19ನೇ
ಪಂಜಾಬ್ ರೆಜಿಮೆಂಟಿಗೆ ಸೆಪ್ಟೆಂಬರ್
9 ರಂದು
ಬಿಡುವಿಲ್ಲದಂತೆ ಮತ್ತೆ ಕದನಕ್ಕೆ
ಸಿದ್ಧರಾದರು . ಜೈರಾತ್
ಎಂಬ ಮತ್ತೊಂದು ಪೋಸ್ಟ್ ನ ಮೇಲೆ
ಹಗಲಿನಲ್ಲೇ ನೇರಾ ನೇರ ಧಾಳಿ ಮಾಡಿ
ತದನಂತರ ಅದೇ ರೆಜಿಮೆಂಟಿನ ಡೆಲ್ಟಾ
ಕಂಪನಿ ಮತ್ತೊಂದು 6ನೇ
ಡೋಗ್ರಾ ಗಿಟ್ಟಿಯನ್ ಎಂಬ ಪೋಸ್ಟನ್ನು
ವಶಪಡಿಸಿಕೊಳ್ಳಲು ನುಗ್ಗಿದರು
. ಗಿಟ್ಟಿಯನ್ನಲ್ಲಿ
ಕೈ ಕೈ ಹಿಡಿದು ಕಾದಾಡುವಷ್ಟು
ಭೀಕರ ಕಾಳಗವಾಗಿತ್ತು .
ಎರಡೂ ಕಂಪನಿಯ
ಕಮ್ಯಾಂಡರುಗಳು ಮೇಜರ್ ರಣಬೀರ್
ಸಿಂಗ್ (19ನೇ
ಪಂಜಾಬ್) ಮತ್ತು
ಮೇಜರ್ ಲಲ್ಲಿ (6ನೇ
ಡೋಗ್ರಾ) ಮಡಿದರು
.ಇಬ್ಬರಿಗೂ
ಮರಣೋತ್ತರ ವೀರ ಚಕ್ರ ಪ್ರದಾನವಾಯಿತು
. ಅಲ್ಲದೇ
ಅದೇ ಘಟಕದಲ್ಲಿ ಇನ್ನೂ 21
ಯೋಧರೂ ಹುತಾತ್ಮರಾದರು
.
ಪುನಃ
ಮೇಜರ್ ಪರಮಿಂದರ್ ಸಿಂಗರ ಚಾರ್ಲಿ
ಕಂಪನಿ ಪಾಯಿಂಟ್ 8777 ಎಂಬ
ಶಿಖರವನ್ನು ಗೆಲ್ಲಲು ಹೊರಟರು
. ಆ ಶಿಖರವನ್ನು
ಒಂದು ಭಾಗ ವಶಪಡಿಸಿಕೊಳ್ಳುವಾಗ
ಶತ್ರುಗಳು ಪ್ರತಿಧಾಳಿ ಮಾಡಿದರು
. ಆಗ 19ನೇ
ಪಂಜಾಬ್ ಮತ್ತೊಮ್ಮೆ ಧಾಳಿ ಮಾಡಲು
ಒಂದುಗೂಡಿಸುವಾಗ ಕದನ ವಿರಾಮ
ಘೋಷಿಸಲಾಯಿತು . ಆ
ಸಮಯದಲ್ಲಿ ಯುದ್ಧವೂ ಪರಿಣಾಮಕಾರಿಯಾಗಿ
ಮುಗಿದಿತ್ತು . ಕದನದ
ವಿರಾಮದ ನಂತರ ಉಭಯ ಪಕ್ಷಗಳಿಂದ
ಹೆಣಗಳನ್ನು ಬದಲಿಸಿಕೊಳ್ಳುವಾಗ
ಒಬ್ಬ ಪಾಕಿಸ್ತಾನಿ ಮೇಜರ್ ರಿಜ್ವಿ
ಎಂಬಾತ ಭಾರತೀಯ ಚಾರ್ಲಿ ಕಂಪನಿಯ
ಲಖಾ ಸಿಂಗನ ಬಗ್ಗೆ ಪ್ರಶಂಸೆ
ವ್ಯಕ್ತ ಪಡಿಸಿದನಂತೆ . ಲಖಾ
ತನ್ನ ಗುಂಡುಗಳನ್ನು ಖಾಲಿ
ಮಾಡಿಕೊಂಡಾಗ ತನ್ನ ಬ್ಯಾನೆಟ್ಟಿನಿಂದ
ಕಾದಾಡಿದನಂತೆ ತದನಂತರ ತನ್ನ
ಹೆಲ್ಮೆಟ್ಟಿನಿಂದಲೂ ನಿರ್ಭೀತಿಯಿಂದ
ಹೋರಾಡುತ್ತಿದ್ದನಂತೆ .
ಹಿಮಾಚಲದ ಸಧೃಢ
ಯುವಕನಾಗಿದ್ದ ಲಖಾನ ವ್ಯಾಘ್ರನಂಥಹ
ಹೊಳೆಯುವ ಕಂಗಳನ್ನು ಮೇಜರ್ ಜನರಲ್
ಭಟ್ಟಿಯೂ ನೆನೆಸಿಕೊಂಡಿದ್ದಾರೆ
. ರಿಜ್ವಿ
ಸಹಿತ ಈ ನಿಶ್ಯಸ್ತ್ರ ಯೋಧನ ಮೇಲೆ
ಗುಂಡು ಹಾರಿಸಬೇಡಿರೆಂದು
ಕೂಗುತ್ತಿದ್ದನಂತೆ . ಆದರೆ
ಆ ಕದನದ ಗದ್ದಲದಲ್ಲಿ ಲಖಾನಿಗೆ
ಗುಂಡು ತಗುಲಿ ಮರಣವನ್ನೊಪ್ಪುತ್ತಾನೆ
. ಲಖಾನಿಗೂ
ಮರಣೋತ್ತರ ವೀರ ಚಕ್ರ ಲಭಿಸಿತು
.
ಮತ್ತೆ
ಹಾಜೀಪೀರ್ ನತ್ತ
ಆಗಸ್ಟ್
27 , ಬೆಳಿಗ್ಗೆ
11 ಗಂಟೆ
ಮೊದಲ
ಪ್ಯಾರಾಟ್ರೂಪರ್ ನಿರಂತರ ಸಮರದಿಂದ
ಸ್ವಲ್ಪ ಬಿಡುವಿದ್ದು ಮುಂದಿನ
ಧಾಳಿಗೆ ಸಜ್ಜಾಗುತ್ತಿದ್ದರು .
ಮೇಜರ್ ರಣಜಿತ್
ಸಿಂಗ್ ದಯಾಳ್ 10000 ಅಡಿಗಳ
ಎತ್ತರದಲ್ಲಿ ನಿಂತು ತಮ್ಮ
ಬೈನಾಕ್ಯೂಲರ್ ನಿಂದ ಹಾಜೀಪೀರ್
ನತ್ತ ದೂರ ದೂರ ನೋಡಿದರೂ ಒಂದು
ಸಣ್ಣ ಚಟುವಟಿಕೆಗಳು ಕಂಡುಬರುತ್ತಿಲ್ಲ
. ಆ ಎತ್ತರದಿಂದ
ಕೆಳಗಿಳಿದು ಹೈದರಾಬಾದಿ ನಾಲೆಯನ್ನು
ದಾಟಿ ಮತ್ತೆ ಸ್ವಲ್ಪ ಏರಿದರೆ
8652 ಅಡಿಯ
ಎತ್ತರದಲ್ಲಿ ಇರುವಿದೇ ಹಾಜೀಪೀರ್
. ಎಲ್ಲರಿಗೂ
ಆ ಪ್ರದೇಶದ ಬಗ್ಗೆ ಆಗಲೇ ತಿಳಿದಿದ್ದರು
ಹಾಗೇ ಧಾಳಿ ಮಾಡುವ ದೃಢವಿಶ್ವಾಸವಿತ್ತು
.
ಮೇಜರ್
ದಯಾಳ್ ತನ್ನ ಕಮ್ಯಾಂಡಿಂಗ್ ಆಫೀಸರ್
ಲೆ ಕ ಪ್ರಬ್ಜಿಂದರ್ ಸಿಂಗರಿಗೆ
ಒತ್ತಾಯಿಸಿ ತಮ್ಮ ಕೇವಲ 1
ಪ್ಯಾರಾ ಧಾಳಿಗೆ
ಸಾಕೆಂದು ಒಪ್ಪಿಸಿದರು .
ಪುನಃ ಎರಡು ಗಂಟೆಗಳ
ಚರ್ಚೆಯ ನಂತರ ಜನರಲ್ ಜೋರು ಬಕ್ಷಿ
ಸಹಿತ ಒಪ್ಪಿದರು . ಮಧ್ಯಾಹ್ನ
2 ಗಂಟೆಗೆ
ದಯಾಳರಿಗೆ ಹಾಜೀಪೀರಿಗೆ ತೆರಳಲು
ಆದೇಶವೂ ಬಂದಿತು .
ಸಾಂಕಿನ
ಮೇಲೆ ಕಾದಾಡಿ ಅನೇಕರನ್ನು
ಕಳೆದುಕೊಂಡಿದ್ದ ಆಲ್ಫಾ ಕಂಪನಿಯ
ಒಂದು ಪ್ಲಟೂನ್ ರಣಜಿತರೊಂದಿಗೆ
ಕೂಡಿಕೊಂಡಿತು . ಆ
ಪ್ಲಟೂನಿನ ಸುಬೇದಾರ್ ಅರ್ಜುನ್
ಸಿಂಗ್ ಎಂಬ ಧೈರ್ಯ ಸಾಹಸಕ್ಕೆ
ಹೆಸರುವಾಸಿಯಾಗಿದ್ದ ಒಬ್ಬ ಕಿರಿಯ
ಅಧಿಕಾರಿಯಾಗಿದ್ದ . ಒಟ್ಟು
ಯೋಧರ ಸಂಖ್ಯೆ 100 ಆಗಿತ್ತು
. ಯಾವುದು
ಬ್ರಿಗೇಡ್ ಹಂತದ ಧಾಳಿ ಮಾಡಬೇಕೆಂದು
ನಿರ್ಧಾರವಾಗಿತ್ತೋ , ಕೇವಲ
ಒಂದು ಕಂಪನಿ ಕೈ ಗೆತ್ತಿಕೊಂಡಿತ್ತು
. ಇದು ರಣಜಿತರ
ಅಧಮ್ಯ ವಿಶ್ವಾಸ . ಅದು
ಹೇಗೂ ಕಣಿವೆಯ ಎಡ ಬಲ ಭುಜಗಳನ್ನು
ಕಬಳಿಸಿಯಾಗಿದೆಯಂತೋ ಅಥವಾ
ಹಾಜೀಪೀರಿನ ಮೇಲೆ ಪಕ್ಕಾ
ಮಾಹಿತಿಯಿದೆಯೆಂದೋ ಅಥವಾ ಸ್ವಂತ
ಬಲದ ಮೇಲೆ ಇರುವ ಅಪಾರ ನಂಬಿಕೆಯೋ
ತಿಳಿಯದು . ರಣಜಿತರ
ಧೈರ್ಯ ನಂಬಲಸಾಧ್ಯ .
ಎಲ್ಲರೂ
ತಯಾರಾದ ನಂತರ ಅರ್ಧ ಗಂಟೆಗಳಲ್ಲೇ
ಲೇಡ್ವಾಲಿ ಗಲಿಯಂದ ಇಳಿದು
ಕಾಡುಮೇಡುಗಳ ಹಾದಿಯಲ್ಲಿ ಐದು
ಗಂಟೆಗಳ ಕಾಲ ನಡೆದು ಸಂಜೆಯಷ್ಟರಲ್ಲಿ
ಹೈದರಾಬಾದಿ ನಾಲೆಯನ್ನು ತಲುಪಿದರು
. ಅಲ್ಲಿ
ನಾಲೆಯ ತಣ್ಣನೆಯ ಕೊರೆಯುವ ನೀರಿನ
ಮೇಲೆ ತೆವಳುತ್ತಾ ಮತ್ತೊಂದು
ಬದಿಗೆ ತಲುಪಿದರು . ರಣಜಿತ
ಸಿಂಗರೆಂತು “ ಇದೆಲ್ಲಾ ಮಾಮೂಲಿ
ನಮಗೆ ಅಭ್ಯಾಸವಿದೆ, ಇದೇನು
ನಮಗೆ ಕಷ್ಟವಲ್ಲ . . . ” ಎಂದು
ಹುರುದುಂಬಿಸುತ್ತಾ ಕ್ಷಣವೂ
ತಡಮಾಡದೇ ಹಾಜೀಪೀರನ್ನು ಏರಲಾರಂಭಿಸಿದರು
.
ಮತ್ತೆ
ರಾತ್ರಿಯ ವೇಳೆ ಕೊರೆಯುವ ಚಳಿಗೇನು
ಕಮ್ಮಿಯಿರಲಿಲ್ಲ . ಸಾಲದೆಂಬಂತೆ
ಒದ್ದೆಯಾದ ಬಟ್ಟೆಗಳು ಬೇರೆ .
ಅದರೆ ಮೇಲೆ ಮತ್ತೆ
ಭೋರ್ಗರೆಯುವ ಮಳೆಯ ಕಾಟ.
ಆದರೂ ಹಿಂದಿನ
ಯಶಸ್ಸಿನ ಕಾರಣ ಬಹಳ ಹುಮ್ಮಸ್ಸಿನಿಂದ
ಇದ್ದರು . ಆ
ರಾತ್ರಿಯೂ ನಿದ್ದೆಗೆಡಬೇಕಾಯಿತು
. ರಣಜಿತ್
ಸಿಂಗರಿಗೆ ಇದು ನಿದ್ದೆಯಿಲ್ಲದೇ
ಮೂರನೆಯ ದಿನ ! ಆದರೂ
ಅವರದ್ದು ಭೀಮಕಾಯದ ಸಹನ ಶಕ್ತಿ
. ಅವರ ನಾಯಕತ್ವದ
ಮೇಲೆ ಎಲ್ಲರಿಗೂ ಮಿತಿಮೀರಿದ
ನಂಬಿಕೆ .
No comments:
Post a Comment