Thursday 9 April 2015

ವಚನೇ ಕಾ ದರಿದ್ರತಾ


           ರಾತ್ರಿ ಹೊತ್ತಿನಲ್ಲಿ ಅನ್ನ ಸಾಂಬಾರು ಊಟ ಸಿಗದ ಕೋಯಮತ್ತೂರಿನಲ್ಲಿ ಏನು ತಿನ್ನಲು ಯಾವ ಹೋಟೆಲಿಗೆ ಹೋಗುವುದು ಅನ್ನುವುದೇ ದೊಡ್ಡ ಸಮಸ್ಯೆ. ಒಂದೇ ಕಳಪೆ ದರ್ಜೆಯ ಸಣ್ಣ ಹೋಟೇಲಿನಲ್ಲಿ  ಅದೇ ಮಾಮೂಲು ದೋಸೆ ಇಡ್ಲಿ ಅಥವಾ ದುಬಾರಿ ಹೊಟೇಲಿನಲ್ಲಿ ಹೆಚ್ಚು ಹಣ ಕೊಟ್ಟು ಸ್ವಲ್ಪ ಆಹಾರ ದೊರೆಯುವ ಹೋಗುವುದು. ಆದರೂ ಅಲ್ಲಿಯ ವೈವಿಧ್ಯತೆ ಅಷ್ಟಕ್ಕಷ್ಟೇ. ಬೇರೆ ದಾರಿಯಿಲ್ಲದ ದುಬಾರಿ ಹೋಟೇಲಾದ ಆರ್ಯಾಸ್ ಗೇ ಹೋದೆ. ಅಲ್ಲಿ ಜೊತೆಗೆಂದೇ ಇನ್ನಿಬ್ಬರು ಕನ್ನಡದ ಸಹೋದ್ಯೋಗಿಗಳು ಸಿಕ್ಕರು. ಹಾಗೇ ಹರಟೆ ಹೊಡೆಯುತ್ತಾ ತುಪ್ಪದ ಅನ್ನವನ್ನು ನಾನು ಮತ್ತು ದಯಾನಂದ್ ಮತ್ತು ಪ್ರಸಾದ್ ಪರೋಠವನ್ನು ತಿಂದ. ಒಂದು ತಟ್ಟೆ ಗೀ ರೈಸ್ ಗೆ 65 ರೂಪಾಯಿ. ಆದರೆ ಕೇವಲ ನೂರು ಗ್ರಾಂ, ಅದೇ ಬೆಲೆಗೆ ಒಂದೂವರೆ ಕೆ ಜಿ ಅಕ್ಕಿ ಬರುತ್ತದೆ ಎಂದು ಚಟಾಕಿ ಹಾರಿಸುತ್ತಿದೆ. ಈ ಊರಿನಲ್ಲಿ ದೋಸೆ ಅನ್ನುವ ಪದವೇ ಇಲ್ಲ. ಬದಲಾಗಿ ರೋಸ್ಟ್ ! ಕೇವಲ ಒಂದು ಮಿ ಮೀ ತೆಳ್ಳನೆಯ ದೋಸೆಯನ್ನು 80 ಶೇ ಕರಕಲು ಮಾಡಿ ಇಡೀ ತಮಿಳ್ನಾಡಿನ ಪ್ರತೀ ಹೋಟೇಲಿನಲ್ಲೂ ಒಂದೇ ರುಚಿಯ ಸಾಂಬಾರು ಮಾಡಿ ಬಡಿಸುತ್ತಾರೆ ಎಂದೂ ಊರಿನ ಉದ್ದಗಲಕ್ಕೂ ಕೊಂಕು ಮಾತಾಡುತ್ತಿದ್ದೆ. ದಯಾ ನನ್ನ  ಬೇಸತ್ತಿನ ಮಾತುಗಳಿಗೆ ಉಸಿರುಗಟ್ಟುವಹಾಗೆ ನಗುತ್ತಿದ್ದ. ನನಗೋ , ಹತ್ತಿರ ಹತ್ತಿರ ಎರಡು ವರ್ಷಗಳ ಕಾಲ ಈ ಊರಿನಲ್ಲಿದ್ದು ಇಲ್ಲಿನ ಊಟ ತಿಂಡಿಗಳಿಗೆ ರೋಸಿ ಹೋಗಿದ್ದೆ.

           ಹಾಗೆ ತಿಂದು ಮುಗಿಸಿ ಹೊರಗೆ ಸುಮ್ಮನೆ ತಂಗಾಳಿಗೆ ಮೈಯೊಡ್ಡಿ ಸ್ವಲ್ಪ ಹೊತ್ತು ಸೆಕೆ ಯಾರಲೆಂದು ಹರಟೆ ಹೊಡೆಯುತ್ತಿದ್ದೆವು. ಪ್ರಸಾದನು ನನ್ನ ತೆಳುವಾದ ಮೈಕಟ್ಟನ್ನು ಕಂಡು ನಾನು ಪ್ರತೀ ದಿನ ವ್ಯಾಯಾಮ ಮಾಡುತ್ತೇನೋ ಎಂಬಂತೆ ವಿಚಾರಿಸಿದ. “ ಯೋಗ/ ಸೂರ್ಯನಮಸ್ಕಾರ ಏನಾದ್ರೂ ಮಾಡ್ತೀಯೇನೋ ? ”. ನಾನು “ ಹಾಂ, ಸ್ವಲ್ಪ ಸೋರ್ಯನಮಸ್ಕಾರ ಮಾಡ್ತೀನಿ ಅಷ್ಟೇ “ ಅಂದೆ. ಪ್ರಸಾದನು ಅದು ಹೇಗೆ ಮಾಡುವುದು ಎಂದು ಕೇಳಿತ್ತಾ ಹೇಗ್ ಹೇಗೋ ಕೈ ಕಾಲೆತ್ತಿ ಹಾಗಾ ಹೀಗಾ ಅಂತ ತಪ್ಪು ತಪ್ಪಾಗಿ ರಸ್ತೆ ಮಧ್ಯ ಅವತಾರ ಶುರು ಮಾಡ್ದ. ಹಾಗಲ್ವೋ ಮರಾಯ ತಿಳ್ಕೋಬೇಕಾದ್ರೆ ಆಮೇಲೆ ಹೇಳ್ಕೊಡ್ತೀನಿ ಇಲ್ಲಿ ರಸ್ತೆ ಮಧ್ಯ ಶೋ ಏತಕ್ಕೆ ಅಂತ ತಡೆದೆ. ಆಗ ದಯಾ ಎಲ್ಲಿ ಕಲಿತ್ಯೋ ಈ ಥರದ ವರಸೆಗಳನ್ನ ಅಂದಾಗ, ಪ್ರಸಾದ ಸ್ಕೌಟೋ ಶಾಲೆನೋ ಎಲ್ಲೋ ಅಂತ ಏನೋ ತಡವರಿಸಿದ.
” ಶಾಲೇನಾ ?? !! ” , “ ಯಾವ ಶಾಲೆಯಲ್ಲಿ ಕಲಿಸುತ್ತಾರೋ ? ”, “ ಹಾಗೆಲ್ಲಾ ಶಾಲೆಯಲ್ಲಿ ಸೂರ್ಯನಮಸ್ಕಾರ ಹೇಳ್ಕೊಟ್ರೆ ಕೋಮುವಾದಿ ಶಾಲೆ ಎಂದು ಸಿದ್ರಾಮಯ್ಯ ಬಡ್ಕೋತಾನೆ. ( ಆಗ ಶುರುವಾಯ್ತು ಮಾಮೂಲಿ ರಾಜಕೀಯ )

           “ ಅದೇನೋ ಶಾದಿ ಭಾಗ್ಯ ಎಂದು ಸಾಬರಿಗೆ 35000 ರೂ ಮಲ್ಕಳಕ್ಕೆ ಹಾಸಿಗೆನೂ ಕೊಡ್ತವ್ನಂತಲ್ಲಾ ! “ ಅಯ್ಯೋ ರಾಮ. “ ಮೊದಲೇ ದೇಶದ ಯಾವ ಮೂಲೆಗೆ ಹೋದ್ರೂ ಈ ಸಾಬ್ರ ಲೌಡ್ ಸ್ಪೀಕರ್ ಶಬ್ದ ಕೇಳ್ದೇ ಇರೋ ಜಾಗಾನೇ ಇಲ್ಲ , ಇನ್ನು ಸಿದ್ರಾಮಯ್ಯ ಮತ್ತೆ ಹಾಸ್ಗೆ ಕೊಟ್ ಮಲ್ಗಿಸಿ ಅವರ ಸಂಖ್ಯೆ ಹೆಗ್ಣಗಳ ಥರ ಏರುಸ್ತಾನಲ್ಲಾ. “ ಎಂದು ಏರಿಸ್ದೆ.
ದಯಾ ಆಗ ಸಿದ್ರಾಮಯ್ಯ ಚಕ್ರವರ್ತಿಗೆ ಬೈದ ಪ್ರಸಂಗ ಸಂಭಾಷಣೆ ಸಮೇತ ವಿವರಿಸಿದ. ಇನ್ನೂ ಮೂರು ವರ್ಷ ಈ ಮನುಶ್ಯನ ತಡ್ಕೋಬೇಕಲ್ಲಾ ಅಂತ ರಗಳೆ ಆಯ್ತು.

           ಆಗ ಪ್ರಸಾದ ಎಲ್ಲವನ್ನು ಒಪ್ಪಿಕೊಂಡನಾದ್ರೂ ಹೋಗ್ಲಿ ಬಿಡ್ರೋ ತಲೆ ಕೆಡಿಸ್ಕೋಬೇಡ್ರಿ , ನೀವ್ ಅರಾಮಾಗಿ ಇರ್ರಿ ಅಂತ ಕುಚೋದ್ಯ ಮಾಡಿ ಅಂತ್ಯ ಹಾಡಕ್ ಹೋದ. ಆಗ ನಾನು “ ಇರ್ಲಿ ಬಿಡಣ್ಣ ತಲೆ ಹರಟೆ ಮಾತಾಡಕ್ ಏನಂತೆ , ನಮ್ ಆಫೀಸ್ ಟೀಮ್ ನಲ್ಲೊಬ್ಬ ಸಾಬ ಚುನಾವಣೆಗು ಮುನ್ನ ಮೋದಿನ ಕೊಲೆ ಮಾಡಬೇಕು ಅಂತ ಸಲೀಸಾಗಿ ಸಾಲ್ಕು ಜನರ ಮುಂದೆ ಬೊಬ್ಬೆ ಹೊಡೆಯುವಷ್ಟು ಧಿಮಾಕು ತೋರಿಸುತ್ತಿದ್ದ ! , ಇನ್ನು ನಮ್ಮ ಈ ಸಣ್ಣ ಪುಟ್ಟ ಮಾತು ಚಟಾಕಿಗಳು ಯಾವ ಲೆಕ್ಕಾರೀ “ .


ಸರೀ ಮತ್ತೆ, ನಾಳೆ ಮತ್ತೆ ಸಿಗೋಣ ಅಂತೆ ನಮ್ಮ ನಮ್ಮ ಕೊಣೆಯ ದಾರಿ ಹಿಡಿದೆವು. ಘಂಟೆ ಹತ್ತಾಯ್ತು ಹೊರಡೋಣ.

No comments:

Post a Comment