1704 ಡಿಸೆಂಬರ್
5 ರಂದು ಗುರು
ಗೋವಿಂದ ಸಿಂಗರು ಮೊಘಲ್ ಮತ್ತು
ಕೆಲವು ದೇಶದ್ರೋಹಿ ಹಿಂದೂ
ಪಾಳೇಗಾರರಿಂದ ಮುತ್ತಿಗೆ ಹಾಕಲ್ಪಟ್ಟ
ಆನಂದಪುರದಿಂದ ತಮ್ಮ ಕೆಲವು
ಸಿಖ್ಖರಿಂದ ತಪ್ಪಿಸಿಕೊಂಡು
ಹೋಗುತ್ತಾರೆ. ದಾರಿ
ಮಧ್ಯೆಯಲ್ಲೂ ವಜೀರ್ ಖಾನನ ಸೇನೆ
ಧಾಳಿ ಮಾಡುತ್ತದೆ . ಆ
ಕದನದಲ್ಲಿ ಅನೇಕ ಸಿಖ್ಖರು
ಮರಣವನ್ನೊಪ್ಪುತ್ತಾರೆ .
ಅದೂ ಬೇರೆ ಕತ್ತಲ
ರಾತ್ರಿಯಾಗಿತ್ತು . ಸಿಂಗರ
ಒಂದು ಗುಂಪಿನ ಪಡೆ ಶತ್ರುಗಳನ್ನು
ತಡೆಹಿಡಿದು ಗುರುಪರಿವಾರದವರಿಗೆ
ಮುಂದೆ ಹೋಗುವಂತೆ ಅನುವು ಮಾಡಿಕೊಟ್ಟು
ಪ್ರಾಣಾರ್ಪಣೆ ಮಾಡಿದರು .
ಆ ಕಾದಾಟದ ಅಬ್ಬರದಲ್ಲಿ
ಗುರು ಪರಿವಾರ ಮಿಕ್ಕ ಸಿಖ್ಖರು
ಸಾರ್ಸಾ ನದಿದನ್ನು ದಾಟಲಾರಂಭಿಸಿದರು
. ಆ ಕೊರೆಯುವ
ಚಳಿಯ ರಾತ್ರಿಯಲ್ಲಿ ನದಿಯ ರಭಸ
ಪ್ರವಾಹಕ್ಕೆ ಅನೇಕರು ಕೊಚ್ಚಿಕೊಂಡೂ
ಹೋದರು . ಅಷ್ಟಲ್ಲದೇ
ಹುರು ಸಾಹಿಬರ ಪರಿವಾರ ದಾರಿಕಾಣದೇ
ಎಲ್ಲೋ ತಪ್ಪಿದೋದರು .
ಕೇವಲ
ಗುರು ಗೋವಿಂದರು , ಇಬ್ಬರು
ಹಿರಿಯ ಮಕ್ಕಳು ಮತ್ತು ನಲ್ವತ್ತು
ಸಿಖ್ಖರು ನದಿ ದಾಟಿ ಒಂದುಗೂಡಿದರು
!
ಗುರುಗಳು
ಮತ್ತು ಸಂಗಡಿಗರು ಹಾಗೇ ನಡೆದು
ಹೋಗುತ್ತಾ ಡಿಸೆಂಬರ್ 20
ರಂದು ಪಂಜಾಬಿನ
ರೋಪರ್ ಜಿಲ್ಲೆಯ ಒಂದು ಮೈದಾನ
ಪ್ರದೇಶದಲ್ಲಿ ಡೇರೆ ಬಿಟ್ಟರು
. ಅಲ್ಲಿಯ
ಚಮಕೋರ್ ಎಂಬ ಪಟ್ಟಣದಲ್ಲಿ ಭಾಯಿ
ಬುದಿಚಂದ್ ಎಂಬಾತ ಒಂದು ಹವೇಲಿ
(ಒಂದು ದೊಡ್ಡದಾದ
ಮನೆ) ಯನ್ನು
ಹೊಂದಿದ್ದ . ಆತನು
ಗೋವಿಂದರ ಬಳಿ ಬಂದು ಪಾದ ಸ್ಪರ್ಶಿಸಿ
ನಮಸ್ಕರಿಸಿ ತನ್ನ ಮನೆಯಲ್ಲಿ
ಎಲ್ಲರಿಗೂ ಆಶ್ರಯ ನೀಡುತ್ತಾನೆ
.
ಗೋವಿಂದರಿಗೆ
ಈಗ ಗೊತ್ತಿತ್ತು ವಜೀರ್ ಖಾನನು
ಬೇಟೆನಾಯಿಯಂತೆ ತಮ್ಮನ್ನು
ಹುಡುಕಿಕೊಂಡು ಬರುತ್ತಾನೆಂದು
. ಅದಕ್ಕಾಗಿ
ಇರುವ ಸೌಲಭ್ಯದಲ್ಲೇ ಏನು ರಕ್ಷಣೆ
ಮಾಡಿಕೊಳ್ಳುವುದಕ್ಕಾಗುವುದೋ
ಅಷ್ಟನ್ನು ತಯಾರಿ ಮಾಡಿಕೊಳ್ಳಲಾರಂಭಿಸಿದರು
. ಮೊದಲಾಗಿ
ಗೋಡೆಯ ಸುರಕ್ಷತೆಯ ಬಗ್ಗೆ ಅವರಿಗೆ
ಅರಿವಿತ್ತು . ಅದನ್ನು
ಅಡ್ಡವಾಗಿಸಿಕೊಂಡು ಧಾಳಿಮಾಡಬಹುದೆಂದು
. ಮದನ್ ಸಿಂಗ್
ಮತ್ತು ಕೋತಾ ಸಿಂಗರನ್ನು ಉತ್ತರ
ದ್ವಾರದಲ್ಲಿ ಮತ್ತೆಂಟು ಸಿಖ್ಖರೊಡನೆ
ಇರಿಸುತ್ತಾರೆ . ಇನ್ನು
ಕೆಲವು ಎತ್ತರದ ಸ್ಥಳಗಳಲ್ಲಿ
ಕೆಲವರನ್ನು ಇರಿಸಿತ್ತಾರೆ .
ಗೋವಿಂದರು ಮತ್ತು
ಅವರ ಇಬ್ಬರು ಪುತ್ರರು ಬಿಲ್ಲನ್ನು
ಹಿಡಿದು ಛಾವಣಿ ಮೇಲ್ಬಾಗದ ಒಂದೆಡೆ
ಕಾವಲಾಗುತ್ತಾರೆ .
ಅತ್ತ
ಗೋಡೆಯಾಚೆ ನವಾಬ್ ವಜೀರ್ ಖಾನ್
ತನ್ನ ಒಂದು ಲಕ್ಷ ಸೇನೆಯೋದಿಗೆ
ಬಂದು ಕಟ್ಟಡವನ್ನು ಮುತ್ತಿಗೆ
ಹಾಕುತ್ತಾನೆ . “ ಏ
ಗೋವಿಂದ ಸಿಂಗ್ ! ನೀವೆಲ್ಲರೂ
ಶರಣಾಗಿ ಹೊರಬಂದರೆ ಜೀವದಾನ
ಕೊಡುತ್ತೇನೆ ” ಎಂದು ಆರ್ಭಟಿಸಿದ
. ಅದಕ್ಕೆ
ಪ್ರತ್ಯುತ್ತರವಂತೆ ಗೋವಿಂದರು
ಬಾಣಗಳ ಮಳೆಗೈದರು . ಒಂದೊಂದು
ಬಾಣವೂ ಬಿಡದಂತೆ ಒಬ್ಬೊಬ್ಬ ಮೂಘಲ್
ಸೈನಿಕನನ್ನು ತಗುಲಿತು !
ಆಗಿನ್ನೂ
ಮುಂಜಾನೆಯ ಚಳಿ ಕಾದಿರಲಿಲ್ಲ ಆದರ
ಸಮರದ ಬೇಗೆ ಏರಿತ್ತು .
ಒಳಗಿದ್ದ 40
ಯೋಧರೂ ಸಮರಕ್ಕೆ
ಸಿದ್ಧ ಸಾವಿಗೂ ಹೆದರದವರಾಗಿದ್ದರು
! . ಒಬ್ಬ ಮೊಘಲ್
ಸಂದೇಶವಾಹಕ ಸಿಖ್ಖರೊಂದಿಗೆ
ಒಪ್ಪಂದಕ್ಕೆ ಪತ್ರದೊಂದಿಗೆ
ಬರುತ್ತಾನೆ . ಗೋವಿಂದರು
ಅವನಿಗೆ ಒಂದೇ ಇಲ್ಲಿಂದ ಕಾಲ್ಕೀಳು
ಅಥವಾ ಸಾಯಲು ತಯಾರಾಗೆಂದು ಗದರಿಸಿ
ಕಳಿಸುತ್ತಾರೆ . ಅಬ್ಬಬ್ಬಾ
! ಅದೆಂಥಾ
ಧೈರ್ಯ ಕೇವಲ ನಲ್ವತ್ತು ಜನ ಒಂದು
ಲಕ್ಷ ಸೇನೆಯನ್ನು ಎದುರಿಸುವುದೆಂದರೆ
! ಅದೆಂಥಹ
ಪರಾಕ್ರಮ !
ಒಬ್ಬೊಬ್ಬರಾಗಿ
ಸಿಖ್ಖರು ರಣಾಂಗಣಕ್ಕೆ ಹೊರಬಂದರು
.
ಐದು
ಪರಾಕ್ರಮೀ ಸಿಖ್ ಯೋಧರು “ ಸತ್
ಶ್ರೀ ಅಕಾಲ್ “ ಎಂದು ಘರ್ಜಿಸುತ್ತಾ
ಹೊರಬಂದು ಆದಷ್ಟು ಶತ್ರು ಸೈನಿಕರನ್ನು
ಕತ್ತರಿಸಿ ಮರವನ್ನೊಪ್ಪಿದರು .
ತದನಂತರ ದಾನ್
ಸಿಂಗ್ , ಧ್ಯಾನ್
ಸಿಂಗ್ ಮತ್ತು ಕಜನ್ ಸಿಂಗರೂ
ಶತ್ರುಗಳನ್ನು ಕೊನೆಯುಸಿರಿನ
ತನಕ ಪ್ರಹಾರಗೈದು ಕೊಲ್ಲಲ್ಪಡುತ್ತಾರೆ
. ಮುಖಮ್
ಸಿಂಗ್ ನನ್ನು ಕೊಲ್ಲಲು ಅನೇಕ
ಗುಂಡುಗಳನ್ನು ಮೊಘಲ್ ಸೈನಿಕರು
ಹೊಡೆಯಬೇಕಾಯಿತು . ಹಿಮ್ಮತ್
ಸಿಂಗನು ಅನೇಕರನ್ನು ನಾಶಗೈದು
ಗುರುವಿಗೆ ವಿದಾಯ ಹೇಳಿದ.
ಮತ್ತೆ ಐದು ಸಿಂಗರು
ಒಂದು ದಳದಲ್ಲಿ ಆಕ್ರಮಣಗೈದು
ಅಗಣ್ಯ ಸೈನಿಕರನ್ನು ಸಂಹಾರ ಮಾಡಿ
ಮಡಿದರು . ದೇವಾ
ಸಿಂಗ್ ಮತ್ತು ಇಶರ್ ಸಿಂಗ್ ಶತ್ರುಗಳೂ
ಬೆರಗಾಗುವಷ್ಟು ಭಯ ಹುಟ್ಟಿಸುತ್ತಾ
ಪರಾಕ್ರಮಗೈದು ಮಡಿದರು .
ಮತ್ತೆ
ಆರು ಜನ ಸಿಖ್ಖರು ಅಮೋಲಕ್ ಸಿಂಗ್
, ಆನಂದ್
ಸಿಂಗ್ , ಲಾಲ್
ಸಿಂಗ್ , ಕೇಸರ್
ಸಿಂಗ್ , ಕಿರತ್
ಸಿಂಗ್ , ಮತ್ತು
ಮುಹರ್ ಸಿಂಗರು ಗುರುವಿಗೆ
ಬೀಳ್ಕೊಟ್ಟು ಒಬ್ಬೊಬ್ಬರು ಸಾಯುವ
ಮೊದಲು ಅಸಂಖ್ಯ ಶತ್ರುಗಳ ರಕ್ತ
ಹರಿಸಿದರು .
ಇಬ್ಬರು
ಮೊಘಲ್ ಅಧಿಕಾರಿಗಳಾದ ನಹರ್ ಖಾನ್
ಮತ್ತು ಗೈರತ್ ಖಾನರು ಆವರಣವನ್ನು
ಛೇದಿಸಲು ಪ್ರಯತ್ನಮಾಡಿ ಸಿಖ್ಖರ
ಪ್ರಹಾರದಿಂದ ಸತ್ತರು .
ಸಿಖ್ಖರ ವೀರ
ಮರಣಗಳಿಂದ ಶತ್ರುಗಳು ಮುಂದೆ
ಬಾರಲಾಗದೇ ಹಿಂದೆಯೇ ತಡೆಹಿಡಿದಿದ್ದರು
. ಇದನ್ನು
ಕಂಡು ಅವಾಕ್ಕಾದ ವಜೀರ್ ಖಾನ್
ಒಬ್ಬ ಸಿಖ್ ಅಂದರೆ ಸವಾ ಲಾಖ್
(ಒಂದೂಕಾಲು
ಲಕ್ಷ ) ಯೋಧರಿಗೆ
ಸಮನೇ ! ಎಂದು
ಉದ್ಗಾರವೆತ್ತಿದನಂತೆ .
ಹೊತ್ತು
ಕಳೆದಂತೆ ಸಿಖ್ಖರ ಸಂಖ್ಯೆ
ಕಡಿಮೆಯಾಗುತ್ತಿತ್ತು .
ಆದರೆ ಧೈರ್ಯ
ಪರಾಕ್ರಮವು ಕಿಂಚಿತ್ತೂ ಇಳಿಯುತ್ತಿಲ್ಲ
. ಇದನ್ನೆಲ್ಲ
ನೋಡುತ್ತಿದ್ದ ಗೋವಿಂದರ ಹಿರಿಯ
ಮಗ ಅಜಿತ್ ಸಿಂಗ್ ಈಗ ತನ್ನ ಸರದಿಯೆಂದು
ತೀರ್ಮಾನಿಸಿದ . ಅಜಿತ್
ತನ್ನ ತಂದೆಯ ಅನುಮತಿಯನ್ನು
ಕೇಳುತ್ತಾ – “ ಪೂಜ್ಯ ತಂದೆಯೇ ,
ನನಗೀಗ ಸಮರಾಂಗಣಕ್ಕೆ
ತೆರಳಲು ಅನುಮತಿ ಕೊಟ್ಟು ನಿಮ್ಮ
ಸೇವೆಗೆ ಅವಕಾಶಕೊಟ್ಟು ನನ್ನ
ಬಾಳನ್ನು ಸಾರ್ಥಕಗೊಳಿಸಿ ” ಎಂದು
ವಿನಂತಿಸಿದ . ಗೋವಿಂದರು
ತನ್ನ ಮಗನನ್ನು ತಬ್ಬಿಕೊಂಡು
ಶಸ್ತ್ರ ಪ್ರದಾನಮಾಡಿ ಆಶೀರ್ವಾದ
ಮಾಡಿ ಬೀಳ್ಕೊಟ್ಟರು . ಇನ್ನೂ
ಹದಿನೆಂಟರ ಹರೆಯ ಸರಿಯಾಗಿ ಗಡ್ಡ
ಬೆಳೆಯದ ವಯಸ್ಸು . ಪ್ರತಿಯೊಬ್ಬ
ತಂದೆಗೆ ತನ್ನ ಮಗ ಸುಖವಾಗಿ
ಮದುವೆಯಾಗಿ ಸಂಸಾರ ಮಾಡಲೆಂದು
ಬಯಸಿದರೆ ಈಗ ತನ್ನ ಮಗ ಮೃತ್ಯುವೊಂದಿಗೆ
ವಿವಾಹವಾಗಲು ಹೊರಟಿದ್ದಾನೆ !
ಅಜಿತ್
ಸಿಂಗನು ತನ್ನ ಜೊತೆ ಇನ್ನು ಎಂಟು
ಸಿಖ್ಖರೊಂದಿಗೆ ( ಅದರಲ್ಲೊಬ್ಬ
ಪಂಚ್ ಪ್ಯಾರೇಯ ಮೋಕಮ್ ಸಿಂಗ್ ಜೀ
) ಧೈರ್ಯದಿಂದ
ಕೋಟೆಯಿಂದ ಹೊರಬಂದನು .
ಗೋವಿಂದರು
ಮೇಲ್ಛಾವಣೆಯಿಂದ ಎಲ್ಲವನ್ನೂ
ನೋಡುತ್ತಿದ್ದರು . ನಾಲ್ಕು
ದಿಕ್ಕಿನಲ್ಲೂ ಪ್ರಶಾಂತ ಮೌನ
ಆವರಿಸಿತ್ತು . ಸಮರಾಂಗಣಕ್ಕೆ
ನರುತ್ತಿದ್ದಂತೆ ಜೈಕಾರ ಕೂಗಿದರು
. ಅದು
ಚತುರ್ದಿಕ್ಕಿನಲ್ಲೂ ಸಿಂಹ
ಘರ್ಜನೆಯಂತೆ ಪ್ರತಿದ್ವನಿಸಿತು
. ಅಜಿತ್
ಸಿಂಗ್ ಮುಂದೆಗೊಂಡು ತನ್ನ ಶಸ್ತ್ರ
ಚಲಾವಣೆಯ ಚತುರತೆಯನ್ನು
ಪ್ರದರ್ಶಿಸುತ್ತಾ ಶೌರ್ಯದಿಂದ
ಮುನ್ನುಗ್ಗಿದ . ವಿರುದ್ಧದಿಕ್ಕಿನಿಂದ
ಒಂದು ಶತ್ರುಗಳ ತುಕಡಿ ಅವನನ್ನು
ಮುತ್ತಿಗೆ ಹಾಕಿತು . ಆಗ
ಅಜಿತನು “ ಧೈರ್ಯವಿದ್ದರೆ ಹತ್ತಿರ
ಬನ್ನಿ ” ಎಂದು ಸವಾಲೆಸೆದ .
ಆ ಮಾತಿಗೆಯೇ ಹೆದರಿ
ಒಡಿಹೋಗಿ ಮತ್ತಷ್ಟು ದೊಡ್ಡ
ಗುಂಪಿನಿಂದ ಬಂದರು . ಆಗ
ಶುರುವಾಯಿತು ಅಜಿತನ ಮಾರಕ ಪ್ರಹಾರಗಳು
. ಅದನ್ನು
ನೋಡುತ್ತಿದ್ದ ಮೊಘಲರಿಗೆ ಅವನೊಬ್ಬ
ಅಲ್ಲಾಹನ ಹಥಿಯಾರೆಂದು ಭಾಸವಾಯಿತು
. ಮೊಘಲ್
ಸೈನಿಕರು ಭಯಭೀತರಾಗಿ ಪ್ರಾಣವನ್ನು
ಕೈಯಲ್ಲಿ ಹಿಡಿದಿದ್ದರು .
ಹಾಗೇ ಕಾದಾಡುವಾಗ
ಅಜಿತನ ಕೃಪಾಣ್ (ಖಡ್ಗ)
ಮುರಿಯಿತು .
ಆಗ ಅವನು ತನ್ನ ನೇಜ
(ಈಟಿ)
ಯನ್ನು ಚಲಾಯಿಸಿದ
. ಆದರೂ ಒಬ್ಬ
ಮೊಘಲ್ ನಾಯಕನನ್ನು ಕೊಲ್ಲುವಾಗ
ಅದು ಅವನ ಎದೆಯಲ್ಲಿ ಸಿಲುಕಿಕೊಂಡಿತು
. ನಂತರ ಅಜಿತನ
ಕುದುರೆಗೆ ಹೊಡೆತ ಬಿದ್ದ ಕಾರಣ
ನೆಲದ ಮೇಲೆ ನಿಂತು ಬಿದ್ದ ಒಂದು
ಖಡ್ಗ ಹಿಡಿದು ಕಾದಾಡಿದ .
ಪ್ರತಿಯೊಂದು
ಪ್ರಹಾರಕ್ಕೆ ಒಬ್ಬೊಬ್ಬರನ್ನು
ಎರೆಡೆರಡು ಹೋಳಾಗಿ ಕತ್ತರಿಸುತ್ತಿದ್ದ
. ಆದರೆ ಕೆಲ
ಸಮಯದಲ್ಲೇ ಸೇನೆ ಅವನನ್ನು
ಮುತ್ತುವರೆಯಿತು . ಅಜಿತನು
ಅಮರನಾದ . ಮಗನ
ಸಾವನ್ನು ಕಾಣುತ್ತಿದ್ದ ಗೋವಿಂದರು
“ ಸತ್ ಶ್ರೀ ಅಕಾಲ್ ” ಎಂದು ಜೈಕಾರ
ಕೂಗಿದರು .
ಗೋವಿಂದರ
ಎರಡನೆಯ ಮಗ ಜಝ್ಹರ್ ಸಿಂಗ್ ಅಣ್ಣನ
ಮರಣ ವಾರ್ತೆ ಹಬ್ಬುತ್ತಿದ್ದಂತೆಯೇ
ತಾನೂ ತೆರಳುತ್ತೇನೆಂದು ತಂದೆಗೆ
ವಿನಂತಿಸಿಕೊಳ್ಳುತ್ತಾನೆ .
“ ಅಪ್ಪಾಜಿ,
ಈಗ ನನಗೂ ಅಣ್ಣ
ಹೋದಲ್ಲಿ ಹೋಗಲು ಅನುಮತಿ ನೀಡಿ
. ನಾನು
ಚಿಕ್ಕವನೆಂದು ಹೇಳಬೇಡಿ .
ನಾನು ನಿಮ್ಮ
ಮಗನಾದ್ದರಿಂದ ನಾನೂ ಒಬ್ಬ ಸಿಂಹನೇ.
ನಾನು ನನ್ನ ಬೆಲೆ
ತೀರಿಸುತ್ತೇನೆ . ಕೊನೆಯುಸಿರುವ
ತನಕ ಕಾದಾಡಿ ವೀರ ಮರಣವನ್ನೊಪ್ಪುತ್ತೇನೆ
. . . ” . ಮಗನನ್ನು
ತಬ್ಬಿಕೊಂಡು ಆಶೀರ್ವದಿಸಿ ತಂದೆ
– “ ಹೋಗು ಮಗನೇ , ಮೃತ್ಯುವನ್ನು
ವರಿಸು ” ಎಂದು ಭಾರವಾದ ಹೃದಯದಿಂದ
ತನ್ನ ಹದಿನಾಲ್ಕು ವಯಸ್ಸಿನ
ಮಗನನ್ನು ಬೀಳ್ಕೊಡುತ್ತಾನೆ .
ಜಝ್ಹರ್
ನ ಜೊತೆ ಹಿಮ್ಮತ್ ಸಿಂಗ್ ಮತ್ತು
ಸಾಹಿಬ್ ಸಿಂಗ್ ಎಂಬ ಇಬ್ಬರು ಪಂಚ
ಪ್ಯಾರೇ ಯರೊಡನೆ ಮತ್ತೆ ಮೂರು
ಸಿಖ್ ಯೋಧರು ಹೊರಡುತ್ತಾರೆ .
ಜಝ್ಹರ್ ನನ್ನು
ಕಂಡ ಮೊಘಲ್ ಪಡೆ ಮತ್ತೊಬ್ಬ ಅಜಿತ್
ಬಂದನೆಂದು ಭಯಬೀಳುತ್ತಾರೆ.
ಸೇನೆ
ಜಝ್ಹರ್ ನನ್ನು ಕೊಲ್ಲಲೆಂದು
ಮತ್ತೊಮ್ಮೆ ಒಟ್ಟಾಗುತ್ತಾರೆ .
ಈಟಿಯನ್ನು ಹಿಡಿದ
ಜಝ್ಹರ್ ನನ್ನು ಅವರು ಸುತ್ತುವರೆದಿರುತ್ತಾರೆ
. ಜಝ್ಹರ್
ಈಟಿಯನ್ನು ಅದೆಂಥಹಾ ಚಾಕುಚಕ್ಯತೆಯಿಂದ
ತಿರುಗಿಸುತ್ತಾನೆಂದರೆ
ತಗುಲಿದವರಿಗೆಲ್ಲಾ ಪ್ರಾಣಾಘಾತವಾಗುತ್ತಿತ್ತು
. ನಂತರ ಜಝ್ಹರ್
ತನ್ನ ಎರಡು ಬದಿಯ ಕತ್ತಿಯನ್ನು
ಹಿಡಿದು ಬೆಳೆಯನ್ನು ಕಟಾವು
ಮಾಡಿದಂತೆ ಶತ್ರು ಸೈನಿಕರ ಕಂಠ
ಸೀಳಲಾರಂಭಿಸಿದ . ಅವನನ್ನು
ಕೊಲ್ಲಲೆಂದು ಹರಸಾಹಸ ಮಾಡುತ್ತಿದ್ದರು
. ಗೋವಿಂದರೆ
ಜಝ್ಹರ್ ನ ರಕ್ಷಣೆಗೆಂದು ಮೇಲಿನಿಂದ
ನಿಖರವಾಗಿ ಬಾಣಗಳ ಮಳೆಗೈಯ್ಯುತ್ತಿದ್ದರು
. ಸಮೀಪದಲ್ಲಿದ್ದರು
ಆ ಐದು ಜನ ಸಿಖ್ಖರಿಗೆ ಒಂದು ಚೂರೂ
ಗಾಯವಾಗದಂತೆ ಗೋವಿಂದರು ಮೊಘಲ್
ಸೈನಿಕರನ್ನು ಗುರಿಯಾಗಿಟ್ಟುಕೊಂಡು
ಬಾಣ ಚಲಾಯಿಸುತ್ತಿದ್ದರು .
ಆದರೆ
ಕೊನೆಗೂ ಜಝ್ಹರ್ ಮತ್ತೈರ್ವರೂ
ವೀರಮರಣವನ್ನೊಪ್ಪಿದರು .
ಸವಾ
ಲಾಖ್ ಎಂದರೇನೆಂದು ಇವರು
ಪ್ರದರ್ಶಿಸಿದರು . ಜಝ್ಹರ್
ವೀರ ಅಭಿಮನ್ಯುವಿನಂತೆ ಸಾಯುವಾಗ
ಮೊಘಲರ ಆ ಸೇನಾ ಬಂಧವನ್ನೂ ಮುರಿದಿದ್ದ
.
ಮತ್ತೆ
ಆ ದಿನ ಘೋರ ದಿನ ಕಳೆದು ರಾತ್ರಿಯಾಯಿತು
. ಇನ್ನು ಉಳಿದ
ಪಂಚ ಪ್ಯಾರೇಯರಲಿ ಇಬ್ಬರು ದಯಾ
ಸಿಂಗ್ ಮತ್ತು ಧರಮ್ ಸಿಂಗ್ ಮತ್ತೊಬ್ಬ
ಭಾಯಿ ಮಾನ್ ಸಿಂಗ್ ಮತ್ತು ಉಳಿದು
ಕೇವಲ ಹತ್ತು ಜನ ಸಿಖ್ಖರು ಚಮಕೋರಿನ
ಕೋಟೆಯಲ್ಲಿದ್ದರು . ಇನ್ನು
ಹೆಚ್ಚು ಕಾಲ ಹೋರಾಡುವುದು
ಅಸಾಧ್ಯವೆಂದು ಅರಿತು ಗೋವಿಂದರಿಗೆ
ಖಾಲ್ಸಾ ಪಂಥದ ಉಳಿವಿಗಾಗಿ ಅಲ್ಲಿಂದ
ತಪ್ಪಿಸಿಕೊಂಡು ಹೋಗಬೇಕೆಂದು
ಆಗ್ರಹಿಸಿದರು . ಹಾಗೆಯೇ
ಗೋವಿಂದರು ಒಂದು ಯೋಜನೆಯ ಪ್ರಕಾರ
ತಪ್ಪಿಸಿಕೊಂಡು ಹೋದರು .
ಅದಕ್ಕಾಗಿ ಸಂಗತ್
ಸಿಂಗ್ ಗೋವಿಂದರಂತೆ ವಸ್ತ್ರ
ಧರಿಸಿ ದುರ್ಗದ ಎತ್ತರದಲ್ಲಿ
ನಿಂತು ಶತ್ರುಗಳಿಗೆ ತೋರುವಂತೆ
ಕಾಣಿಸಿದ . ಗೋವಿಂದರು
ಬರಿಗಾಲಿನಲ್ಲಿ ಕಂಬಳಿಹೊದ್ದು
ಕತ್ತಲ ಮರೆಯಲ್ಲಿ ಶತ್ರುಪಾಳೆಯದಲ್ಲಿ
ಹಾದು ಹೋಗಿ ಮರೆಯಾದರು .
ಆಗಲೂ ಕೆಲವುಳಿದ
ಸಿಖ್ಖರು ಗೋವಿಂದರನ್ನು ಸುರಕ್ಷಿತವಾಗಿ
ಕಳಿಸುವ ಸಲುವಾಗಿ ಹತರಾದರು .
ಈ
ಚಮಕೋರಿನ ಸಮರ ಸಮಸ್ತ ಭಾರತದ
ಇತಿಹಾಸದಲ್ಲೇ ಇದಕ್ಕಿಂತ ಮತ್ತೊಂದು
ದೊಡ್ಡ ಪರಾಕ್ರಮದ ಉದಾಹರಣೆ ನೀಡುವ
ಕಥೆಯಿಲ್ಲ . ಗುರು
ಗೋವಿಂದರು ಹಿಂದೂ ಧರ್ಮದ ರಕ್ಷಣೆಗಾಗಿ
ಪಟ್ಟ ಶ್ರಮ ಹೇಳತೀರದು .
ತಮ್ಮ ಸರ್ವಸ್ವವನ್ನೂ
ತ್ಯಾಗ ಮಾಡಿ ಗಂಧದಂತೆ ತಮ್ಮ
ಜೀವನವನ್ನು ತೇಯ್ದರು .
ಸೋಲು
ಮತ್ತು ಸಾವು ಖಚಿತವೆಂದು ಗೊತ್ತಿದ್ದರೂ
ಆ ನಿರ್ಭಯತೆ ಮತ್ತು ತೋರಿದ ಪರಾಕ್ರಮ
ಅದ್ವಿತೀಯ .