಾರು ಒಬ್ಬ ಮರಾಠಾ ಯೋಧನಿಗೆ ಇಪ್ಪತ್ತು ಮೊಘಲ್ ಸೈನಿಕರಿದ್ದಾರೆಂದು
ಅಂದಾಜು ಮಾಡಿದ .
ಮುರಾರಬಾಜಿ ಕೋಟೆಯಿಂದಿಳಿದು ಒಂದು ತ್ವರಿತವಾಗಿ ಸೇನಾ ಬೈಠಕ್ ಕರೆದ . “ ಹೀಗೆಯೇ
ಮುಂದುವರೆದರೆ ನಾವೆಲ್ಲಾ ಕೊಲ್ಲಲ್ಪಡುತ್ತೇವೆ ಮತ್ತು ದಿಲೇರ ಖಾನನಿಗೆ ಕೋಟೆಯೊಳಗೆ ಸುಲಭ ಪ್ರವೇಶ
. . . ! ”. “ ಮತ್ತು ಮೊಘಲರೊಂದಿಗೆ ಸಂಧಾನ ? . . . ಅದು ನನ್ನಿಂದಾಗದು . . . ತಲೆಯಾದರು
ಕೊಟ್ಟೇನೋ ಆದರೆ ಶರಣಾಗತಿಯಿಲ್ಲ . . . ” . ಅವನ ಆರ್ಭಟಿಸುತ್ತಿದ್ದ ಧ್ವನಿಯನ್ನು ಸೈನಿಕರು
ಗಮನವಿಟ್ಟು ಆಲಿಸುತ್ತಿದ್ದರು . “ ಅಧಿಕ ಸೇನಾ ನೆರವು ಬರುತ್ತದೋ ಇಲ್ಲವೋ ನಾಕಾಣೆ , ನಮ್ಮ ಇಡೀ
ಸ್ವರಾಜ್ಯಕ್ಕೆ ಬೆಂಕಿ ಹತ್ತಿದೆ ಆದ್ದರಿಂದ ನಮ್ಮ ಸೇನೆ ಎಲ್ಲೆಡೆ ಇರಲು ಸಾಧ್ಯವಿಲ್ಲ ” . ಅವನ ಕಂಗಳನಲ್ಲಿ ಅಗ್ನಿ ಜ್ವಲಿಸುತ್ತಿತ್ತು .
ಎಲ್ಲರೆಡೆ ನೋಡುತ್ತಾ “ ಸದ್ಯದ ನಮ್ಮ ಕರ್ತವ್ಯ ನಮ್ಮ ಕೋಟೆಯನ್ನು ರಕ್ಷಿಸಿ ಕೇಸರೀ ಧ್ವಜವನ್ನು
ಎತ್ತಿಹಿಡಿಯುವುದು . . . ”. “ ಕಡೆ ಉಸಿರಿನ ತನಕ ಹೋರಾಡುತ್ತೇವೆ ” ಎಂಬ ಘರ್ಜನೆ ಸೇನೆಯಲ್ಲಿ ಮೂಡಿತು .
ಮುರಾರಬಾಜಿ ಮುಗುಳ್ನಗುತ್ತಾ ತನ್ನ ಯೋಧರಮೇಲೆ ಹೆಮ್ಮೆಪಟ್ಟ .
ತನ್ನ ಎಡಗೈಯಲ್ಲಿನ ಗುರಾಣಿಯನ್ನು ಕೆಡವಿ ತನ್ನ ಮತ್ತೊಂದು ಬೆನ್ನಿಗೆ ಸಿಗಿಸಿಕೊಂಡಿದ್ದ
ಖಡ್ಗವನ್ನು ಹಿಡಿದ . ಎರಡು ಖಡ್ಗವನ್ನು ಹಿಡಿದಿದ್ದ ಈಗ ಎರಡು ಬಲಶಾಲಿ ದಂತಗಳನ್ನು ಹೊಂದಿದ್ದ
ಶಕ್ತಿಶಾಲಿ ಆನೆಯಂತೆ ಕಂಡ . “ ಒಂದೇ ನಾನು ಮಡಿಯಿತ್ತೇನೆ ಅಲ್ಲದೇ ದಿಲೇರ್ ಖಾನನ ರುಂಡವನ್ನು
ರಾಜಗಢಕ್ಕೆ ಕಳಿಸುತ್ತೇನೆ ” ಎಂದು ಘರ್ಜಿಸಿದ .
ಸೇನೆಯಲ್ಲಿ “ ಹರ ಹರ ಮಹಾದೇವ್ ”
ಎಂಬ ಘೋಷಣೆ ಕೇಳಿಬಂದಿತು .
ಮುರಾರಬಾಜಿ ಮತ್ತವನ ಯೋಧರು ಕೋಟೆಯಿಂದಿಳಿದು ಹೊರಬಂದು ನೇರ ದಿಲೇರ ಖಾನನ
ಡೇರೆಯೆಡೆ ನುಗ್ಗಿದರು . ದಾರಿಯುದ್ದಕ್ಕೆ ಬಂದ ಪಠಾಣ ಮತ್ತು ರಾಜಪೂತ ಯೋಧರನ್ನು ಕಚಕಚನೆ
ಕತ್ತರಿಸುತ್ತಾ ಸಿಡಿಲ ಪ್ರವಾಹದಂತೆ ಮುನ್ನುಗ್ಗಿದರು . ಮುರಾರಬಾಜಿ ತನ್ನೆರಡು ಕತ್ತಿಯನ್ನು
ಅದೆಂಥಾ ಚಾಕು ಚಕ್ಯತೆಯಿಂದ ಚಲಾಯಿಸುತ್ತಿದ್ದನೆಂದರೆ ಯಾವನಾದರೂ ಮೂರ್ಖ ಸನಿಹ ಬರಲು ದುಸ್ಸಾಹಸ
ಮಾಡಿದರೆ ಒಂದೇ ಏಟಿನಲ್ಲಿ ಕತ್ತರಿಸಿಹೋಗುತ್ತಿದ್ದವು . ಮೊಘಲರ ಬೃಹತ್ ಸೇನೆಯೊಂದಿಗೆ ತನ್ನ ಯೋಧರು
ಹತರಾಗುತ್ತಿದ್ದರೂ ಮುರಾರಬಾಜಿ ಎದೆಗುಂದದೇ ಹೆಬ್ಬುಲಿಯಂತೆ ಕಾದಾಡುತ್ತಲೇ ಇದ್ದ . ಅವನ ಕತ್ತಿಗಳ
ಒಂದು ವೃತಾಕಾರದ ಅಂತರದಲ್ಲಿ ಯಾರೊಬ್ಬರಿಗೂ ಹತಿರ ಬರಲು ಆಗುತ್ತಿರಲಿಲ್ಲ .
ದಿಲೇರ್ ಖಾನನು ದೂರದಲ್ಲಿ ಅನೆಯ ಮೇಲೆ ಕುಳಿತು ಮುರಾರಬಾಜಿಯ ರಣತಾಂಡವವನ್ನು
ಗಮನಿಸುತ್ತಿದ್ದ . “ ಅದೆಷ್ಟು ಚನ್ನಾಗಿ ಹೋರಾಡುತ್ತಿದ್ದಾನಲ್ಲಾ ಈ ಖಾಫಿರ ! ಇವನನ್ನೆಲಾದ್ದರೂ
ನಮ್ಮೆಡೆ ಎಳೆದುಕೊಂಡರೆ ಬಾದಷಾಹನಿಗೆ ಒಬ್ಬ ಒಳ್ಳೆ ಆಸ್ತಿಯಾದಹಾಗೆ . ಒಂದು ಒಳ್ಳೆ ಮನಸಬದಾರಿ
ಪಟ್ಟ ಕೊಟ್ಟು ಸಿವಾಜಿಯಿಂದ ಸೆಳೆಯೋಣ ” ಎಂದು ಯೋಚಿಸಿದ . ತನ್ನ ಸೇವಕನಿಗೆ ಕಹಳೆಯೂದಿಸಿ
ಸಂದಾನಕ್ಕಾಗೆ ಯುದ್ಧವಿರಾಮಕ್ಕೆ ಹೇಳಿದ .
ಸೇನೆಯನ್ನು ಹಿಂಪಡೆದು ದಿಲೇರ್ ಖಾನ್ ನಿಧಾನವಾಗಿ ಅವನತ್ತ ಆನೆಯೊಂದಿಗೆ ನಡೆದ .
ಅವನತ್ತ ಕೂಗಿದ – “ ನೀನು ಚನ್ನಾಗಿಯೇ ಹೋರಾಡಿದೆ . ನಿನ್ನಂಥಹ ಕತ್ತಿವರಸೆ ನಾನೆಂದೂ ಕಂಡಿಲ್ಲ ” ಎಂದು ಪ್ರಶಂಸಿಸಿದ . ಮುರಾರಬಾಜಿ ಈ ಮಾತು ತನ್ನ
ಪರಮಶತ್ರುವಿನ ಬಾಯಿಯಿಂದಲೇ ಬಂದಿದ್ದಾಗಿ ಕತ್ತೆತ್ತಿ ನೋಡಿದ . ಪ್ರತಿಯುತ್ತರ ನೀಡಲು ಮನಸಿಲ್ಲ .
ಮತ್ತೆ ದಿಲೇರ್ ಖಾನ್ ಮುಂದುವರೆದ – “ ನಿನ್ನ ಈ ಬಹಾದ್ದೂರತನ ಸೋಲು ಮತ್ತು ಸಾವಿನಲ್ಲಿ
ಕೊನೆಗೊಳ್ಳುತ್ತದೆ . ಮೂರ್ಖನಾಗದೆ ನಮ್ಮೆಡೆ ಬಾ . ನಿನಗೆ ಬಾದಷಾಹನಿಂದ ಒಳ್ಳೆಯ ಮನಸಬ್ದಾರಿ
ಕೊಡಿಸಿ ನಿನ್ನ ಶೂರತನಕ್ಕೆ ಒಳ್ಳೆಯ ಮನ್ನಣೆ
ಕೊಡಿಸುತ್ತೇನೆ . . . ”.
ಮುರಾರಬಾಜಿ ತನ್ನ ಕೆಂಗಣ್ಣಿನಿಂದ ಮತ್ತವನ ಕುಂಕುಮಲೇಪಿತ ಲಲಾಟದಿಂದ ಭಯಂಕರನಂತೆ ಕಂಡ . ವಿಶ್ವಾಸಭರಿತ ಧ್ವನಿಯಲ್ಲಿ
ಉತ್ತರವಿತ್ತ - “ ನಾನೊಂದು ತತ್ವಕ್ಕಾಗಿ
ಹೋರಾಡುತ್ತಿದ್ದೇನೆ ಅದುವೇ ಸ್ವರಾಜ್ಯ ಅದರಿಂದ ನಾನು ಮರ್ಯಾದೆ ಮತ್ತು ಗೌರವದಿಂದ ಬದುಕಬೇಕೆಂದಿದ್ದೇನೆ
. ಇವೆರಡನ್ನೂ ಕಳೆದುಕೊಂಡು ನಾನು ಶಿವಾಜಿಯ ವಿರುದ್ಧ ನಿಂತು ಔರಂಗಾಜೇಬನಿಗೆ ಬೆನ್ನಾಗಲಾರೆ ”.
ಎಂದು ಭಾರವಾಗಿ ಉಸಿರಾಡುತ್ತಾ ದಿಲೇರ್ ಖಾನನೆದುರು ದುರುಗುಟ್ಟಿದ .
ನಂತರ ಹಿಂತಿರುಗಲು ಸರಿದ . ಅವನು ಹಿಂದೆ ತಿರುಗುತ್ತಿದ್ದಂತೆ ದಿಲೇರ ಖಾನ್ ತನ್ನ
ಬಿಲ್ಲನ್ನು ಹಿಡಿದು ಬಾಣ ಹೂಡಿ ಎಳೆದು ಬಿಟ್ಟ . ಇದರ ನಡುವೆ ಮರಾಠಾ ಯೋಧರು
ಸೂಚಿಸುತ್ತಿದ್ದಂತೆಯೇ ಅನಾಹುತ ನಡೆದು ಹೋಯಿತು . ಬಿಟ್ಟ ಬಾಣ ಮುರಾರಬಾಜಿಯ ಕಂಠ ಸೀಳಿತು .
ದಿಲೇರ್ ಖಾನ್ ನಿಧಾನವಾಗಿ ಅವನತ್ತ ಸಮೀಪಿಸಿದ . ಅವನೊಂದಿಗೆ ಇನ್ನಷ್ಟು ಸೈನಿಕರು
ಮುಂದೆ ಬಂದರು . ಆದರೆ ಮೊಘಲ್ ಸೈನಿಕರು ಸ್ವಲ್ಪ ಹಿಂಜರಿದರು . ದಿಲೇರ್ ಖಾನ್ ಅವನ ಮೃತ
ಶರೀರವನ್ನು ಅಭಿಮಾನದ ದೃಷ್ಟಿ ಬೀರಿದ. ಮತ್ತವನ ಪುರಂದರಗಢದ ವಿಜಯವನ್ನೂ ಸಾಧಿಸಿದ .
Source : "Brahmaputa" by Aneesh Gokhale