ಹದಿನಾರನೆಯ
ಶತಮಾನದ ಆದಿಯಲ್ಲಿ ರಾಜಸ್ತಾನದಲ್ಲಿ
ಮೇವಾಡ್ ಮತ್ತು ಮಾರ್ವಾರ್ ಮನೆತನಗಳು
ಪ್ರಭುತ್ವಕ್ಕೆ ಬಂದಿದ್ದವು .
ಆ ಕಾಲವೂ ನಿರಂತರ
ವಿದೇಶೀ ಆಕ್ರಮಣಗಳನ್ನು ನೇರಾನೇರಾ
ಎದುರಿಸುತ್ತಿದ್ದ ಘೋರ ಕಾಲಘಟ್ಟವೇ
ಆಗಿತ್ತು . ಆದರೂ
ಈ ಎರಡು ರಾಜಪೂತರು ಒಂದಾಗಿರದೆ
ಪರಸ್ಪರ ವೈರತ್ವವನ್ನಿಟ್ಟುಕೊಂಡಿದ್ದರು
.
1532 ರಲ್ಲಿ
ರಾವ್ ಮಾಲ್ ದೇವ್ ಮಾರ್ವಾರಿನ
ಸಿಂಹಾಸನವನ್ನೇರಿದ್ದ .
ತನ್ನ ಸಾಮ್ರಾಜ್ಯವನ್ನು
ದೆಹಲಿಯಿಂದ ಕೇವಲ 50 ಮೈಲಿ
ದೂರದಲ್ಲಿದ್ದ ಹಿಸ್ಸರ್ ಮತ್ತು
ಜಝ್ಹರ್ ತನಕ ವಿಸ್ತರಿಸಿದ್ದ .
ಇದರಿಂದ
ದೆಹಲಿಯನ್ನಾಳುತ್ತಿದ್ದ ಷೇರ್
ಷಾಹ್ ಸೂರಿಗೆ ಗುಜರಾತ್ ಮತ್ತು
ಪಶ್ಚಿಮ ಏಷ್ಯಾದೊಂದಿಗಿನ ವ್ಯಾಪಾರ
ಸಂಪರ್ಕ ಕಡಿತಗೊಂಡಿತ್ತು .
ಆದರೆ ಷೇರ್ ಷಾಹನ
ಸಾಮಂತರು ತಾರೀಖ್ ಇ ದೌದ್ರಿಯ
ಪ್ರಕಾರ ದಕ್ಷಿಣದ ಶಿಯಾ ಸುಲ್ತಾನರನ್ನು
ಮಣಿಸಲೆಂದು ದಂಡಯಾತ್ರೆ ಹೊರಡಬೇಕೆಂದು
ಒತ್ತಾಯಿಸುತ್ತಾರೆ . ಅದಕ್ಕೆ
ಷೇರ್ ಷಾಹ್ ಸಮ್ಮತಿಸಿದನಾದರೋ
ಅದಕ್ಕೆ ಮೊದಲು ಉತ್ತರ ಭಾರತವನ್ನು
ಇಸ್ಲಾಮೀಕರಣಗೊಳಿಸದೇ ದಕ್ಷಿಣಕ್ಕೆ
ಮುನ್ನಡೆಯುವುದಿಲ್ಲ .
ಮೊದಲು ಆ ಖಾಫಿರ್
ರಾವ್ ಮಾಲದೇವನನ್ನು ಮುಗಿಸಿ ಆ
ಮಾರ್ವಾರನ್ನು ವಶಪಡಿಸಿಕೊಳ್ಳಬೇಕೆಂದು
ನಿಶ್ಚಯಿಸಿದ್ದ .
ಷೇರ್
ಷಾ 80000 ಬಲದ
ಒಂದು ದೊಡ್ಡ ಸೇನೆಯನ್ನು ಮಾರ್ವಾರಿನ
ದಂಡಯಾತ್ರೆಗೆ ಸಿದ್ಧಪಡಿಸಿ
1543ಯ ಚಳಿಗಾಲದಲ್ಲಿ
ರಾಜಸ್ತಾನಕ್ಕೆ ಕಾಲಿಟ್ಟ .
ಅತ್ಯಂತ ಜಾಕರೂಕತೆಯಿಂದ
ನಿಧಾನವಾಗಿ ಸಾಗುತ್ತಾ ಮಾಲದೇವನ
ಸರಹದ್ದಿನಲ್ಲಿ ಬಂದು ಸಮಸ್ತ
ಸೇನೆ ಡೇರೆ ಹಾಕಿತ್ತು .
ಇದರ
ವಿರುದ್ಧ ಮಾಲದೇವನೂ 50000
ಬಲದ ಸೇನೆಯೊಂದಿಗೆ
(ಬಹುತೇಕ
ಅಶ್ವದಳ ಮತ್ತು ಒಂಟೆಗಳ ಪಡೆ)
ಸಮೀಪಿಸಿದ .
ಮಾಲದೇವನಿಗೆ
ಯುದ್ಧಮಾಡದೇ ಎದುರಾಳಿಯನ್ನು
ಮಣಿಸಿವ ಒಂದು ತಂತ್ರ ತಿಳಿದಿತ್ತು
. ಹೇಗಿದ್ದರೂ
ಷೇರ್ ಷಾಹನದ್ದು ಅತಿ ದೊಡ್ಡ ಸೇನೆ
ಮತ್ತು ಮರುಭೂಮಿಯ ಮಧ್ಯೆ ಆಹಾರ
ನೀರಿನ ಸರಬರಾಜಿನ ಸಮಸ್ಯೆ ಆಗುವುದು
ಶತಃಸಿದ್ದ . ಅದರಿಂದ
ಷೇರ್ ಷಾನ ಸೇನೆ ಬಸವಳಿಯುವ ತನಕವೂ
ಕಾದು ಅವರಿಗೆ ಬಲವಾದ ಹೊಡೆತ
ನೀಡಲ್ಲೆಂದು ಮಾಲದೇವನೂ ಸಹಿತ
ತನ್ನ ಸೇನೆಯನ್ನು ಡೇರೆ ಬಿಟ್ಟು
ಕಾದು ಕುಳಿತ .
ಮಾಲದೇವನ
ಈ ಉಪಾಯ ಫಲಪ್ರದಾಯಕ ವಾಯಿತು .
ಎರಡು ತಿಂಗಳ ಕಾಲ
ಏನೂ ಮಾಡದೇ ಕುಳಿತಿದ್ದಕ್ಕೆ
ಷೇರ್ ಷಾಹನ ಸೇನೆ ಅನ್ನಾಹಾರದ
ಕೊರತೆಯಿಂದ ಬಳಲಿತು . ಷೇರ್
ಷಾ ಚಿಂತಾಕ್ರಾಂತನಾದ . ಆಗ
ಷೇರ್ ಷಾ ತನ್ನ ನರಿ ಬುದ್ಧಿಯ
ಕುಟಿಲ ಉಪಾಯ ಹೂಡಿದ . ಒಂದಿಷ್ಟು
ನಕಲು ಪತ್ರಗಳನ್ನು ಮಾಲದೇವನ
ಪಾಳೇಗಾರರನ್ನುದ್ದೇಶಿಸಿ ಬರೆದು
ತನ್ನತ್ತ ಮಾಲದೇವನ ಪಾಳೇಗಾರರು
ಕುಟಿಲ ತಂತ್ರ ರಚಿಸುತ್ತಿದ್ದಾರೆಂದು
ಕಥೆಯನ್ನು ಕಟ್ಟಿ ಆ ಪತ್ರಗಳು
ಮಾಲದೇವನಿಗೆ ಸಿಗುವಂತೆ ಮಾಡಿದ
. ಈ ವಿಷಯವನ್ನು
ಮಾಲದೇವನ ಪಾಳೇಗಾರರು ಸಾರಾಸಗಟು
ತಳ್ಳಿಹಾಕಿದರೂ ಮಾಲದೇವ ನಂಬಿಕೆ
ಮುರಿದು ತನ್ನ ಮುಖ್ಯ ಸೇನೆಯೊಂದಿಗೆ
ತೆರಳುತ್ತಾನೆ !
ಈ
ಸಮಯದಲ್ಲಿ ಆ ಪಾಳೇಗಾರರು ಏನು
ಮಾಡಲು ಸಾಧ್ಯ ? ಆದರೆ
ಅವರು ವಿಚಲಿತರಾಗಲಿಲ್ಲ .
ಅವರ ದೇಶಭಕ್ತಿಯನ್ನು
ಮೆಚ್ಚುವಂಥದ್ದೇ . ಕೇವಲ
20000 ಸೇನೆಯಿದ್ದರೂ
ಷೇರ್ ಷಾಹನನ್ನು ಎದುರಿಸಲು
ಪಣತೊಡುತ್ತಾರೆ .
ಜಯ
ಚಂದಲ್ ಮತ್ತು ಗೋಹಾ ತಮ್ಮ ಸೇನೆಯ
ಅಶ್ವಪಡೆಯೊಂದಿಗೆ ಷೇರ್ ಷಾಹನ
ಸೇನೆಯ ಮೇಲೆ ಮುಗಿಬಿದ್ದರು .
ಅದೆಂಥಹ ಭೀಕರವಾಗಿ
ಧಾಳಿಮಾಡಿದರೆಂದರೆ ಷೇರ್ ಷಾಹನ
ಸೇನೆಯ ಒಂದು ಬೃಹತ್ ಭಾಗವೇ
ನಾಶವಾಯಿತು . ಅವರ
ಪರಾಕ್ರಮ ಅಲ್ಪಕಾಲದ್ದೇ ಆದರೂ
ತಮ್ಮ ದೇಶಭಕ್ತಿ ಮತ್ತು ನಿಷ್ಠೆಯನ್ನು
ಸಾಬೀತು ಪಡಿಸಿದರು . “ ಆ
ಖಾಫೀರರು ನಮ್ಮ ಫೌಜನ್ನು
ಕೊಚ್ಚುತ್ತಿದ್ದಾರೆ . . .
” ಎಂದು ಒಬ್ಬ
ಅಫ್ಘಾನಿ ಷೇರ್ ಷಾಹನಿಗೆ ಸುದ್ದಿ
ಮುಟ್ಟಿಸಿದಾಗ ಷೇರ್ ಷಾಹ್ ಹರ
ಸಾಹಸಪಟ್ಟು ಪರಿಸ್ಥಿತಿಯನ್ನು
ನಿಯಂತ್ರಿಸುತ್ತಾನೆ .
ಖವಾಸ್ ಖಾನ್ ತನ್ನ
ಪಡೆಯಿಂದ ಜಯ ಮತ್ತು ಗೋಹಾರನ್ನು
ಕಾದಾಡಿ ಕೊಂದು ಕೊನೆಗೆ ವಿಜಯ
ವಾರ್ತೆಯನ್ನು ಮುಟ್ಟಿಸಿದಾಗ
ಷೇರ್ ಷಾಹ್ ನಿಟ್ಟುಸಿರು ಬಿಡುತ್ತಾ
“ ಹಿಡಿಕಾಳಿನ ಆಸೆಗೆ ಒಂದು
ಸಾಮ್ರಾಜ್ಯವನ್ನೇ ಕಳೆದುಕೊಳ್ಳುತ್ತಿದ್ದೆನಲ್ಲಾ
. . . . ”
ಇದಾಗಿ
ಕೇವಲ ಒಂದು ವರ್ಷದಲ್ಲಿ ಷೇರ್
ಷಾಹನನ್ನು ಬುಂದೇಲಖಂಡದ ಖಲಿಂಜರ್
ನಲ್ಲಿ ಮುತ್ತಿಗೆ ಹಾಕಿದಾಗ
ಕೊಲ್ಲಲಾಯಿತು . ಅಷ್ಟಲ್ಲದೇ
ಸಮರ್ ನ ಸಮರದಲ್ಲಿ ಅಫ್ಘನ್ನರನ್ನು
ಅಜ್ಮೆರ್ ಮತ್ತು ನಾಗೋರಿನಿಂದಲೂ
ಓಡಿಸುತ್ತಾನೆ .
ರಾಜಸ್ತಾನಿಯರ
ಪರಿಶ್ರಮ ಮತ್ತು ಬಲಿದಾನಗಳು ಆ
ಕಾಲದಲ್ಲಿ ಇಸ್ಲಾಮೀ ಧಾಳಿಕೋರರಿಂದ
ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ
ಅಪಾರ ಪಾತ್ರವಿದೆ .
ಆದರೂ
ಆ ದಿನ ಮಾಲದೇವನು ತನ್ನ ಸೇನೆಯನ್ನು
ತೊರೆಯದಿದ್ದರೆ . . .
No comments:
Post a Comment