Sunday 4 January 2015

ಹಲ್ದೀಘಾಟಿ ಸಮರ - 2


ಮಾನಸಿಂಹ ಮಾಂಡಲಗಢ ತಲುಪಿ ಖಮಣೋರಿನ ಸನಿಹದಲ್ಲಿ ತನ್ನೆ ಸೇನೆಯನ್ನು ಡೇರೆ ಹಾಕಿದ್ದ.
ಈಗ ಪ್ರತಾಪ ತನ್ನ ಸೇನೆಯನ್ನು ರವಾನಿಸಿದ. ತನ್ನ ಸೇನೆಯು ಮಾನಸಿಂಹನ ಸೇನೆಗೆ ಕಡಿಮೆಯೆಂದರೆ 2 ಮೈಲಿಯಷ್ಟು ಅಂತರವಿತ್ತು. ಶತ್ರುವಿಗೆ ಇನ್ನಷ್ಟು ಹತ್ತಿರ ಬರುವುದೊಂದಷ್ಟೇ ಬಾಕಿ. ಹೇಗೆ ಸೇನೆಯನ್ನು ಮುನ್ನಡೆಸಿದ್ದ ಎಂಬುದು ಸೇನಾ ದೃಷ್ಟಿಯಿಂದ ಬಲು ಉಪಯುಕ್ತ. ಅಲ್ಲಿ ತಲುಪುವ ಎರಡು ಮೈಲುದ್ದದ ಕಡಿದಾದ ದಾರಿಯಲ್ಲಿ ಒಮ್ಮೆ ಒಂದು ಬಾರಿ ಒಬ್ಬ ಕುದುರೆಸವಾರ ಚಲಿಸುವುದೂ ಕಷ್ಟ, ಇದರ ಅನುಕೂಲತೆ ಏನೆಂದರೆ ನಾಲ್ಕೂ ಕಡೆಯಿಂದ ಶತ್ರುವನ್ನು ಮೋರ್ಛಾಬಂದಿ ಮಾಡಬಹುದು. ಪ್ರತಾಪನು ತನ್ನ ಸೇನಾ ತುಕಡಿಯನ್ನು ಎಂಥಾ ಜಾಗದಲ್ಲಿ ನೇಮಿಸಿದನೆಂದರೆ ಕೇವಲ ಹಿಡಿಯಷ್ಟೆ ಯೋಧರಿಂದ ಸಾವಿರಾರು ಶತ್ರುಗಳನ್ನು ಎದುರಿಸಬಹುದಾಗಿತ್ತು. ಜೊತೆಗೆ ಸುತ್ತಮುತ್ತಲಿನ ಕಾಡುಗಳಲ್ಲಿ ಶತ್ರುಗಳಿಗೆ ಕೆಲವು ದಾರಿಗಳಲ್ಲಿ ಬಂದ್ ಮಾಡಲು ಅಲ್ಲಲ್ಲಿ ಆಯಕಟ್ಟಿನ ಸ್ಥಳಗಳಲ್ಲಿಯೂ ಕೆಲವು ಯೋಧರನ್ನು ಅಡಗಿಸಿದ್ದ. ಇದರಿಂದ ಹೊಸದಾಗಿ ಪ್ರವೇಷಿಸುತ್ತಿರುವ ಆಕ್ರಮಣಕಾರೀ ಶತ್ರುಗಳಿಗೆ ದಾರಿಕಾಣದೆ ಹಸಿವಿನಿಂದ ಒದ್ದಾಡುವ ಅಪಾಯವೂ ಇತ್ತು.
ಈ ಇತಿಹಾಸ ಪ್ರಸಿದ್ಧಿ ಹಲ್ದೀಘಾಟಿ ಯುದ್ಧ ವಾಸ್ತವದಲ್ಲಿ ಘಾಟಿಯ ಒಳಗೆ ನಡೆಯಲಿಲ್ಲ. ಈ ಹಲ್ದೀಘಾಟಿ ಎನ್ನುವುದು ಗೋಗುಂದ ಮತ್ತು ಖಮಣೋರ್ ಮಧ್ಯೆದಲ್ಲಿರು ಪರ್ವತಶ್ರೇಣಿಗಳಲ್ಲೊಂದಾದ ಪ್ರದೇಶ. ಇಲ್ಲಿನ ಮಣ್ಣಿನ ಬಣ್ಣ ಹಳದಿ. ಈ ಯುದ್ಧವು ಹಲ್ದೀಘಾಟಿಯ ಆಸುಪಾಸಿನಲ್ಲಿ ನಡೆಯಿತು ಎಂದು ಹೇಳಲಾಗುತ್ತದೆ.  ಇತಿಹಾಸಕಾರನಾದ ಆಲ್ ಬದಾನಿಯು ಸೇನೆಯೊಂದಿಗಿದ್ದ. ಅವನ ಲಿಖಿತ ಆಧಾರದ ಮೇಲೆ ಬಾದಷಾಹಿ ಸೇನೆ ಘಾಟಿಯ ಪೂರ್ವೋತ್ತರ ದ್ವಾರದಿಂದ ಹಿಡಿದು ಖಮಣೋರಿನಿಂದ ಎರಡು ಮೂರು ಮೈಲಿ ದಕ್ಷಿನ ಪೂರ್ವದ ತನಕ ಬನಾಸ್ ನದಿಯ ತನಕ ಹರಡಿತ್ತು.  ಪ್ರತಾಪನ ಸೇನೆ ಗೋಗುಂಡದ ಮಾರ್ಗವಾಗಿ ಘಾಟಿ ಹಿಂಬದಿಯಿಂದ ಬಂದು ಧಾಳಿಗೆ ಸಜ್ಜಾಗಿ ನಿಂತಿದ್ದ.
ಇನ್ನು ಸಂಖ್ಯಾಬಲದ ಬಗ್ಗೆ ಹೇಳಬೇಕಾದರೆ ಮೊಘಲ್ ಸೇನೆ ಸುಮಾರು 80000ದಷ್ಟು ಸೈನಿಕರನ್ನೊಳಗೊಂಡಿತ್ತು. ಇದರಲ್ಲಿ ಮಧ್ಯ ಏಷಿಯಾದ ಉಜ್ಬೆಕರು, ಕಝಾಕ್ , ಸಯ್ಯದ್ ಬಾರಹ, ಫತೇಹ್ ಪುರ್ ಸಿಕ್ರಿಯ ಷೇಕ್ ಜಾದಾ ಆದಿ, ಮತ್ತು ರಾಜಪೂತರು. ಇವರ ಸೇನೆಯಲ್ಲಿ ಆಧುನಿಕ ತೋಪುಗಳಿದ್ದವು ಆದರೆ ಭಾರೀ ಗಾತ್ರದ ತೋಪುಗಳನ್ನು ಅಲ್ಲಿ ಎಳೆದು ತರಲಾಗದ ಕಾರಣ ಭಾರೀ ತೋಪುಗಳನ್ನು ಬಳಸಲಿಲ್ಲ.
ಮತ್ತು ಮಾನಸಿಂಹನ ಸೇನಾವ್ಯೂಹದ ಬಲ ಭಾಗದಲ್ಲಿ ಸಯ್ಯದ್ ಬಾರಹ , ಎಡ ಭಾಗದಲ್ಲಿ ಘಾಜಿಖಾನ್ ಬದಖ್ಶಿ ಮತ್ತು ರಾಯ ಲೂಣಕರಣ್ ಇದ್ದರು. ಮುಂಭಾಗದಲ್ಲಿ ಜಗನ್ನಾಥ್ ಕಛವಾಹ, ಖ್ವಾಜಾ ಗಯಾಸುದ್ದೀನ್ ಅಲಿ ಮತ್ತು ಅಸಫ್ ಖಾನ್ ಇದ್ದರು. ಮತ್ತು ವ್ಯೂಹದ ಹಿಂಭಾಗದಲ್ಲಿ ಮಾಧವಸಿಂಗ್ ಮತ್ತು ಮಿಹತರಖಾನ್ ರೊಳಗೊಂಡ ಅನೇಕ ಅಮೀರರಿದ್ದರು.
ಪ್ರತಾಪನೂ ತನ್ನ ಸೇನೆಯನ್ನು ಇದೇ ರೀತಿಯ ಒಂದು ವ್ಯೋಹದಲ್ಲಿ ರಚಿಸಿದ್ದ. ಸೇನಾವ್ಯೋಹದ ಎಡ ಭಾಗದಲ್ಲಿ ತನ್ನ ಸಮೇತ ಗ್ವಾಲಿಯರ್ ನ ರಾಜ ರಾಮಸಿಂಗ್ ತನ್ವರ್ ಮತ್ತು ಅವನ ಪುತ್ರರಾದ ಶಾಲಿವಾಹನ ಮತ್ತು ಭಗವಾನ್ ಸಿಂಗ್ , ಭಾಮಾಷಾಹ, ತಾರಾಚಂದ, ಝಾಲಾ ಮಾನಸಿಂಗ, ಜೈತ್ ಸಿಂಹೊತ್ ಸಜಾವತ್ , ಝಾಲಾ ವೀದಾ ಸುಲ್ತನತ್ ಮತ್ತು ಮಾನಸಿಂಗ್ ಸೊಂಗರಾ. ವ್ಯೋಹದ ಮುಂಭಾಗದಲ್ಲಿ ಭೀಮ್ ಸಿಂಗ್ ಡೋಡಿಯಾ, ಕೃಷ್ಣದಾಸ್ ಚುಂಡಾವತ್ , ರಾವಲ್ ಸಾಂಗಾ, ರಾಮಸಿಂಗ್ ರಾಠೋಡ್ , ಪಠಾಣ್ ಹಖೀಮ್ ಖಾನ್ . ವ್ಯೋಹದ ಹಿಂಭಾಗದಲ್ಲಿ ಬಿಲ್ಲರ ಸರದಾರ ರಾಣಾ ಪೂಂಜಾ , ಪುರೋಹಿತ ಗೋಪಿನಾಥ್ , ಕಲ್ಯಾಣ, ಬಛಾವತ್ ಮೆಹ್ತಾ , ರತನ್ ಚಂದ್ ಖೇಮಾವತ್ , ಮಹಾಸಾಹ್ನೀ ಜಗನ್ನಾಥ್ ಇದ್ದರು.
ಇತ್ತ ರಾಣಾ ಪ್ರತಾಪನ ಹತ್ತಿರ 3000 ಕುದುರೆ ಸವಾರರು, 2000 ಪದಾತಿದಳ, 100 ಆನೆಗಳು ಮತ್ತು ಪದಾತಿ ಬಿಲ್ವರನ್ನು ಎಲ್ಲಾಸೇರಿ 22000 ಸೇನಾಬಲವಿತ್ತು ಎಂದು ಹೇಳಲಾಗಿದೆ. ತಲವಾರುಗಳು, ಬಿಲ್ಲು ಬಾಣಗಳು ಮತ್ತು ಭರ್ಜಿಗಳೇ ಮುಖ್ಯ ಆಯುಧಗಳಾಗಿದ್ದವು. ಪ್ರತಾಪನ ಬಳಿ ತೋಪುಗಳೇ ಇರಲಿಲ್ಲ. ಜೊತೆಗೆ ಅಲ್ಲಲ್ಲಿ ಕೆಲವು ರಾಶಿ ಕಲ್ಲುಗಳನ್ನು ಒಟ್ಟುಮಾಡಿಕೊಂಡಿದ್ದರು. ಶತ್ರುಗಳ ಮೇಲೆ ಬೀಳಿಸಲು!. ಆದರೆ ಪ್ರತಿಯೊಬ್ಬರಲ್ಲೂ ದೇಶಭಕ್ತಿ ಮತ್ತು ಪ್ರತಾಪನ ಮೇಲೆ ಅಪಾರ ಶ್ರದ್ಧೆಯಿತ್ತು.
ಒಂದು ಅಚ್ಚರಿಯ ಸಂಗತಿಯೇನೆಂದರೆ ಮಾನಸಿಂಹನ ಅಗ್ರದಳದ (Vanguard) ನಾಯಕ ಜಗನ್ನಾಥನ ನೇತೃತ್ವದಲ್ಲಿ ರಾಜಪೂತರಿದ್ದರು . ಅದಕ್ಕೆ ವಿರುದ್ಧ ಎಂಬಂತೆ ಪ್ರತಾಪನ ಅಗ್ರದಳದ ನಾಯಕ ಹಕೀಮ್ ಖಾನ್ ಎಂಬ ಮುಸಲ್ಮಾನ ಪಠಾಣನಿದ್ದ !


ಮುಂದುವರೆಯುವುದು . . .

No comments:

Post a Comment