ಸಧೃಢವಾದ ಬಲಶಾಲಿ ದೇಹ , ನೀಳ ಕಾಯ , ಹೊಳೆಯುವ ಮೈಬಣ್ಣ . ಕಾಂತಿತುಂಬಿತ ಕಂಗಳಿಂದ
ಕಂಗೊಳಿಸುವ ಸುಂದರ ಯುವಕ . ಸದಾ ವ್ಯಾಯಾಮ ಕಸರತ್ತುಗಳಿಂದ
ಪಳಗಿದ್ದ ಬಾಜೀರಾಯ . ಒಳ್ಳೆಯ ಕುದುರೆ ಸವಾರ . ದೂರ ದೂರದ ತನಕ ಕೊಂಚವೂ ಸುಸ್ತಾಗಾದೇ ಕುದುರೆ ಚಲಾಯಿಸಬಲ್ಲ.
ಖಡ್ಗ , ಈಟಿ , ಭರ್ಜಿ , ಬಿಲ್ಲು ಬಾಣಗಳನ್ನು ಚಲಾಯಿಸುವುದರಲ್ಲಿ ನಿಪುಣ . ಸಾಯುವ ಮುನ್ನ ಒಮ್ಮೆಯೂ ಖಾಯಿಲೆ ಬಿದ್ದಿರದ
ಆರೂಗ್ಯಕರ ದೇಹ . ಭಯ ಎಂಬುದು ಲವಲೇಶವೂ ಇಲ್ಲದಂಥಹ ಧೈರ್ಯಶಾಲಿ ವ್ಯಕ್ತಿ .
ಬಾಹುಬಲವಷ್ಟಲ್ಲದೆ ಅಸಾಧಾರಣ ಬುದ್ಧಿವಂತನೂ ಕೂಡ . ಬ್ರಾಹ್ಮಣ ಕುಟುಂಬದಲ್ಲೇ ಬೆಳೆದ ಬಾಜಿರಾಯ
ರಾಮಾಯಣ ಮಹಾಭಾರತ ವೆಲ್ಲವನ್ನು ಕಲಿತಿದ್ದ . ತನ್ನ ಬಾಲ್ಯದ ಶಿಕ್ಷಣ ಮಾತೃಛಾಯೆಯಲ್ಲಿಯೇ ಕಟ್ಟೂನಿಟ್ಟಾಗಿ
ನಡೆದಿತ್ತು . ಹೇಗೆ ಶಿವಾಜಿಯನ್ನು ಜೀಜಾಮಾತೆ , ಹೇಗೆ ಪ್ರತಾಪನನ್ನು ಜಯವಂತಾ ಭಾಯಿ ಯೋ ಹಾಗೆ ಮತ್ತೊಬ್ಬ ಮಾತೃಭೂಮಿಯ
ವೀರಪುತ್ರನೂ ಮಾತೆಯ ಪದತಲದಲ್ಲೇ ಬೆಳೆದಿದ್ದ . ತಾಯಿ ರಾಧಾಭಾಯೀಯೊ ಸಹಿತ ಒಳ್ಳೆಯ ಕಲಿತ ಮಹಿಳೆಯೇ
ಆಗಿದ್ದರು . ಎಷ್ಟರ ಮಟ್ಟಿಗೆಯೆಂದರೆ ಕೆಲವು ಬಾರಿ ಮಗನಿಗೆ ರಾಜ್ಯಾಡಳಿತದ ವಿಚಾರದಲ್ಲಿಯೂ ಸಲಹೆ ನೀಡುತ್ತಿದ್ದರು
.
ಮಾನಸಿಕವಾಗಿ ಬಾಜಿರಾಯ ಶಿವಾಜಿಯ ಪುತ್ರನೇ . ತನ್ನ ಪೂರ್ವಕಾಲೀನ ಇತಿಹಾಸವನ್ನು ಚನ್ನಾಗಿ ಅರಿತಿದ್ದ
. ಶಿವಾಜಿಯೂ ಸ್ವರಾಜ್ಯಸ್ಥಾಪನೆಗೆ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಲು ಪಟ್ಟ ಶ್ರಮ . ತದನಂತರ ನಡೆದ
ಸಾಂಭಾಜಿಯ ಸಂಗ್ರಾಮ ಮತ್ತವನ ಬರ್ಬರ ಹತ್ಯೆ ಮತ್ತು ರಾಜಾರಾಮನ ಸಂಘರ್ಷ . ತದನಂತರ ತನ್ನ ಸಮಕಾಲೀನ
ವಿದ್ಯಾಮನಗಳಲ್ಲಿ ನಡೆದ ಷಾಹುವಿನ ಮೋಘಲರ ಬಂಧ ಮೋಚನೆ ಮತ್ತು ಆ ಸಮಯದಲ್ಲಿ ತಂದೆ ವಿಶ್ವನಾಥ ಭಟ್ಟರ
ಜೊತೆಯಲ್ಲೇ ಅಹ್ಮದನಗರ ದೌಲತಾಬಾದ ಕಡೆಗಳಲ್ಲಿ ಏಳನೆಯ ವಯಸ್ಸಿನಲ್ಲೇ ಓಡಾಡಿದ ರಾಜಕೀಯ ಅನುಭವಗಳು.
ತನ್ನ ಬಾಲ್ಯಾವಸ್ಥೆಯಲ್ಲಿಯೇ ಗೌರವಾನ್ವಿತ ತಂದೆ ಪೇಶ್ವೆಯಾಗಿ ಏರಿದ್ದನ್ನು ಕಾಣುತ್ತಾ ಅಭಿಮಾನದಿಂದ
ಬೆಳೆದಿದ್ದ . ಇವೆಲ್ಲ ವಿಶಿಷ್ಟ ಸಂಸ್ಕಾರ ಮತ್ತು ಅನುಭವಗಳು ಬಾಜಿರಾಯನಲ್ಲಿನ ಮಹಾಪುರುಷ ಅತಿ ಬೇಗ
ಬೆಳೆಯಲು ಸಾಧ್ಯವಾಯಿತು .
ತಂದೆ ವಿಶ್ವನಾಥ ಭಟ್ಟರಂತೂ ಭಾರತ ಕಂಡ ಅನರ್ಘ್ಯ ರತ್ನಗಳಲ್ಲೊಬ್ಬರು . ಮರಾಠಾ ಸಂಸ್ಥಾನಕ್ಕೆ
ಶಾಸನ ಅರ್ಥವ್ಯವಸ್ಥೆ ರೀತಿ ರಿವಾಜುಗಳ ಅಡಿಪಾಯ ಹಾಕಿಕೊಟ್ಟವರೇ ಇವರು . ಹಣಕಾಸಿನ ವಿಷಯದಲ್ಲಿ ತನಗೆ
ಅಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಸಿದ್ಧಾಂತ . ತನ್ನ ಮಗಳ ಮದುವೆಗೆ ಹಣ ಸಾಲದೆ ಸಾಲ ಪಡೆದ ಸಂಧರ್ಭವೂ
ಇತ್ತು . ತನ್ನ ಕುಟುಂಬ ನಿರ್ವಹಣೆಗೆ ಎಷ್ಟು ಬೇಕೋ ಅಷ್ಟೇ ಸಂಬಳ ಪಡೆಯುತ್ತಿದ್ದರು . ಅದುವೇ ಸಾಕಾಗುತ್ತಿರಲ್ಲಿಲ್ಲ
. ಪ್ರಧಾನ ಮಂತ್ರಿಯಾಗಿದ್ದರೂ ಒಂದು ಸಾಧಾರಣ ಮನೆಯಲ್ಲೇ ವಾಸಿಸುತ್ತಿದ್ದರು . ಇಂಥಹ ಸಾತ್ವಿಕ ಪರಿಸರದಲ್ಲಿ
ಬೆಳೆದ ಬಾಜಿರಾಯ ಮತ್ತೊಬ್ಬ ಶಿವಾಜಿಯಾಗದೆ ಇರುತ್ತಾನೆಯೇ ? . ಅವನ ಸಾಮರ್ಥ್ಯದ ಬಗ್ಗೆ ಛತ್ರಪತಿ ಷಾಹು
ಮಹಾರಾಜರಿಗೆ ಆಗಲೇ ಒಂದು ಕಣ್ಣಿತ್ತು .
ತಂದೆ ವಿಶ್ವನಾಥ ಭಟ್ಟರ ಮರಣಾನಂತರ ಷಾಹು ಮಹಾರಾಜರು ಇಪ್ಪತ್ತು ವರ್ಷದ ಹರೆಯ ಬಾಲಕ ಬಾಜಿರಾಯನನ್ನೇ
ತನ್ನೆ ಪ್ರಧಾನ ಮಂತ್ರಿ ( ಪೇಶ್ವೆ ) ಯೆಂದು ಆಯ್ಕೆ ಮಾಡಿದರು . ಅನೇಕರ ವಿರೋಧಗಳ ಹೊರತಾಗಿಯೂ .
ಷಾಹು ಮಹಾರಾಜರಿಗೆ ಬಾಜಿರಾಯನ ಮೇಲೆ ಅದೆಷ್ಟು ನಂಬಿಕೆಯೆಂದರೆ ಎಲ್ಲಾದರೂ ಒಂದು ಲಕ್ಷ ಸೇನೆ ಮತ್ತು
ಬಾಜಿರಾಯನ ನಡುವೆ ಆಯ್ಕೆಯಿಟ್ಟರೆ ತಾನು ಬಾಜಿರಾಯನನ್ನೇ ಆಯ್ಕೆ ಮಾಡುತ್ತೇನೆ ಎಂದಿದ್ದರಂತೆ .
ನಂತರ ಭಾರತ ಕಂಡ ಆ ಇಪ್ಪತ್ತು ವರ್ಷಗಳು ಬಾಜಿರಾಯನ ವಿಜಯಭೇರಿ ಸಾವಿರ ವರ್ಷಗಳ ಕಗ್ಗೊಲೆ ದಬ್ಬಾಳಿಕೆಗಳಿಗೆ
ಖಡ್ಗ ಪ್ರಹಾರ ನೀಡಿ ಮತ್ತೊಂದು ಸುವರ್ಣ ಯುಗಕ್ಕೆ ನಾಂದಿ ಹಾಡಿತ್ತು .
प्रस्थापित स्वराज्य महाराष्ट्रे शिवाजिना
स्वराज्यं बाजीरावेण साम्राज्ये प्रवर्तितमः
No comments:
Post a Comment