Thursday 24 January 2019

ಧೈರ್ಯ ಅಥವಾ ಭಂಡತನ?



"ನಿಮ್ಮ ವೈಭವವನ್ನು ಕಂಡು ಬೆರಗಾಗಿ ಮೈಮರೆತು ತಲೆ ಬಾಗಬೇಕೆಂದು ಹೊಳೆಯಲೇ ಇಲ್ಲ" ಎಂದು ನೆಟ್ಟಗೆ ತಲೆ ಎತ್ತಿ ನಿಂತಿದ್ದ ಬಾಲ ಶಿವಾಜಿ!
ಎದುರು ಇದ್ದ ತಂದೆ ಷಹಾಜಿ ಮತ್ತು ಕಾನ್ಹೋಜಿ ಅವಾಕ್ಕಾಗಿ ಹೋದರು. ಎಲಾ ಇವನಾ ! ಇದೆಂತಹ ಪರಿಸ್ಥಿತಿ ತಂದಿಟ್ಟ!. ಹೋಗ್ಲಿ ಬಿಡಿ ಸುಲ್ಲಾನ್ ಸಾಹೆಬ್ರೇ , ಇನ್ನೂ ಸಣ್ಣ ಹುಡುಗ. ಸಭೆಯ ರೀತಿರಿವಾಜುಗಳು ಇನ್ನೂ ತಿಳಿದಿಲ್ಲ ಎಂದು ಸಮಝಾಯಿಸಿ ಅಲ್ಲಿಂದ ಕಾಲ್ಕಿತ್ತರು.
ಆದಿಲ್ ಷಾಹನೋ ಅಷ್ಟೊಂದು ಗಂಭೀರವಾಗಿ ತಗೊಳ್ಳದೇ ಮಗನು ಅಪ್ಪನಂತೆಯೇ ಬುದ್ಧಿವಂತವಂತನೆಂದು ನಕ್ಕಿ ಕಳುಹಿಸಿಕೊಟ್ಟ.
ಅರಮನೆಯ ಹೊರಕ್ಕೆ ಬಂದು ನಿಟ್ಟುಸಿರಿಡುತ್ತಾ ಷಹಾಜಿಯು ಒಂದು ಬಿರುಗಾಳಿಯಿಂದ ತಪ್ಪಿಸಿಕೊಂಡವರಂತೆ ತಣ್ಣನೆ ಕುಳಿತರು. ಬಾಲ ಶಿವಾಜಿಯ ಅಪ್ರಜ್ಞಾತ್ಮಕ ವರ್ತನೆ ದೊಡ್ಡ ಸಂಕಟಕ್ಕೆ ಈಡು ಮಾಡುತ್ತಿತ್ತು. ಮೊದಲೇ ಹಿಂದೂಗಳನ್ನು ಕಾಫಿರ್ ಎಂದು ತುಚ್ಛವಾಗಿ ಕಾಣುವ ಈ ನಾಡಿನಲ್ಲಿ ಹೀಗೆ ಮಾಡುವುದೇ!. ಮೊದಲೇ ಷಹಾಜಿ ಸುಲ್ತಾನನಿಗೆ ಎಷ್ಟೇ ಬೆವರು ಸುರುಸಿದರೂ ಒಂಬ ಬಂಡಾಯಿ ಎಂದು ಅನುಮಾನದಿಂದ ನೋಡುತ್ತಾನೆ. ಕೆಲವು ವರ್ಷಗಳ ಹಿಂದೆ ಒಬ್ಬ ನಿಯತ್ತಿನ ಸರದಾರ ಮುರಾರ್ ಜಗದೇವನ ಮೇಲೆ ಏನೋ ಗಾಳಿ ಸುದ್ಧಿಯನ್ನಷ್ಟೇ ಕೇಳಿ ಅದೇ ಸಭೆಯಲ್ಲಿ ತುಂಡು ತುಂಡು ಮಾಡಿದ್ದ ಆದಿಲ್ ಷಾಹಿ. ಇನ್ನು ಈ ಪ್ರತ್ಯಕ್ಷ ತಪ್ಪಿಗೆ ಸುಮ್ಮನಿರುತ್ತಾನೆಯೇ? ಮಗನಿಗೆ ಪುಣೆಯ ಜಹಗೀರನ್ನು ಕೊಡಿಸಲು ಇನ್ನೆಲ್ಲಿ ಒಪ್ಪುತ್ತಾನೋ? ಎಂದೆಲ್ಲಾ ಕಳಮಳ ಶುರುವಾಯಿತು.
ಮನೆಗೆ ಬಂದು ವಿಷಯ ತಿಳಿದ ಜೀಜಾಮಾತೆಗೂ ಚಿಂತೆಯಾಯಿತು. ಮಗನು ಹೇಳಿದ " ನಾನೇನು ಮಾಡಲಮ್ಮಾ? ತಂದೆ ತಾಯಿ ಮತ್ತು ಭವಾನಿಗೆ ಬಿಟ್ಟು ಮತ್ಯಾರಿಗೂ ತಲೆ ಹೇಗೆ ಬಾಗಿಸಲಿ?"ಎಂದು ಅಲವತ್ತುಕೊಂಡ. "ನೋಡು ಮಗನೇ, ನದಿಯಲ್ಲಿದ್ದಾಗ ಮೊಸಳೆಯೊಂದಿಗೆ ಗುದ್ದಾಡಲು ಹೋಗಬಾರದು, ಮಹತ್ಕಾರ್ಯ ಸಾಧಿಸಲು ಹೊರಟವರು ಆಗಾಗ ಸಣ್ಣಪುಟ್ಟ ಸನ್ನಿವೆಷಗಳಿಗೆ ಹೊಂದುಕೊಳ್ಳಲು ಕಲಿಯಬೇಕು" ಎಂದು ತಿಳಿಹೇಳಿದರು.
ಷಹಾಜಿಯು ಮಗನಿಗೆ ತನ್ನ ಉದ್ಧಟತನಕ್ಕೆ ನಾಚಿಕೆಯಾಗಿ ಅರಮನೆಗೆ ಬರಲಾಗಲಿಲ್ಲ ಎಂದು ಕುಂಟುನೆಪವಿಟ್ಟು ಆದಿಲ್ ಷಾಹಿಯಿಂದ ಪುಣೆ, ಸೂಪೆ, ಇಂದಾಪುರ ಮತ್ತು ಚಕನ್ ನ ಜಹಗೀರನ್ನು ಕೊಡಿಸಿದ.
ಒಂದು ಸಂಧಿಘ್ನ ಪರಿಸ್ಥಿತಿಯಿಂದ ಭವಾನಿ ಕಾಪಾಡಿದಳು.

No comments:

Post a Comment