ಹಾಜೀಪೀರನ್ನು
ಏರುತ್ತಾ ಏರುತ್ತಾ ನಡುವೆ ಬೇಹಕ್
ಎಂಬ ಕುಟೀರ ಬೆಟ್ಟಕ್ಕೆ ಗೋಡೆಯಂತೆ
ಇದ್ದದ್ದು ಕಂಡು ಬಂದಿತು .
ಮೇಜರ್ ರಣಜಿತರಿಗೆ
ಅಲ್ಲಿ ಏನೋ ಒಂದು ಅನುಮಾನಾಸ್ಪದ
ಚಲನವಲನ ಇದ್ದಂತೆ ಕಂಡುಬಂದಿತು
. ತಮ್ಮ ಯೋಧರಿಗೆ
ಅದನ್ನು ಸುತ್ತುವರೆಯಲು ಹೇಳಿದರು
. ಅಲ್ಲಿ
ಒಳಗಿದ್ದವರಿಗೆ ಹೊರಬರಲು ಗದರಿಸಿದಾಗ
ಒಬ್ಬ ಪಾಕಿಸ್ತಾನೀ ಕ್ಯಾಪ್ಟನ್
ಒಳಗೊಂಡ ಒಟ್ಟು ಹನ್ನೊಂದು ಮಂದಿ
ಪಾಕಿ ಸೈನಿಕರು ಕೈಯೆತ್ತಿ ಶರಣಾಗಿ
ಹೊರಬಂದರು . ಅವರ
ಬಳಿ ರಣಜಿತರ ರಣಜಿತರ 1
ಪ್ಯಾರಾ ಪಡೆಯ
ಇರುವಿಕೆಯ ಸ್ಕೆಚ್ ಮುಂತಾದ ಪೇಪರ್
ಗಳಿದ್ದವು. ಅವರಿಗೆ
ರಣಜಿತರ 1 ಪ್ಯಾರಾ
ಪಡೆಯ ಮೇಲೆ ಧಾಳಿ ಮಾಡಲು ಮೇಲಿನಿಂದ
ಆದೇಶವಿತ್ತಂತೆ ! . ಆದರೆ
ಆ ಪಾಕಿ ಕ್ಯಾಪ್ಟನ್ ಯುದ್ಧ ಮಾಡಲು
ಬೇಸತ್ತವನಂತೆ ಕಂಡಿದ್ದ .
ತನ್ನ ಮರಣ ಶಯೈಯಲ್ಲಿದ್ದ
ತಂದೆಯನ್ನು ಕಾಣಲು ಹಪ ಹಪಿಸಿತ್ತಿದ್ದ
. ಅದಲ್ಲದೆ
ತನ್ನ ಮೇಲಾಧಿಕಾರಿಗೆ ಸೇನೆಯಿಂದ
ತೆರವುಗೊಳಿಸಲು ವಿನಂತಿ ಪತ್ರ
ಬರೆದು ಹಿಡಿದಿದ್ದ . ರಣಜಿತರು
ಅವರೆಲ್ಲರನ್ನೂ ನಿಶ್ಯಸ್ತ್ರಗೊಳಿಸಿ
ತಮ್ಮ ಭಾರವನ್ನು ಅವರ ಬೆನ್ನ ಮೇಲೆ
ಹೊರಲು ಕೊಟ್ಟು ಎಳೆದುಕೊಂಡು
ಹೋದರು .
ಪುನಃ
ಪರ್ವತಾರೋಹಣ ಮುಂದುವರೆಯಿತು .
ಮಳೆಯ ಕಾರಣ ಪೂರಾ
ದಾರಿ ನೆನೆದು ತೋಯ್ದು ಹೋಗಿತ್ತು
. ಅನೇಕ ಬಾರಿ
ಪ್ರತೀ ಹೆಜ್ಜೆ ಶ್ರಮ ಪಟ್ಟು
ತೆವಳುತ್ತಾ ಸಾಗಬೇಕಿತ್ತು .
ಬೆಳಗ್ಗಿನ ಜಾವ
4:40 ರ ಹೊತ್ತಿಗೆ
ಪಾಕ್ ವಲಯದ ಊರಿ ಮತ್ತು ಪೂಂಚ್
ರಸ್ತೆ ತಲುಪಿದರು . ಅಲ್ಲಿಂದ
ಮತ್ತೆ 10 ಕಿ
ಮೀ ಮೇಲೆ ಏರಬೇಕು . ಏರುವ
ಮುನ್ನ ಕೊಂಚ ಸಮಯ ರಣಜಿತರು ತಮ್ಮ
ಯೋಧರಿಗೆ ವಿಶ್ರಮಿಸಲು ಹೇಳಿದರು
. ಹೇಗಿದ್ದರೂ
ಮತ್ತೆ ಏರಿ ಕಾದಾಡಬೇಕಲ್ಲ .
ಎರಡು ಗಂಟೆಗಳ ಕಾಲ
ಮಳೆಯ ಮಧ್ಯೆ ಹೇಗೋ ಒಬ್ಬರಿಗೊಬ್ಬರು
ಕೂಡಿಕೊಂಡು ಕಾಲ್ಗಳಿಗೆ ವಿರಾಮ
ನೀಡಿದರು . ಕೇವಲ
ಒಂದೊಂದು ಟೊಪ್ಪಿಯನ್ನು ಧರಿಸಿದ್ದರು
, ಯಾರ ಬಳಿಯೂ
ಒಂದು ಬೆಚ್ಚನೆಯ ಹೊದಿಕೆಯಿರಲಿಲ್ಲ
. ಕೆಲವರು
ಬಂಡೆಗಳ ಕೆಳಗೆ ಕೆಲವರು ಮರಕ್ಕೆ
ವಾಲಿಕೊಂಡಿದ್ದರು .
ಬೆಳಗಾಗುತ್ತಿದ್ದಂತೆ
ಪರ್ವತದ ಪಶ್ಚಿಮ ಪಾರ್ಶ್ವದಿಂದ
ಇವರ ಕಡೆ ಲಘುವಾಗಿ ಮೆಶೀನ್ ಗನ್
ಧಾಳಿಯಾಯಿತು . ತಕ್ಷಣವೇ
ರಣಜಿತರು ಒಂದು ಪ್ಲಟೂನನ್ನು
ಅಲ್ಲೇ ಬಿಟ್ಟು ಉಳಿದ ಯೋಧರನ್ನೊಳಗೊಂಡು
ತ್ವರಿತವಾಗಿ ಪರ್ವತದ ಬಲ ಭುಜವನ್ನೇರಿ
ನೇರ ವಿರುದ್ಧ ದಿಕ್ಕಿನಿಂದ ಅವರತ್ತ
ಇಳಿದರು . ಹಠಾತ್ತನೆ
ಅವರ ಬಳಿ ಅನಿರೀಕ್ಷಿತ ದಿಕ್ಕಿನಿಂದ
ಎದುರಾಗಿದ್ದನ್ನ ಕಂಡ ಪಾಕಿ ಯೋಧರು
ಗಾಬರಿಗೊಂಡು ದಿಕ್ಕಾಪಾಲಾಗಿ
ಓಡಿದರು .
ಅಷ್ಟೇ
ಮುಗಿಯಿತು . ಆಗಸ್ಟ್
28 ರಂದು
ಬೆಳಿಗ್ಗೆ 10 ಗಂಟೆಗೆ
ರಣಜಿತರು ತಮ್ಮ ವೈರ್ ಲೆಸ್ ನಿಂದ
ಜೋರು ಬಕ್ಷಿಯವರಿಗೆ ಹಾಜೀಪೀರನ್ನು
ವಶಪಡಿಸಿಕೊಂಡೆವೆಂದು ಸಿಹಿ
ಸುದ್ಧಿ ತಲುಪಿಸಿದರು .
ಒಂದೇ ಗಂಟೆಯಲ್ಲಿ
ಆಲ್ ಇಂಡಿಯಾ ರೇಡಿಯೋದರಲ್ಲಿ ಈ
ಸುದ್ಧಿ ದೇಶಾದ್ಯಂತ ಹಬ್ಬಿತು
.
ತ್ರಿವರ್ಣ
ದ್ವಜ ಹಾಜೀಪೀರಿನ ತುದಿಯಲ್ಲಿ
ರಾರಾಜಿಸುತ್ತಿತ್ತು .
ಇದರಿಂದ
ಪಾಕಿಗಳಿಗೆ ಘೋರ ಅವಮಾನವಾಯಿತು
. ಇಷ್ಟಕ್ಕೇ
ಸುಮ್ಮನಿರದೇ ಮತ್ತೊಂದು ಬದಿಯಲ್ಲಿ
ಪ್ರತಿಧಾಳಿಗೆ ತಯಾರಾಗುತ್ತಿದ್ದರು
. ಮೇಜರ್
ರಣಜಿತ್ ಇದನ್ನು ಮನಗಂಡು
ಅವರನ್ನೆದುರಿಸಲು ತಮ್ಮ ಕಡೆ
ಸೇನಾ ಬಲವರ್ಧನೆಗೆ ಕೇಳಿಕೊಂಡರು.
No comments:
Post a Comment