ಹಾಜೀಪೀರ್
ಪಾಸ್ . ಭಾಗ
2
ಆಗಸ್ಟ್
26 . ಬೆಳಿಗ್ಗೆ
8 ಗಂಟೆ
ಸಾಂಕನ್ನು
ವಶಪಡಿಸಿಕೊಂಡ ತಕ್ಷಣ ಮುಂದಿನ
ಕೆಲವು ಪಾಕಿ ಪೊಸ್ಟ್ ಗಳಿಗೆ
ಮುನ್ನುಗ್ಗುವುದೆಂದು ನಿರ್ಧಾರವಾಯಿತು
. ಸಾರ್ ಮತ್ತು
ಲೇಡ್ವಾಲಿ ಗಲಿ . ಅದೂ
ಎತ್ತರದ ಸ್ಥಾನಗಳೇ ಆಗಿದ್ದವು
.
ಕಲ್ಲಿನ
ಕಂದರದ ಹಾದಿಯಲ್ಲಿ ಏರುತ್ತಿದ್ದಾಗಲೇ
ಶತ್ರುಗಳ ಕಣ್ಣಿಗೆ ಬಿದ್ದು
ಪಾಕಿಗಳು ಗುಂಡಿನ ಧಾಳಿ ಶುರುಹಚ್ಚಿದರು
. ಗುಂಡಿಗೆ
ಪ್ರತಿಧಾಳಿ ಮಾಡುತ್ತಲೇ ನಮ್ಮ
ಧೀರ ಯೋಧರು ಮುನ್ನುಗ್ಗುತ್ತಿದ್ದರು
. ದೂರದಲ್ಲೇ
ಕೇವಲ ಹನ್ನೆರಡು ಸೈನಿಕರು ಇಳಿಜಾರಿನ
ಬಂಕರಿನಲ್ಲಿ ಇದ್ದದ್ದು ಕಂಡು
ಬಂದಿತು. ಅಲ್ಲಿಗೂ
ನಮ್ಮ ಸೈನಿಕರ ಹೋಗುತ್ತಿದ್ದ
ಹಾದಿಗೆ ಕೆಲವಿ ಯಾರ್ಡಿನ ಅಂತರವಿದ್ದರೂ
ಅದೃಷ್ಟವಶಾತ್ ಯಾರಿಗೂ ಗುಂಡೇಟು
ಬೀಳಲಿಲ್ಲ . ಹೇಡಿ
ಪಾಕಿ ಸೈನಿಕರು ಭಾರತೀಯ ಸೈನಿಕರು
ಸಮೀಪಿಸುವ ತನಕವೂ ಬಂದೂಕು
ಚಲಾಯಿಸುತ್ತಾ ಕೊನೆಯ ಕ್ಷಣಗಳಲ್ಲಿ
ಪಲಾಯನ ಮಾಡಿದರು . ಸಾರ್
ಶಿಖರವನ್ನು ಒಂದು ತೊಟ್ಟು ರಕ್ತ
ಚೆಲ್ಲದೆಯೇ ವಶಪಡಿಸಿಕೊಳ್ಳಲಾಯಿತು
. ಲೇಡ್ವಾಲಿ
ಗಲಿಯಲ್ಲೂ ಹೀಗೆಯೇ ಪಾಕಿಗಳ ಪೊಳ್ಳು
ಪರಾಕ್ರಮ ಅನಾವರಣವಾಯಿತು .
ಪಾಕಿಗಳ
ಸ್ಥೈರ್ಯ ಮನೋಬಲ ಕೇವಲ ಗೆಲ್ಲುವ
ತನಕ ಮಾತ್ರ . ಎಲ್ಲಿ
ಸೋಲುವ ಸಂಭವ ಕಾಣಿಸಿತ್ತದೋ ಅಲ್ಲೇ
ಪಲಾಯನ.
ಆ
ದಿನ ಬೆಳಿಗ್ಗೆ ಮೊದಲನೆಯ ಪ್ಯಾರಾ
ರೆಗಿಮೆಂಟ್ ಕೇವಲ ಮೂರು ಗಂಟೆಗಳಲ್ಲಿ
ಸಾಂಕ್ , ಸಾರ್
ಮತ್ತು ಲೇಡ್ವಾಲಿ ಗಲಿಯನ್ನು
ವಶಪಡಿಸಿಕೊಂಡರು .
ಅದೇ
ಸಮಯದಲ್ಲಿ ಸೇನೆಯ ಮತ್ತೊಂದು
ಬಾಹು ಊರಿಯಿಂದ ಪಾಯಿಂಟ್ 10048
– ಪಾಯಿಂಟ್ 11094
- ಬಡೋರಿ – ಕುತ್ನೂರ್
ದಿ ಗಲಿ ಯ ಹಾದಿಯಾಗಿ ಹಾಜೀಪೀರ್
ನನ್ನು ಸಮೀಪಿಸಿ ಅದೇ ರೀತಿಯಾಗಿ
ಮತ್ತೊಂದು ಬದಿಯಿಂದ 1 ಪ್ಯಾರಾ
ರೆಜಿಮೆಂಟ್ ಹಾಜೀಪೀರನ್ನು ಎರಡೂ
ಬದಿಯಿಂದ ಸುತ್ತುವರೆಯುವುದು .
ಆ
ಪ್ರದೇಶದಲ್ಲೂ ಒರಟಾದ ಗಿರಿ
ಕಂದರಗಳು 4000 ಅಡಿಯಿಂದ
12000 ಅಡಿಯವರೆಗೂ
ಇದ್ದು 8000 ಅಡಿ
ಎತ್ತರದಲ್ಲಿ ವರ್ಷಪೂರ್ತಿ
ಹಿಮವಚ್ಚಾದಿದವಾಗಿರುತ್ತಿತ್ತು
. ಅವುಗಳಲ್ಲಿ
ಬೆಡೋರಿ 12330 ಅಡಿಗಳ
ಎತ್ತರದ ಶಿಖರ . ಬೆಡೋರಿ
ಊರಿಯನ್ನು ಎತ್ತದದಿಂದ ದಿಟ್ಟಿಸಿ
ನೋಡುವಂಥಹ ಅಗಾಧ ಗಾತ್ರ .
4ನೇ
ರಾಜಪೂತ ಮತ್ತು 19ನೇ
ಪಂಜಾಬಿ ರೆಜಿಮೆಂಟುಗಳು ಈ ಕಾರ್ಯ
ಕೈಗೆತ್ತಿಕೊಂಡಿದ್ದರು .
ಯಾವ ಸಮಯದಲ್ಲಿ
ಮೊದಲ ಪ್ಯಾರಾ ಸಾಂಕನ್ನು
ವಶಪಡಿಸಿಕೊಳ್ಳಲು ವಿಫಲವಾಯಿತೋ
ಆಗ 19ನೆ ಪಂಜಾಬ್
ಪಾತ್ರಾ ಎಂಬ ಶಿಖರವನ್ನು ಗೆದ್ದಿದ್ದರು
.
4ನೇ
ರಾಜಪೂತ್ ಬೆಡೋರಿಯನ್ನು ಗೆಲ್ಲಲು
ಹೋದರಾದರೂ ಅಲ್ಲಿನ ಕ್ಲಿಷ್ಟಕರ
ಕಲ್ಲಿನ ಹಾದಿಯನ್ನೇರಲಾಗಲಿಲ್ಲ.
ಅಲ್ಲಿನ ಕಠಿನ
ನೆಲದಲ್ಲಿ ಡೇರೆ ಹೂಡುವುದೂ
ಕಷ್ಟವಾಗುತ್ತಿತ್ತು .
ಪಾಕಿಗಳಾದರೋ
ಎತ್ತರದಲ್ಲಿ ಮೊದಲೇ ಸಂಗರ್ಸ್
ಎಂಬ ಕಲ್ಲಿನ ಬಂಕರುಗಳನ್ನು
ನಿರ್ಮಿಸಿಕೊಂಡು ಅದರ ಮರೆಯಲ್ಲಿ
ಗುಂಡು ಹಾರಿಸಿತ್ತಿದ್ದರು .
ರಾಜಪೂತರ ಪಡೆ ಬಹಳ
ಸಾವು ನೋವುಗಳನ್ನು ಅನುಭವಿಸಿತು
. ಈ ಬೆಡೋರಿಯನ್ನು
ಗೆಲ್ಲಲು ತೀರಾ ಅಸಾಧ್ಯ ಎಂದು
ಕರ್ನಲ್ ಬಿಂದ್ರಾ ಅಭಿಪ್ರಾಯಪಡುತ್ತಾರೆ.
ಅದಕ್ಕಿಂತಾ
ಬೆಡೋರಿಯನ್ನು ವಶಪಡಿಸಿಕೊಳ್ಳಲು
ಯೋಚಿಸಿದ ಹಾದಿಯು ಸೂಕ್ತವಾಗಿರಲಿಲ್ಲ
.
ನಂತರ
19ನೇ ಪಂಜಾಬಿನ
ಲೆಫ್ಟನೆಂಟ್ ಕರ್ನಲ್ ಸಂಪೂರನ್
ಸಿಂಗ್ ನ ಹೆಗಲಿಗೇರಿತು .
ಸ್ವಾಭಿಮಾನಿ
ಸಂಪೂರನ್ ತನ್ನದೇ ಮಾರ್ಗವಾಗಿ
ಬೆಡೋರಿಯನ್ನು ಗೆಲ್ಲಲು ಕೌನ್ರಾಲಿ
– ಗಗ ರ್ ಹಿಲ್ ದಾರಿಯನ್ನು ಬಳಸಿ
ತಮ್ಮ ಬೆಟ್ಯಾಲಿಯನ್ನನ್ನು
ನಡೆಸಿದರು .
ಆಗಸ್ಟ್
25ರಿಂದ ಪಂಜಾಬಿನ
ಪಡೆ ಮೂರು ದಿನಗಳ ನಿರಂತ ಚಲನೆಯಲ್ಲೇ
ಇತ್ತು . ಶಸ್ತ್ರಾಸ್ತ್ರಗಳನ್ನು
ಮತ್ತಿನ್ನಿತರ ಸಲಕರಣೆಗಳನ್ನು
ಹೊತ್ತುಕೊಂಡು ಆಗಾಗ ಸುರಿಯುವ
ಭಾರೀ ಮಳೆಯ ನಡುವೆ ಛ್ಳಿಯಲ್ಲಿ
ನಡುಗುತ್ತಾ ಆಯಾಸ ದಣಿವಿನ ನಡುವೆಯೂ
ಸಾಗುತ್ತಿದ್ದರು .
ಸರಬರಾಜಾಗುತ್ತಿದ್ದ
ರೇಷನ್ ಮುಗಿಯುವ ಸಲುವಾಗಿ ಪುನಃ
ತರಲು 7000 ಅಡಿಗಳ
ಕೆಳಗೆಯೇ ಹೋಗಬೇಕು, ಅದಕ್ಕಿಂತ
ಎತ್ತತರದಲ್ಲಿ ಬೆಳೆ ಬೆಳಯುವುದಿಲ್ಲ
. ವಾಯುದಳದಿಂದ
ಆಹಾರ ಪೂರೈಕೆಗೆ ಮೇಲಿನಿಂದೊಮ್ಮೆ
ಬೀಳಿಸಿದರೂ ಅದು ತಪ್ಪಿ ಶತ್ರುಪಾಳಯದಲ್ಲಿ
ಬಿದ್ದಿತು . ಈ
ಎಲ್ಲ ಕಠಿಣ ಸನ್ನಿವೇಷಗಳಲ್ಲಿಯೂ
ಆಕ್ರಮಣದ ಆದೇಶ ಬಂದಾಗ ಹಿಂಜರಿಯದೇ
ಸಾಗುತ್ತಲೇ ಇದ್ದರು .
ಆಗಸ್ಟ್
27ರ ರಾತ್ರಿ
, ಊರಿಯಿಂದ
10000 ಅಡಿಯ
ಪಾತ್ರದಲ್ಲಿ ಟ್ರಕ್ಕುಗಳಲ್ಲಿ
ಕೌನ್ರಾಲಿಗೆ ಒಯ್ಯಲಾಯಿತು .
ತಮ್ಮ ಶರೀರದಲ್ಲಿನ
ಸ್ವಲ್ಪ ತ್ರಾಣವನ್ನೂ ಬಿಗಿಹಿಡಿದುಕೊಂಡು
ನಿಶ್ಯಕ್ತಿಯನ್ನು ಬದಿಗೊತ್ತಿಕೊಂಡಿದ್ದರು
. ಆ 25
ಕಿ ಮೀ ಗಳ ಪ್ರಯಾಣಲ್ಲಿಯೇ
ಕೊಂಚ ಕಣ್ಮುಚ್ಚಿ ಮಲಗಿದ್ದರು
. ಟ್ರಕ್ಕಿನಿಂದ
ಇಳಿದಾಕ್ಷಣ ಪುನಃ ಪರ್ವತವೇರಬೇಕು
. ಅವರ ಉದ್ದೇಶ
28ರ ರಾತ್ರಿಯ
ವೇಳೆ ಬೆಡೋರಿಯ ತಳ ಸ್ಪ್ರಿಂಗ್ಸ್
ತಲುಪಲೇ ಬೇಕಾಗಿತ್ತು . ಅದೇ
ಸಮಯದಲ್ಲಿ 7ನೇ
ಬಿಹಾರೀ ಪಡೆ ಬೆಡೋರಿಯನ್ನು
ಗೆಲ್ಲಲಾಗದೇ ಸೋತು ಗಾಯಾಳುಗಳ
ಜೊತೆ ಹಿಂತಿರುಗುತ್ತಿದ್ದರು .
ಆ ದೃಶ್ಯಗಳು
ಪಂಜಾಬಿಗಳಿಗೆ ನಿರುತ್ಸಾಹವುಂಟುಮಾಡುತ್ತಿದ್ದವು
. ಪಂಜಾಬಿಗಳಾದರೂ
ಒಂದೇ ದಿನದಲ್ಲಿ 40 ಕಿಮೀ
ನಡೆದು 25 ಕಿಮೀ
ವಾಹನದಲ್ಲಿ ಪ್ರಯಾಣ ಮಾಡಿ
ಹೇಳತೀರದಷ್ಟು ದಣಿದಿದ್ದರು .
ಇನ್ನು
ಬೆಡೋರಿಯನ್ನು ತಲುಪಲು ಎರಡು
ಹಂತದಲ್ಲಿ ಎರಡು ಕಂಪನಿಗಳಲ್ಲಿ
ಧಾಳಿ ಮಾಡಬೇಕಾಗಿತ್ತು.
ಏಕೆಂದರೆ ಆ ಕಡಿದಾದ
ಹಾದಿಯಲ್ಲಿ ಒಂದು ಸಲ ಕೇವಲ ಒಂದು
ಕಂಪನಿ ಮಾತ್ರ ಮುನ್ನುಗ್ಗಲು
ಸಾಧ್ಯವಾಗುತ್ತಿತ್ತು.
ಮೇಜರ್ ಎಸ್ ಬಿ
ವರ್ಮಾರ ಮೊದಲ ಬ್ರಾವೋ ಕಂಪನಿ
ಧಾಳಿಗೆ ಯತ್ನಿಸಿ ಭಯಾನಕ ಕಾದಾಟ
ನಡೆಸಿ ಗುರಿಯ ಒಂದು ಭಾಗವಷ್ಟೇ
ಗಳಿಸಲಾಯಿತು . ತದನಂತರ
ಮೇಜರ್ ಪರಮಿಂದರ್ ಸಿಂಗರ ಚಾರ್ಲಿ
ಕಂಪನಿ ಎಡಬಿಡದೆ ಮುನ್ನುಗ್ಗಿ
ಆಗಸ್ಟ್ 29ರ
ಬೆಳಿಗ್ಗೆ ಬೆಡೋರಿ ಶಿಖರವನ್ನು
ಗೆದ್ದರು . 19ನೇ
ಪಂಜಾಬ್ ಸತತ ಮೂರು ಸೋಲಿನ ನಂತರ
ಸಂದ ಜಯ.
ಈಗ
ಸೈನಿಕರು ವಿಪರೀತ ಹಸಿದಿದ್ದರು
. ಆದರೆ ಆಹಾರ
ಸರಬರಾಜಿಗೆ ಕಾಯುವಂತಿರಲಿಲ್ಲ
. ತಕ್ಷಣ
ಮುಂದಿನ ಕುತ್ನರ್ ದಿ ಗಲಿಯನ್ನು
ವಶಪಡಿಸಿಕೊಳ್ಳಲು ಕಾಲ್ಕಿತ್ತಿದ್ದರು
. ಆಗ ಮೇಜರ್
ರಾವತ್ , ದೂರದ
ರಾಮ್ ಪುರದಿಂದ 700 ಪೂರಿಗಳನ್ನು
ಬೆಡೋರಿಗೆ ವೈಯಕ್ತಿಕವಾಗಿ
ತಲುಪಿಸಿದಾದರೂ ಆಗ ಅವರು ಕುತ್ನರ್
ದಿ ಗಲಿಗೆ ಹೋಗಿಯಾಗಿತ್ತು .
ಆದರೆ ಒಂದು ಕಂಪನಿ
ಇನ್ನೂ ಅಲ್ಲಿ ಹಿಂದುಳಿದಿದ್ದರಿಂದ
ಅವರಿಗಾದರೂ ಅನಿರೀಕ್ಷಿತ ಒಳ್ಳೆಯ
ಆಹಾರ ಸಿಕ್ಕಿತು . ಮಿಕ್ಕ
ಯೋಧರಿಗೆ ಕುತ್ನರ್ ದಿ ಗಲಿ,
ಕಿರಣ್ ಪ್ರದೇಶಗಳನ್ನು
ಸೆಪ್ಟೆಂಬರ್ 1 ರಂದು
ಗೆದ್ದು ಮತ್ತೊಂದು ಬದಿಯ 1
ಪ್ಯಾರಾ ಪಡೆಯ ಜೊತೆ
ಜೋಡಿಕೊಂಡ ನಂತರವೇ ತಿನ್ನಲು
ಒಳ್ಳೆಯ ಆಹಾರ ಸಿಕ್ಕಿತು .
ಅಲ್ಲಿಯ ತನಕ ಅರೆಬರೆ
ಹೊಟ್ಟೆಯಲ್ಲಿಯೇ ಕಾದಾಡುತ್ತಿದ್ದರು
.
No comments:
Post a Comment