Sunday 11 January 2015

ಸ್ವಾಮಿ ವಿವೇಕಾನಂದರ ನೂರಾ ಐವತ್ತೆರಡನೇ ಜನ್ಮೋತ್ಸವ



      ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಅಗಾಧತೆಯ ಬಗ್ಗೆ ಯೋಚನೆ ಮಾಡಿದರೆ ನೆನಪಿಗೆ ಬರುವುದೇ ಹಿಮಾಲಯ ಪರ್ವತ. ಆದರೂ ವಿವೇಕಾನಂದರಂಥಹ ವ್ಯಕ್ತಿತ್ವಕ್ಕೆ ಸರಿಸಾಟಿ ಅವರೇ . ಹೇಗೆ ಆಕಾಶಕ್ಕೆ ಆಕಾಶವೇ ಉಪಮೆಯೋ , ಹಿಮಾಲಯಕ್ಕೆ ಹಿಮಾಲಯವೇ ಉಪಮೆಯೋ. ವಿವೇಕಾನಂದರಿಗೆ ವಿವೇಕಾನಂದರೇ ಉಪಮೆ. ಸಾಟಿಯಿಲ್ಲದ ವ್ಯಕ್ತಿತ್ವ.

ಇವರ ಜೀವನಚರಿತ್ರೆಯನ್ನೊಮ್ಮೆ ಮೆಲುಕಿ ಹಾಕಿದರೆ ಕಾಣುವ ಒಂದೊಂದು ಘಟನೆಗಳೂ, ಅಪೂರ್ವ, ವರ್ಣರಂಜಿತ, ಆಶ್ಚರ್ಯಕರ ಮತ್ತು ಸ್ಪೂರ್ತಿದಾಯಕ. ಪ್ರತ್ಯೇಕವಾಗಿ ಯಾವುದೇ ಒಂದು ಸನ್ನಿವೇಷ, ಉದಾಹರಣೆಯನ್ನೆತ್ತಿ ಹೇಳುವುದು ಕಷ್ಟ, ಒಟ್ಟಾರೆ ಇವರ ಜೀವನ ಚರಿತ್ರೆ ಒಬ್ಬ ಅಸಾಮಾನ್ಯ ಮನುಷ್ಯನಲ್ಲಿ ಕಂಡುಬರುವ ಜೀವನದ ಪರಿಪೂರ್ಣ ಅಭಿವ್ಯಕ್ತಿ (Total Expression of Life).
ಬದುಕಿದ್ದು ಕೇವಲ ಮೊವತ್ತೊಂಭತ್ತು ವಯಸ್ಸಷ್ಟಾದರೂ ಸಾವಿರಾರು ವರ್ಷಗಳಿಗೆ ಬೇಕಾದಷ್ಟು ತತ್ವ ಉಪದೇಶಗಳನ್ನ ಜಗತ್ತಿಗೆ ಬೀರಿಹೋದ ಮಹಾಪುರುಷ.
ವಿವೇಕಾನಂದರ ಬಗ್ಗೆ ವರ್ಣನೆ ಮಾಡಿದಷ್ಟೂ ಮುಗಿಯದಂಥಯ ಸಾರ ಸರ್ವಸ್ವ. ಒಬ್ಬ ದೂರದ ವಿದೇಶೀ ಮಹಿಳೆಯಾಗಿದ್ದ ನಿವೇದಿತಾಳಿಗೆಯೇ ಇವರ ಪ್ರಭಾವ ಬೀರಿತ್ತೆಂದರೆ ಇವರ ಹಿರಿಮೆ ಎಂಥಹದ್ದಿರಬಹುದು . ನಿವೇದಿತಾರ ಮಾತಲ್ಲೇ ಹೇಳಿದಂತೆ – “ ಧನ್ಯರು ಇವರನ್ನು ಹಡೆದ ದೇಶ, ಇವರ ಕಾಲದಲ್ಲೇ ಜೀವಿಸಿದ್ದ ಇವರ ದೇಶವಾಸಿಗಳು ಎರಡರಷ್ಟು ಧನ್ಯರು ಮತ್ತು ಇವರ ಪಾದದ ತಳದಲ್ಲಿ ಕುಳಿತವರು ಮೂರರಷ್ಟು ಧನ್ಯರು ”

ಇವರ 152 ನೇ ಹುಟ್ಟುಹಬ್ಬದಂದು ಇವರ ವಿಚಾರಗಳನ್ನು ನೆನೆಯುತ್ತಾ ಇವರ ಕನಸಿನ  ರಾಷ್ಟ್ರನಿರ್ಮಾಣದ ಕಾರ್ಯದತ್ತ ಸಾಗೋಣ.

No comments:

Post a Comment