Thursday 24 January 2019

ಶಿವಾಜಿಯ ಬಿಜಾಪುರದತ್ತ ಅಗಮನ




ಸುಮಾರು ಒಂದು ವರ್ಷ ಬೆಂಗಳೂರಿನಲ್ಲಿ ತಂದೆ ಷಹಾಜಿಯೊಡನೆ ಕಾಲಕಳೆದ ಬಾಲ ಶಿಬಾಜಿ ಜೀಜಾಮಾತೆಯ ಒತ್ತಾಯದ ಮೇಲೆ ಪುಣೆಗೆ ವಾಪಾಸ್ಸಾಗಲು ಪರಿವಾರ ತೆರಳಿತು. ಬೆಂಗಳೂರಿನಲ್ಲಿನ ವಿಲಾಸಿ ಜೀವನ ಶೈಲಿ ಮಾತೆಗೆ ಹಿಡಿಸಲಿಲ್ಲ.

ಮಾರ್ಗ ಮಧ್ಯದಲ್ಲಿ ಬಿಜಾಪುರವನ್ನು ಹಾದು ಹೋಗುವುದಿತ್ತು. ಷಹಾಜಿ ರಾಜರು ಮಗನಿಗಾಗಿ ತನ್ನ ಪುಣೆಯ ಜಹಗೀರನ್ನು ಆದಿಲ್ ಷಾಹಿಯ ಮೂಲಕವೇ ಹಸ್ತಾಂತರಿಸುವುದಕ್ಕಾಗಿ ಸ್ವತಃ ಜೊತೆಗೆ ಹೊರಟಿದ್ದರು.
ಬಿಜಾಪುರಕ್ಕೆ ಸನಿಹ ಬರುತ್ತಿದ್ದಂತೆ ಅಲ್ಲಿನ ದೊಡ್ಡ ಕಮಾನುಗಳು ಮಸೀದಿಗಳನ್ನು ನಗರದ ದೊಡ್ಡ ದ್ವಾರದ ಮಧ್ಯದಲ್ಲಿ ಕಂಡುಬಂದವು. ಅದರ ಹೊರವಲಯದಲ್ಲಿ ಬಟಾ ಬಹಲ ಬಂಜರ ಭೂಮಿ. ಅಲ್ಲಿ ಇಲ್ಲಿ ಸಣ್ಣ ಸಣ್ಣ ಹಳ್ಳಿಗಳು.

ಬಾಲ ಶಿವಾಜಿ ತನ್ನ ತಂದೆಯ ಜೊತೆಗೂಡಿ ಶ್ವೇತಾಶ್ವರೋಹಿಯಾಗಿ ಮಂದಗತಿಯಲ್ಲಿ ಸಾಗುತ್ತಿದ್ದಾಗ ಹಾಗೆಯೇ ಕೆಲವು ಪ್ರಶ್ಣೆಗಳು ಸುಳುದವು.
"ಅಪ್ಪಾ, ಈ ಆದಿಲ್ ಷಾಹಿಗಳು ಎಲ್ಲಿಂದ ಬಂದರು? ಅವರು ಇಲ್ಲಿನವರಂತೂ ಅಲ್ಲವಲ್ಲವೇ ?"

ಷಹಾಜಿ- "ಹೌದು ಶಿವಬಾ, ಅವರು ಪರದೇಶಿಯರು. ಟರ್ಕಿ ಎಂಬ ಒಂದು ದೂರದ ದೇಶದಿಂದ ಬಂದವರು". ಹಾಗೆಯೇ ಕತೆ ಮುಂದುವರೆಸಿದರು. 
" ಸುಮಾರು ಇನ್ನೂರು ವರ್ಷಗಳ ಹಿಂದೆ ಯೂಸಫ್ ಎಂಬ ಒಬ್ಬ ಟರ್ಕಿಯ ರಾಜಕುಮಾರ ಭಾರತಕ್ಕೆ ಬಂದಿದ್ದ. ಏಕೆಂದರೆ ಅಲ್ಲಿಯ ರಾಜನಾಗಿದ್ದ ಅವನ ಹಿರಿಯಣ್ಣ ಮೊಹಮ್ಮದ್ ತನ್ನೆಲ್ಲ ಕಿರಿಯ ಸಹೋದರರನ್ನು ಕೊಲ್ಲುತ್ತಿದ್ದ ತನ್ನ ಕುರ್ಚಿಯನ್ನುಳಿಸಲಕ್ಕಾಗಿ. ಯೂಸುಫ್ ಕಿರಿಯನಾದ್ದರಿಂದ ಅವನನ್ನು ರಕ್ಷಿಸಲೆಂದು ಅವನ ತಾಯಿ ಅವನನ್ನು ಜಾರ್ಜಿಯಾ ಎಂಬ ದೇಶಕ್ಕೆ ಗುಲಾಮಗಿರಿಗೆ ಮಾರಿ ಕಳುಹಿಸಿದಳು.ಅಲ್ಲಿನ ಗುಲಾಮದಂಧೆಯ ವ್ಯಾಪಾರಿಯೊಡನೆ ಬೆಳೆಯುತ್ತಾ ಯೂಸುಫ್ ತನ್ನ ಕೌಶಲ್ಯವನ್ನು ಪ್ರಕಟಿಸುತ್ತಿದ್ದ. ತಕ್ಷಣ ರಾಜದೂತರಿಗೆ ತಿಳಿದು ಅವನ ಬೆನ್ನು ಹತ್ತಿದರು. ಇದನ್ನು ತಿಳಿದ ಆತನ ತಾಯಿ ಅವನನ್ನು ಪೂರ್ವದ ಪರ್ಶಿಯಾದ ಮಾರ್ಗದಿಂದ ಭಾರತಕ್ಕೆ ಹೇಗೋ ಕಳುಹಿಸಿದಳು. ಆಗವನ ಕೈಯಲ್ಲೊಂದು ಬಿಡಿಗಾಸೂ ಇರಲಿಲ್ಲ. ಕಾಲಾಂತರದಲ್ಲೇ ಮೊದಲ ಆದಿಲ್ ಷಾಹಿ ಸುಲ್ತಾನನಾಗಿ ಸಾಮ್ರಾಜ್ಯ ಸ್ಥಾಪಿಸಿದ! "

ಬಾಲಕ ಶಿವಾಜಿ ಉದ್ಘರಿದ- "ವಾಹ್! ಅದ್ಭುತ, ಇದೆಲ್ಲಾ ಹೇಗೆ ಸಾಧ್ಯವಾಯಿತು?"

"ವಿಧಿ ಮಗನೇ ವಿಧಿ! ಅವನು ರಾಜಾನಾಗಬೇಕೆಂದು ಮಹತ್ವಾಕಾಂಕ್ಷೆಯನ್ನು ಹೊಂದಿದ್ದ. ಇಲ್ಲಿಗೆ ಬಂದಾಗ ಮತ್ತೊಬ್ಬ ಗುಲಾಮ ವ್ಯಾಪಾರಿಯ ಪಾಲಾಗಿದ್ದ. ಅವನು ಇವನ್ನು ಒಬ್ಬ ಬಹಮನಿಯ ಸೇನಾಧ್ಯಕ್ಷನಿಗೆ ಮಾರಿದ್ದ. ಅವನ ಹೆಸರು ಮಹ್ಮದ್ ಗವಾನ್ ಎಂದು. ಆದರವನು ರಾಜನಿಗೆ ದ್ರೋಹ ಬಗೆದನೆಂದು ಬಧಿಸಲಾಯ್ತು. ಗವಾನನ ಸ್ಥಾನವನ್ನು ಯೂಸುಫ್ ಪಡೆದು ನಾಯಕನಾದ. ನಂತರ ರಾಜನ ವಿರುದ್ಧವೇ ಬಂಡೆದ್ದು ಬಿಜಾಪುರದ ಮೇಲುಸ್ತುವಾರಿ ಪಡೆದ. ಕೆಲ ವರ್ಷಗಳ ನಂತರ ಬಹ್ಮನಿ ಸಾಮ್ರಾಜ್ಯವೇ ಪತನಗೊಂಡು ತಾನೊಬ್ಬ ಸ್ವತಂತ್ರ ರಾಜನೆಂದು ಘೋಷಿಸಿಕೊಂಡ."

ಏಕಾಂಗಿಯಾಗಿ ಸಾಧಿಸಿದ ಯೂಸುಫ್ ನ ಕಥೆ ಕೇಳಿ ಬಾಲ ಶಿವಾಜಿಗೆ ಆಶ್ಚರ್ಯಬಾಗುವ ಜೊತೆಗೆ ಕೆಲ ಪ್ರಶ್ಣೆಗಳೂ ಕಾಡಿದವು. ಈ ಬಿಡಿಗಾಸಿಲ್ಲದೇ ಬಂದ ಒಬ್ಬ ಪರದೇಶಿಗೆ ಇಷ್ಟೆಲ್ಲಾ ಸಾಧಿಸಬೆಕಾದರೆ ಅವನಿಗೆ ಸ್ಥಳ ಕೊಟ್ಟು ಮಾರ್ಗ ಸುಗಮ ಮಾಡಿಕೊಟ್ಟವರ್ಯಾರು? ಅವನಿಗೆ ಮೆಟ್ಟಿಲು ಹತ್ತಲು ಸಹಕರಿಸಿದವರು ನಮ್ಮವರೇ ಅಲ್ಲವೇ ? ಕಡೇ ಪಕ್ಷ ನಮ್ಮವರಿಗೆ ಪರರು ಯಾರು ಎಂಬುದನ್ನು ತಿಳಿಯುವ ಕಿಂಚಿತ್ ಜ್ಞಾನವಾದರೂ ಬೇಡವೇ?
ಈ ಯೂಸುಫ್ ನಿಗೆ ಪರದೇಶದಿಂದ ಬಂದು ಇಲ್ಲಿನ ಸ್ಥಳೀಯರನ್ನು ಆಳುವುದು ಸಾಧ್ಯವಾದರೆ ಇಲ್ಲಿನ ಮಣ್ಣಿನಲ್ಲೇ ಹುಟ್ಟಿದ ಮಗನಾದ ನಾನು ಈ ಯೂಸುಫ್ ನ ಸಂತಾನಗಳ ದೌರ್ಜನ್ಯವನ್ನು ಮಟ್ಟಹಾಕಲು ನನ್ನನ್ನು ತಡೆಯುತ್ತಿರುವುದಾದರೂ ಏನು? ನಾನ್ಯಾಕೆ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಬಾರದು?

ಹೀಗೆ ಯೋಚಿಸುತ್ತಾ ಬಿಜಾಪುರದ ಹೆಬ್ಬಾಗಿಲಿಗೆ ಬಂದಾಯಿತು. ಆಗ ಬಾಲ ಶಿವಾಜಿಗೆ ಒಂದು ಸಾಮ್ರಾಜ್ಯ ಕಟ್ಟುವ ಯೋಚನೆ ಮನದೊಳಗೆ ಅರಳುತ್ತಿತ್ತು.

No comments:

Post a Comment