Saturday 10 October 2015

ಹಾಜೀಪೀರ್ ಪಾಸ್ . ಭಾಗ 2


ಹಾಜೀಪೀರ್ ಪಾಸ್ . ಭಾಗ 2

ಆಗಸ್ಟ್ 26 . ಬೆಳಿಗ್ಗೆ 8 ಗಂಟೆ
           ಸಾಂಕನ್ನು ವಶಪಡಿಸಿಕೊಂಡ ತಕ್ಷಣ ಮುಂದಿನ ಕೆಲವು ಪಾಕಿ ಪೊಸ್ಟ್ ಗಳಿಗೆ ಮುನ್ನುಗ್ಗುವುದೆಂದು ನಿರ್ಧಾರವಾಯಿತು . ಸಾರ್ ಮತ್ತು ಲೇಡ್ವಾಲಿ ಗಲಿ . ಅದೂ ಎತ್ತರದ ಸ್ಥಾನಗಳೇ ಆಗಿದ್ದವು .
ಕಲ್ಲಿನ ಕಂದರದ ಹಾದಿಯಲ್ಲಿ ಏರುತ್ತಿದ್ದಾಗಲೇ ಶತ್ರುಗಳ ಕಣ್ಣಿಗೆ ಬಿದ್ದು ಪಾಕಿಗಳು ಗುಂಡಿನ ಧಾಳಿ ಶುರುಹಚ್ಚಿದರು . ಗುಂಡಿಗೆ ಪ್ರತಿಧಾಳಿ ಮಾಡುತ್ತಲೇ ನಮ್ಮ ಧೀರ ಯೋಧರು ಮುನ್ನುಗ್ಗುತ್ತಿದ್ದರು . ದೂರದಲ್ಲೇ ಕೇವಲ ಹನ್ನೆರಡು ಸೈನಿಕರು ಇಳಿಜಾರಿನ ಬಂಕರಿನಲ್ಲಿ ಇದ್ದದ್ದು ಕಂಡು ಬಂದಿತು. ಅಲ್ಲಿಗೂ ನಮ್ಮ ಸೈನಿಕರ ಹೋಗುತ್ತಿದ್ದ ಹಾದಿಗೆ ಕೆಲವಿ ಯಾರ್ಡಿನ ಅಂತರವಿದ್ದರೂ ಅದೃಷ್ಟವಶಾತ್ ಯಾರಿಗೂ ಗುಂಡೇಟು ಬೀಳಲಿಲ್ಲ . ಹೇಡಿ ಪಾಕಿ ಸೈನಿಕರು ಭಾರತೀಯ ಸೈನಿಕರು ಸಮೀಪಿಸುವ ತನಕವೂ ಬಂದೂಕು ಚಲಾಯಿಸುತ್ತಾ ಕೊನೆಯ ಕ್ಷಣಗಳಲ್ಲಿ ಪಲಾಯನ ಮಾಡಿದರು . ಸಾರ್ ಶಿಖರವನ್ನು ಒಂದು ತೊಟ್ಟು ರಕ್ತ ಚೆಲ್ಲದೆಯೇ ವಶಪಡಿಸಿಕೊಳ್ಳಲಾಯಿತು . ಲೇಡ್ವಾಲಿ ಗಲಿಯಲ್ಲೂ ಹೀಗೆಯೇ ಪಾಕಿಗಳ ಪೊಳ್ಳು ಪರಾಕ್ರಮ ಅನಾವರಣವಾಯಿತು .
ಪಾಕಿಗಳ ಸ್ಥೈರ್ಯ ಮನೋಬಲ ಕೇವಲ ಗೆಲ್ಲುವ ತನಕ ಮಾತ್ರ . ಎಲ್ಲಿ ಸೋಲುವ ಸಂಭವ ಕಾಣಿಸಿತ್ತದೋ ಅಲ್ಲೇ ಪಲಾಯನ.
ಆ ದಿನ ಬೆಳಿಗ್ಗೆ ಮೊದಲನೆಯ ಪ್ಯಾರಾ ರೆಗಿಮೆಂಟ್ ಕೇವಲ ಮೂರು ಗಂಟೆಗಳಲ್ಲಿ ಸಾಂಕ್ , ಸಾರ್ ಮತ್ತು ಲೇಡ್ವಾಲಿ ಗಲಿಯನ್ನು ವಶಪಡಿಸಿಕೊಂಡರು



ಅದೇ ಸಮಯದಲ್ಲಿ ಸೇನೆಯ ಮತ್ತೊಂದು ಬಾಹು ಊರಿಯಿಂದ ಪಾಯಿಂಟ್ 10048 – ಪಾಯಿಂಟ್ 11094 - ಬಡೋರಿ – ಕುತ್ನೂರ್ ದಿ ಗಲಿ ಯ ಹಾದಿಯಾಗಿ ಹಾಜೀಪೀರ್ ನನ್ನು ಸಮೀಪಿಸಿ ಅದೇ ರೀತಿಯಾಗಿ ಮತ್ತೊಂದು ಬದಿಯಿಂದ 1 ಪ್ಯಾರಾ ರೆಜಿಮೆಂಟ್ ಹಾಜೀಪೀರನ್ನು ಎರಡೂ ಬದಿಯಿಂದ ಸುತ್ತುವರೆಯುವುದು .
ಆ ಪ್ರದೇಶದಲ್ಲೂ ಒರಟಾದ ಗಿರಿ ಕಂದರಗಳು 4000 ಅಡಿಯಿಂದ 12000 ಅಡಿಯವರೆಗೂ ಇದ್ದು 8000 ಅಡಿ ಎತ್ತರದಲ್ಲಿ ವರ್ಷಪೂರ್ತಿ ಹಿಮವಚ್ಚಾದಿದವಾಗಿರುತ್ತಿತ್ತು . ಅವುಗಳಲ್ಲಿ ಬೆಡೋರಿ 12330 ಅಡಿಗಳ ಎತ್ತರದ ಶಿಖರ . ಬೆಡೋರಿ ಊರಿಯನ್ನು ಎತ್ತದದಿಂದ ದಿಟ್ಟಿಸಿ ನೋಡುವಂಥಹ ಅಗಾಧ ಗಾತ್ರ .
4ನೇ ರಾಜಪೂತ ಮತ್ತು 19ನೇ ಪಂಜಾಬಿ ರೆಜಿಮೆಂಟುಗಳು ಈ ಕಾರ್ಯ ಕೈಗೆತ್ತಿಕೊಂಡಿದ್ದರು . ಯಾವ ಸಮಯದಲ್ಲಿ ಮೊದಲ ಪ್ಯಾರಾ ಸಾಂಕನ್ನು ವಶಪಡಿಸಿಕೊಳ್ಳಲು ವಿಫಲವಾಯಿತೋ ಆಗ 19ನೆ ಪಂಜಾಬ್ ಪಾತ್ರಾ ಎಂಬ ಶಿಖರವನ್ನು ಗೆದ್ದಿದ್ದರು .
4ನೇ ರಾಜಪೂತ್ ಬೆಡೋರಿಯನ್ನು ಗೆಲ್ಲಲು ಹೋದರಾದರೂ ಅಲ್ಲಿನ ಕ್ಲಿಷ್ಟಕರ ಕಲ್ಲಿನ ಹಾದಿಯನ್ನೇರಲಾಗಲಿಲ್ಲ. ಅಲ್ಲಿನ ಕಠಿನ ನೆಲದಲ್ಲಿ ಡೇರೆ ಹೂಡುವುದೂ ಕಷ್ಟವಾಗುತ್ತಿತ್ತು . ಪಾಕಿಗಳಾದರೋ ಎತ್ತರದಲ್ಲಿ ಮೊದಲೇ ಸಂಗರ್ಸ್ ಎಂಬ ಕಲ್ಲಿನ ಬಂಕರುಗಳನ್ನು ನಿರ್ಮಿಸಿಕೊಂಡು ಅದರ ಮರೆಯಲ್ಲಿ ಗುಂಡು ಹಾರಿಸಿತ್ತಿದ್ದರು . ರಾಜಪೂತರ ಪಡೆ ಬಹಳ ಸಾವು ನೋವುಗಳನ್ನು ಅನುಭವಿಸಿತು . ಈ ಬೆಡೋರಿಯನ್ನು ಗೆಲ್ಲಲು ತೀರಾ ಅಸಾಧ್ಯ ಎಂದು ಕರ್ನಲ್ ಬಿಂದ್ರಾ ಅಭಿಪ್ರಾಯಪಡುತ್ತಾರೆ. ಅದಕ್ಕಿಂತಾ ಬೆಡೋರಿಯನ್ನು ವಶಪಡಿಸಿಕೊಳ್ಳಲು ಯೋಚಿಸಿದ ಹಾದಿಯು ಸೂಕ್ತವಾಗಿರಲಿಲ್ಲ .
ನಂತರ 19ನೇ ಪಂಜಾಬಿನ ಲೆಫ್ಟನೆಂಟ್ ಕರ್ನಲ್ ಸಂಪೂರನ್ ಸಿಂಗ್ ನ ಹೆಗಲಿಗೇರಿತು . ಸ್ವಾಭಿಮಾನಿ ಸಂಪೂರನ್ ತನ್ನದೇ ಮಾರ್ಗವಾಗಿ ಬೆಡೋರಿಯನ್ನು ಗೆಲ್ಲಲು ಕೌನ್ರಾಲಿ – ಗಗ ರ್ ಹಿಲ್ ದಾರಿಯನ್ನು ಬಳಸಿ ತಮ್ಮ ಬೆಟ್ಯಾಲಿಯನ್ನನ್ನು ನಡೆಸಿದರು .
ಆಗಸ್ಟ್ 25ರಿಂದ ಪಂಜಾಬಿನ ಪಡೆ ಮೂರು ದಿನಗಳ ನಿರಂತ ಚಲನೆಯಲ್ಲೇ ಇತ್ತು . ಶಸ್ತ್ರಾಸ್ತ್ರಗಳನ್ನು ಮತ್ತಿನ್ನಿತರ ಸಲಕರಣೆಗಳನ್ನು ಹೊತ್ತುಕೊಂಡು ಆಗಾಗ ಸುರಿಯುವ ಭಾರೀ ಮಳೆಯ ನಡುವೆ ಛ್ಳಿಯಲ್ಲಿ ನಡುಗುತ್ತಾ ಆಯಾಸ ದಣಿವಿನ ನಡುವೆಯೂ ಸಾಗುತ್ತಿದ್ದರು . ಸರಬರಾಜಾಗುತ್ತಿದ್ದ ರೇಷನ್ ಮುಗಿಯುವ ಸಲುವಾಗಿ ಪುನಃ ತರಲು 7000 ಅಡಿಗಳ ಕೆಳಗೆಯೇ ಹೋಗಬೇಕು, ಅದಕ್ಕಿಂತ ಎತ್ತತರದಲ್ಲಿ ಬೆಳೆ ಬೆಳಯುವುದಿಲ್ಲ . ವಾಯುದಳದಿಂದ ಆಹಾರ ಪೂರೈಕೆಗೆ ಮೇಲಿನಿಂದೊಮ್ಮೆ ಬೀಳಿಸಿದರೂ ಅದು ತಪ್ಪಿ ಶತ್ರುಪಾಳಯದಲ್ಲಿ ಬಿದ್ದಿತು . ಈ ಎಲ್ಲ ಕಠಿಣ ಸನ್ನಿವೇಷಗಳಲ್ಲಿಯೂ ಆಕ್ರಮಣದ ಆದೇಶ ಬಂದಾಗ ಹಿಂಜರಿಯದೇ ಸಾಗುತ್ತಲೇ ಇದ್ದರು .
ಆಗಸ್ಟ್ 27ರ ರಾತ್ರಿ , ಊರಿಯಿಂದ 10000 ಅಡಿಯ ಪಾತ್ರದಲ್ಲಿ ಟ್ರಕ್ಕುಗಳಲ್ಲಿ ಕೌನ್ರಾಲಿಗೆ ಒಯ್ಯಲಾಯಿತು . ತಮ್ಮ ಶರೀರದಲ್ಲಿನ ಸ್ವಲ್ಪ ತ್ರಾಣವನ್ನೂ ಬಿಗಿಹಿಡಿದುಕೊಂಡು ನಿಶ್ಯಕ್ತಿಯನ್ನು ಬದಿಗೊತ್ತಿಕೊಂಡಿದ್ದರು . 25 ಕಿ ಮೀ ಗಳ ಪ್ರಯಾಣಲ್ಲಿಯೇ ಕೊಂಚ ಕಣ್ಮುಚ್ಚಿ ಮಲಗಿದ್ದರು . ಟ್ರಕ್ಕಿನಿಂದ ಇಳಿದಾಕ್ಷಣ ಪುನಃ ಪರ್ವತವೇರಬೇಕು . ಅವರ ಉದ್ದೇಶ 28ರ ರಾತ್ರಿಯ ವೇಳೆ ಬೆಡೋರಿಯ ತಳ ಸ್ಪ್ರಿಂಗ್ಸ್ ತಲುಪಲೇ ಬೇಕಾಗಿತ್ತು . ಅದೇ ಸಮಯದಲ್ಲಿ 7ನೇ ಬಿಹಾರೀ ಪಡೆ ಬೆಡೋರಿಯನ್ನು ಗೆಲ್ಲಲಾಗದೇ ಸೋತು ಗಾಯಾಳುಗಳ ಜೊತೆ ಹಿಂತಿರುಗುತ್ತಿದ್ದರು . ಆ ದೃಶ್ಯಗಳು ಪಂಜಾಬಿಗಳಿಗೆ ನಿರುತ್ಸಾಹವುಂಟುಮಾಡುತ್ತಿದ್ದವು . ಪಂಜಾಬಿಗಳಾದರೂ ಒಂದೇ ದಿನದಲ್ಲಿ 40 ಕಿಮೀ ನಡೆದು 25 ಕಿಮೀ ವಾಹನದಲ್ಲಿ ಪ್ರಯಾಣ ಮಾಡಿ ಹೇಳತೀರದಷ್ಟು ದಣಿದಿದ್ದರು .
ಇನ್ನು ಬೆಡೋರಿಯನ್ನು ತಲುಪಲು ಎರಡು ಹಂತದಲ್ಲಿ ಎರಡು ಕಂಪನಿಗಳಲ್ಲಿ ಧಾಳಿ ಮಾಡಬೇಕಾಗಿತ್ತು. ಏಕೆಂದರೆ ಆ ಕಡಿದಾದ ಹಾದಿಯಲ್ಲಿ ಒಂದು ಸಲ ಕೇವಲ ಒಂದು ಕಂಪನಿ ಮಾತ್ರ ಮುನ್ನುಗ್ಗಲು ಸಾಧ್ಯವಾಗುತ್ತಿತ್ತು. ಮೇಜರ್ ಎಸ್ ಬಿ ವರ್ಮಾರ ಮೊದಲ ಬ್ರಾವೋ ಕಂಪನಿ ಧಾಳಿಗೆ ಯತ್ನಿಸಿ ಭಯಾನಕ ಕಾದಾಟ ನಡೆಸಿ ಗುರಿಯ ಒಂದು ಭಾಗವಷ್ಟೇ ಗಳಿಸಲಾಯಿತು . ತದನಂತರ ಮೇಜರ್ ಪರಮಿಂದರ್ ಸಿಂಗರ ಚಾರ್ಲಿ ಕಂಪನಿ ಎಡಬಿಡದೆ ಮುನ್ನುಗ್ಗಿ ಆಗಸ್ಟ್ 29ರ ಬೆಳಿಗ್ಗೆ ಬೆಡೋರಿ ಶಿಖರವನ್ನು ಗೆದ್ದರು . 19ನೇ ಪಂಜಾಬ್ ಸತತ ಮೂರು ಸೋಲಿನ ನಂತರ ಸಂದ ಜಯ.
ಈಗ ಸೈನಿಕರು ವಿಪರೀತ ಹಸಿದಿದ್ದರು . ಆದರೆ ಆಹಾರ ಸರಬರಾಜಿಗೆ ಕಾಯುವಂತಿರಲಿಲ್ಲ . ತಕ್ಷಣ ಮುಂದಿನ ಕುತ್ನರ್ ದಿ ಗಲಿಯನ್ನು ವಶಪಡಿಸಿಕೊಳ್ಳಲು ಕಾಲ್ಕಿತ್ತಿದ್ದರು . ಆಗ ಮೇಜರ್ ರಾವತ್ , ದೂರದ ರಾಮ್ ಪುರದಿಂದ 700 ಪೂರಿಗಳನ್ನು ಬೆಡೋರಿಗೆ ವೈಯಕ್ತಿಕವಾಗಿ ತಲುಪಿಸಿದಾದರೂ ಆಗ ಅವರು ಕುತ್ನರ್ ದಿ ಗಲಿಗೆ ಹೋಗಿಯಾಗಿತ್ತು . ಆದರೆ ಒಂದು ಕಂಪನಿ ಇನ್ನೂ ಅಲ್ಲಿ ಹಿಂದುಳಿದಿದ್ದರಿಂದ ಅವರಿಗಾದರೂ ಅನಿರೀಕ್ಷಿತ ಒಳ್ಳೆಯ ಆಹಾರ ಸಿಕ್ಕಿತು . ಮಿಕ್ಕ ಯೋಧರಿಗೆ ಕುತ್ನರ್ ದಿ ಗಲಿ, ಕಿರಣ್ ಪ್ರದೇಶಗಳನ್ನು ಸೆಪ್ಟೆಂಬರ್ 1 ರಂದು ಗೆದ್ದು ಮತ್ತೊಂದು ಬದಿಯ 1 ಪ್ಯಾರಾ ಪಡೆಯ ಜೊತೆ ಜೋಡಿಕೊಂಡ ನಂತರವೇ ತಿನ್ನಲು ಒಳ್ಳೆಯ ಆಹಾರ ಸಿಕ್ಕಿತು . ಅಲ್ಲಿಯ ತನಕ ಅರೆಬರೆ ಹೊಟ್ಟೆಯಲ್ಲಿಯೇ ಕಾದಾಡುತ್ತಿದ್ದರು


No comments:

Post a Comment