ಹಾಜೀಪೀರ್ ಪಾಸನ್ನು ಭಾರತೀಯ ಸೇನೆ ವಶಪಡಿಸಿಕೊಂಡ ನಂತರ ತಮ್ಮ
ಆಪರೇಷನ್ ಜಿಬ್ರಾಲ್ಟರ್ ಮುರಿದುಬಿತ್ತು.ಇದ್ದರಿಂದ ಮುಖಭಂಗ ಅನುಭವಿಸಿದ ಪಾಕಿಗಳು ಆಪರೇಷನ್ ಗ್ರಾಂಡ್
ಸ್ಲಾಮ್ ಎಂಬ ಮತ್ತೊಂದು ದುಃಸ್ಸಾಹಸಕ್ಕೆ ಕೈ ಹಾಕಿತ್ತು. ಅದೇನೆಂದರೆ ಜಮ್ಮುವಿನ ಅಖ್ನೂರನ್ನು ವಶಪಡಿಸಿಕೊಂಡು
ಇಡೀ ರಾಜ್ಯಕ್ಕೆ ಸಂಪರ್ಕ ಕಡಿಸಿ ಒಂದೇ ಸಮನೆ ಜಮ್ಮು- ಕಾಶ್ಮೀರವನ್ನು ಕಬಳಿಸಬೇಕೆಂದು.
ಸೆಪ್ಟೆಂಬರ್ 1 ,1965, ಬೆಳಿಗ್ಗೆ 4 ಗಂಟೆ, ಚಂಬ್ – ಜೌರಿಯನ್ ಸೆಕ್ಟರ್.
ಪಾಕಿಸ್ತಾನದ ಎರಡು ಇನ್ಫೆಂಟ್ರಿ ಡಿವಿಝನ್ ಜೊತೆಗೆ ಲಾಂಗ್
ರೇಂಜ್ ಆರ್ಟಿಲ್ಲರಿಗಳು ಮತ್ತೆ 70 ಟ್ಯಾಂಕುಗಳನ್ನೊಳಗೊಂಡ ಭಾರೀ ಸೇನೆಯೊಂದಿಗೆ ಗಡಿಯನ್ನು ದಾಟಿ ಅಖ್ನೂರನತ್ತ
ಭಾರೀ ಕೋಲಾಹಲವೆಬ್ಬಿಸಲು ಶುರು ಮಾಡಿದರು. ಈ ರಭಸದ ಧಾಳಿಯನ್ನು ಒಮ್ಮೆಲೆ ಎದುರಿಸಲು ಭೂಸೇನೆಗೆ ಸಾಧ್ಯವಾಗಲಿಲ್ಲ.
ಆಗ ಸೇನಾ ಜನರಲ್ ಜೆ ಎನ್ ಚೌಧರಿ ವಾಯುಧಾಳಿಯ ಬೆಂಬಲಕ್ಕೆ ಏರ್ ಮಾರ್ಷಲ್ ಅರ್ಜನ್ ಸಿಂಗರಿಗೆ ಕೋರುತ್ತಾರೆ.
ಆಗ ಅರ್ಜನರಿಗೆ ಸ್ವತಂತ್ರವಾಗಿ ವಾಯು ಧಾಳಿಗೆ ನಿರ್ಧಾರ ತೆಗೆದುಕೊಳ್ಳಲು ಹಿಂಜರೆಯುತ್ತಾರೆ.ಏಕೆಂದರೆ
ಎಲ್ಲಾದರೂ ವಾಯುಸೇನೆಯನ್ನು ಬಿಟ್ಟರೆ ಯುದ್ಧ ತನ್ನ ವ್ಯಾಪ್ತಿಯನ್ನು ಮೀರುತ್ತದೆ. ತಕ್ಷಣ ಅರ್ಜನ್
ಸಿಂಗ್ ಆಗಿನ ರಕ್ಷಣಾ ಮಂತ್ರಿ ಚೌಹಾಣರನ್ನು ಭೇಟಿ ಮಾಡುತ್ತಾರೆ. ಚೌಹಾಣರು ಕೇವಲ ಒಂದು ಗಂಟೆಯಲ್ಲೇ
ವಾಯುಧಾಳಿಗೆ ಅನುಮತಿ ನೀಡುತ್ತಾರೆ.
ಆಗ ನಿಕಟದಲ್ಲೇ ಇದ್ದ ಪಠಾಣ್ಕೋಟ್ ಏರ್ ಬೇಸ್ ಯುದ್ಧಸನ್ನದ್ಧವಾಗುತ್ತದೆ.
ಫೈಟರ್ಸ್ ಮತ್ತು ಬಾಂಬರ್ ಗಳು ಮುಂಬರುತ್ತಿದ್ದ ಪಾಕಿ ಸೇನೆಯಮೇಲೆ ಧಾಳಿ ಶುರುಮಾಡಿದವು. ಆದರೆ ಮುಖ್ಯ
ಧಾಳಿಯ ಆದೇಶ ಬರುವಷ್ಟರಲ್ಲಿ ಸಂಜೆಯಾಗಿತ್ತು. ಆ ಸಮಯದಲ್ಲಿ ವಾಂಪೈರ್ ಜೆಟ್ ಗಳು ಪೂರ್ಣಪ್ರಮಾಣದಲ್ಲಿ
ಶಸ್ತ್ರಾಸ್ತ್ರಗಳನ್ನು ಹೊತ್ತು ತಯಾರಾಗಿದ್ದವು. ಪಾಕಿಗಳ ಆಧುನಿಕ ಸೇಬರ್ ಮತ್ತು ಸ್ಟಾರ್ ಜೆಟ್ ಗಳಿಗೆ
ಹೋಲಿಸಿದರೆ ಈ ವಾಂಪೈರ್ ಗಳು ಏನೂ ಇಲ್ಲ .ಮತ್ತೆ ಈ ವ್ಯಾಂಪೈರ್ ಗಳ ಬದಲಾಗಿ ಮಿಸ್ಟೀಕ್ ಫೈಟರ್ ಗಳನ್ನು
ಕಳಿಸಬೇಕಾಗಿತ್ತು, ಆದರೆ ಕತ್ತಲಾವರಿಸುತ್ತಿತ್ತು. ರಾತ್ರಿ ವೇಳೆಯಲ್ಲಿ ಯುದ್ಧ ಮಾಡುವ ಕ್ಷಮತೆಯಿಲ್ಲದ
ಕಾರಣ ಮಿಸ್ಟೀಕ್ ಗಳನ್ನು ಕಳಿಸಲಾಗಲಿಲ್ಲ. ಪರಿಸ್ಥಿತಿಯ ಒತ್ತಡ ಹಾಗಿತ್ತು.
ಸ್ಕಾರ್ಡ್ರನ್ ಲೀಡರ್ ಧಾರರ ಮೊದಲ ವಾಂಪೈರ್ ಫಾರ್ಮೇಶನ್ ಅಖ್ನೂರಿನತ್ತ
ಹಾರಿದವು. ಅದರಲ್ಲಿ ಒಂದಕ್ಕೆ ಆಂಟಿ ಏರ್ಕ್ರಾಫ್ಟ್ ಗನ್ನಿನ ಹೊಡೆತಬಿದ್ದು ಎಜೆಕ್ಟ್ ಮಾಡಬೇಕಾಯ್ತು.
ತದನಂತರವೇ ಪಾಕಿಯ ಫ್ಲೈಟ್ ಲೆಫ್ಟನೆಟ್ ಸರ್ಫರಾಝ್
ರಫೇಕಿಯ ಒಂದು ಸೇಬರ್ ಸ್ಕ್ವಾರ್ಡ್ರನ್ ( ಅಂದರೆ 4 ವಿಮಾನಗಳು ) ಬಂದು ಮತ್ತೆರಡು ವಾಂಪೈರ್ ಗಳನ್ನು
ಹೊಡೆದವು. ಆಗ ಉಳಿದ ಇಬ್ಬರು ಫ್ಲೈಟ್ ಲೆಫ್ಟನೆಂಟ್ ಸೋಂಧಿ ಮತ್ತು ಫ್ಲೈಯಿಂಗ್ ಆಫಿಸರ್ ಪಾಠಕ್ ಸೇಬರ್ಗಳನ್ನು ಎಂಗೇಜ್ ಮಾಡಲು ಮುಗಿಬಿದ್ದರು.
ಸೋಂಧಿಯವರು ಸರ್ಫರಾಝ್ ನ ಮೇಲೆ ಫೈರ್ ಮಾಡಿದರು ಆದರೆ ಸಫಲವಾಗಲಿಲ್ಲ. ಮತ್ತೊಂದು ಸೇಬರ್ ಪಾಠಕರನ್ನು
ಬಲಿ ತೆಗೆದುಕೊಂಡಿತು. ಸೋಂಧಿ ನಿರಾಶೆಯಿಂದ ವಾಪಸಾದರು.
ಎವೆಲ್ಲಗಳ ಮಧ್ಯೆ ವಾಂಪೈರ್ ಗಳ ಮೂರನೇ ಫಾರ್ಮೇಶನ್ ಭೂಸೇನೆಯ
ಮೇಲೆ ತಮ್ಮ ಶಸ್ತ್ರಾಸ್ತಗಳ ರುಚಿ ತೋರಿಸಿದವು. ಟ್ಯಾಂಕ್ ಮತ್ತು ವಾಹನಗಳ ಮೇಲೆ ಗುಂಡಿನ ಧಾಳಿ ಮಾಡಿದವು.
ಕತ್ತಲಾಗಿದ್ದರೂ ಮಿಸ್ಟೀಕ್ ಹೆವಿ ಫೈಟರ್ ಗಳು ಧಾಳಿಗಿಳಿದವು. 3 ನೇ ಮತ್ತು 31 ನೇ ಸ್ಕಾರ್ಡ್ರನ್
ಮಿಸ್ಟೀಕ್ ಗಳು ಒಟ್ಟು 16 ಬಾರಿ ಧಾಳಿಮಾಡಿದವು. ವಿಂಗ್ ಕಮ್ಯಾಂಡರ್ ಗುಡ್ಮನ್ ರ ನೇತೄತ್ವದಲ್ಲಿ ನಡೆದವು.
ಮಿಸ್ಟೀಕ್ ಗಳು ಭಾರೀ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಬಲಶಾಲಿ ಗ್ರೌಂಡ್ ಅಟ್ಯಾಕ್ ಏರ್ ಕ್ರಾಫ್ಟ್
ಗಳಾಗಿದ್ದವು.
ಕಂಡ ಧಾಳಿಗಳಲ್ಲಿ ಫ್ಲೈಟ್ ಲೆಫ್ಟನೆಂಟ್ ತ್ರಿಲೋಚನ್ ಸಿಂಗ್
ಮತ್ತು ದೊರೆಸ್ವಾಮಿ ನಿಖರವಾಗಿ ಟ್ಯಾಂಕ್ ಮತ್ತಿನ್ನಿತರ
ವಾಹನಗಳ ಬಲಿ ತೆಗೆದುಕೊಂಡರು . ಎಲ್ಲಾ ವಾಹನಗಳ ಮೇಲೆ ಬೆಂಕಿಯು ಹೊಗೆಯಾಡುವುದು ಕಂಡು ಬಂದಿತು. ಆಶ್ಚರ್ಯಕರ ವಿಷಯವೇನೆಂದರೆ ಆಗ ಯಾವ ಸೇಬರ್ ಜೆಟ್ ಗಳು ಅಡ್ಡಿಯುಂಟುಮಾಡದೇ
ಇದ್ದದ್ದು. ಆದ್ದರಿಂದ ನಮ್ಮ ವಾಯುಧಾಳಿಯ ಆರ್ಭಟಕ್ಕೆ ಪಾಕಿಗಳ ಭೂಸೇನೆಯ ಗತಿ ಮಂದವಾಗುತ್ತಾ ಹೋಯ್ತು.
ಕೇವಲ ಎರಡು ಗಂಟೆಗಳಲ್ಲಿ ಪಾಕಿಗಳ 13 ಟ್ಯಾಂಕ್ ಗಳು ,ಎರಡು ಭಾರೀ ತೋಪುಗಳು ಮತ್ತೆಷ್ಟೋ ವಾಹನಗಳು ದ್ವಂಸಗೊಂಡವು. ಪಾಕಿಗಳು ಭಾರತೀಯ
ಮಿಸ್ಟೀಕ್ ವಿಮಾನಗಳಿಂದ ಬಿದ್ದ ಹೊಡೆತ ಎಂದಿಗೂ ಮರೆಯಲಾಗುವುದಿಲ್ಲ.
ಅಖ್ನೊರಿನ ಧಾಳಿಯನ್ನು ಸಮರ್ಥವಾಗಿ ಎದುರಿಸಿದ್ದರೂ ಸಹಿತ ಪಾಕಿಗಳು ಸೇಬರ್
ಗಳಿಂದ ನಮ್ಮ ಕೆಲವು ವಾಂಪೈರ್ ಗಳನ್ನು ಹೊಡೆದಿದ್ದ
ಕಾರಣ ಹಿಗ್ಗಿದ್ದರು. ಆ ಸರ್ಫರಾಝ್ ನಿಗೆ ಉತ್ತರ ಕೊಡುವುದೂ ಬಾಕಿಯಿತ್ತು. ಹಾಗಾಗಿ ಸೇಬರ್ ಜೆಟ್ ಗಳನ್ನು
ಎದುರಿಸುವುದೂ ಸಹಿತ ನಮ್ಮ ಯೋಧರಿಗೊಂದು ಸವಾಲಾಗಿತ್ತು.
No comments:
Post a Comment