Friday 20 November 2015

ಬಾನೆತ್ತರದ ಪರಾಕ್ರಮ







ಸೆಪ್ಟಂಬರ್ 3 , ಬೆಳಿಗ್ಗೆ 7 ಗಂಟೆ
ನಾಲ್ಕು ಮಿಸ್ಟೀರ್ಸ್ ಫೈಟರ್ಸ್ ಪಟಾಣ್ ಕೋಟ್ ನಿಂದ ಆಗಸಕ್ಕೆ ಚಿಮ್ಮಿ 15000 ಅಡಿಗಳಷ್ಟು ಎತ್ತರದಲ್ಲಿ ಅಖ್ನೂರ್ ನತ್ತ ನೆಗೆದವು . ಅದರ ಕೆಳಗೆ 300 ಅಡಿಗಳ ಎತ್ತರದಲ್ಲಿ ಸ್ಕ್ವಾಡ್ರನ್ ಲೀಡರ್ ಜಾನಿ ಗ್ರೀನ್ ರ ನೇತೃತ್ವದಲ್ಲಿ ನಾಲ್ಕು ಗ್ನಾಟ್ ವಿಮಾನಗಳು ಹೊರಟವು . ಮತ್ತದರ ಕೆಳಗೆ 100 ಅಡಿಗಳ ಎತ್ತರದಲ್ಲಿ ಸ್ಕ್ವಾಡ್ರನ್ ಲೀಡರ್ ಟ್ರೇವರ್ ಕೀಲರ್ ರ ನೇತೃತ್ವದಲ್ಲಿ ನಾಲ್ಕು ಗ್ನಾಟ್ ವಿಮಾನಗಳು ಹೊರಟವು . ಇದೊಂದು ವ್ಯವಸ್ತಿತ ಬೀಸಿದ ಬಲೆಯಾಗಿತ್ತು . ಪಾಕಿಸ್ತಾನೀ ರೆಡಾರ್ ಮೇಲಿನ ಮಿಸ್ಟೀರ್ ಗಳನ್ನು ಮಾತ್ರ ಪತ್ತೆ ಹಚ್ಚುತ್ತವೆ. ಅದರ ಕೆಳಗೆ ಹಾರುತ್ತಿದ್ದ ಇನ್ನೆರಡು ಗುಂಪಿನ ಗ್ನಾಟ್ ಗಳು ರೆಡಾರಿನ ಅಂತರಕ್ಕೆ ಸಿಗುವುದಿಲ್ಲ .


ಯೋಜಿಸಿದಂತೆ ಪಾಕಿಸ್ತಾನೀ ರೆಡಾರ್ ತಮ್ಮ ಸೇಬರ್ ಮತ್ತು ಸ್ಟಾರ್ ಫೈಟರ್ ಗಳನ್ನು ಮಿಸ್ಟೀರ್ಸ್ ನತ್ತ ನಿರ್ದೇಶಿಸಿದವು . ಗ್ನಾಟ್ ಗಳು ಅವರ ಕಣ್ಣಿಗೆ ಬೀಳಲಿಲ್ಲ .
ಅಖ್ನೂರ್ ತಲುಪುವ 30 ಸೆಕೆಂಡ್ ಮುನ್ನ ಮೇಲ್ಭಾಗದಲ್ಲಿ ಹಾರುತ್ತಿದ್ದ ಮಿಸ್ಟೀರ್ ಗಳು ಕೆಳಗೆ ಡೈವ್ ಮಾಡಿ ತಮ್ಮ ವಾಯುನೆಲೆಯತ್ತ ವಾಪಸ್ಸಾದವು . ಅಷ್ಟಲ್ಲದೇ ಗ್ನಾಟ್ ಗಳು ರಾಕೆಟ್ ಗಳಂತೆ ಕೇವಲ 90 ಸೆಕೆಂಡುಗಳಲ್ಲಿ 30000 ಅಡಿಯಷ್ಟು ಎತ್ತರಕ್ಕೆ ಚಿಮ್ಮಿ ಆ ಎತ್ತರದ ಅನುಕೂಲಕರ ಸ್ತರದಲ್ಲಿ ಬರುತ್ತಿದ್ದ ಸೇಬರ್ ಗಳನ್ನು ಹೊಡೆಯಲು ತಯಾರಾದವು .
ಕೆಳಗೆ ಪೇಚೆಗೆ ಸಿಲುಕಿದ ಸೇಬರ್ಸ್ ಗ್ನಾಟ್ ಗಳನ್ನು ಹಿಂಬಾಲಿಸಲು ಪರದಾಡಿದವು .
ಟ್ರೇವರ್ ಕೀಲರ್ ತಮ್ಮ ಬಲಬದಿಯಲ್ಲಿ ಒಂದು ಸೇಬರ್ ಗ್ರೀನ್ ರತ್ತ ಬರುತ್ತಿರುವುದನ್ನು ಕಂಡು ಗ್ರೀನ್ ರಿಗೆ ಒಂದು ವಾರ್ನಿಂಗ್ ಕಾಲ್ ಕೊಟ್ಟರು . ಗ್ರೀನ್ ತಕ್ಷಣ ಡಿಫೆಂಸಿವ್ ಬ್ರೇಕ್ ತಗೆದುಕೊಂಡು ಸೇಬರ್ ನ ಹಿಂದೆ 400 ಗಜಗಳಷ್ಟು ಅಂತರಕ್ಕೆ ಬಂದು ತಮ್ಮ ಗನ್ ಗಳನ್ನು ಅದರತ್ತ ಗುರಿಯಿಟ್ಟರು . ಒಂದಿಷ್ಟು ಗುಂಡುಗಳು ತಾಗಿದವು . ಮತ್ತೆ ಗ್ರೀನ್ ತಮ್ಮ ಗ್ನಾಟನ್ನು ವೇಗೋತ್ಕರ್ಷಿಸಿ ಅದರತ್ತ ಮತ್ತಷ್ಟು ಸಮೀಪಿಸಿ ಇನ್ನೊಂದಿಷ್ಟು ಗುಂಡುಗಳನ್ನು ಹೊಡೆದರು . ಆ ಸೇಬರ್ ನಲ್ಲಿ ಬೆಂಕಿ ಹೊದ್ದುಕೊಂಡು ಸ್ಪೋಟಗೊಂಡಿತು .
ಫ್ಲೈಟ್ ಲೆಫ್ಟನೆಂಟ್ ಪಠಾನಿಯಾ ಒಂದು ಸೇಬರ್ ನನ್ನು ಅಟ್ಟಾಡುತ್ತಿದ್ದರು ಆದರೆ ಒಂದು ಸ್ಟಾರ್ ಫೈಟರ್ ಮಧ್ಯದಲ್ಲಿ ಬಂದು ಡೈವ್ ಹೊಡೆದ ಕಾರಣ ಗುರಿ ತಪ್ಪಿತು .
ಅಷ್ಟರಲ್ಲಿ ಗ್ನಾಟ್ ಗಳು ತಮ್ಮ ಕ್ಷಮತೆ ಮೀರಿ ಹಾರಾಟ ಮಾಡಿದ್ದರಿಂದ ತಮ್ಮ ಇಂಧನ ತೀರುವುದರಲ್ಲಿತ್ತು . ಇನ್ನಷ್ಟು ಹಾರಾಡಲು ಸಾಧ್ಯವಿಲ್ಲದ ಕಾರಣ ತಮ್ಮ ವಾಯುನೆಲೆಗೆ ವಾಪಸ್ಸಾದವು .
ಸೆಪ್ಟೆಂಬರ್ 4
ಮಿಸ್ಟೀರ್ ಫೈಟರ್ಸ್ ಚಂಬ್ – ಜೌರಿಯಾ ಸೆಕ್ಟರ್ ನಲ್ಲಿ ಪಾಕಿ ಸೇನೆಯ ಮೇಲೆ ಬಲವಾದ ಧಾಳಿ ಮಾಡುತ್ತಿದ್ದವು . ಅದಕ್ಕೆ ಟಾಪ್ ಕವರ್ ನಂತೆ ಗ್ನಾಟ್ ಪೈಟರ್ಸ್ ಗಳಿದ್ದವು . ನಮ್ಮ ಭೂಸೇನೆಯ ಮೇಲೆ ಧಾಳಿ ಮಾಡಲು ಸೇಬರ್ ಗಳು ಬಂದವು . ಅವುಗಳನ್ನು ಸದೆಬಡಿಯಲು ನಮ್ಮ್ ಗ್ನಾಟ್ ಗಳು ಮತ್ತೆ ನೆಗೆದವು . ಸೇಬರ್ ಗಳು ತಪ್ಪಿಸಿಕೊಳ್ಳಲು ತಡಕಾಡಿದವು .
ಪ್ಲೈಟ್ ಲೆಫ್ಟನೆಂಟ್ ಪಠಾನಿಯಾ ಒಂದು ಸೇಬರ್ ಅಖ್ನೂರ್ ಸೇತುವೆಯತ್ತ ಹೊರಟಿದ್ದ ಕಂಡು ಅದರತ್ತ ಚಲಾಯಿಸಿದರು . ಪಠಾನಿಯಾ ಬಲು ಚಾಕುಚಕ್ಯತೆಯಿಂದ ಅದನ್ನು ಹೊಡೆದರು . ಇದು ಗ್ನಾಟಿನ ಎರಡನೇ ಸೇಬರ್ ಬೇಟೆಯಾಗಿತ್ತು .


ಟ್ರೇವರ್ ಕೀಲರ್ ಸೇಬರ್ ನನ್ನು ಹೊಡೆದ ಮೊದಲ ಪೈಲಟ್ ಆದರು . ಆ ಪರಾಕ್ರಮಕ್ಕೆ ವೀರ ಚಕ್ರ ಪ್ರದಾನವಾಯಿತು . ಫ್ಲೈಟ್ ಲೆಫ್ಟನೆಂಟ್ ಪಠಾನಿಯಾರವರಿಗೂ ಕೂಡ ವೀರ ಚಕ್ರ ಲಭಿಸಿತು .
ಅಲ್ಲಿಯ ತನಕ ಸೊಕ್ಕಿನಿಂದ ಮೆರೆಯುತ್ತಿದ್ದ ಪಾಕಿಸ್ತಾನೀ ಸೇಬರ್ ಗಳ ರೆಕ್ಕೆಗಳಿಗೆ ಒಂದು ತಣ್ಣನೆಯ ಚಳಿ ಜ್ಕರ ಹಚ್ಚಿದಂತಾಯ್ತು .

Saturday 14 November 2015

ಬ್ಯಾಟಲ್ ಆಫ್ ಅಖ್ನೂರ್






ಹಾಜೀಪೀರ್ ಪಾಸನ್ನು ಭಾರತೀಯ ಸೇನೆ ವಶಪಡಿಸಿಕೊಂಡ ನಂತರ ತಮ್ಮ ಆಪರೇಷನ್ ಜಿಬ್ರಾಲ್ಟರ್ ಮುರಿದುಬಿತ್ತು.ಇದ್ದರಿಂದ ಮುಖಭಂಗ ಅನುಭವಿಸಿದ ಪಾಕಿಗಳು ಆಪರೇಷನ್ ಗ್ರಾಂಡ್ ಸ್ಲಾಮ್ ಎಂಬ ಮತ್ತೊಂದು ದುಃಸ್ಸಾಹಸಕ್ಕೆ ಕೈ ಹಾಕಿತ್ತು. ಅದೇನೆಂದರೆ ಜಮ್ಮುವಿನ ಅಖ್ನೂರನ್ನು ವಶಪಡಿಸಿಕೊಂಡು ಇಡೀ ರಾಜ್ಯಕ್ಕೆ ಸಂಪರ್ಕ ಕಡಿಸಿ ಒಂದೇ ಸಮನೆ ಜಮ್ಮು- ಕಾಶ್ಮೀರವನ್ನು ಕಬಳಿಸಬೇಕೆಂದು.
ಸೆಪ್ಟೆಂಬರ್ 1 ,1965, ಬೆಳಿಗ್ಗೆ 4 ಗಂಟೆ, ಚಂಬ್ – ಜೌರಿಯನ್  ಸೆಕ್ಟರ್.

ಪಾಕಿಸ್ತಾನದ ಎರಡು ಇನ್ಫೆಂಟ್ರಿ ಡಿವಿಝನ್ ಜೊತೆಗೆ ಲಾಂಗ್ ರೇಂಜ್ ಆರ್ಟಿಲ್ಲರಿಗಳು ಮತ್ತೆ 70 ಟ್ಯಾಂಕುಗಳನ್ನೊಳಗೊಂಡ ಭಾರೀ ಸೇನೆಯೊಂದಿಗೆ ಗಡಿಯನ್ನು ದಾಟಿ ಅಖ್ನೂರನತ್ತ ಭಾರೀ ಕೋಲಾಹಲವೆಬ್ಬಿಸಲು ಶುರು ಮಾಡಿದರು. ಈ ರಭಸದ ಧಾಳಿಯನ್ನು ಒಮ್ಮೆಲೆ ಎದುರಿಸಲು ಭೂಸೇನೆಗೆ ಸಾಧ್ಯವಾಗಲಿಲ್ಲ. ಆಗ ಸೇನಾ ಜನರಲ್ ಜೆ ಎನ್ ಚೌಧರಿ ವಾಯುಧಾಳಿಯ ಬೆಂಬಲಕ್ಕೆ ಏರ್ ಮಾರ್ಷಲ್ ಅರ್ಜನ್ ಸಿಂಗರಿಗೆ ಕೋರುತ್ತಾರೆ. ಆಗ ಅರ್ಜನರಿಗೆ ಸ್ವತಂತ್ರವಾಗಿ ವಾಯು ಧಾಳಿಗೆ ನಿರ್ಧಾರ ತೆಗೆದುಕೊಳ್ಳಲು ಹಿಂಜರೆಯುತ್ತಾರೆ.ಏಕೆಂದರೆ ಎಲ್ಲಾದರೂ ವಾಯುಸೇನೆಯನ್ನು ಬಿಟ್ಟರೆ ಯುದ್ಧ ತನ್ನ ವ್ಯಾಪ್ತಿಯನ್ನು ಮೀರುತ್ತದೆ. ತಕ್ಷಣ ಅರ್ಜನ್ ಸಿಂಗ್ ಆಗಿನ ರಕ್ಷಣಾ ಮಂತ್ರಿ ಚೌಹಾಣರನ್ನು ಭೇಟಿ ಮಾಡುತ್ತಾರೆ. ಚೌಹಾಣರು ಕೇವಲ ಒಂದು ಗಂಟೆಯಲ್ಲೇ ವಾಯುಧಾಳಿಗೆ ಅನುಮತಿ ನೀಡುತ್ತಾರೆ.

ಆಗ ನಿಕಟದಲ್ಲೇ ಇದ್ದ ಪಠಾಣ್ಕೋಟ್ ಏರ್ ಬೇಸ್ ಯುದ್ಧಸನ್ನದ್ಧವಾಗುತ್ತದೆ. ಫೈಟರ್ಸ್ ಮತ್ತು ಬಾಂಬರ್ ಗಳು ಮುಂಬರುತ್ತಿದ್ದ ಪಾಕಿ ಸೇನೆಯಮೇಲೆ ಧಾಳಿ ಶುರುಮಾಡಿದವು. ಆದರೆ ಮುಖ್ಯ ಧಾಳಿಯ ಆದೇಶ ಬರುವಷ್ಟರಲ್ಲಿ ಸಂಜೆಯಾಗಿತ್ತು. ಆ ಸಮಯದಲ್ಲಿ ವಾಂಪೈರ್ ಜೆಟ್ ಗಳು ಪೂರ್ಣಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತು ತಯಾರಾಗಿದ್ದವು. ಪಾಕಿಗಳ ಆಧುನಿಕ ಸೇಬರ್ ಮತ್ತು ಸ್ಟಾರ್ ಜೆಟ್ ಗಳಿಗೆ ಹೋಲಿಸಿದರೆ ಈ ವಾಂಪೈರ್ ಗಳು ಏನೂ ಇಲ್ಲ .ಮತ್ತೆ ಈ ವ್ಯಾಂಪೈರ್ ಗಳ ಬದಲಾಗಿ ಮಿಸ್ಟೀಕ್ ಫೈಟರ್ ಗಳನ್ನು ಕಳಿಸಬೇಕಾಗಿತ್ತು, ಆದರೆ ಕತ್ತಲಾವರಿಸುತ್ತಿತ್ತು. ರಾತ್ರಿ ವೇಳೆಯಲ್ಲಿ ಯುದ್ಧ ಮಾಡುವ ಕ್ಷಮತೆಯಿಲ್ಲದ ಕಾರಣ ಮಿಸ್ಟೀಕ್ ಗಳನ್ನು ಕಳಿಸಲಾಗಲಿಲ್ಲ. ಪರಿಸ್ಥಿತಿಯ ಒತ್ತಡ ಹಾಗಿತ್ತು.

ಸ್ಕಾರ್ಡ್ರನ್ ಲೀಡರ್ ಧಾರರ ಮೊದಲ ವಾಂಪೈರ್ ಫಾರ್ಮೇಶನ್ ಅಖ್ನೂರಿನತ್ತ ಹಾರಿದವು. ಅದರಲ್ಲಿ ಒಂದಕ್ಕೆ ಆಂಟಿ ಏರ್ಕ್ರಾಫ್ಟ್ ಗನ್ನಿನ ಹೊಡೆತಬಿದ್ದು ಎಜೆಕ್ಟ್ ಮಾಡಬೇಕಾಯ್ತು.  ತದನಂತರವೇ ಪಾಕಿಯ ಫ್ಲೈಟ್ ಲೆಫ್ಟನೆ‍ಟ್ ಸರ್ಫರಾಝ್ ರಫೇಕಿಯ ಒಂದು ಸೇಬರ್ ಸ್ಕ್ವಾರ್ಡ್ರನ್ ( ಅಂದರೆ 4 ವಿಮಾನಗಳು ) ಬಂದು ಮತ್ತೆರಡು ವಾಂಪೈರ್ ಗಳನ್ನು ಹೊಡೆದವು. ಆಗ ಉಳಿದ ಇಬ್ಬರು ಫ್ಲೈಟ್ ಲೆಫ್ಟನೆಂಟ್ ಸೋಂಧಿ ಮತ್ತು ಫ್ಲೈಯಿಂಗ್  ಆಫಿಸರ್ ಪಾಠಕ್ ಸೇಬರ್ಗಳನ್ನು ಎಂಗೇಜ್ ಮಾಡಲು ಮುಗಿಬಿದ್ದರು. ಸೋಂಧಿಯವರು ಸರ್ಫರಾಝ್ ನ ಮೇಲೆ ಫೈರ್ ಮಾಡಿದರು ಆದರೆ ಸಫಲವಾಗಲಿಲ್ಲ. ಮತ್ತೊಂದು ಸೇಬರ್ ಪಾಠಕರನ್ನು ಬಲಿ ತೆಗೆದುಕೊಂಡಿತು. ಸೋಂಧಿ ನಿರಾಶೆಯಿಂದ ವಾಪಸಾದರು.
ಎವೆಲ್ಲಗಳ ಮಧ್ಯೆ ವಾಂಪೈರ್ ಗಳ ಮೂರನೇ ಫಾರ್ಮೇಶನ್ ಭೂಸೇನೆಯ ಮೇಲೆ ತಮ್ಮ ಶಸ್ತ್ರಾಸ್ತಗಳ ರುಚಿ ತೋರಿಸಿದವು. ಟ್ಯಾಂಕ್ ಮತ್ತು ವಾಹನಗಳ ಮೇಲೆ ಗುಂಡಿನ ಧಾಳಿ ಮಾಡಿದವು. ಕತ್ತಲಾಗಿದ್ದರೂ ಮಿಸ್ಟೀಕ್ ಹೆವಿ ಫೈಟರ್ ಗಳು ಧಾಳಿಗಿಳಿದವು. 3 ನೇ ಮತ್ತು 31 ನೇ ಸ್ಕಾರ್ಡ್ರನ್ ಮಿಸ್ಟೀಕ್ ಗಳು ಒಟ್ಟು 16 ಬಾರಿ ಧಾಳಿಮಾಡಿದವು. ವಿಂಗ್ ಕಮ್ಯಾಂಡರ್ ಗುಡ್ಮನ್ ರ ನೇತೄತ್ವದಲ್ಲಿ ನಡೆದವು. ಮಿಸ್ಟೀಕ್ ಗಳು ಭಾರೀ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಬಲಶಾಲಿ ಗ್ರೌಂಡ್ ಅಟ್ಯಾಕ್ ಏರ್ ಕ್ರಾಫ್ಟ್ ಗಳಾಗಿದ್ದವು.
ಕಂಡ ಧಾಳಿಗಳಲ್ಲಿ ಫ್ಲೈಟ್ ಲೆಫ್ಟನೆಂಟ್ ತ್ರಿಲೋಚನ್ ಸಿಂಗ್ ಮತ್ತು ದೊರೆಸ್ವಾಮಿ  ನಿಖರವಾಗಿ ಟ್ಯಾಂಕ್ ಮತ್ತಿನ್ನಿತರ ವಾಹನಗಳ ಬಲಿ ತೆಗೆದುಕೊಂಡರು . ಎಲ್ಲಾ ವಾಹನಗಳ ಮೇಲೆ ಬೆಂಕಿಯು ಹೊಗೆಯಾಡುವುದು ಕಂಡು ಬಂದಿತು.  ಆಶ್ಚರ್ಯಕರ ವಿಷಯವೇನೆಂದರೆ ಆಗ ಯಾವ ಸೇಬರ್ ಜೆಟ್ ಗಳು ಅಡ್ಡಿಯುಂಟುಮಾಡದೇ ಇದ್ದದ್ದು. ಆದ್ದರಿಂದ ನಮ್ಮ ವಾಯುಧಾಳಿಯ ಆರ್ಭಟಕ್ಕೆ ಪಾಕಿಗಳ ಭೂಸೇನೆಯ ಗತಿ ಮಂದವಾಗುತ್ತಾ ಹೋಯ್ತು.
ಕೇವಲ ಎರಡು ಗಂಟೆಗಳಲ್ಲಿ ಪಾಕಿಗಳ 13 ಟ್ಯಾಂಕ್ ಗಳು ,ಎರಡು ಭಾರೀ ತೋಪುಗಳು ಮತ್ತೆಷ್ಟೋ ವಾಹನಗಳು ದ್ವಂಸಗೊಂಡವು. ಪಾಕಿಗಳು ಭಾರತೀಯ ಮಿಸ್ಟೀಕ್ ವಿಮಾನಗಳಿಂದ ಬಿದ್ದ ಹೊಡೆತ ಎಂದಿಗೂ ಮರೆಯಲಾಗುವುದಿಲ್ಲ.

ಅಖ್ನೊರಿನ ಧಾಳಿಯನ್ನು ಸಮರ್ಥವಾಗಿ ಎದುರಿಸಿದ್ದರೂ ಸಹಿತ ಪಾಕಿಗಳು ಸೇಬರ್ ಗಳಿಂದ  ನಮ್ಮ ಕೆಲವು ವಾಂಪೈರ್ ಗಳನ್ನು ಹೊಡೆದಿದ್ದ ಕಾರಣ ಹಿಗ್ಗಿದ್ದರು. ಆ ಸರ್ಫರಾಝ್ ನಿಗೆ ಉತ್ತರ ಕೊಡುವುದೂ ಬಾಕಿಯಿತ್ತು. ಹಾಗಾಗಿ ಸೇಬರ್ ಜೆಟ್ ಗಳನ್ನು ಎದುರಿಸುವುದೂ ಸಹಿತ ನಮ್ಮ ಯೋಧರಿಗೊಂದು ಸವಾಲಾಗಿತ್ತು.

Sunday 8 November 2015

ಸಮ್ಮಲ್ ನ ಸಮರ








ಹದಿನಾರನೆಯ ಶತಮಾನದ ಆದಿಯಲ್ಲಿ ರಾಜಸ್ತಾನದಲ್ಲಿ ಮೇವಾಡ್ ಮತ್ತು ಮಾರ್ವಾರ್ ಮನೆತನಗಳು ಪ್ರಭುತ್ವಕ್ಕೆ ಬಂದಿದ್ದವು . ಆ ಕಾಲವೂ ನಿರಂತರ ವಿದೇಶೀ ಆಕ್ರಮಣಗಳನ್ನು ನೇರಾನೇರಾ ಎದುರಿಸುತ್ತಿದ್ದ ಘೋರ ಕಾಲಘಟ್ಟವೇ ಆಗಿತ್ತು . ಆದರೂ ಈ ಎರಡು ರಾಜಪೂತರು ಒಂದಾಗಿರದೆ ಪರಸ್ಪರ ವೈರತ್ವವನ್ನಿಟ್ಟುಕೊಂಡಿದ್ದರು .


1532 ರಲ್ಲಿ ರಾವ್ ಮಾಲ್ ದೇವ್ ಮಾರ್ವಾರಿನ ಸಿಂಹಾಸನವನ್ನೇರಿದ್ದ . ತನ್ನ ಸಾಮ್ರಾಜ್ಯವನ್ನು ದೆಹಲಿಯಿಂದ ಕೇವಲ 50 ಮೈಲಿ ದೂರದಲ್ಲಿದ್ದ ಹಿಸ್ಸರ್ ಮತ್ತು ಜಝ್ಹರ್ ತನಕ ವಿಸ್ತರಿಸಿದ್ದ . ಇದರಿಂದ ದೆಹಲಿಯನ್ನಾಳುತ್ತಿದ್ದ ಷೇರ್ ಷಾಹ್ ಸೂರಿಗೆ ಗುಜರಾತ್ ಮತ್ತು ಪಶ್ಚಿಮ ಏಷ್ಯಾದೊಂದಿಗಿನ ವ್ಯಾಪಾರ ಸಂಪರ್ಕ ಕಡಿತಗೊಂಡಿತ್ತು . ಆದರೆ ಷೇರ್ ಷಾಹನ ಸಾಮಂತರು ತಾರೀಖ್ ಇ ದೌದ್ರಿಯ ಪ್ರಕಾರ ದಕ್ಷಿಣದ ಶಿಯಾ ಸುಲ್ತಾನರನ್ನು ಮಣಿಸಲೆಂದು ದಂಡಯಾತ್ರೆ ಹೊರಡಬೇಕೆಂದು ಒತ್ತಾಯಿಸುತ್ತಾರೆ . ಅದಕ್ಕೆ ಷೇರ್ ಷಾಹ್ ಸಮ್ಮತಿಸಿದನಾದರೋ ಅದಕ್ಕೆ ಮೊದಲು ಉತ್ತರ ಭಾರತವನ್ನು ಇಸ್ಲಾಮೀಕರಣಗೊಳಿಸದೇ ದಕ್ಷಿಣಕ್ಕೆ ಮುನ್ನಡೆಯುವುದಿಲ್ಲ . ಮೊದಲು ಆ ಖಾಫಿರ್ ರಾವ್ ಮಾಲದೇವನನ್ನು ಮುಗಿಸಿ ಆ ಮಾರ್ವಾರನ್ನು ವಶಪಡಿಸಿಕೊಳ್ಳಬೇಕೆಂದು ನಿಶ್ಚಯಿಸಿದ್ದ .


ಷೇರ್ ಷಾ 80000 ಬಲದ ಒಂದು ದೊಡ್ಡ ಸೇನೆಯನ್ನು ಮಾರ್ವಾರಿನ ದಂಡಯಾತ್ರೆಗೆ ಸಿದ್ಧಪಡಿಸಿ 1543ಯ ಚಳಿಗಾಲದಲ್ಲಿ ರಾಜಸ್ತಾನಕ್ಕೆ ಕಾಲಿಟ್ಟ . ಅತ್ಯಂತ ಜಾಕರೂಕತೆಯಿಂದ ನಿಧಾನವಾಗಿ ಸಾಗುತ್ತಾ ಮಾಲದೇವನ ಸರಹದ್ದಿನಲ್ಲಿ ಬಂದು ಸಮಸ್ತ ಸೇನೆ ಡೇರೆ ಹಾಕಿತ್ತು .
ಇದರ ವಿರುದ್ಧ ಮಾಲದೇವನೂ 50000 ಬಲದ ಸೇನೆಯೊಂದಿಗೆ (ಬಹುತೇಕ ಅಶ್ವದಳ ಮತ್ತು ಒಂಟೆಗಳ ಪಡೆ) ಸಮೀಪಿಸಿದ . ಮಾಲದೇವನಿಗೆ ಯುದ್ಧಮಾಡದೇ ಎದುರಾಳಿಯನ್ನು ಮಣಿಸಿವ ಒಂದು ತಂತ್ರ ತಿಳಿದಿತ್ತು . ಹೇಗಿದ್ದರೂ ಷೇರ್ ಷಾಹನದ್ದು ಅತಿ ದೊಡ್ಡ ಸೇನೆ ಮತ್ತು ಮರುಭೂಮಿಯ ಮಧ್ಯೆ ಆಹಾರ ನೀರಿನ ಸರಬರಾಜಿನ ಸಮಸ್ಯೆ ಆಗುವುದು ಶತಃಸಿದ್ದ . ಅದರಿಂದ ಷೇರ್ ಷಾನ ಸೇನೆ ಬಸವಳಿಯುವ ತನಕವೂ ಕಾದು ಅವರಿಗೆ ಬಲವಾದ ಹೊಡೆತ ನೀಡಲ್ಲೆಂದು ಮಾಲದೇವನೂ ಸಹಿತ ತನ್ನ ಸೇನೆಯನ್ನು ಡೇರೆ ಬಿಟ್ಟು ಕಾದು ಕುಳಿತ .


ಮಾಲದೇವನ ಈ ಉಪಾಯ ಫಲಪ್ರದಾಯಕ ವಾಯಿತು . ಎರಡು ತಿಂಗಳ ಕಾಲ ಏನೂ ಮಾಡದೇ ಕುಳಿತಿದ್ದಕ್ಕೆ ಷೇರ್ ಷಾಹನ ಸೇನೆ ಅನ್ನಾಹಾರದ ಕೊರತೆಯಿಂದ ಬಳಲಿತು . ಷೇರ್ ಷಾ ಚಿಂತಾಕ್ರಾಂತನಾದ . ಆಗ ಷೇರ್ ಷಾ ತನ್ನ ನರಿ ಬುದ್ಧಿಯ ಕುಟಿಲ ಉಪಾಯ ಹೂಡಿದ . ಒಂದಿಷ್ಟು ನಕಲು ಪತ್ರಗಳನ್ನು ಮಾಲದೇವನ ಪಾಳೇಗಾರರನ್ನುದ್ದೇಶಿಸಿ ಬರೆದು ತನ್ನತ್ತ ಮಾಲದೇವನ ಪಾಳೇಗಾರರು ಕುಟಿಲ ತಂತ್ರ ರಚಿಸುತ್ತಿದ್ದಾರೆಂದು ಕಥೆಯನ್ನು ಕಟ್ಟಿ ಆ ಪತ್ರಗಳು ಮಾಲದೇವನಿಗೆ ಸಿಗುವಂತೆ ಮಾಡಿದ . ಈ ವಿಷಯವನ್ನು ಮಾಲದೇವನ ಪಾಳೇಗಾರರು ಸಾರಾಸಗಟು ತಳ್ಳಿಹಾಕಿದರೂ ಮಾಲದೇವ ನಂಬಿಕೆ ಮುರಿದು ತನ್ನ ಮುಖ್ಯ ಸೇನೆಯೊಂದಿಗೆ ತೆರಳುತ್ತಾನೆ !
ಈ ಸಮಯದಲ್ಲಿ ಆ ಪಾಳೇಗಾರರು ಏನು ಮಾಡಲು ಸಾಧ್ಯ ? ಆದರೆ ಅವರು ವಿಚಲಿತರಾಗಲಿಲ್ಲ . ಅವರ ದೇಶಭಕ್ತಿಯನ್ನು ಮೆಚ್ಚುವಂಥದ್ದೇ . ಕೇವಲ 20000 ಸೇನೆಯಿದ್ದರೂ ಷೇರ್ ಷಾಹನನ್ನು ಎದುರಿಸಲು ಪಣತೊಡುತ್ತಾರೆ .


ಜಯ ಚಂದಲ್ ಮತ್ತು ಗೋಹಾ ತಮ್ಮ ಸೇನೆಯ ಅಶ್ವಪಡೆಯೊಂದಿಗೆ ಷೇರ್ ಷಾಹನ ಸೇನೆಯ ಮೇಲೆ ಮುಗಿಬಿದ್ದರು . ಅದೆಂಥಹ ಭೀಕರವಾಗಿ ಧಾಳಿಮಾಡಿದರೆಂದರೆ ಷೇರ್ ಷಾಹನ ಸೇನೆಯ ಒಂದು ಬೃಹತ್ ಭಾಗವೇ ನಾಶವಾಯಿತು . ಅವರ ಪರಾಕ್ರಮ ಅಲ್ಪಕಾಲದ್ದೇ ಆದರೂ ತಮ್ಮ ದೇಶಭಕ್ತಿ ಮತ್ತು ನಿಷ್ಠೆಯನ್ನು ಸಾಬೀತು ಪಡಿಸಿದರು . “ ಆ ಖಾಫೀರರು ನಮ್ಮ ಫೌಜನ್ನು ಕೊಚ್ಚುತ್ತಿದ್ದಾರೆ . . . ” ಎಂದು ಒಬ್ಬ ಅಫ್ಘಾನಿ ಷೇರ್ ಷಾಹನಿಗೆ ಸುದ್ದಿ ಮುಟ್ಟಿಸಿದಾಗ ಷೇರ್ ಷಾಹ್ ಹರ ಸಾಹಸಪಟ್ಟು ಪರಿಸ್ಥಿತಿಯನ್ನು ನಿಯಂತ್ರಿಸುತ್ತಾನೆ . ಖವಾಸ್ ಖಾನ್ ತನ್ನ ಪಡೆಯಿಂದ ಜಯ ಮತ್ತು ಗೋಹಾರನ್ನು ಕಾದಾಡಿ ಕೊಂದು ಕೊನೆಗೆ ವಿಜಯ ವಾರ್ತೆಯನ್ನು ಮುಟ್ಟಿಸಿದಾಗ ಷೇರ್ ಷಾಹ್ ನಿಟ್ಟುಸಿರು ಬಿಡುತ್ತಾ “ ಹಿಡಿಕಾಳಿನ ಆಸೆಗೆ ಒಂದು ಸಾಮ್ರಾಜ್ಯವನ್ನೇ ಕಳೆದುಕೊಳ್ಳುತ್ತಿದ್ದೆನಲ್ಲಾ . . . . ”
ಇದಾಗಿ ಕೇವಲ ಒಂದು ವರ್ಷದಲ್ಲಿ ಷೇರ್ ಷಾಹನನ್ನು ಬುಂದೇಲಖಂಡದ ಖಲಿಂಜರ್ ನಲ್ಲಿ ಮುತ್ತಿಗೆ ಹಾಕಿದಾಗ ಕೊಲ್ಲಲಾಯಿತು . ಅಷ್ಟಲ್ಲದೇ ಸಮರ್ ನ ಸಮರದಲ್ಲಿ ಅಫ್ಘನ್ನರನ್ನು ಅಜ್ಮೆರ್ ಮತ್ತು ನಾಗೋರಿನಿಂದಲೂ ಓಡಿಸುತ್ತಾನೆ .
ರಾಜಸ್ತಾನಿಯರ ಪರಿಶ್ರಮ ಮತ್ತು ಬಲಿದಾನಗಳು ಆ ಕಾಲದಲ್ಲಿ ಇಸ್ಲಾಮೀ ಧಾಳಿಕೋರರಿಂದ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಅಪಾರ ಪಾತ್ರವಿದೆ .


ಆದರೂ ಆ ದಿನ ಮಾಲದೇವನು ತನ್ನ ಸೇನೆಯನ್ನು ತೊರೆಯದಿದ್ದರೆ . . .

Sunday 1 November 2015

ನೆಪೋಲಿಯನ್ ಎಂಬ ಅದ್ಭುತ


           



            ಕೇವಲ 27 ವರ್ಷದ ಹರೆಯ ನೆಪೋಲಿಯನ್ ಬೋನಾಪಾರ್ಟ್ ಆಗಷ್ಟೇ ಇಟಲಿಯಲ್ಲಿಯ ಫ್ರೆಂಚ್ ಸೇನೆಗೆ ಬ್ರಿಗೇಡಿಯರ್ ಜನ್ರರ್ ಆಗಿ ನೇಮಕಗೊಂಡಿದ್ದ . ಅಲ್ಲಿಯತನಕವೂ ಯಾವತ್ತೂ ಒಂದು ಬೃಹತ್ ಸೇನೆಯನ್ನು ನೇತೃತ್ವ ವಹಿಸಿರಲಿಲ್ಲ . ಮೊದಲ ಬಾರಿಗೆ ನೇಮಕಗೊಂಡ ಈ ಚಿಕ್ಕ ಹುಡುಗ ಏನು ಸಾಧಿಸಿ ತೋರಿಸಿಯಾನೋ ಎಂದು ಅವನ ಕೆಳಗಿನವರು ಮೊದಲಿಸುತ್ತಿದ್ದರು . ಅದಲ್ಲದೇ ಕುಬ್ಜಕಾಯ ಬೇರೆ ಎಂದು ಅಣಕಿಸುತ್ತಿದ್ದರಂತೆ . ಆದರೆ ನೆಪೋಲಿಯನ್ನಿನ ಆ ಕುಬ್ಜ ಶರೀರದೊಳಗಗಿತ್ತು ಅಧಮ್ಯ ಆತ್ಮವಿಶ್ವಾಸ ಮಿತಿಮೀರಿದ ಛಲ. ಇದನ್ನು ವ್ಯಕ್ತಪಡಿಸಲು ಒಂದು ಅವಕಾಶಕ್ಕಾಗಿ ಹಾತೊರೆಯುತ್ತಿದ್ದನಷ್ಟೇ . ಸಿಕ್ಕ ಈ ಮೊದಲ ಅವಕಾಶವನ್ನು ಚನಾಗಿ ಬಳಸಿಕೊಳ್ಳುವುದಕ್ಕಾಗಿ ಜಾಗರೂಕತೆಯಿಂದ ತಯಾರಿಮಾಡುತ್ತಿದ್ದ .
ಅವನ ವ್ಯಕ್ತಿತ್ವದ ವರ್ಚಸ್ಸು ಹೇಗಿತ್ತೆಂದರೆ ಕೇವಲ ನೋಟಮಾತ್ರದಿಂದ ಅವನನ್ನು ಕಡೆಕಾಣುವ ಸೇನಾಧಿಕಾರಿಗಳಿಗೆ ಒಂದು ಸಣ್ಣ ನಡುಕ ಹುಟ್ಟಿಸುತ್ತಿತ್ತಂತೆ . ಆದರೆ ನೆಪೋಲಿಯನ್ ಸದಾ ಗಾಂಭೀರ್ಯ ಸ್ವಭಾವವಲ್ಲದೇ ಆಗಾಗ ಹಸನ್ಮುಖನಾಗಿ ಕುಚೋದ್ಯ ಮಾಡುತ್ತಲೋ ಎಲ್ಲರೊಂದಿಗೆ ಅವರಂತೆಯೇ ಬೆರೆತು ಉತ್ಸಾಹ ಚಿಮುಕಿಸುತ್ತಾ ಮತ್ತೆ ಕೆಲವು ಬಾರಿ ಸೇನಾಪತಿಯಂತೆ ಸಿಟ್ಟನ್ನೂ ತೋರುತ್ತಿದ್ದ .
ಆಗ ಅವನು ಮುಂಚೂಣಿ ಮಾಡುತ್ತಿದ್ದ ಸೇನೆ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿತ್ತು . ದೂರದ ಪ್ರಾನ್ಸ್ ಸದಾ ಕ್ರಾಂತಿಯಲ್ಲಿ ಮುಳುಗಿ ಆರ್ಥಿಕವಾಗಿ ಮುರಿದು ಬಿದ್ದಿದ್ದರಿಂದ ಇವರಿಗೆ ಸರಿಯಾಗಿ ವೇತನವೂ ದೊರೆಯುತ್ತಿರಲಿಲ್ಲ . ಸರಿಯಾದ ನಾಯಕತ್ವದ ಕೊರೆತೆ ಇದ್ದ ಕಾರಣ ಸೈನಿಕರು ಬೇಸತ್ತಿದ್ದರು ಕೂಡ . ಅದರ ಮೇಲೆ ನೆಪೋಲಿಯನ್ನನಿಗೆ ಮೇಲಿನಿಂದ ಆದೇಶ ಬಂದಿದ್ದೇನೆಂದರೆ ಈ ನಿರುತ್ಸಾಹಿ ಪಡೆಯಿಂದ ಸುಸಜ್ಜಿತ ಆಸ್ಟಿಯನ್ ಮತ್ತು ಪೀಡ್ ಮಾಂಟಿಯನ್ನರನ್ನು ಮಣಿಸಬೇಕೆಂದು .


ನೆಪೋಲಿಯನ್ ಅಲ್ಲಿ ಬಂದ ಕ್ಷಣದಿಂದಲೇ ಸೇನೆಯ ಪರಿಸ್ಥಿತಿಯನ್ನು ಸುಧಾರಿಸುವತ್ತ ಗಮನವಿತ್ತಿದ್ದ . ಸೇನೆಯ ರೀತಿ ರಿವಾಜುಗಳನ್ನು ಸರಿಪಡಿಸುವುದು ಅವಶ್ಯಕ ಸಾಮಾಗ್ರಿಗಳನ್ನು ಎಲ್ಲರಲ್ಲಿ ಹಂಚುವುದು ಇತ್ಯಾದಿ ಕೆಲಸಗಳಲ್ಲಿ ಮಗ್ನನಾದ . ಫ್ರಾನ್ಸ್ ನಿಂದ ಬರುವ ಸರಬರಾಜಿನ ಕೊರತೆಯೂ ಇತ್ತು . ಕೇವಲ 24 ತೋಪುಗಳು , 4000 ಬಳಲಿದ ಕುದುರೆಗಳು, 3 ಲಕ್ಷ ಬೆಳ್ಳಿ ನಾಣ್ಯಗಳು ಮತ್ತು ಕೇವಲ 30000 ಜನರಿಗೆ ಒಂದು ತಿಂಗಳಿಗೆ ಸಾಲುವ ಅರ್ಧದಷ್ಟು ಆಹಾರಸಾಮಾಗ್ರಿಗಳಿಂದ ಈಗ ಇಡೀ ಇಟಲಿಯನ್ನು ಕಬಳಿಸಬೇಕಿತ್ತು !
ಅದರ ಮೇಲೆ ಇವನ ರಣ ಚಾತುರ್ಯವೇನಿತ್ತೆಂದರೆ ಶತ್ರುಗಳಿಗೆ ಗೊತ್ತಾಗದಂತೆಯೇ ಅವನ ಬಳಿ ಅತಿ ವೇಗವಾಗಿ ಸೇನೆಯನ್ನು ಮುನ್ನುಗ್ಗಿಸುವುದು ! ಯಾವ ಚಳಿ, ಮಳೆಗೂ ಅಂಜದೆ ಎಂಥಹ ಗಿರಿಕಂದರಗಳ ನಡುವೆಯೂ ಮುನ್ನುಗ್ಗುವುದು . ಅದು ಆ ಕಾಲದಲ್ಲಿ ಇವನೇ ಕಂಡುಹಿಡಿದ ಬ್ಲಿಟ್ಜ್ ಕ್ರೀಗ್ ತಂತ್ರ .
ತನ್ನ ಸೈನಿಕರಿಗೆ ಉತ್ತೇಜಿಸುತ್ತಿದ್ದ – “ Soldiers, you are half starved and half naked. The Government owes you much, but can do nothing for you. Your patience, your courage, do your honour, but give you no glory, no advantage. I will lead you into the most fertile plains of the world. There you will find flourishing cities, teeming provinces. There you will reap honour, glory, and wealth. Soldiers of the Army of Italy, will you be wanting in courage and firmness?”
ನೆಪೋಲಿಯನ್ನಿನ ಈ ಮಾತುಗಳಿಂದ ಕೇವಲ ನೀರಸ ಪ್ರತಿಕ್ರಿಯೆಯಿತ್ತಷ್ಟೇ . ಆದರೂ ಸೇನೆಯನ್ನು ಉತ್ತೇಜಿಸುತ್ತಿದ್ದ – “ You are asking me to perform miracles, and I cannot do that . . . Only with prudence and foresight can we achieve great ends. It is but a step from victory to defeat. In affairs of magnitude I have learned that, in the last resort, everything invariably turns upon the trifle. ”
ಇನ್ನು ಹೇಳುವ ದೊಡ್ಡ ಮಾತುಗಳನ್ನು ಮಾಡಿ ತೋರಿಸಬೇಕಲ್ಲ . ಆಗಲೇ ಶತ್ರುಗಳ ಚಲನವಲನಗಳನ್ನು ಗಮನಿಸಿತ್ತಿದ್ದ . ಪೀಡ್ ಮಾಂಟೀಸ್ ಮತ್ತು ಆಸ್ಟ್ರಿಯನ್ನರ ಒಟ್ಟು 60000 ಬಲದ ಸೇನೆ. ಅದರಲ್ಲಿ 25000 ಪೀಡ್ ಮಾಂಟಿಯನ್ನರು ಮತ್ತು ಉಳಿದ 35000 ಆಸ್ಟ್ರಿಯನ್ನರ ಪಡೆ ಉತ್ತರಕ್ಕೂ ಮತ್ತು ಪಶ್ಚಿಮಕ್ಕೆ ಹಬ್ಬಿತ್ತು . ನೆಪೋಲಿಯನ್ ಗಮನಿಸಿದ್ದೇನೆಂದರೆ ಆ ಎರಡು ಸೇನೆಯ ನಡುವಿದ್ದ ಅಂತರ . ಆ ಅಂತರವನ್ನು ಮತ್ತಷ್ಟು ಹೆಚ್ಚಿಸಲೆಂದು ಒಂದು ಸಣ್ಣ ಪಡೆಯನ್ನು ಆಸ್ಟ್ರಿಯನ್ನರು ಅಟ್ಟಲೆಂದು ಪಶ್ಚಿಮದ ಬೋಶೆಟ್ಟಾ ಪಾಸ್ ಹಾದಿಯಾಗಿ ಕಳಿಸಿದ . ಆ ಸಣ್ಣ ಪಡೆಯಿಂದ ಮಣ್ಣು ಮುಕ್ಕಿದ ಆಸ್ಟ್ರಿಯನ್ನರು ಅದನ್ನು ಮುತ್ತುವರೆಯಲು ತಮ್ಮ ಸೇನೆಯನ್ನು ಮತ್ತಷ್ಟು ಪಶ್ಚಿಮಕ್ಕೆ ಎರಡು ಪಾರ್ಶ್ವದಲ್ಲಿ ಮುನ್ನುಗ್ಗಿದರು . ಆದರೆ ನೆಪೋಲಿಯನ್ನಿನ ಮುಖ್ಯ ಪಡೆ ಆ ಎರಡು ಸೇನೆಯ ನಡುವೆ ತಲುಪಲೆಂದು ಆಪನ್ನೈನ್ಸ್ ಮೂಲಕ ನಡೆದ . ಆಗ ಆಸ್ಟ್ರಿಯನ್ನಿನ ಒಂದು ಪಾರ್ಶ್ವ ಬೋಶೆಟ್ಟಾನಲ್ಲಿ ಸಿಲುಕಿ (ಬ್ಯಾಟಲ್ ಆಫ್ ಮೊಂಟೆನೊಟ್ಟಾ ಎಂಬಲ್ಲಿ ) ಸೋತುಹೋಯಿತು . ಇದು ನೆಪೋಲಿಯನ್ ಗೆ ಸಂದ ಮೊದಲ ಜಯ. ಮತ್ತೆ ನೆಪೋಲಿಯನ್ ಉತ್ತರಕ್ಕೆ ತಲುಪಿ ಪೀಡ್ ಮಾಂಟೀಸ್ ರನ್ನು ಎರಡೇ ವಾರದಲ್ಲಿ ಆರು ಯುದ್ಧಗಳಲ್ಲಿ ಮಣಿಸಿ ಒಪ್ಪಂದಕ್ಕೆ ಸಹಿ ಹಾಕಿಸಿದ . ಪೀಡ್ ಮಾಂಟಿಯನ್ನರು ಅಪಾರ ಕಪ್ಪ ಕಾಣಿಕೆಗಳನ್ನು ಕೊಟ್ಟರು . ಅಅವುಗಳನ್ನು ನೆಪೋಲಿಯನ್ ತನ್ನ ಸೈನಿಕರಿಗೆ ಹಂಚಿ ಅಭಿಮಂದಿಸಿದ .
ಈ ಬೆಳವಣಿಗೆಯಿಂದ ಮಿಕ್ಕ ಆಸ್ಟ್ರಿಯನ್ ಪಡೆಗಳು ಹೆದರಿದರು . ಅದ್ಯಾವನೋ ಹೊಸ ಬ್ರಿಗೇಡಿಯರ್ ಜನ್ರಲ್ ಅಂತೆ , ಒಂದು ಕಡೆ ಕೈಗೆ ಸಿಗುವುದಿಲ್ಲ , ಪದೇ ಪದೇ ತನ್ನ ಸೇನಾ ನೆಲೆಯನ್ನು ಬದಲಾಯಿಸುತ್ತಾನೆ. ಇವನ ಯುದ್ಧಕೌಶಲ್ಯ ವನ್ನು ಅರಿಯಲಾಗದೆ ಸೇನೆಯನ್ನು ಹಿಂಪಡೆಯುವುದು ಒಳಿತೆಂದು ಆಸ್ಟ್ರಿಯನ್ ಪಡೆ ಕಾಲ್ಕಿತ್ತಿತು . ಆದರೆ ನೆಪೋಲಿಯನ್ ಬೆನ್ನಟ್ಟುತ್ತಾ ಸ್ವಿಜರ್ ಲ್ಯಾಂಡಿನ ಆಲ್ಫ್ಸ್ ತನಕ ಮತ್ತೂ ಮುಂದೆ ತಲುಪಿದ . ಆಸ್ಟ್ರಿಯನ್ ತನ್ನ ಹಿಂಬದಿಯ ಒಂದು ಸೇನಾ ಭಾಗವನ್ನು ಲೋಡಿ ಎಂಬ ಸಣ್ಣ ಪಟ್ಟಣದಲ್ಲಿ ಬಿಟ್ಟು ಮಿಕ್ಕ ಪಡೆಗಳು ಮುಂದೆ ನಡೆದಿದ್ದವು .


ಆ ಲೋಡಿಯಲ್ಲಿ ಒಂದು ಸೇತುವೆಯನ್ನು 14 ತೋಪುಗಳಿಂದ ಮತ್ತು 3 ಬೆಟ್ಯಾಲಿಯನ್ ಗಳಿಂದ ಪ್ರೆಂಚರ ಪಡೆಯನ್ನು ತಡೆಯಲು ನಿಂತಿದ್ದವು . ನದಿಯ ಮತ್ತೊಂದು ದಂಡೆಯಲ್ಲಿ ಬಂದು ನಿಂತಿದ್ದ ನೆಪೋಲಿಯನ್ ಸೇನೆಗೆ ಇದೊಂದು ಸವಾಲಾಗಿ ಎದುರಾಯಿತು . ಯಾವ ರಣತಂತ್ರವೂ ಇಂಥಹ ಸ್ಥಿತಿಯಲ್ಲಿ ನಡೆಯುವುದಿಲ್ಲ . ಇಲ್ಲಿ ಬೇಕಾಗಿರುವುದು ಧೈರ್ಯವಷ್ಟೇ . ಅಲ್ಲಿಯತನಕ ತನ್ನ ಸೇನೆಯನ್ನು ಮುಂದುವರೆಸಿ ಬಂದಿದ್ದ ನೆಪೋಲಿಯನ್ನನಿಗೆ ತನ್ನ ಸೈನಿಕರಿಂದ ಗೌರವ ವಿಶ್ವಾಸ ಗಳಿಸಿದ್ದ . ಈಗ ಮತ್ತಷ್ಟು ಉತ್ತೇಜಿಸಿ ಒಂದೊಂದು ಸುತ್ತಿನಲ್ಲಿ ಅವರ ತೋಪಿನ ಧಾಳಿಯ ನಡುವೆಯೂ ಮುನ್ನುಗ್ಗುವುದೆಂದು ಯೋಜನೆ . ಹಾಗೆಯೇ ಸೈನಿಕರೂ ತಮ್ಮ ಪ್ರಾಣ ಕೊಡುತ್ತಲೇ ಮುಂದೆ ನುಗ್ಗುತ್ತಾ ಸೇತುವೆ ದಾಟಿ ಅವರ ತೋಪುಗಳ ಸದ್ದಡಗಿಸಿ ಜಯಗಳಿಸಿದರು . ಈ ಹೋರಾಟದ ನಡುವೆ ನಪೋಲಿಯನ್ ಸಹಿತವೂ ತಾನೊಬ್ಬ ದಂಡಾಧಿಕಾರಿಯೆಂಬ ಗರ್ವವಿಲ್ಲದೇ ತನ್ನ ಸೈನಿಕರ ಮಧ್ಯೆಯೇ ಓಡಾಡುತ್ತಿದ್ದ . ಪಕ್ಕದಲ್ಲಿಯೇ ತೋಪಿನ ಗುಂಡಿನ ಸ್ಫೋಟಗಳಾಗುತ್ತಿದ್ದರೂ ಭಯವಿಲ್ಲದೇ ತನ್ನ ಸೈನಿಕರಿಗೆ ಉತ್ಸಾಹ ತುಂಬುತ್ತಿದ್ದ .
ತದ ನಂತರ ಪುನಃ ತನ್ನ ಸೇನೆಯನ್ನು ಆಸ್ಟ್ರಿಯಾದ ಒಳಗೇ ನುಗ್ಗಿ ವಿಯೆನ್ನಾದ ಕೇವಲ 75 ಕಿ ಮೀ ಸಮೀಪ ತಲುಪಿದ . ಈ ರಭಸದ ವೇಗಕ್ಕೆ ತತ್ತರಿಸಿದ ಆಸ್ಟ್ರಿಯನ್ ರಾಜ ಮರುಮಾತಿಲ್ಲದೇ ಶರಣಾದ .
ನೆಪೋಲಿಯನ್ನಿನ ಈ ಇಟಲಿಯ ದಂಡಯಾತ್ರೆ ಪ್ಯಾರಿಸ್ಸಿನಲ್ಲಿ ಮನೆ ಮಾತಾಯಿತು . ಆಗಿನ್ನೂ ಅವನಿಗೆ ಕೇವಲ 28 ವಯಸ್ಸು . ಚಕ್ರವರ್ತಿಯೂ ಆಗಿರಲಿಲ್ಲ . ಮತ್ತು ಆಗ ಇದು ಯುರೋಪಿನಲ್ಲಿ ನೆಪೋಲಿಯನ್ನಿನ ಬಿರುಗಾಳಿಯ ಪ್ರಾರಂಭವಷ್ಟೇ .