Wednesday 14 October 2015

ಹಾಜೀಪೀರ್ ಪಾಸ್ - ಭಾಗ 4



ಹಾಜೀಪೀರನ್ನು ಏರುತ್ತಾ ಏರುತ್ತಾ ನಡುವೆ ಬೇಹಕ್ ಎಂಬ ಕುಟೀರ ಬೆಟ್ಟಕ್ಕೆ ಗೋಡೆಯಂತೆ ಇದ್ದದ್ದು ಕಂಡು ಬಂದಿತು . ಮೇಜರ್ ರಣಜಿತರಿಗೆ ಅಲ್ಲಿ ಏನೋ ಒಂದು ಅನುಮಾನಾಸ್ಪದ ಚಲನವಲನ ಇದ್ದಂತೆ ಕಂಡುಬಂದಿತು . ತಮ್ಮ ಯೋಧರಿಗೆ ಅದನ್ನು ಸುತ್ತುವರೆಯಲು ಹೇಳಿದರು . ಅಲ್ಲಿ ಒಳಗಿದ್ದವರಿಗೆ ಹೊರಬರಲು ಗದರಿಸಿದಾಗ ಒಬ್ಬ ಪಾಕಿಸ್ತಾನೀ ಕ್ಯಾಪ್ಟನ್ ಒಳಗೊಂಡ ಒಟ್ಟು ಹನ್ನೊಂದು ಮಂದಿ ಪಾಕಿ ಸೈನಿಕರು ಕೈಯೆತ್ತಿ ಶರಣಾಗಿ ಹೊರಬಂದರು . ಅವರ ಬಳಿ ರಣಜಿತರ ರಣಜಿತರ 1 ಪ್ಯಾರಾ ಪಡೆಯ ಇರುವಿಕೆಯ ಸ್ಕೆಚ್ ಮುಂತಾದ ಪೇಪರ್ ಗಳಿದ್ದವು. ಅವರಿಗೆ ರಣಜಿತರ 1 ಪ್ಯಾರಾ ಪಡೆಯ ಮೇಲೆ ಧಾಳಿ ಮಾಡಲು ಮೇಲಿನಿಂದ ಆದೇಶವಿತ್ತಂತೆ ! . ಆದರೆ ಆ ಪಾಕಿ ಕ್ಯಾಪ್ಟನ್ ಯುದ್ಧ ಮಾಡಲು ಬೇಸತ್ತವನಂತೆ ಕಂಡಿದ್ದ . ತನ್ನ ಮರಣ ಶಯೈಯಲ್ಲಿದ್ದ ತಂದೆಯನ್ನು ಕಾಣಲು ಹಪ ಹಪಿಸಿತ್ತಿದ್ದ . ಅದಲ್ಲದೆ ತನ್ನ ಮೇಲಾಧಿಕಾರಿಗೆ ಸೇನೆಯಿಂದ ತೆರವುಗೊಳಿಸಲು ವಿನಂತಿ ಪತ್ರ ಬರೆದು ಹಿಡಿದಿದ್ದ . ರಣಜಿತರು ಅವರೆಲ್ಲರನ್ನೂ ನಿಶ್ಯಸ್ತ್ರಗೊಳಿಸಿ ತಮ್ಮ ಭಾರವನ್ನು ಅವರ ಬೆನ್ನ ಮೇಲೆ ಹೊರಲು ಕೊಟ್ಟು ಎಳೆದುಕೊಂಡು ಹೋದರು .

ಪುನಃ ಪರ್ವತಾರೋಹಣ ಮುಂದುವರೆಯಿತು . ಮಳೆಯ ಕಾರಣ ಪೂರಾ ದಾರಿ ನೆನೆದು ತೋಯ್ದು ಹೋಗಿತ್ತು . ಅನೇಕ ಬಾರಿ ಪ್ರತೀ ಹೆಜ್ಜೆ ಶ್ರಮ ಪಟ್ಟು ತೆವಳುತ್ತಾ ಸಾಗಬೇಕಿತ್ತು . ಬೆಳಗ್ಗಿನ ಜಾವ 4:40 ರ ಹೊತ್ತಿಗೆ ಪಾಕ್ ವಲಯದ ಊರಿ ಮತ್ತು ಪೂಂಚ್ ರಸ್ತೆ ತಲುಪಿದರು . ಅಲ್ಲಿಂದ ಮತ್ತೆ 10 ಕಿ ಮೀ ಮೇಲೆ ಏರಬೇಕು . ಏರುವ ಮುನ್ನ ಕೊಂಚ ಸಮಯ ರಣಜಿತರು ತಮ್ಮ ಯೋಧರಿಗೆ ವಿಶ್ರಮಿಸಲು ಹೇಳಿದರು . ಹೇಗಿದ್ದರೂ ಮತ್ತೆ ಏರಿ ಕಾದಾಡಬೇಕಲ್ಲ . ಎರಡು ಗಂಟೆಗಳ ಕಾಲ ಮಳೆಯ ಮಧ್ಯೆ ಹೇಗೋ ಒಬ್ಬರಿಗೊಬ್ಬರು ಕೂಡಿಕೊಂಡು ಕಾಲ್ಗಳಿಗೆ ವಿರಾಮ ನೀಡಿದರು . ಕೇವಲ ಒಂದೊಂದು ಟೊಪ್ಪಿಯನ್ನು ಧರಿಸಿದ್ದರು , ಯಾರ ಬಳಿಯೂ ಒಂದು ಬೆಚ್ಚನೆಯ ಹೊದಿಕೆಯಿರಲಿಲ್ಲ . ಕೆಲವರು ಬಂಡೆಗಳ ಕೆಳಗೆ ಕೆಲವರು ಮರಕ್ಕೆ ವಾಲಿಕೊಂಡಿದ್ದರು .
ಬೆಳಗಾಗುತ್ತಿದ್ದಂತೆ ಪರ್ವತದ ಪಶ್ಚಿಮ ಪಾರ್ಶ್ವದಿಂದ ಇವರ ಕಡೆ ಲಘುವಾಗಿ ಮೆಶೀನ್ ಗನ್ ಧಾಳಿಯಾಯಿತು . ತಕ್ಷಣವೇ ರಣಜಿತರು ಒಂದು ಪ್ಲಟೂನನ್ನು ಅಲ್ಲೇ ಬಿಟ್ಟು ಉಳಿದ ಯೋಧರನ್ನೊಳಗೊಂಡು ತ್ವರಿತವಾಗಿ ಪರ್ವತದ ಬಲ ಭುಜವನ್ನೇರಿ ನೇರ ವಿರುದ್ಧ ದಿಕ್ಕಿನಿಂದ ಅವರತ್ತ ಇಳಿದರು . ಹಠಾತ್ತನೆ ಅವರ ಬಳಿ ಅನಿರೀಕ್ಷಿತ ದಿಕ್ಕಿನಿಂದ ಎದುರಾಗಿದ್ದನ್ನ ಕಂಡ ಪಾಕಿ ಯೋಧರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದರು .
ಅಷ್ಟೇ ಮುಗಿಯಿತು . ಆಗಸ್ಟ್ 28 ರಂದು ಬೆಳಿಗ್ಗೆ 10 ಗಂಟೆಗೆ ರಣಜಿತರು ತಮ್ಮ ವೈರ್ ಲೆಸ್ ನಿಂದ ಜೋರು ಬಕ್ಷಿಯವರಿಗೆ ಹಾಜೀಪೀರನ್ನು ವಶಪಡಿಸಿಕೊಂಡೆವೆಂದು ಸಿಹಿ ಸುದ್ಧಿ ತಲುಪಿಸಿದರು . ಒಂದೇ ಗಂಟೆಯಲ್ಲಿ ಆಲ್ ಇಂಡಿಯಾ ರೇಡಿಯೋದರಲ್ಲಿ ಈ ಸುದ್ಧಿ ದೇಶಾದ್ಯಂತ ಹಬ್ಬಿತು .
ತ್ರಿವರ್ಣ ದ್ವಜ ಹಾಜೀಪೀರಿನ ತುದಿಯಲ್ಲಿ ರಾರಾಜಿಸುತ್ತಿತ್ತು .
ಇದರಿಂದ ಪಾಕಿಗಳಿಗೆ ಘೋರ ಅವಮಾನವಾಯಿತು . ಇಷ್ಟಕ್ಕೇ ಸುಮ್ಮನಿರದೇ ಮತ್ತೊಂದು ಬದಿಯಲ್ಲಿ ಪ್ರತಿಧಾಳಿಗೆ ತಯಾರಾಗುತ್ತಿದ್ದರು . ಮೇಜರ್ ರಣಜಿತ್ ಇದನ್ನು ಮನಗಂಡು ಅವರನ್ನೆದುರಿಸಲು ತಮ್ಮ ಕಡೆ ಸೇನಾ ಬಲವರ್ಧನೆಗೆ ಕೇಳಿಕೊಂಡರು.

No comments:

Post a Comment