Sunday 4 January 2015

ತೈಮೂರ್ ಲಂಗ್ ನ ಮರಣೋತ್ತರದ ದಂಡಯಾತ್ರೆ


ಒಂದು ತರ್ಕಕ್ಕೆ ಮೀರಿದ ಸತ್ಯಘಟನೆ
ಅದು ಜೂನ್, 1941. ಸ್ಟಾಲಿನ್ ಗೆರಿಶಿಮೊವ್ ನನ್ನು ಉಜ್ಬೆಕಿಸ್ತಾನಿಗೆ ಒಂದಿಷ್ಟು ಪ್ರ್ಯಾಚ್ಯ ವಸ್ತು ಸಂಶೋಧಕರ ತಂಡದೊಂದಿಗೆ ತೈಮೂರ್ ಲಂಗ್ ನ ಸಮಾಧಿಯನ್ನು ತೆರೆಯಲು ಕಳುಹಿಸಿರುತ್ತಾನೆ. ಅಲ್ಲಿನ ಸ್ಥಳೀಯರು ತೈಮೂರ್ ನ ಸಮಾಧಿಯನ್ನು ತೆರೆದರೆ ಭಯಾನಕ ಆಪತ್ತು ಬರಲಿದೆ ಎಂದು ಪ್ರತಿಭಟಿಸುತ್ತಾರೆ.
ಅವನ ಅಸ್ತಿಯನ್ನು ಗೆರಿಶಿಮೊವ್ ಮರುಜೋಡಿಸಿ ದೇಹವನ್ನು ಪುನಃಜೋಡಿಸಿ ಅದು ಅವನದ್ದೇ ಎಂದು ಖಾತರಿ ಪಡಿಸುತ್ತಾನೆ.
ತೈಮೂರ್ ನ ಸಮಾಧಿಯಲ್ಲಿ ಒಂದು ಬರಹವಿರುತ್ತದೆ “ ನನ್ನ ಶವವನ್ನು ಹೊರತೆಗೆದರೆ ಇಡೀ ಜಗತ್ತೇ ನಡುಗುತ್ತದೆ ”. ಆ ಪೆಟ್ಟಿಗೆ ಯೊಳಗೆ ಮತ್ತೊಂದು ಬರಹ “ ನನ್ನ ಶವವನ್ನು ಹೊರತೆಗೆದರೆ ನನಗಿಂಥ ಭೀಕರವಾದ ಒಬ್ಬ ಪಾತಕಿ ದಂಡೆತ್ತಿ ಬರುತ್ತಾನೆ”.
ಇದಾಗಿ ಇಪ್ಪತ್ನಾಲ್ಕು ಗಂಟೆಯೊಳಗೆ ಹಿಟ್ಲರ್ ರಷ್ಯಾದ ಮೇಲೆ “ ಆಪರೇಷನ್ ಬಾರ್ಬೆರೋಸಾ ” ಹೆಸರಿನಲ್ಲಿ ಧಾಳಿ ಮಾಡುತ್ತಾನೆ.
ಲಕ್ಷಗಟ್ಟಲೆ ಜನ ರಷ್ಯಾದಲ್ಲಿ ಸಾವನ್ನೊಪ್ಪುತ್ತಾರೆ.
ಇದಾಗಿ ಒಂದು ವರ್ಷಗಳ ನಂತರ (ನವೆಂಬರ್ 1942) ತೈಮೂರ್ ನ ಶವವನ್ನು ಇಸ್ಲಾಮಿನ ರೀತಿ ರಿವಾಜುಗಳ ಪ್ರಕಾರ ಅವನ ಘೋರಿಯಲ್ಲಿ ಪುನಃ ಮುಚ್ಚುತ್ತಾರೆ. ತದನಂತರವೇ ಸೋವಿಯತ್ ನ ಸೇನೆ “ ಆಪರೇಷನ್ ಯುರೇನಸ್ ” ಕಾರ್ಯಾಚರಣೆಯಿಂದ ಹಿಟ್ಲರನ ಸೇನೆಯನ್ನು ಬಗ್ಗುಬಡಿಯಲು ಸಾಧ್ಯವಾಯಿತು.
ಅಂದರೆ ಈ ತೈಮೂರ್ ಎಂಬ ಮಹಾಪಾತಕಿ ತ್ರಿಕಾಲಜ್ಞಾನೆಯೇ ? ಅಥವಾ ಜಗತ್ತಿನಲ್ಲಿ ಏನೇನು ನಡೆಯುತ್ತದೆಯೋ ಅವೆಲ್ಲಾ ಪೂರ್ವನಿಯೋಜಿತ !

1 comment: