Sunday 6 September 2015

ಬ್ಯಾಟಲ್ ಆಫ್ ಅಸಲ್ ಉತ್ತರ್




               ಸೆಪ್ಟಂಬರ್ 6 1965 ರಂದು ಪಾಕಿಸ್ತಾನೀ ಸೇನೆಯನ್ನು ತಡೆಯುವ ಸಲುವಾಗಿ ನಾಲ್ಕನೇ ಗ್ರೆನೇಡ್ ಬ್ರಿಗೇಡಿಯರನ್ನು ಇಚೋಗಿಲ್ ಕಾಲುವೆಯ ಪನ್ನಾ ಸೇತುವೆಯನ್ನು ಆಕ್ರಮಿಸಲು ಕಳುಹಿಸಿರುತ್ತಾರೆ . ಅದು ಸೇನಾನೆಲೆ ದಿಬ್ಬಾಪುರದಿಂದ 11 ಕಿ ಮೀ ದೂರದ ಪ್ರದೇಶ . ಆದರೆ ಪಾಕಿಗಳು ಷೆಲ್ ಧಾಳಿಯಿಂದ ತೀವ್ರವಾಗಿ ಪ್ರತಿಕ್ರಿಯಿಸಿದ್ದರಿಂದ ಭಾರತೀಯ ಪಡೆ ಮುಂದುವರೆದಿದ್ದೂ ಸೆತುವೆಯನ್ನು ದ್ವಂಸಗೊಳಿಸಲಾಗದೇ ಹಿಮ್ಮೆಟ್ಟಬೇಕಾಯಿತು . ಅದೇ ಸಮಯದಲ್ಲಿ ಒಂದು ಗೋರ್ಖಾ ಪಡೆ ಬಲ್ಲನ್ವಾಲಾ ಎಂಬ ಪ್ರದೇಶವನ್ನು ಗೆಲ್ಲಲಾಗದೇ ಹಿಮ್ಮೆಟ್ಟಬೇಕಾಯಿತು . ಮತ್ತೆ ಪ್ರಾರಂಭದ ವಿಫಲತೆಯನ್ನು ಸರಿಪಡಿಸಿಕೊಂಡು ಸೇನಾವ್ಯೋಹವನ್ನು ಪುನರ್ರಚಿಸಲು ಖೇಮ್ ಖರನ್ ನ ಅಸಲ್ ಉತ್ತರ್ ಎಂಬಲ್ಲಿಗೆ ಬದು ಸೇರಿದರು .

             ಪಾಕಿಸ್ತಾನಿಯರ ಒಂದು ಮಹತ್ವ ಯೋಜನೆಯೊಂದು ಇದೇ ಹಾದಿಯ ಸೇತುವೆಗಳನ್ನು ಆಕ್ರಮಿಸಿ ಮುನ್ನಡೆದು ಅಮೃತಸರ , ಜಲಂಧರ್ ಮತ್ತು ದೆಹಲಿಯನ್ನೇ ಆಕ್ರಮಿಸುವುದಾಗಿತ್ತು . ಆ ಕಾಲದ ಅತ್ಯಾಧಿನಿಕ 2 ಕಿ ಮೀ ಫೈರಿಂಗ್ ಸಾಮರ್ಥ್ಯ ಇದ್ದ ಅಮೇರಿಕದ ಕಾಣಿಕೆಯಾದ ಫ್ಯಾಟನ್(M-47, M-48) ಟ್ಯಾಂಕ್ ಗಳು ಅವರ ಬಳಿ ಇತ್ತು. ನಮ್ಮ ಯೋಧರ ಬಳಿ ಕೇವಲ 800 ಮೀ ದೂರ ಫೈರ್ ಮಾಡುವ ಶರ್ಮನ್ ಟ್ಯಾಂಕ್ ಗಳಿದ್ದವಷ್ಟೇ . ಅದಕ್ಕಿಂತ ಸಮಸ್ಯೆಯೆಂದರೆ ಭಾರತೀಯ ಸೇನೆಗೆ ಪಾಕಿ ಟ್ಯಾಂಕ್ ಗಳ ಆರ್ಮರ್ ಡಿವಿಝನ್ ನ ಸ್ಥಳದ ಮಾಹಿತಿ ಇರಲಿಲ್ಲ .

ಅದರ ಮಾರನೇ ದಿನವೇ (ಸೆಪ್ಟೆಂಬರ್ 7) ಪಾಕಿಗಳು ತಮ್ಮ ಧಾಳಿಯನ್ನು ಮಾಡುವವರಿದ್ದರು ಆದರೆ ರೋಹಿ ನಾಲಾ ಸೇತುವೆಯನ್ನು ದ್ವಂಸ ಗೊಳಿಸಿದ್ದರಿಂದ ಅದರ ಮಾರನೇ ದಿನಕ್ಕೆ(ಸೆಪ್ಟೆಂಬರ್ 8) ಮುಂಡೂಡಲಾಗಿತ್ತು . ಆ ಒಂದು ದಿನದ ಅಂತರದಲ್ಲಿ ಭಾರತೀಯ ಸೇನೆ ರಕ್ಷಣಾತ್ಮಕವಾಗಿ ಸೆಲಬಾಂಬುಗಳ ಸ್ಥಾಪಿಸುವಿಕೆ ವಾಲ್ತೂಹಾ ಎಂಬಲ್ಲಿ ಅವರು ಬಾರದಂತೆ ಜಲಪ್ರವಾಹ ತಂದು ಇನ್ನಿತರ ಯೋಜನೆ ಮಾಡಿದರು . ನಂತರ . . .


ಸೆಪ್ಟೆಂಬರ್ 8 1965, ಖೇಮ್ ಖರನ್ ಸೆಕ್ಟರ್ ಬೆಳಗ್ಗೆ 9 ಗಂಟೆ . (4th Grenadier)


           ಕಬ್ಬಿನ ಹುಲುಸಾದ ಬೆಳೆ ತುಂಬಿದ್ದ ಪ್ರದೇಶ . ಅಬ್ದುಲ್ ಹಮೀದ್ ತನ್ನ 106 mm Recoilless Rifle (Anti Tank Gun) ಅನ್ನು ಅಳವಡಿಸಿದ ಜೀಪಿನ ಹಿಂದಿನ ಸೀಟಿನಲ್ಲಿ ಕುಳಿತಿರುತ್ತಾನೆ . ಜೀಪ್ ಚೀಮಾ ಹಳ್ಳಿಯ ಮಣ್ಣಿನ ಹಾದಿಯಲ್ಲಿ ರಭಸದಿಂದ ನಡೆವಾಗ ದೂರದಲ್ಲಿ ಪಾಕಿ ಟ್ಯಾಂಕ್ ಒಂದು ನೇರವಾಗಿ ಬರುವುದನ್ನು ಕಾಣುತ್ತಾನ. ತಕ್ಷಣ ಕಬ್ಬಿನ ಮರೆಯಲ್ಲಿ ಅಡಗಿ ತನ್ನ ಗನ್ನನ್ನು ಆ ದಿಕ್ಕಿಗೆ ಗುರಿಯಿಟ್ಟು ಕಾಯುತ್ತಾನೆ . ಟ್ಯಾಂಕ್ 30 ಯಾರ್ಡ್ ನಷ್ಟು ಸಮೀಪ ಬಂದಾಗ ತನ್ನ ಸಹೋದ್ಯೋಗಿಗೆ ಷೆಲ್ಲನ್ನು ಲೋಡ್ ಮಾಡಲು ಹೇಳಿ ಗುರಿಯಿಟ್ಟು ಹಾರಿಸಿದ . ಷೆಲ್ಲನ್ನು ನೋಡುತ್ತಿದ್ದಂತೆ ಟ್ಯಾಂಕ್ ಢಮ್ಮನೆ ಸ್ಫೋಟಗೊಂಡಿತು . ಹಮೀದ್ ನ ತಂಡ “ಶಹಬ್ಬಾಷ್” ಎಂದು ಹರ್ಷೋದ್ಘಾರ ಮಾಡಿದರು . ನಂತರ ಪಾಕಿಗಳ ಎರಡು ಪದಾತಿದಳದ ತಂಡ ಅದನ್ನು ಹಿಂಬಾಲಿಸಿದರು. Anti Tank ಗನ್ನನ್ನು ಹಿಡಿದ ತಂಡ ಇನ್ಫೆಂಟ್ರಿಯನ್ನು ಎದುರಿಸುವುದಾಗುವುದಿಲ್ಲವೆಂದು ಜೀಪನ್ನು ರಿವರ್ಸ್ ತೆಗೆದು ಸ್ವಲ್ಪ ದೂರ ನಡೆದರು .

ಸುಮಾರು 11:30 ರ ಹೊತ್ತಿಗೆ ಶತ್ರು ಕಡೆಯಿಂದ ಷೆಲ್ ಧಾಳಿ ಶುರುವಾಯಿತು .  ಅದರ ಜೊತೆಗೆಯೇ ಮತ್ತೆ ಟ್ಯಾಂಕ್ ಗಳ ಆಗಮನದ ರವರವ ಸದ್ದು ಕೇಳಿಬಂದಿತು . ಹಮೀದ್ ತನ್ನ ಬೈನಾಕ್ಯೂಲರ್ ನಲ್ಲಿ ಮೂರು ಫ್ಯಾಟನ್ ಟ್ಯಾಂಕ್ ಗಳು ಬರುವುದನ್ನು ಕಂಡ . ಮತ್ತೊಮ್ಮೆ ತನ್ನ ರೈಫಲ್ ನಿಂದ ಒಂದನ್ನು ಹೊಡೆದು ಸಿಡಿಸುತ್ತಾನೆ. ಮತ್ತೆರಡು ಟ್ಯಾಂಕ್ ಗಳನ್ನು ಪಾಕಿಗಳು ಹೆದರಿ ಅಲ್ಲೇ ಬಿಟ್ಟು ಪಲಾಯನಗೈದರು . ಆ ದಿನ ಕಳೆಯಿವಷ್ಟರಲ್ಲಿ ಹಮೀದ್ ಎರಡು ಟ್ಯಾಂಕನ್ನು ಹೊಡೆದು ನಾಲ್ಕು ಟ್ಯಾಂಕ್ ಗಳನ್ನು ಪಾಕಿಗಳು ತ್ಯಜಿಸಿ ಓಡುವಂತೆ ಮಾಡಿದ್ದ . ಆ ದಿನದ ಕೊನೆಯಲ್ಲಿ ಇಂಜಿನಿಯರುಗಳ ಜವಾಬ್ದಾರಿ ಹೆಚ್ಚಿತು ಏಕೆಂದರೆ ಅದೇ ಪ್ರದೇಶದಲ್ಲಿ ಪಾಕಿಗಳು ಧಾಳಿಮಾಡುವುದೆಂದೆ ಸ್ಪಷ್ಟವಾಗಿ ಕಂಡುಬಂತು. ನೆಲ ಬಾಂಬುಗಳನ್ನು ನೆಡುವುದರಲ್ಲಿ ಗಮನವಿತ್ತರು . ಬ್ರಿಗೇಡ್ ಹಂತದಲ್ಲಿ ಪಾಕಿಗಳ ಆರ್ಮರ್ ಧಾಳಿ ಮಾಡುವವರಿದ್ದರು ಆದರೆ ಪಾಕಿಗಳಿಗೆ ಭಾರತೀಯ ಸೇನೆಯ RCL ಗನ್ ಗಳ ರುಚಿ ಗೊತ್ತಿರಲಿಲ್ಲ.


                ಮಾರನೇ ದಿನವೂ ಹಮೀದ್ ನ ತಂಡ ತಮ್ಮ RCL ಗನ್ನಿನಿಂದ ಮತ್ತೆರಡು ಟ್ಯಾಂಕುಗಳನ್ನು ಸಿಡಿಸಿದ . ಇನ್ನೆರಡು ಟ್ಯಾಂಕ್ ಗಳು ಲ್ಯಾಂಡ್ ಮೈನ್ ಗಳಿಗೆ ಬಲಿಯಾಯಿತು. ಮತ್ತೊಂದು ಬದಿಯಿಂದ ಮುತ್ತುವರೆದು ಯತ್ನಿಸಬಂದ ಪಾಕ್ ಆರ್ಮರ್ ಗೆ ವಾಲ್ತೋಹಾದ ಪ್ರವಾಹ ಅಡ್ಡಿಯಾಯಿತು . ನಂತರ ಭಾರತೀಯ ಬೆಟ್ಯಾಲಿಯನ್ ಗೆ ಪಾಕಿಗಳ ಸೈಬರ್ ಜೆಟ್ ಗಳ ಧಾಳಿಯಾದರೂ ಅಂಥಹ ಏನೂ ಸಮಸ್ಯೆ ಆಗಲಿಲ್ಲ. ಹಮೀದನ ಸಾಧನೆ ಪರಮ ವೀರ ಚಕ್ರಕ್ಕೆ ಶಿಫಾರಸ್ಸಾಯಿತು . ನಾಲ್ಕು ಟ್ಯಾಂಕನ್ನು ಹೊಡೆದ ಸಾಧನೆಗೆ ಹಮೀದ್ ಆ ದಿನದ ರಾತ್ರಿಯಲ್ಲಿ ನೆಮ್ಮದಿಯ ನಿದ್ದೆ ಮಾಡಿದ.

ಮಾರನೇ ದಿನ, ಅಂದರೆ ಸೆಪ್ಟೆಂಬರ್ 10 . ಹಮೀದ್ ಪುನಃ ರಣಾಂಗಣಕ್ಕೆ ಸಿದ್ಧನಾಗಿದ್ದ. ಆ ದಿನ
 ನಾಲ್ಕನೇ ಗ್ರೆನೇಡಿಯರ್ ಬ್ರಿಗೇಡ್ ಗೆ ಶತ್ರು ಪಡೆಯಿಂದ ತೀವ್ರತರದ ಷೆಲ್ ಧಾಳಿ ಆರಂಭವಾಯಿತು . ಅದರ ಹಿಂದೆಯೇ 3 ಫ್ಯಾಟನ್ ಟ್ಯಾಂಕ್ ಗಳ ಮುನ್ನಡೆ . ಹಮೀದ್ ಧೃತಿಗೆಡದೆ ಸಸ್ಯಗಳ ಮರೆಯಲ್ಲಿ ಗನ್ನಿನ ಅಂತರಕ್ಕೆ ಬರುವಲ್ಲಿಗೆ ಕಾದುಕುಳಿತಿದ್ದ . ಮೊದಲ ಟ್ಯಾಂಕ್ ತನ್ನ ಗುರಿಗೆ ಸಿಕ್ಕಿದಾಕ್ಷಣ ಅದರ ಬಲಿ ತೆಗೆದುಕೊಂಡ . ತಕ್ಷಣ ಡ್ರೈವರ್ ಗೆ ಜೀಪನ್ನು ಬೇರೆಡೆ ಕೊಂಡೊಯ್ಯಲು ತಿಳಿಸಿದ. ಅಲ್ಲಿಂದ ತೆರಳುತ್ತಿದ್ದಂತೆ ಒಂದು ಷೆಲ್ ಕೆಲವೇ ಕ್ಷಣಗಳಲ್ಲಿ ಸಿಡಿಯಿತು . ಸ್ವಲ್ಪದರಲ್ಲಿಯೇ ಪಾರಾದರು . ಹಮೀದ್ ಧೈರ್ಯದಿಂದ ಮತ್ತೊಂದೆಡೆ ಸ್ಥಳಾಂತರಿಸಿ ಮತ್ತೊಂದು ಟ್ಯಾಂಕಿಗೆ ರೇಂಜ್ ಮತ್ತು ದಿಕ್ಕನ್ನು ಗುರಿಯಿಟ್ಟು ಆ ಟ್ಯಾಂಕನ್ನೂ ಬ್ಲ್ಯಾಸ್ಟ್ ಮಾಡಿದ .

ಆಗ ಶತ್ರುಗಳ ಷೆಲ್ ಧಾಳಿ ಇವನ ಜೀಪನ್ನೇ ಗುರಿಯಾಗಿಟ್ಟುಕೊಂಡು ಮೆಷಿನ್ ಗನ್ ಗಳ ಧಾಳಿಯನ್ನೂ ಆರಂಭಿಸಿದರು . ಆದರೂ ಹಮೀದ್ ತನ್ನ ಜೀಪನ್ನು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸ್ಥಳ ಬದಲಾಯಿಸುತ್ತಾ ಅವರ ಗುರಿ ತಪ್ಪಿಸುತ್ತಿದ್ದ . ಅದರ ನಡುವೆ ಮತ್ತೊಂದು ಟ್ಯಾಂಕ್ ಇವನೆಡೆಯೇ ದೌಡಾಯಿಸುತ್ತಿತ್ತು ! ಈಗ ಹಮೀದನಿಗೆ ತಪ್ಪಿಸಿಕೊಳ್ಳಲಾಗಲಿಲ್ಲ, ಏಕೆಂದರೆ ಇಬ್ಬರೂ ಎದುರುಬದುರಾದರು .
ಆ ಟ್ಯಾಂಕ್ ಒಂದು ಷೆಲ್ಲನ್ನು ಸಿಡಿಸಿತು, ಅದೇ ಕ್ಷಣದಲ್ಲಿ ಹಮೀದನ ರೈಫಲ್ಲಿನಿಂದಲೂ ಸಹಿತ. ಇಬ್ಬರದ್ದೂ ತಮ್ಮ ಗುರಿ ತಲುಪಿತು . ಹಮೀದ್ ಆ ಮೂರನೇ ಟ್ಯಾಂಕಿನ ಬಲಿ ತೆಗೆದುಕೊಂಡಿದ್ದ. ಜೊತೆಗೆ ಅವನೂ ತನ್ನ ಬಲಿದಾನಗೈದ.

              ಆದರೆ ಆ ದಿನದ ಮುಗಿಯುವಷ್ಟರಲ್ಲಿವಷ್ಟರಲ್ಲಿ ಪಾಕ್ ಸೇನೆ ಯ ಸ್ಥಿತಿ ಚಿಂತಾಜನಕವಾಯಿತು. ಪಶ್ಚಿಮ ಪಾರ್ಶ್ವದಿಂದ ಮುತ್ತುವರೆಯಲು ಬಂದ ಫ್ಯಾಟನ್ ಮತ್ತು ಚೆಫ್ಫಿ ಮೊಟೊರೈಸ್ಡ್ ಡಿವಿಜನ್ ಅನ್ನು ಭಾರತೀಯ ಟ್ಯಾಂಕ್ ಗಳ ಕ್ಯಾವಲ್ರಿ ಡಿವಿಜನ್ (Deccan Horse)  ಕಬ್ಬಿನ ಮರೆಯಲ್ಲಿನಿಂದ ಹೊಡೆದು ನೆಲಸಮಗೊಳಿಸಿದರು . ಹಮೀದನ ದಳವನ್ನು ಮುಂದುವರೆದು ಮೊಹಮ್ಮದಪುರ ತಲುಪಿದ ಪಾಕಿಗಳ ಸೇನೆಯನ್ನು ಭಾರತೀಯ ಸೆಂಚೂರಿಯನ್ ಆರ್ಮರ್ ವಿಭಾಗ ಸಂಪೂರ್ಣ ನಾಶಗೊಳಿಸಿತು. ಅಷ್ಟರಲ್ಲಿ ಪಾಕಿಗಳ ಮೊದಲ ಆರ್ಮರ್ ವಿಭಾಗ ಸಂಪೂರ್ಣವಾಗಿ ಭಾರತೀಯ ಸೇನೆಗೆ ನಾಶಗೊಂಡು ಕೆಲವು ಪಾಕಿ ಯೋಧರು ಮತ್ತು ಅಧಿಕಾರಿಗಳು ಸೆರೆ ಸಿಕ್ಕರು .

ಅಸಲ್ ಉತ್ತರ್ ಅಂದರೆ ಮೂಗು ಮುರಿಯುವಂತೆ ಉತ್ತರ ಕೊಡುವುದು ಅಂತ ಅರ್ಥ . ಇದು ಸೇನೆಗೆ ಸಿಕ್ಕ ಮಹಾಜಯ . ಭಾರತೀಯ ಸೇನೆ ಪಾಕಿಗಳ 97 ಟ್ಯಾಂಕ್ ಗಳನ್ನು ನಾಶಮಾಡಿ 32ನ್ನು ವಶಪಡಿಸಿಕೊಂಡಿದ್ದರು . ಇದರ ವಿರುದ್ಧವೆಂಬಂತೆ ಕೇವಲ 5 ಟ್ಯಾಂಕನ್ನು ಭಾರತೀಯ ಸೇನೆ ಕಳೆದುಕೊಂಡಿತು . ಇದು ಎರಡನೇ ಮಹಾಯುದ್ಧದ(Battle of Kursk) ನಂತರ ನಡೆದ ಅತಿ ದೊಡ್ಡ ಟ್ಯಾಂಕ್ ಸಮರ . ಆಗಿನ ಕಾಲಕ್ಕೆ ಆಧಿನಿಕ ಶಸ್ತ್ರಾಸ್ತ್ರ ಹೊತ್ತ ಪಾಕಿಗಳ ಶತ್ರು ಪಡೆಗಳನ್ನು ಚಾಣಾಕ್ಷತೆ ಮತ್ತು ಪ್ರಾಕ್ರಮದಿಂದ ಮಣಿಸಿದ ಅತ್ಯುನ್ನತ ಉದಾಹರಣೆಯೇ ಈ ಅಸಲ್ ಉತ್ತರ್. ಇಂದಿಗೂ ಈ ಸಮರದ ಕಥೆ ನಮ್ಮ ಪಾಲಿಗೆ ಹಮೀದ್ ನಂಥಹವರ ಅತುಲನೀಯ ಪರಾಕ್ರಮದಿಂದ ಚಿರಸ್ಥಾಯಿಯಾಗಿ ಉಳಿದುದೆ .

ಅಸಲ್ ಉತ್ತರ್ ಪ್ರದೇಶದಲ್ಲಿ ಪಾಕಿಗಳ ಟ್ಯಾಂಕ್ ಗಳು ಶವದಂತೆ ಬಿದ್ದಿದ್ದರಿಂದ ಆಲ್ಲಿನ ಆ ಪ್ರದೇಶವನ್ನು ‘ಫ್ಯಾಟನ್ ನಗರ್ ’ ಎಂದು ಮರುನಾಮಕರಣ ಮಾಡಿದರು .

ಕೇವಲ ಒಂದು Anti Tank ರೈಫಲ್ ಹಿಡಿದು ಒಂದು ಆರ್ಮರ್ ಡಿವಿಜನ್ ಗೆ ಸಮವೆಂಬಂತೆ ಏಳು ಟ್ಯಾಂಕ್ ಗಳನ್ನು ಹೊಡೆದ ಹಮೀದನಿಗೆ ಮರಣೋತ್ತರ ಪರಮ ವೀರ ಚಕ್ರ ಸಿಕ್ಕಿತು.



ಜೈ ಹಿಂದ್ 

No comments:

Post a Comment