Sunday 8 November 2015

ಸಮ್ಮಲ್ ನ ಸಮರ








ಹದಿನಾರನೆಯ ಶತಮಾನದ ಆದಿಯಲ್ಲಿ ರಾಜಸ್ತಾನದಲ್ಲಿ ಮೇವಾಡ್ ಮತ್ತು ಮಾರ್ವಾರ್ ಮನೆತನಗಳು ಪ್ರಭುತ್ವಕ್ಕೆ ಬಂದಿದ್ದವು . ಆ ಕಾಲವೂ ನಿರಂತರ ವಿದೇಶೀ ಆಕ್ರಮಣಗಳನ್ನು ನೇರಾನೇರಾ ಎದುರಿಸುತ್ತಿದ್ದ ಘೋರ ಕಾಲಘಟ್ಟವೇ ಆಗಿತ್ತು . ಆದರೂ ಈ ಎರಡು ರಾಜಪೂತರು ಒಂದಾಗಿರದೆ ಪರಸ್ಪರ ವೈರತ್ವವನ್ನಿಟ್ಟುಕೊಂಡಿದ್ದರು .


1532 ರಲ್ಲಿ ರಾವ್ ಮಾಲ್ ದೇವ್ ಮಾರ್ವಾರಿನ ಸಿಂಹಾಸನವನ್ನೇರಿದ್ದ . ತನ್ನ ಸಾಮ್ರಾಜ್ಯವನ್ನು ದೆಹಲಿಯಿಂದ ಕೇವಲ 50 ಮೈಲಿ ದೂರದಲ್ಲಿದ್ದ ಹಿಸ್ಸರ್ ಮತ್ತು ಜಝ್ಹರ್ ತನಕ ವಿಸ್ತರಿಸಿದ್ದ . ಇದರಿಂದ ದೆಹಲಿಯನ್ನಾಳುತ್ತಿದ್ದ ಷೇರ್ ಷಾಹ್ ಸೂರಿಗೆ ಗುಜರಾತ್ ಮತ್ತು ಪಶ್ಚಿಮ ಏಷ್ಯಾದೊಂದಿಗಿನ ವ್ಯಾಪಾರ ಸಂಪರ್ಕ ಕಡಿತಗೊಂಡಿತ್ತು . ಆದರೆ ಷೇರ್ ಷಾಹನ ಸಾಮಂತರು ತಾರೀಖ್ ಇ ದೌದ್ರಿಯ ಪ್ರಕಾರ ದಕ್ಷಿಣದ ಶಿಯಾ ಸುಲ್ತಾನರನ್ನು ಮಣಿಸಲೆಂದು ದಂಡಯಾತ್ರೆ ಹೊರಡಬೇಕೆಂದು ಒತ್ತಾಯಿಸುತ್ತಾರೆ . ಅದಕ್ಕೆ ಷೇರ್ ಷಾಹ್ ಸಮ್ಮತಿಸಿದನಾದರೋ ಅದಕ್ಕೆ ಮೊದಲು ಉತ್ತರ ಭಾರತವನ್ನು ಇಸ್ಲಾಮೀಕರಣಗೊಳಿಸದೇ ದಕ್ಷಿಣಕ್ಕೆ ಮುನ್ನಡೆಯುವುದಿಲ್ಲ . ಮೊದಲು ಆ ಖಾಫಿರ್ ರಾವ್ ಮಾಲದೇವನನ್ನು ಮುಗಿಸಿ ಆ ಮಾರ್ವಾರನ್ನು ವಶಪಡಿಸಿಕೊಳ್ಳಬೇಕೆಂದು ನಿಶ್ಚಯಿಸಿದ್ದ .


ಷೇರ್ ಷಾ 80000 ಬಲದ ಒಂದು ದೊಡ್ಡ ಸೇನೆಯನ್ನು ಮಾರ್ವಾರಿನ ದಂಡಯಾತ್ರೆಗೆ ಸಿದ್ಧಪಡಿಸಿ 1543ಯ ಚಳಿಗಾಲದಲ್ಲಿ ರಾಜಸ್ತಾನಕ್ಕೆ ಕಾಲಿಟ್ಟ . ಅತ್ಯಂತ ಜಾಕರೂಕತೆಯಿಂದ ನಿಧಾನವಾಗಿ ಸಾಗುತ್ತಾ ಮಾಲದೇವನ ಸರಹದ್ದಿನಲ್ಲಿ ಬಂದು ಸಮಸ್ತ ಸೇನೆ ಡೇರೆ ಹಾಕಿತ್ತು .
ಇದರ ವಿರುದ್ಧ ಮಾಲದೇವನೂ 50000 ಬಲದ ಸೇನೆಯೊಂದಿಗೆ (ಬಹುತೇಕ ಅಶ್ವದಳ ಮತ್ತು ಒಂಟೆಗಳ ಪಡೆ) ಸಮೀಪಿಸಿದ . ಮಾಲದೇವನಿಗೆ ಯುದ್ಧಮಾಡದೇ ಎದುರಾಳಿಯನ್ನು ಮಣಿಸಿವ ಒಂದು ತಂತ್ರ ತಿಳಿದಿತ್ತು . ಹೇಗಿದ್ದರೂ ಷೇರ್ ಷಾಹನದ್ದು ಅತಿ ದೊಡ್ಡ ಸೇನೆ ಮತ್ತು ಮರುಭೂಮಿಯ ಮಧ್ಯೆ ಆಹಾರ ನೀರಿನ ಸರಬರಾಜಿನ ಸಮಸ್ಯೆ ಆಗುವುದು ಶತಃಸಿದ್ದ . ಅದರಿಂದ ಷೇರ್ ಷಾನ ಸೇನೆ ಬಸವಳಿಯುವ ತನಕವೂ ಕಾದು ಅವರಿಗೆ ಬಲವಾದ ಹೊಡೆತ ನೀಡಲ್ಲೆಂದು ಮಾಲದೇವನೂ ಸಹಿತ ತನ್ನ ಸೇನೆಯನ್ನು ಡೇರೆ ಬಿಟ್ಟು ಕಾದು ಕುಳಿತ .


ಮಾಲದೇವನ ಈ ಉಪಾಯ ಫಲಪ್ರದಾಯಕ ವಾಯಿತು . ಎರಡು ತಿಂಗಳ ಕಾಲ ಏನೂ ಮಾಡದೇ ಕುಳಿತಿದ್ದಕ್ಕೆ ಷೇರ್ ಷಾಹನ ಸೇನೆ ಅನ್ನಾಹಾರದ ಕೊರತೆಯಿಂದ ಬಳಲಿತು . ಷೇರ್ ಷಾ ಚಿಂತಾಕ್ರಾಂತನಾದ . ಆಗ ಷೇರ್ ಷಾ ತನ್ನ ನರಿ ಬುದ್ಧಿಯ ಕುಟಿಲ ಉಪಾಯ ಹೂಡಿದ . ಒಂದಿಷ್ಟು ನಕಲು ಪತ್ರಗಳನ್ನು ಮಾಲದೇವನ ಪಾಳೇಗಾರರನ್ನುದ್ದೇಶಿಸಿ ಬರೆದು ತನ್ನತ್ತ ಮಾಲದೇವನ ಪಾಳೇಗಾರರು ಕುಟಿಲ ತಂತ್ರ ರಚಿಸುತ್ತಿದ್ದಾರೆಂದು ಕಥೆಯನ್ನು ಕಟ್ಟಿ ಆ ಪತ್ರಗಳು ಮಾಲದೇವನಿಗೆ ಸಿಗುವಂತೆ ಮಾಡಿದ . ಈ ವಿಷಯವನ್ನು ಮಾಲದೇವನ ಪಾಳೇಗಾರರು ಸಾರಾಸಗಟು ತಳ್ಳಿಹಾಕಿದರೂ ಮಾಲದೇವ ನಂಬಿಕೆ ಮುರಿದು ತನ್ನ ಮುಖ್ಯ ಸೇನೆಯೊಂದಿಗೆ ತೆರಳುತ್ತಾನೆ !
ಈ ಸಮಯದಲ್ಲಿ ಆ ಪಾಳೇಗಾರರು ಏನು ಮಾಡಲು ಸಾಧ್ಯ ? ಆದರೆ ಅವರು ವಿಚಲಿತರಾಗಲಿಲ್ಲ . ಅವರ ದೇಶಭಕ್ತಿಯನ್ನು ಮೆಚ್ಚುವಂಥದ್ದೇ . ಕೇವಲ 20000 ಸೇನೆಯಿದ್ದರೂ ಷೇರ್ ಷಾಹನನ್ನು ಎದುರಿಸಲು ಪಣತೊಡುತ್ತಾರೆ .


ಜಯ ಚಂದಲ್ ಮತ್ತು ಗೋಹಾ ತಮ್ಮ ಸೇನೆಯ ಅಶ್ವಪಡೆಯೊಂದಿಗೆ ಷೇರ್ ಷಾಹನ ಸೇನೆಯ ಮೇಲೆ ಮುಗಿಬಿದ್ದರು . ಅದೆಂಥಹ ಭೀಕರವಾಗಿ ಧಾಳಿಮಾಡಿದರೆಂದರೆ ಷೇರ್ ಷಾಹನ ಸೇನೆಯ ಒಂದು ಬೃಹತ್ ಭಾಗವೇ ನಾಶವಾಯಿತು . ಅವರ ಪರಾಕ್ರಮ ಅಲ್ಪಕಾಲದ್ದೇ ಆದರೂ ತಮ್ಮ ದೇಶಭಕ್ತಿ ಮತ್ತು ನಿಷ್ಠೆಯನ್ನು ಸಾಬೀತು ಪಡಿಸಿದರು . “ ಆ ಖಾಫೀರರು ನಮ್ಮ ಫೌಜನ್ನು ಕೊಚ್ಚುತ್ತಿದ್ದಾರೆ . . . ” ಎಂದು ಒಬ್ಬ ಅಫ್ಘಾನಿ ಷೇರ್ ಷಾಹನಿಗೆ ಸುದ್ದಿ ಮುಟ್ಟಿಸಿದಾಗ ಷೇರ್ ಷಾಹ್ ಹರ ಸಾಹಸಪಟ್ಟು ಪರಿಸ್ಥಿತಿಯನ್ನು ನಿಯಂತ್ರಿಸುತ್ತಾನೆ . ಖವಾಸ್ ಖಾನ್ ತನ್ನ ಪಡೆಯಿಂದ ಜಯ ಮತ್ತು ಗೋಹಾರನ್ನು ಕಾದಾಡಿ ಕೊಂದು ಕೊನೆಗೆ ವಿಜಯ ವಾರ್ತೆಯನ್ನು ಮುಟ್ಟಿಸಿದಾಗ ಷೇರ್ ಷಾಹ್ ನಿಟ್ಟುಸಿರು ಬಿಡುತ್ತಾ “ ಹಿಡಿಕಾಳಿನ ಆಸೆಗೆ ಒಂದು ಸಾಮ್ರಾಜ್ಯವನ್ನೇ ಕಳೆದುಕೊಳ್ಳುತ್ತಿದ್ದೆನಲ್ಲಾ . . . . ”
ಇದಾಗಿ ಕೇವಲ ಒಂದು ವರ್ಷದಲ್ಲಿ ಷೇರ್ ಷಾಹನನ್ನು ಬುಂದೇಲಖಂಡದ ಖಲಿಂಜರ್ ನಲ್ಲಿ ಮುತ್ತಿಗೆ ಹಾಕಿದಾಗ ಕೊಲ್ಲಲಾಯಿತು . ಅಷ್ಟಲ್ಲದೇ ಸಮರ್ ನ ಸಮರದಲ್ಲಿ ಅಫ್ಘನ್ನರನ್ನು ಅಜ್ಮೆರ್ ಮತ್ತು ನಾಗೋರಿನಿಂದಲೂ ಓಡಿಸುತ್ತಾನೆ .
ರಾಜಸ್ತಾನಿಯರ ಪರಿಶ್ರಮ ಮತ್ತು ಬಲಿದಾನಗಳು ಆ ಕಾಲದಲ್ಲಿ ಇಸ್ಲಾಮೀ ಧಾಳಿಕೋರರಿಂದ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಅಪಾರ ಪಾತ್ರವಿದೆ .


ಆದರೂ ಆ ದಿನ ಮಾಲದೇವನು ತನ್ನ ಸೇನೆಯನ್ನು ತೊರೆಯದಿದ್ದರೆ . . .

No comments:

Post a Comment