Sunday 4 January 2015

A search in secret India




ಪೌಲ್ ಬ್ರಂಟನ್
ಸುಮಾರು ನೂರು ವರ್ಷಗಳ ಹಿಂದಿನ ಮಾತು
“ ಒಂದು ಮೂಲೆಗುಂಪಿಗೆ ಸೇರಿದ ಹಳೆಯ ಪುಸ್ತಕದ ಕಡೆಗಣಿಸಲ್ಪಟ್ಟ ಸಾಲುಗಳಲ್ಲಿ ಚಿತ್ರಣವಾಗಿರುವ ಪ್ರಾಚೀನ ಭಾರತದ ಜೀವನಶೈಲಿಯಲ್ಲಿನ ಕೆಲವು ವಿಸ್ಮಯಕಾರಿ ಅಂಶಗಳನ್ನು ಪಾಶ್ತಾತ್ಯರಿಗೆ ಏನಾದರೂ ಅನುಕೂಲವಾಗಲೆಂದು ಕೆದಕಿ ತೆಗೆಯಲು ಪರಿತಪಿಸಿತ್ತಿದ್ದೇನೆ. ಹಿಂದಿನ ಯುರೋಪಿನ ಯಾತ್ರಿಕರು ಮರಳಿದಾಗ ಅದೇನೋ ಫಕೀರರು, ಯೋಗಿಯರ ಕಥೆಗಳನ್ನು ಹೇಳುತ್ತಿದ್ದರು. ಅವರಲ್ಲದೇ ಈಗಿನ ಆಧುನಿಕ ಯಾತ್ರಿಕರೂ ಸಹಿತ ಇದೇ ಸುದ್ಧಿ ತರುತ್ತಿದ್ದಾರೆ. ”
“ ಏನಿದು ಪುನಃ ಪುನಃ ಕೇಳಿಬರುವ ಈ ಹಳೇ ಪುರಾಣಗಳ ಹಿಂದಿನ ಸತ್ಯತೆ ? ಯಾವುದೋ ನಿಗೂಢ ವರ್ಗದ ಜನರಾದ ಯೋಗಿಯರು ಎಂಬವರಿಗೆ ಸಂಭಂಧ ಪಟ್ಟಂತೆ ? ಅದೇನೋ ಅಮೋಘ ಮಾನಸಿಕ ಶಕ್ತಿಗಳನ್ನು ನೀಡುವ ಯಾವುದೋ ಪ್ರಾಚೀನ ಪಾರಂಪಾರಿಕ ವಿವೇಕದ ಅಸ್ಥಿತ್ವವನ್ನು ಕುರುಹುಗಳಂತೆ ಅಲ್ಲಿ ಇಲ್ಲಿ ಕಥೆಯ ರೂಪದಲ್ಲಿ ಕೇಳಿಬರುವ ಆ ರಹಸ್ಯವೇನು ? ಇದನ್ನು ಕಂಡುಹಿಡಿಯಲು ಒಂದು ದೂರ ಪ್ರಯಾಣವನ್ನು ಕೈಗೊಂಡಿರುವ ಸಂಕ್ಷಿಪ್ತ ದಾಖಲೆ ”
“ “ಸಂಕ್ಷಿಪ್ತ”  ಎಂದು ಏಕೆ ಹೇಳಿದೆಯೆಂದರೆ, ಒಬ್ಬ ಯೋಗಿಯ ಬಗ್ಗೆ ಬರೆಯಬೇಕೆಂದರೆ ಅಗಾಧ ಸಮಯ ಮತ್ತು ಅವಕಾಶಗಳ ಅಗತ್ಯವಿರುತ್ತದೆ. ಅದಕ್ಕಾಗಿ ನನಗೆ ಆಸಕ್ತಿ ಮೂಡಿದ ಮತ್ತು ಪಾಶ್ಚಾತ್ಯರಿಗೆ ರುಚಿಸುವ ಆಯ್ದ ಕೆಲವು ವ್ಯಕ್ತಿಗಳ ಬಗ್ಗೆ ಮಾತ್ರ ದಾಖಲಿಸುತ್ತೇನೆ . ಅನೇಕ ಬಾರಿ ಕೇಳಲ್ಪಟ್ಟ ಮತ್ತು ಹಾಗೆಂದು ಕರೆಯುವ ವಿಶೇಷ ಶಕ್ತಿ ಮತ್ತು ವಿವೇಚನೆಯನ್ನು ಹೊಂದಿರುವ ಸಾಧು ಜನರ ಬಗ್ಗೆ. ಅಂಥ ಸಾಧುಗಳನ್ನು ಬೇಟಿಮಾಡಲು ಅದೆಷ್ಟೋ ದಣಿವರಿಯದ ಪ್ರಯಾಣ ಮತ್ತು ನಿದ್ದೆವಿಲ್ಲದ ರಾತ್ರಿಗಳನ್ನು ಕಳೆದಿದ್ದೇನೋ. ಅದರಲ್ಲಿ ಕೆಲವು ಪೊಳ್ಳು ಮಾಂತ್ರಿಕರು, ಕೇವಲ ಪುಸ್ತಕದ ಬದನೇಕಾಯಿ ತಿಳಿದವರು, ಕಪಟ ಧನ ದಾಹಿಗಳನ್ನು ಹೊರತುಪಡಿಸಿ ನಿಜವಾದ ಯೋಗಿಯರನ್ನು ಅರಸುತ್ತಾ ಅವರ ಬಗ್ಗೆ ಮಾತ್ರ ಪುಟಗಳಲ್ಲಿ ಸೇರಿಸುತ್ತಿದ್ದೇನೆ. ಅನ್ಯರ ಬಗ್ಗೆ ಓದುವುದೂ ನಿರರ್ಥಕ ಮತ್ತು ನನಗೂ ಬರೆಯಲು ರುಚಿಯಿಲ್ಲ.”
“ ಭಾರತ ಯಾವುದೋ ಮೂಲೆಯಲ್ಲಿ ನಡೆಯುವ ಆಚರಣೆಗಳು ಸಾಮನ್ಯ ಯಾತ್ರಿಕರಿಗೆ ಗೋಜಲೆನ್ನಿಸುವ ಕೆಲವು ಸಂಗತಿಗಳು ನನಗೂ ನೋಡಲು ಲಭಿಸಿದ್ದು ನನ್ನ ಸುದೈವವೇ ಸರಿ. ಆಂಗ್ಲರಲ್ಲಿ ಈ ಭಾರತೀಯರ ಜನಜೀವನವನ್ನು ಅಭ್ಯಸಿಸಲು ಕೇವಲ ಹಿಡಿಯಷ್ಟು ಮಾತ್ರ ಆಸಕ್ತಿ ತೋರುತ್ತಾರೆ, ಅದರಲ್ಲಿಯೂ ಆಳವಾಗಿ ಅಭ್ಯಸಿಸಲು ಆಸಕ್ತಿ ತೋರಿಸುವರು ಇನ್ನೂ ಕಡಿಮೆ. ಯಾವನೇ ಒಬ್ಬ ಆಂಗ್ಲ ಬರಹಗಾರ ಒಂದು ದಾಖಲಾತಿಗಾದರೂ ಇಂಥಹ ವಿಷಯಗಳನ್ನು ಸ್ಪರ್ಷಿಸಿದರೆ ಅನೇಕ ಪ್ರಾದೇಶಿಕ ಭಾಶೆಗಳ ಆಗರಗಳ ಮಧ್ಯೆ ದ್ವಂದ್ವಕ್ಕೆ ಸಿಲುಕಿಕೊಳ್ಳುತ್ತಾನೆ. ಒಟ್ಟಾರೆ ಭಾರತೀಯರ ಹೃದಯಭಾಗವಾದ ಪ್ರಾಯೋಗಿಕ ಯೋಗವಿಜ್ಞಾನ ಮೂಢನಂಬಿಕೆಗಳ ಸೇರ್ಪಡೆಗೊಂಡಂತೆ ಕಂಡು ಪಾಶ್ಚಾತ್ಯರ ಪಾಲಿಗೆ ಕಗ್ಗಂಟಾಗಿಯೇ ಉಳಿಯುತ್ತದೆ. ಅದರಲ್ಲಿ ಯಾವನಾದರೂ ಒಬ್ಬ ಬಿಳಿಯ ಯೋಗಿಯೊಡನೆ ಸಮಾಲೋಚಿದರೆ ಅಲ್ಲಿ ಏನಾದರೂ ವ್ಯವಹಾರ ಸರಿಯಾಗದೆ ಸರಿಯಾದ ವಿಷಯ ಲಭಿಸಿರುವುದಿಲ್ಲ. ಈ ಯೋಗಿಯರಲ್ಲೋ ಎಲ್ಲರೂ ತಮ್ಮ ರಹಸ್ಯವನ್ನು ಬಿಟ್ಟುಕೊಡುವುದಿಲ್ಲ. ಈ ಜಟಿಲ ರಹಸ್ಯವನ್ನು ಬೆನ್ನು ಹತ್ತಿದಾಗ ಎಮರ್ಸನ್ ನ್ ಮಾತು ಸತ್ಯವೆನಿಸುತ್ತದೆ  “To be great is to be misunderstood.
ಭಾರತೀಯ ಬರಹಗಳು ನಮ್ಮ ಬಳಿ ಇದ್ದರೂ ಕೂಡ ಅದನ್ನು ಬಹಳ ಹುಷಾರಾಗಿ ಓದಬೇಕು. ಏಕೆಂದರೆ ಇಲ್ಲಿನ ಜನರಲ್ಲಿ ಸರಿಯಾದ ವಿಶ್ಲೇಷಣೆಯ ಕೊರತೆ. ಅಲ್ಲಿ ಇಲ್ಲಿ ಕೇಳಿದ ಕೆಲವು ಅಸ್ಪಷ್ಟ ವಿಷಯಗಳನ್ನೂ ಸಹಿತ ನೈಜ ಸತ್ಯದೊಂದಿಗೆ ವಿಂಗಡಿಸದೆ ದಾಖಲಿಸಿರುತ್ತಾರೆ. ಇದನ್ನೆಲ್ಲಾ ಬದಿಗೊತ್ತಿ ನೈಜ ದೃಷ್ಟಿಯಿಂದ ಅಭ್ಯಸಿಸಲು ನನಗಿರುವ ವೈಜ್ಞಾನಿಕ ಮನೋಭಾವನೆ ಮತ್ತು ಪತ್ರಿಕೋದ್ಯಮದ ಅನುಭವ ಹೊಂದಿರುವುದಕ್ಕೆ ದೇವರಿಗೆ ಕೃತಜ್ಞ.
ಇದು ಪೌಲ್ ಬ್ರಂಟನ್ ನ   ಪುಸ್ತಕದ ಮುನ್ನುಡಿಯ ಅದ್ಭುತ ಬರಹ. ಪೌಲ್ ತನ್ನ ಸೂಕ್ಷ್ಮ ಬರಹಗಳಲ್ಲಿ ತನ್ನ ಅನಿಸಿಕೆ ಮತ್ತು ಅನುಭವಗಳನ್ನು ಯಾವ ದ್ವಂದ್ವವಿಲ್ಲದೆಯೇ ಸ್ಪಷ್ಟನೋಟದಿಂದ ತಿಳಿಸುತ್ತಾನೆ. ಸಾಮಾನ್ಯ ಜನಸೀವನಗಳ ಮಧ್ಯೆಯಲ್ಲಿನ ಅಸಾಧಾರಣ ಪುರುಷರನ್ನು ಅರಸುತ್ತಾ ಪೌಲ್ ಯೋಗಿಯರನ್ನು ಸಂದರ್ಷಿಸುತ್ತಾ ಆಧ್ಯಾತ್ಮ ಜ್ಞಾನವನ್ನು ಪಡೆಯಲು ಭಾರತದಿಡೀ ಪ್ರಾವಾಸ ಮಾಡುತ್ತಾ ಕೊನೆಗೆ ರಮಣ ಮಹರ್ಷಿಯರನ್ನು ತಲುಪುವ ಅದ್ಭುತ ಕಥೆ.
ಭಾರತೆಕ್ಕೆ ದಂಡೆತ್ತಿ ಬಂದ ಅನೇಕ ಬ್ರಿಟಿಷರ ಬಗ್ಗೆ ತಿಳಿದಿದ್ದೇವೆ. ಆದರೆ ಜ್ಞಾನದಾಹಕ್ಕೆಂದು ಬಂದ ಪೌಲ್ ಬ್ರಂಟನ್ ನಂಥಹ ಒಬ್ಬ ಬ್ರಿಟಿಷ್ ಪ್ರಜೆ ತನ್ನ ಪ್ರಾಮಾಣಿಕ ದೃಷ್ಟಿಕೋನ ದಿಂದ ಭಾರತದ ಹೃದಯಭಾಗವನ್ನು ತಲುಪಿದ ಈ ವ್ಯಕ್ತಿ ತನ್ನ ಅನುಭವಗಳನ್ನು ಈ ಪುಸ್ತಕದಲ್ಲಿ ತುಂಬಾ ಚೆನ್ನಾಗಿ ವರ್ಣಿಸಿದ್ದಾನೆ.

ನಿಜವಾಗಿಯೂ ಮೆಚ್ಚಲೇಬೇಕಾದ ಪುಸ್ತಕ. ತಪ್ಪದೆಯೇ ಓದಿ

No comments:

Post a Comment