Sunday 4 January 2015

ಹಲ್ದೀಘಾಟಿ ಸಮರ - 1


ಮಾರ್ಚ್ 1576
ಮೊಘಲ್ ಬಾದಶಾಹ್ ಅಕ್ಬರ್ ಪ್ರತಾಪನನ್ನು ಮಣಿಸುವ ಯೊಜನೆ ಮಾಡಲು ಸ್ವಯಂ ರಾಜಸ್ತಾನದ ಅಜ್ಮೆರ್ ಗೆ ಬಂದಿರುತ್ತಾನೆ. ಪೂರ್ಣ ಪ್ರಮಾಣದ ಯೋಚನೆ ವಿಚಾರದ ನಂತರ ಓಮರ್ ನ ರಾಜ ಮಾನಸಿಂಗನನ್ನೇ ಪ್ರತಾಪನ ವಿರುದ್ಧದ ಅಭಿಯಾನಕ್ಕೆ ಸೇನಾಧಿಪತಿಯನ್ನಾಗೆ ನೇಮಿಸುತ್ತಾನೆ. ಒಬ್ಬ ರಾಜಪೂತನನ್ನು ಎದುರಿಸಲು ಮತ್ತೊಬ್ಬ ರಾಜಪೂತ ಅಡವಿಯನ್ನು ಬಿಟ್ಟು ನೇರಾ ನೇರ ಖಾಲಿ ಮೈದಾನದ ರಣಾಂಗಣಕ್ಕೆ ಬಂದೇ ಬರುತ್ತಾನೆ ಮತ್ತು ಪ್ರತಾಪನನ್ನು ಹೇಗಾದರೂ ಹಿಡಿಯಬಹುದೆಂಬುದು ಅಕ್ಬರ್ ಸಾಹೇಬರ ಯೋಚನೆ !
ಮಾನಸಿಂಗನ ಜೊತೆಗೆ ಆಸಫ್ ಖಾನ್ , ಸೈಯದ್ ಹಾಷಮ್ ಬಾರಾಹ , ಸೈಯದ್ ಅಹ್ಮದ್ , ರಾಜಾ ಜಗನ್ನಾಥ್ ಕಛವಾಹ , ಮಿಹತರ್ ಖಾನ್ , ರಾಯ ಲೂಣ್ಕರಣ್ ಕಛವಾಹರಂತೆ ಅನೇಕ ಮುಸಲ್ಮಾನ ಮತ್ತು ಹಿಂದೂ ಸೇನಾನಿಗಳಿದ್ದರು.... !. ಅಕ್ಬರ್ ನ ಈ ಸೇನೆಯಲ್ಲಿ ರಾಜಪೂತ ಯೋಧರು ಅಧಿಕ ಸಂಖ್ಯೆಯಲ್ಲಿದ್ದರು, ಅದರಲ್ಲೂ ಓಮರ್ ರಾಜ್ಯದವರು, ರಾಜಪೂತರೆ. ಇತ್ತ ರಾಜಸ್ತಾನದ ಸ್ವಾಭಿಮಾನದ ಪ್ರತೀಕವಾಗಿರುವ ರಾಣಾ ಪ್ರತಾಪ ಎಲ್ಲರಿಗೆ ಪೂಜನೀಯನಾಗಿದ್ದ, ಅತ್ತ ಓಮರ್ ರಾಜ್ಯದವರ ದೇಶದ್ರೋಹಕ್ಕಾಗೆ ಪ್ರತಾಪನಿಗೆ ಅವರ ಮೇಲೆ ತಿರಸ್ಕಾರವಿತ್ತು. ಈ ಶತ್ರುತನವನ್ನು ಮನಗಂಡು ಅಕ್ಬರ್ ಮಾನಸಿಂಗನನ್ನೇ ಪ್ರತಾಪನ ವಿರುದ್ಧ ಸೆಣೆಸಲು ಬಿಟ್ಟಿದ್ದ.
ಒಬ್ಬ ರಾಜಪೂತ ಮತ್ತೊಬ್ಬ ರಾಜಪೂತನ ಮೇಲೆ ಕತ್ತಿ ಎತ್ತುತ್ತಾನೆಯೇ ಎಂಬ ಸಂದೇಹವೂ ಸೇನೆಯ ಕೆಲವರಲ್ಲಿ ಇತ್ತು. ಆದರೆ ಮಾನಸಿಂಹನ ಸ್ವಾಮಿನಿಷ್ಟೆ ಯು ಪ್ರಶ್ಣಾತೀತವಾಗಿತ್ತು, ಹಲವಾರು ಯುದ್ಧಗಳಲ್ಲಿ ಅಕ್ಬರನಿಗೆ ಭುಜಬಲನಾಗಿ ನಿಂತು ನಂಬಿಕೆಗೆ ಪಾತ್ರನಾಗಿದ್ದ !. ಹಾಗಾಗಿ ಇದು ಪ್ರತಾಪನಿಗೆ ಎರಗಿದ ಧರ್ಮಸಂಕಟ, ತನ್ನವರ ಮೇಲೆಯೆ ಕತ್ತಿ ಎತ್ತಬೇಕಲ್ಲ. ಸಾಮಾನ್ಯವಾಗಿ ಅಕ್ಬರ್ ಕಂಡುಕೊಂಡ ನಿದರ್ಶನ, ಒಬ್ಬ ರಾಜಪೂತ ಮತ್ತೊಬ್ಬ ರಾಜಪೂತನೆದುರು ಆತ್ಮಸಮರ್ಪಣೆ ಮಾಡುತ್ತಾನೆ , ಹೇಗೆ ಹಾಡಾ ರಾಜಾ ಜೈಸಮ್ಲೇರ್ ರಾಜ ರಾವಲ್ ಆದಿಯನ್ನು ಯುದ್ಧ ಮಾದದೇ ಅಕ್ಬರ್ ನ ತಕ್ಕೆಗೆ ತಂದನೊ ಹಾಗೆ ಪ್ರತಾಪನ ಮೇಲೂ ಇದೇ ಲೆಕ್ಕಾಚಾರ.
ಇಂಥಹ ಘೋರ ಸಮಸ್ಯೆಯ ಸುಳಿಯಲ್ಲಿ ಪ್ರತಾಪ್ ಧೃತಿಗೆಡದೆ ನಿಂತಿದ್ದ.
ಎಂಭತ್ತು ಸಾವಿರದಂಥ ಬೃಹತ್ ಸೇನೆಯೊಂದಿಗೆ ಮಾನಸಿಂಗ್ ಏಪ್ರಿಲ್ 3 1576 ರಂದು ಅಜ್ಮೆರ್ ನಿಂದ ತೆರಳುತ್ತಾನೆ. ಆದರೆ ಮಾನಸಿಂಗ್ ಮಾಂಡಲಗಢ ತಲುಪಿ ಅಲ್ಲಿ ಎರಡು ತಿಂಗಳುಗಳ ಕಾಲ ಸೇನೆಯನ್ನು ನಿಲ್ಲಿಸುತ್ತಾನೆ. ಇದಕ್ಕೊಂದು ಕಾರಣ ತನ್ನ ಭಾರೀ ಸೇನೆಯನ್ನು ಪೂರ್ಣಪ್ರಮಾಣದಲ್ಲಿ ರವಾನಿಸಲು ಸಮಯ ಬೇಕು ಜೊತೆಗೆ ದಾರಿಯುದ್ಧಕ್ಕೂ ಸುರಕ್ಷಗೂ ನಿಗಾವಹಿಸಬೇಕು ಮತ್ತೊಂದು ಕಡೆ ಪ್ರತಾಪನಿಗೂ ಯೋಚಿಸಲು ಕೊಂಚ ಸಮಯ ಕೊಡೊಣಾ ಅಂತ !
ಇತ್ತ ಪ್ರತಾಪ್ ಮಾನಸಿಂಗನ ಆಗಮನದ ಬಗ್ಗೆ ತಿಳಿಯುತ್ತಿದ್ದಂತೆ ಕುಂಭಲಗಢದಿಂದ ಗೋಗುಂಡಕ್ಕೆ ತನ್ನ ಸಾಮಂತರೊಡನೆ ಸನ್ನಿವೇಷದ ಬಗ್ಗೆ ಪರಾಮರ್ಷಿಸಲು ಬರುತ್ತಾನೆ. ಪ್ರತಾಪನು ಮಾಂಡಲಗಢದಲ್ಲೇ ಅವನನ್ನು ಸೆಣೆಸಲು ಇಚ್ಛಿಸುತ್ತಾನೆ. ಆದರೆ ಮಾನಸಿಂಹನು ಷಾಹಿ ಫೌಜಿನಿಂದ ಬಂದಿರುವುದಾಗೆ, ಅಂಥಹ ಸೇನೆಯನ್ನು ಖಾಲಿ ಮೈದಾನದಲ್ಲಿ ಎದುರಿಸುದು ಅಪಾಯ ಆದ್ದರಿಂದ ಅವನನ್ನು ಅರಣ್ಯ ಮತ್ತು ಪರ್ವತ ಪ್ರದೇಶದಲ್ಲೇ ಸೆಣೆಸಬೇಕೆಂದು ಸಾಮಂತರ ಸಲಹೆಯನ್ನು ಪ್ರತಾಪನು ಅನುಮೋದಿಸುತ್ತಾನೆ. ಜೊತೆಗೆ ಮಾಂಡಲಗಢ ಅಜ್ಮೆರ್ ದಾರಿಯ ಮಧ್ಯೆಯಲ್ಲೇ ಬರುವುದರಿಂದ ಆತನಿಗೆ ಬೇಕಾದಾಗ ಇನ್ನೂ ಅಧಿಕ ಮೊಘಲರ ಸೇನೆ ಲಭಿಸುವುದು ಸಾಧ್ಯ ಎಂಬುದನ್ನೂ ಮನಗೊಳ್ಳುತ್ತಾನೆ.
ರಾಜಸ್ತಾನಿನ ಒಂದು ಪ್ರಮುಖ ಪ್ರಾಂತವಾದ ಮೇವಾಡ್ ಪ್ರತಾಪನ ಮಾತೃಭೂಮಿ. ಅದನ್ನು ಆಗಲೇ ಅಕ್ಬರ್ ಅರ್ಧ ಕಬಳಿಸಿದ್ದ. ಇನ್ನರ್ಧ ಭಾಗವನ್ನು ವಶಪದಿಸಿಕೊಳ್ಳಲು ತನ್ನ ಕರಾಳ ಹಸ್ತ ಚಾಚಿದ್ದ.

ಹಲ್ದೀಘಾಟಿ ಸಮರಕ್ಕೆ ಭೂಮಿಕೆ ಸಿದ್ಧವಾಗಿತ್ತು.
ಮುಂದುವರೆಯುವುದು . . .

No comments:

Post a Comment